Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

2026ರ ‘ಕೇಂದ್ರ ಬಜೆಟ್’ನಲ್ಲಿ ‘ಪಾರ್ಟ್ ಬಿ’.! ಬಜೆಟ್ ಭಾಷಣದಲ್ಲಿ ಐತಿಹಾಸಿಕ ಬದಲಾವಣೆ

31/01/2026 10:03 PM

ಕೇವಲ ಒಂದು ಗ್ಲಾಸ್ ನಿಮ್ಮ ಜೀವನ ಬದಲಾಯಿಸ್ಬೋದು! ಪ್ರತಿದಿನ ಬೆಳಿಗ್ಗೆ ಈ ನೀರು ಕುಡಿದ್ರೆ, ನೀವು ಆ ರೋಗಗಳಿಂದ ಮುಕ್ತರಾಗ್ತೀರಿ!

31/01/2026 9:47 PM

ಪೋಕ್ಸೋ ಘಟನೆ ನಡೆದ ಸಂದರ್ಭದಲ್ಲಿ ಪ್ರಕರಣ ದಾಖಲಿಸುವುದು ಕಡ್ಡಾಯ

31/01/2026 9:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ ಜನತೆಗೆ ಮತ್ತೊಂದು ಗುಡ್ ನ್ಯೂಸ್ : ಮನೆ ಬಾಗಿಲಿಗೆ ಉಚಿತವಾಗಿ ಈ ಔಷಧಿಗಳ ಪೂರೈಕೆ.!
KARNATAKA

ರಾಜ್ಯ ಸರ್ಕಾರದಿಂದ ಜನತೆಗೆ ಮತ್ತೊಂದು ಗುಡ್ ನ್ಯೂಸ್ : ಮನೆ ಬಾಗಿಲಿಗೆ ಉಚಿತವಾಗಿ ಈ ಔಷಧಿಗಳ ಪೂರೈಕೆ.!

By kannadanewsnow5725/01/2025 7:17 AM

ಕೋಲಾರ: ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬ ಭರವಸೆ ಹುಟ್ಟಿಸಿರುವ ಗೃಹ ಆರೋಗ್ಯ ಯೋಜನೆ ಅನುಷ್ಠಾನದ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಪ್ರಗತಿ ಪರಿಶೀಲನೆ ನಡೆಸಿದರು.

ರಾಜ್ಯಾದ್ಯಂತ ಯೋಜನೆಯನ್ನ ವಿಸ್ತರಿಸಲು ರೂಪರೇಷೆ ಹಾಕಿಕೊಂಡಿರುವ ಸಚಿವ ದಿನೇಶ್ ಗುಂಡೂರಾವ್ ಕೋಲಾರ ಜಿಲ್ಲೆಯಲ್ಲಿ ಇಂದು ಯೋಜನೆ ಅನುಷ್ಠಾನಗೊಂಡಿರುವ ಹಳ್ಳಿಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋಲಾರದ ಬಂಗಾರಪೇಟೆಯ ಮಾಗುಂದಿಯಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿದ ಸಚಿಚರು, ಗೃಹ ಆರೋಗ್ಯ ಯೋಜನೆ ಮೂಲಕ ಮನೆ ಬಾಗಿಲಿಗೆ ಔಷಧಿಗಳು ತಲುಪುತ್ತಿದೆಯಾ ಎಂದು ಜನರನ್ನು ಪ್ರಶ್ನಿಸಿದರು. ಔಷಧಿಗಳು ಮನೆಗೆ ತಲುಪುತ್ತಿರುವ ಬಗ್ಗೆ ಸಚಿವರ ಎದುರು ಹರ್ಷ ವ್ಯಕ್ತಪಡಿಸಿದ ಗ್ರಾಮಸ್ಥರು, ಯೋಜನೆಯಿಂದಾಗಿ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಮೊದಲು ಆಸ್ಪತ್ರೆಗಳಿಗೆ ಹೋಗಿ ತಪಾಸಣೆ ಮಾಡಿಸಬೇಕಿತ್ತು. ಅಲ್ಲದೇ ಮೆಡಿಕಲ್ ಶಾಪ್ ಗಳಲ್ಲಿ ಮಾತ್ರೆ ಪಡೆಯಬೇಕಾಗಿತ್ತು. ತಿಂಗಳಿಗೆ ಎರಡು ಸಾವಿರ ರೂಪಾಯಿ ಮಾತ್ರೆಗಳಿಗೆ ಖರ್ಚಾಗುತ್ತಿತ್ತು. ಅಲ್ಲದೇ ಎರಡು ಮೂರು ದಿನ ಸಿಗುವ ಕೂಲಿಯನ್ನು ಕಳೆದುಕೊಳ್ಳುತ್ತಿದ್ದೆವು. ಇದೀಗ ಮನೆಗೆ ಬಂದು ತಪಾಸಣೆ ನಡೆಸುತ್ತಾರೆ. ಔಷಧಿಗಳು ನಮಗೆ ಮನೆಬಾಗಿಲಿಗೇ ತಲುಪಿಸುತ್ತಿದ್ದಾರೆ ಎಂದು ಸಾರ್ವಜನಿಕರು ಸಚಿವರ ಎದುರು ಯೋಜನೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಪ್ರಾರಂಭಿಕ ಹಂತದಲ್ಲಿ ಕೋಲಾರ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಗೃಹ ಆರೋಗ್ಯ ಯೋಜನೆಯನ್ನ ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲು ಆರೋಗ್ಯ ಇಲಾಖೆ ಸಿದ್ಧತೆಗಳನ್ನ ಮಾಡಿಕೊಂಡಿದೆ. ಯೋಜನೆ ಅನುಷ್ಠಾನದಲ್ಲಿ ಯಾವುದಾದರು ಕುಂದು ಕೋರತೆಗಳಿದೆಯಾ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಜಿಲ್ಲೆಗೆ ಭೇಟಿ ನೀಡಿ ಯೋಜನೆಯ ಪ್ರಗತಿ ಪರಿಶೀಲಿಸಿದರು. ಕೋಲಾರ ಜಿಲ್ಲೆಯಲ್ಲಿ ಒಟ್ಟು 2 ಲಕ್ಷ 31 ಸಾವಿರ ಮನೆಗಳಿಗೆ ಭೇಟಿ ನೀಡಿ 30 ವರ್ಷ ಮೇಲ್ಪಟ್ಟ 6 ಲಕ್ಷಕ್ಕೂ ಹೆಚ್ಚು ಜನರನ್ನ ತಪಾಸಣೆಗೆ ಒಳಪಡಿಸಲು ಯೋಜಿಸಲಾಗಿದೆ. ಪ್ರಸ್ತುತ 76 ಸಾವಿರ ಮನೆಗಳಿಗೆ ಆರೋಗ್ಯ ಸಿಬ್ಬಂದಿಗಳು ಭೇಟಿ ನೀಡಿದ್ದು, 148111 ಜನರ ತಪಾಸಣೆ ಪೂರ್ಣಗೊಳಿಸಿದ್ದಾರೆ. ರಕ್ತದೊತ್ತಡ, ಡಯಾಬಿಟಿಸ್, ಸರ್ವೈಕಲ್, ಓರಲ್ ಹಾಗೂ, ಸ್ತನ ಕ್ಯಾನ್ಸರ್ಗಳ ಸ್ಕ್ರೀನಿಂಗ್ ಮಾಡಲಾಗಿದೆ.

ತಪಾಸಣೆಯಲ್ಲಿ 5521 ಜನರು ರಕ್ತದೊತ್ತಡ ಹೊಂದಿದ್ದಾರೆ ಎಂದು ಶಂಕಿಸಲಾಗಿದ್ದು, 836 ಜನರಿಗೆ ರೋಗ ನಿರ್ಣಯ ಮಾಡಲಾಗಿದೆ. ಒಟ್ಟು 6988 ಜನರು ಈಗಾಗಲೇ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 3738 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 3498 ಜನರಿದ್ದಾರೆ ಎಂದು ತಪಾಸಣೆಯಲ್ಲಿ ತಿಳಿದು ಬಂದಿದೆ. ಎಲ್ಲರಿಗೂ ಮನೆ ಬಾಗಿಲಿಗೆ ಎರಡು ತಿಂಗಳಿಗೆ ಆಗುವಷ್ಟು ಔಷಧಿಗಳನ್ನ ಪೂರೈಸಲಾಗಿದ್ದು, ಮುಂದೆಯೂ ಆಶಾ ಕಾರ್ಯಕರ್ತೆಯರ ಮೂಲಕ ಮನೆ ಬಾಗಿಲಿಗೆ ಔಷಧಿಗಳನ್ನ ತಲುಪಿಸಲು ಯೋಜಿಸಲಾಗಿದೆ.

ಇನ್ನು 3155 ಜನರು ಡಯಾಬಿಟಿಸ್ ಹೊಂದಿದ್ದಾರೆಂದು ಶಂಕಿಸಲಾಗಿದ್ದು ಇವರಲ್ಲಿ 704 ಜನರಿಗೆ ರೋಗ ನಿರ್ಣಯ ಮಾಡಲಾಗಿದೆ. ಒಟ್ಟು 6740 ಜನರು ಪ್ರಸ್ತುತ ಡಯಾಬಿಟಿಸ್ ಗೆ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 2864 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 4030 ಜನರಿದ್ದಾರೆ. ಎಲ್ಲರಿಗೂ ಗೃಹ ಆರೋಗ್ಯ ಯೋಜನೆಯ ಮೂಲಕ ಉಚಿತವಾಗಿ ಔಷಧಿಗಳನ್ನ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. 45704 ಜನರನ್ನ ಸ್ತನ ಕ್ಯಾನ್ಸರ್ ತಪಾಸಣೆಗೆ ಒಳಪಡಿಸಲಾಗಿದ್ದು, 72 ಜನರಿಗೆ ಕ್ಯಾನ್ಸರ್ ರೋಗ ಲಕ್ಷಣವಿರುವ ಬಗ್ಗೆ ಶಂಕಿಸಲಾಗಿದೆ. 32714 ಜನರನ್ನ ಸರ್ವೈಕಲ್ ಕ್ಯಾನ್ಸರ್ ತಪಾಸಣೆಗೆ ಒಳಪಡಿಸಲಾಗಿದ್ದು, 151 ಜನರಿಗೆ ಸರ್ವೈಕಲ್ ಕ್ಯಾನ್ಸೆರ್ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಶಂಕಿತರನ್ನ ಹೆಚ್ಚಿನ ಚಿಕಿತ್ಸೆಗಾಗಿ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ಒದಗಿಸಲಾಗಿದೆ.

Another good news for the people from the state government: These medicines are being supplied free of cost at the doorsteps. ರಾಜ್ಯ ಸರ್ಕಾರದಿಂದ ಜನತೆಗೆ ಮತ್ತೊಂದು ಗುಡ್ ನ್ಯೂಸ್ : ಇನ್ಮುಂದೆ 'ನಮ್ಮ ಕ್ಲಿನಿಕ್'ನಲ್ಲಿ ನೇತ್ರ ಚಿಕಿತ್ಸೆ
Share. Facebook Twitter LinkedIn WhatsApp Email

Related Posts

ಪೋಕ್ಸೋ ಘಟನೆ ನಡೆದ ಸಂದರ್ಭದಲ್ಲಿ ಪ್ರಕರಣ ದಾಖಲಿಸುವುದು ಕಡ್ಡಾಯ

31/01/2026 9:42 PM2 Mins Read

ಸೋಷಿಯಲ್ ಮೀಡಿಯಾ, ಮೊಬೈಲ್ ವ್ಯಸನ ಮಕ್ಕಳ ಭವಿಷ್ಯಕ್ಕೆ ದೊಡ್ಡ ಕಂಟಕ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ

31/01/2026 9:03 PM1 Min Read

ಮಾಹಿತಿ ಹಕ್ಕು ಅರ್ಜಿಗಳ ವಿಲೇವಾರಿಗೆ ಆಧ್ಯತೆ ನೀಡಿ, ನಿರ್ಲಕ್ಷ್ಯ ಬೇಡ; ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ

31/01/2026 8:37 PM4 Mins Read
Recent News

2026ರ ‘ಕೇಂದ್ರ ಬಜೆಟ್’ನಲ್ಲಿ ‘ಪಾರ್ಟ್ ಬಿ’.! ಬಜೆಟ್ ಭಾಷಣದಲ್ಲಿ ಐತಿಹಾಸಿಕ ಬದಲಾವಣೆ

31/01/2026 10:03 PM

ಕೇವಲ ಒಂದು ಗ್ಲಾಸ್ ನಿಮ್ಮ ಜೀವನ ಬದಲಾಯಿಸ್ಬೋದು! ಪ್ರತಿದಿನ ಬೆಳಿಗ್ಗೆ ಈ ನೀರು ಕುಡಿದ್ರೆ, ನೀವು ಆ ರೋಗಗಳಿಂದ ಮುಕ್ತರಾಗ್ತೀರಿ!

31/01/2026 9:47 PM

ಪೋಕ್ಸೋ ಘಟನೆ ನಡೆದ ಸಂದರ್ಭದಲ್ಲಿ ಪ್ರಕರಣ ದಾಖಲಿಸುವುದು ಕಡ್ಡಾಯ

31/01/2026 9:42 PM

BREAKING : ಪಾಕಿಸ್ತಾನದ 12 ಸ್ಥಳಗಳಲ್ಲಿ ಬಲೂಚ್ ದಂಗೆಕೋರರ ದಾಳಿ ; 80 ಮಂದಿ ಬಲಿ!

31/01/2026 9:39 PM
State News
KARNATAKA

ಪೋಕ್ಸೋ ಘಟನೆ ನಡೆದ ಸಂದರ್ಭದಲ್ಲಿ ಪ್ರಕರಣ ದಾಖಲಿಸುವುದು ಕಡ್ಡಾಯ

By kannadanewsnow0931/01/2026 9:42 PM KARNATAKA 2 Mins Read

ಬಳ್ಳಾರಿ : ಪೋಕ್ಸೋ ಘಟನೆ ನಡೆದ ಸಂದರ್ಭದಲ್ಲಿ ಪ್ರಕರಣ ದಾಖಲಿಸುವುದು ಕಡ್ಡಾಯವಾಗಿದ್ದು, ವಿಳಂಬ ತೋರಿದಲ್ಲಿ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಲು…

ಸೋಷಿಯಲ್ ಮೀಡಿಯಾ, ಮೊಬೈಲ್ ವ್ಯಸನ ಮಕ್ಕಳ ಭವಿಷ್ಯಕ್ಕೆ ದೊಡ್ಡ ಕಂಟಕ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ

31/01/2026 9:03 PM

ಮಾಹಿತಿ ಹಕ್ಕು ಅರ್ಜಿಗಳ ವಿಲೇವಾರಿಗೆ ಆಧ್ಯತೆ ನೀಡಿ, ನಿರ್ಲಕ್ಷ್ಯ ಬೇಡ; ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ

31/01/2026 8:37 PM

ರಾಜ್ಯ ಸರ್ಕಾರಿ ನೌಕರರಿಗೆ ತಿಂಗಳ ಮೊದಲ ಶನಿವಾರ ‘ಖಾದಿ’ ಕಡ್ಡಾಯ: ಸರ್ಕಾರದ ಮಹತ್ವದ ಆದೇಶ

31/01/2026 8:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.