Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಬಸ್ ನಿಲ್ಲಿಸದಿದ್ದಕ್ಕೆ ನಡು ರಸ್ತೆಯಲ್ಲೇ `ಮಹಿಳಾ ಕಂಡಕ್ಟರ್’ ಮೇಲೆ ಹಲ್ಲೆ : ವಿಡಿಯೋ ವೈರಲ್ | WATCH VIDEO

14/08/2025 9:46 AM

ಉದ್ಯೋಗಿಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಮಕ್ಕಳ ಆರೈಕೆಗಾಗಿ 26 ವಾರಗಳ ‘ರಜೆ’ ಘೋಷಣೆ.!

14/08/2025 9:42 AM

$ 124,000 ಗಡಿ ದಾಟಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ಬಿಟ್ ಕಾಯಿನ್ | Bitcoin

14/08/2025 9:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ ರೈತರಿಗೆ ಮತ್ತೊಂದು ಗುಡ್ ನ್ಯೂಸ್ : `ದರಖಾಸ್ತು ಪೋಡಿ’ ಅಭಿಯಾನಕ್ಕೆ ಚಾಲನೆ!
KARNATAKA

ರಾಜ್ಯ ಸರ್ಕಾರದಿಂದ ರೈತರಿಗೆ ಮತ್ತೊಂದು ಗುಡ್ ನ್ಯೂಸ್ : `ದರಖಾಸ್ತು ಪೋಡಿ’ ಅಭಿಯಾನಕ್ಕೆ ಚಾಲನೆ!

By kannadanewsnow5728/11/2024 6:20 AM

ಬೆಂಗಳೂರು : ದಶಕಗಳ ಹಿಂದೆಯೇ ಸರ್ಕಾರ ಬಡ ರೈತರಿಗೆ ಜಮೀನು ಮಂಜೂರು ಮಾಡಿದೆ. ಆದರೆ, ನಾನಾ ಕಾರಣಗಳಿಂದ ಜಮೀನು ದುರಸ್ಥಿಯಾಗದೆ ಲಕ್ಷಾಂತರ ರೈತರು ಸಂಕಷ್ಟಕ್ಕೆ ಒಳಗಾಗಬೇಕಾದ ಸ್ಥಿತಿ ಇದೆ. ರೈತರು ತಮ್ಮ ಪಾಲಿನ ಜಮೀನು ಇದ್ದರೂ ಸಹ ಅದರ ಪೋಡಿಯಾಗದೆ ಸರ್ಕಾರಿ ಕಚೇರಿಗಳಿಗೆ ಸುತ್ತುವುದು ಪರಿಪಾಟವಾಗಿದೆ. ದುರಸ್ಥಿ ಪೋಡಿ ಮಾಡಲು 1-5 ಮತ್ತು 6-10 ಎಂದು ನಿರ್ವಹಿಸಿದ್ದರೂ ನಿರೀಕ್ಷಿತ ಪ್ರಗತಿಯಾಗಿಲ್ಲ. ಹೀಗಾಗಿ ದಶಕಗಳಿಂದಲೂ ನಮೂನೆ 1-5 ಹಾಗೂ 6-10 ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಜಮೀನನ್ನು ದುರಸ್ಥಿ ಮಾಡಿಕೊಡಬೇಕು ಎಂಬ ಕೂಗು ರೈತರೂ ಸೇರಿದಂತೆ ಇತರೆ ಸಂಘ ಸಂಸ್ಥೆಗಳಿಂದ ಇತ್ತು.

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ನಮೂನೆ 1-5 ಹಾಗೂ 6-10 ಅನ್ನು ಸರಳೀಕರಣಗೊಳಿಸಿ ರೈತರ ಜಮೀನನ್ನು ದುರಸ್ಥಿ ಮಾಡಿಕೊಡಬೇಕು ಎಂಬ ವಿಚಾರದಲ್ಲಿ ಕಟಿಬದ್ಧವಾಗಿತ್ತು. ಅಲ್ಲದೆ, ರೈತರಿಗೆ ಮಂಜೂರಾಗಿದ್ದು, ತಕರಾರಿಲ್ಲದ ಜಮೀನಿನ ನಮೂನೆ 1-5 ದಾಖಲೆಯನ್ನು ಸಿದ್ದಪಡಿಸುವ ಹಾಗೂ ತಿದ್ದುಪಡಿಗಳನ್ನು ಸರಳೀಕರಣಗೊಳಿಸುವ ದರಖಾಸ್ತು ಪೋಡಿ ಅಭಿಯಾನಕ್ಕೆ ಚಾಲನೆ ನೀಡುವ ಸಂಬಂಧ 2024-25ನೇ ಸಾಲಿನ ಬಜೆಟ್ನಲ್ಲಿ ಭರವಸೆ ನೀಡಲಾಗಿತ್ತು.

ಈ ನಿಟ್ಟಿನಲ್ಲಿ ಕಳೆದ ವರ್ಷದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸರಣಿ ಸಭೆ ನಡೆಸುವ ಮೂಲಕ ಈ ಸಮಸ್ಯೆಗೆ ಇದೀಗ ಪರಿಹಾರ ನೀಡಲಾಗುತ್ತಿದೆ. ನಮೂನೆ 1-5 ಹಾಗೂ 6-10 ಅನ್ನು ಸರಳೀಕರಣಗೊಳಿಸಿ ಜಮೀನನ್ನು ದುರಸ್ಥಿಗೊಳಿಸಲು ಈ ಕುರಿತು ಸುತ್ತೋಲೆ ಹೊರಡಿಸಿ ತಕ್ಷಣದಿಂದ ದುರಸ್ಥಿ ಅಭಿಯಾನವನ್ನು ಆರಂಭಿಸಲಾಗುತ್ತಿದೆ.

ಸುತ್ತೋಲೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ:-

ದರಕಾಸ್ತು ಪೋಡಿ (ನಮೂನೆ 1-5 ಮತ್ತು6-10) ರ ಬದಲಾವಣೆ ಬಗ್ಗೆ ಸಂಕ್ಷಿಪ್ತ ಮಾಹಿತಿ

ಮೊದಲು ಒಂದು ಸರ್ವೆ ನಂಬರಿನ ಮಂಜೂರಾತಿದಾರರ ಪೋಡಿಯನ್ನು ಹಂತಹಂತವಾಗಿ ನಿರ್ವಹಿಸಲಾಗುತ್ತಿತ್ತು. ಆದುದರಿಂದ 1-5 ಕಡತವನ್ನು ಅನೇಕ ಬಾರಿ ತಯಾರಿಸಲಾಗುತ್ತಿತ್ತು. ಈಗ ಒಂದು ಸರ್ವೆ ನಂಬರಿನ ಎಲ್ಲ ಮಂಜೂರಾತಿಯ 1-5 ಮತ್ತು ಪೋಡಿ ಕೆಲಸವನ್ನು ಏಕಕಾಲದಲ್ಲಿ ನಿರ್ವಹಿಸಲಾಗುವುದು.

ಈ ಮೊದಲು ಈ ಪ್ರಕ್ರಿಯೆ ಭೌತಿಕವಾಗಿ ನಡೆಯುತ್ತಿತ್ತು. ಒಂದೇ ಸರ್ವೆ ನಂಬರಿಗೆ ಹಲವು ಸಲ ಕಡತವನ್ನು ತಯಾರಿಸಲಾಗುತ್ತಿತ್ತು. ಈಗ ಸಂಪೂರ್ಣ ಪ್ರಕ್ರಿಯೆಯನ್ನು ತಂತ್ರಾಂಶದಲ್ಲಿ ನಿರ್ವಹಿಸಲು ಕ್ರಮವಹಿಸಲಾಗಿದೆ. ಎಲ್ಲ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಳವಡಿಸಲಾಗುತ್ತಿದೆ. ಈಗ ಒಂದು ಸರ್ವೆ ನಂಬರಿಗೆ ಒಮ್ಮೆ ದಾಖಲೆಗಳನ್ನು ಅಳವಡಿಸಿದ ನಂತರ ಅವು ಖಾಯಂ ಆಗಿ ಲಭ್ಯವಾಗುತ್ತವೆ. ಈ ದಾಖಲೆಗಳನ್ನು ಯಾರೂ ನಕಲು ಮಾಡಲೂ/ತಿದ್ದಲು ಸಾಧ್ಯವಿಲ್ಲ.

ಮೊದಲು ಯಾವುದೇ ಒಂದು ದಾಖಲಾತಿ ಲಭ್ಯವಿಲ್ಲದೇ ಹೋದರೂ ಆ ಕಡತವನ್ನು ಗೈರುವಿಲೇ ಕಮೀಟಿಗೆ ಮಂಡಿಸಲಾಗುತ್ತಿತ್ತು. ಈಗ ಕನಿಷ್ಟ 3 ದಾಖಲಾತಿಗಳು ಲಭ್ಯವಿದ್ದಲ್ಲಿ, ತಹಶೀಲ್ದಾರರು ನೈಜತೆಯನ್ನು ಪರಿಶೀಲಿಸಿ ಪೋಡಿ ಕ್ರಮವಹಿಸಲು ಆದೇಶಿಸಬಹುದಾಗಿದೆ.

ಮೊದಲು ನಮೂನೆ 1-5ನ್ನು ತಹಶೀಲ್ದಾರರು ತಯಾರಿಸಿದ ನಂತರ ಉಪವಿಭಾಗಾದಿಕಾರಿಗಳು ಹಾಗೂ ಭೂದಾಖಲೆಗಳ ಉಪನಿರ್ದೇಶಕರು ಪರಿಶೀಲಿಸಿ ಅನುಮೋದಿಸುತ್ತಿದ್ದರು. ಈ ಹಂತವನ್ನು ಈಗ ಕೈಬಿಡಲಾಗಿದ್ದು, ತಹಶೀಲ್ದಾರರಿಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗಿದ್ದು, ಮಂಜೂರಾತಿಯ ನೈಜತೆಯನ್ನು ಖಚಿತಪಡಿಸಿಕೊಂಡ ನಂತರ ನೇರವಾಗಿ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪೋಡಿ ಕ್ರಮವಹಿಸಲು ಸೂಚಿಸಬಹುದು.

 ಕೆಲವು ಪ್ರಕರಣಗಳಲ್ಲಿ ನಮೂನೆ 6 ರಿಂದ 10 ತುಂಬುವ ಪ್ರಕ್ರಿಯೆಯನ್ನು ಕೈಬಿಡಲಾಗಿದೆ.

ಮಂಜೂರಾತಿ ನಕ್ಷೆಯಲ್ಲಿ ಗುರುತಿಸಿರುವ ರೂಢಿ ದಾರಿಯನ್ನು ದುರಸ್ಥಿ ದಾಖಲೆಯಲ್ಲಿ ಪ್ರತ್ಯೇಕ ದಾರಿ ಎಂದೇ ಗುರುತಿಸಿ ಖಾಯಂಗೊಳಿಸಬೇಕು ಹಾಗೂ ಆ ಜಾಗವನ್ನು ಯಾರ ವಿಸ್ತೀರ್ಣದಲ್ಲೂ ಸೇರಿಸಬಾರದು ಎಂದು ತಿಳಿಸಲಾಗಿರುತ್ತದೆ.

ದರಖಾಸ್ತು ಪೋಡಿ ಪ್ರಕ್ರಿಯೆಯಲ್ಲಿ ಅಕ್ರಮಗಳನ್ನು ತಡೆಯುವ ಸಲುವಾಗಿ ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಶಿರಸ್ತೇದಾರರು ಹಾಗೂ ತಹಶೀಲ್ದಾರರು ನಮೂನೆ 1 ರಿಂದ 5ರ ಮಾಹಿತಿ ಯನ್ನು ಭರ್ತಿ ಮಾಡಿ ಡಿಜಿಟಲ್ ಸಹಿ ಮಾಡುವಂತಹ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿರುತ್ತದೆ. ಈ ಮೂಲಕ ಅಕ್ರಮಗಳಿಗೆ ಶಾಶ್ವತ ಪರಿಹಾರ ನೀಡಲಾಗಿದೆ.

ಇನ್ನು ಮುಂದೆ ದರಖಾಸ್ತು ಪೋಡಿ ಪ್ರಕರಣಗಳನ್ನು ಸಂಪೂರ್ಣವಾಗಿ Online ವ್ಯವಸ್ಥೆಯಲ್ಲಿ ಮೋಜಿಣಿ ತಂತ್ರಾಶದಲ್ಲಿ ನಿರ್ವಹಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಪ್ರಸ್ತುತ ಚಾಲ್ತಿಯಲ್ಲಿರುವ ಏಕ ವ್ಯಕ್ತಿ ಪ್ರಕರಣದಲ್ಲಿನ ಪೋಡಿ ಆದೇಶವು 6 ತಿಂಗಳ ಅವಧಿಯ ವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ.

ಇದರಿಂದ ರೈತರಿಗೆ ಆಗುವ ಲಾಭಗಳು

ತಂತ್ರಾಂಶ ಬಳಕೆಯಿಂದ ಸಂಪೂರ್ಣ ಪಾರದರ್ಶಕವಾಗಿ ದುರಸ್ತಿ ಪ್ರಕ್ರಿಯೆ ನಡೆಯುವುದು. ಎಲ್ಲ ಹಂತದಲ್ಲಿ ಕಾಲಮಿತಿಯನ್ನು ವಿಧಿಸಿರುವುದರಿಂದ ತ್ವರಿತವಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಗ್ರಾಮ ಆಡಳಿತಾಧಿಕಾರಿಗಳಿಂದ ಭೂದಾಖಲೆಗಳ ಉಪನಿರ್ದೇಶಕರ ವರೆಗೆ ಸಂಪೂರ್ಣ ಪ್ರಕ್ರಿಯೆ ಕಾಗದ ರಹಿತ ನಿರ್ವಹಣೆಯಿಂದ ಒಂದು ಕಛೇರಿಯಿಂದ ಇನ್ನೊಂದು ಕಚೇರಿಗೆ ಕಡತ ರವಾನಿಸಲು ಯಾವುದೇ ಸಮಯ ವ್ಯರ್ಥವಾಗುವುದಿಲ್ಲ. ಇದರಿಂದ ರೈತರು ಕಡತದ ಹಿಂದೆ ಅಲೆದಾಡುವುದು ಸಹ ತಪ್ಪುತ್ತದೆ.

1-5 ಹಾಗೂ 6-10 ಗೆ ಸಂಬಂಧಿಸಿದಂತೆ Dashboard ಲಭ್ಯವಿರುವುದರಿಂದ ಪ್ರಗತಿಯನ್ನು ರಾಜ್ಯಮಟ್ಟದಲ್ಲಿ ಪರಿಶೀಲಿಸಬಹುದು. ಇದರಿಂದ ದುರಸ್ತಿಯನ್ನು ನಿಗದಿತ ಅವಧಿಯಲ್ಲಿ ಪೂರೈಸಬಹುದಾಗಿದೆ. ಜನಸಾಮಾನ್ಯರೂ ಸಹ ಈ ಮಾಹಿತಿಯನ್ನು ಜಾಲತಾಣದಲ್ಲಿ ವೀಕ್ಷಿಸಬಹುದಾಗಿದೆ.

ಮುಂದಿನ ದಿನಗಳನ್ನು ಅಳತೆಯ ಕಾರ್ಯವನ್ನು Rovers ಮೂಲಕ ಡಿಜಿಟಲ್ ಸರ್ವೆ ಮಾಡಲು ಉದ್ದೇಶಿಸಿದ್ದು, ಇದರಿಂದ ಹೆಚ್ಚಿನ ನಿಖರತೆಯೊಂದಿಗೆ ಅಳತೆಗೆ ತಗಲುವ ಸಮಯವು ಸಹ ಗಮನಾರ್ಹವಾಗಿ ಕಡಿತವಾಗಲಿದೆ.

Another good news for farmers from the state government: ``Darakhastu Podi'' campaign launched! ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ 50 ಲಕ್ಷ ರೂ.ವರಗೆ ಸಾಲ ಸೌಲಭ್ಯ
Share. Facebook Twitter LinkedIn WhatsApp Email

Related Posts

SHOCKING : ಮಾಲೀಕ ನಿದ್ರೆ ಮಾಡುತ್ತಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು : ಕಳ್ಳತನದ ವಿಡಿಯೋ ವೈರಲ್ | WATCH VIDEO

14/08/2025 9:24 AM1 Min Read

ಸಾರ್ವಜನಿಕರೇ ಗಮನಿಸಿ : ಬೆಂಗಳೂರಿನ ‘ಮಾಣಿಕ್ ಷಾ ಪರೇಡ್ ಮೈದಾನ’ದ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗಲು ಜಸ್ಟ್ ಹೀಗೆ ಮಾಡಿ.!

14/08/2025 9:18 AM2 Mins Read

BR|EAKING: ರಾಜ್ಯಾದ್ಯಂತ ಮದ್ಯ, ಬಿಯರ್ ಮಾರಾಟ ಕುಸಿತ : ಮಳಿಗೆಗಳಲ್ಲಿ `MRP’ ಸ್ಟಿಕ್ಕರ್ ಕಡ್ಡಾಯ.!

14/08/2025 9:12 AM1 Min Read
Recent News

SHOCKING : ಬಸ್ ನಿಲ್ಲಿಸದಿದ್ದಕ್ಕೆ ನಡು ರಸ್ತೆಯಲ್ಲೇ `ಮಹಿಳಾ ಕಂಡಕ್ಟರ್’ ಮೇಲೆ ಹಲ್ಲೆ : ವಿಡಿಯೋ ವೈರಲ್ | WATCH VIDEO

14/08/2025 9:46 AM

ಉದ್ಯೋಗಿಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಮಕ್ಕಳ ಆರೈಕೆಗಾಗಿ 26 ವಾರಗಳ ‘ರಜೆ’ ಘೋಷಣೆ.!

14/08/2025 9:42 AM

$ 124,000 ಗಡಿ ದಾಟಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ಬಿಟ್ ಕಾಯಿನ್ | Bitcoin

14/08/2025 9:32 AM
National flags at Red Fort and Rashtrapati Bhavan fly at half-mast as one-day state mourning is being observed in the country following the demise of Queen Elizabeth II.

79 ನೇ ಸ್ವಾತಂತ್ರ್ಯ ದಿನಾಚರಣೆ 2025: ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸುವುದು ಹೇಗೆ?

14/08/2025 9:25 AM
State News
KARNATAKA

SHOCKING : ಮಾಲೀಕ ನಿದ್ರೆ ಮಾಡುತ್ತಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು : ಕಳ್ಳತನದ ವಿಡಿಯೋ ವೈರಲ್ | WATCH VIDEO

By kannadanewsnow5714/08/2025 9:24 AM KARNATAKA 1 Min Read

ಲಕ್ನೋ : ಉತ್ತರ ಪ್ರದೇಶದಲ್ಲಿ ಮೂವರು ಮನೆಯೊಂದಕ್ಕೆ ನುಗ್ಗಿ ಕಳ್ಳತನ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.…

ಸಾರ್ವಜನಿಕರೇ ಗಮನಿಸಿ : ಬೆಂಗಳೂರಿನ ‘ಮಾಣಿಕ್ ಷಾ ಪರೇಡ್ ಮೈದಾನ’ದ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗಲು ಜಸ್ಟ್ ಹೀಗೆ ಮಾಡಿ.!

14/08/2025 9:18 AM

BR|EAKING: ರಾಜ್ಯಾದ್ಯಂತ ಮದ್ಯ, ಬಿಯರ್ ಮಾರಾಟ ಕುಸಿತ : ಮಳಿಗೆಗಳಲ್ಲಿ `MRP’ ಸ್ಟಿಕ್ಕರ್ ಕಡ್ಡಾಯ.!

14/08/2025 9:12 AM

BREAKING : `ನ್ಯಾಯ ಸಿಕ್ಕೇ ಸಿಗುತ್ತದೆ’ : ಸುಪ್ರೀಂಕೋರ್ಟ್ ಆದೇಶಕ್ಕೂ ಮುನ್ನ `ಪವಿತ್ರಾ ಗೌಡ’ ಪೋಸ್ಟ್ ವೈರಲ್ .!

14/08/2025 8:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.