Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಮಡಿಕೇರಿಯಲ್ಲಿ ‘ಹನಿಟ್ರ್ಯಾಪ್’ ಗೆ ಬಲಿಯಾಗಿ, ನಡು ರಸ್ತೆಯಲ್ಲಿ ಬೆತ್ತಲಾಗಿ ಓಡಾಡಿದ ಯುವಕ!

13/12/2025 11:19 AM

ಅಪಹರಣಕ್ಕೊಳಗಾದ ಬಾಲಕಿಯ ಕುರ್ಚಿ ಕಟ್ಟಿದ ಫೋಟೋ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ :8 ಗಂಟೆಗಳಲ್ಲಿ ಆಕೆಯನ್ನು ರಕ್ಷಿಸಿದ ಪೊಲೀಸರು

13/12/2025 11:18 AM

ರಸ್ತೆಯಲ್ಲಿ ನಿಂತಿದ್ದಕ್ಕೆ ಮಗನ ಮೇಲೆ ಗಲಾಟೆ: ಗಾಯಗೊಂಡ ಪುತ್ರನ ಕಂಡು ತಂದೆ ಹೃದಯಾಘಾತ | Watch video

13/12/2025 11:08 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಅಂಗನವಾಡಿ ಕಾರ್ಯಕರ್ತೆ’ಯರನ್ನು ಖಾಯಂ, ಇದು ಕಾಂಗ್ರೆಸ್ ಸರ್ಕಾರದ ‘6ನೇ ಗ್ಯಾರಂಟಿ’: ಶಾಸಕ ಬೇಳೂರು ಗೋಪಾಲಕೃಷ್ಣ
KARNATAKA

‘ಅಂಗನವಾಡಿ ಕಾರ್ಯಕರ್ತೆ’ಯರನ್ನು ಖಾಯಂ, ಇದು ಕಾಂಗ್ರೆಸ್ ಸರ್ಕಾರದ ‘6ನೇ ಗ್ಯಾರಂಟಿ’: ಶಾಸಕ ಬೇಳೂರು ಗೋಪಾಲಕೃಷ್ಣ

By kannadanewsnow0925/06/2024 3:52 PM

ಶಿವಮೊಗ್ಗ: ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರನ್ನು ಖಾಯಂ ಗೊಳಿಸೋ ಸಂಬಂಧ ಈಗಾಗಲೇ ಸಿಎಂ ಸಿದ್ಧರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚರ್ಚೆ ನಡೆಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರನ್ನು ಖಾಯಂಗೊಳಿಸೋದು ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿಯಾಗಿದೆ ಅಂತ ಶಾಸಕ ಬೇಳೂರು ಗೋಪಾಲಕೃಷ್ಣ ಭರವಸೆ ನೀಡಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ನೆಹರು ಮೈದಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಪೋನ್ ವಿತರಿಸಿದ ಬಳಿಕ ಮಾತನಾಡಿದಂತ ಅವರು, ನಮ್ಮ ಸರ್ಕಾರಕ್ಕೆ ನಿಮ್ಮ ಬಗ್ಗೆ ಗೌರವವಿದೆ. ನಮ್ಮ ಸಂಪೂರ್ಣ ಬೆಂಬಲ ಕೂಡ ಇದೆ. ನಿಮ್ಮನ್ನು ಖಾಯಂ ಗೊಳಿಸುವುದು ನಮ್ಮ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿಯೂ ಆಗಿದೆ ಎಂಬುದಾಗಿ ಘೋಷಿಸಿದರು.

ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರನ್ನು ತರಲಾಗಿದೆ. ಇಲ್ಲಿನ ಅನೇಕ ಅಂಗನವಾಡಿ ಕಾರ್ಯಕರ್ತೆಯರು ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು 2000 ರೂ ಪಡೆಯುತ್ತಿದ್ದೀರಿ ಎಂದರು.

ಡೆಂಗ್ಯೂ ನಿಯಂತ್ರಣ ಕ್ರಮ ವಹಿಸಬೇಕು. ನಿಮ್ಮೆಲ್ಲರ ಸಹಕಾರದಿಂದ ಸಾಗರ ತಾಲೂಕಿನಲ್ಲಿ ಡೆಂಗ್ಯೂ ನಿಯಂತ್ರಣವಾಗಬೇಕು. ಆ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಕೆಲಸ ಮಾಡುವಂತೆ ತಿಳಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಲಾಗುತ್ತಿದೆ. ನಿಮ್ಮನ್ನೇ ಅಲ್ಲಿ ಶಿಕ್ಷಕರಾಗಿ ನೇಮಿಸೋದಕ್ಕೆ ಈಗಾಗಲೇ ಸಿಎಂ ಸಿದ್ಧರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹಮತ ವ್ಯಕ್ತಪಡಿಸಿದ್ದಾರೆ. ನಿಮ್ಮನ್ನೇ ಅಂಗನವಾಡಿಗಳಲ್ಲಿ ಪ್ರಾರಂಭವಾಗುವಂತ LKG, UKG ಶಾಲೆಗಳಿಗೆ ಶಿಕ್ಷಕರನ್ನಾಗಿ ನೇಮಿಸುವಂತ ಆದೇಶ ಮಾಡುವುದು ಮಾತ್ರ ಬಾಕಿಯಿದೆ ಎಂದರು.

ಅಂಗನವಾಡಿ ಕಟ್ಟಡಗಳು ದುರಸ್ಥಿಯಲ್ಲಿದ್ದರೇ ಕೂಡಲೇ ನನ್ನ ಗಮನಕ್ಕೆ ತರಬೇಕು. ಶಿಥಿಲಾವಸ್ಥೆಯಲ್ಲಿರುವಂತ ಅಂಗನವಾಡಿಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಪಾಠ ಮಾಡಬೇಡಿ. ಪರ್ಯಾಯ ಕಟ್ಟಡದಲ್ಲಿ ವ್ಯವಸ್ಥೆ ಮಾಡಿಕೊಂಡು ನಡೆಸುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಸೂಚಿಸಿದರು.

ಮುಂದಿನ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಖಾಯಂಗೊಳಿಸುವ ಕೂಗಿಗೆ ನನ್ನ ಬೆಂಬಲವಿದೆ. ನಿಮ್ಮ ಜೊತೆಗೆ ಹೋರಾಟದಲ್ಲಿ ನಾನು ಭಾಗಿಯಾಗುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಾಗರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಾಬಾಯಿ, ಉಪ ವಿಭಾಧಿಕಾರಿ ಯತೀಶ್, ಕಾರ್ಯನಿರ್ವಹಣಾಧಿಕಾರಿ ಶಣೈ, ಟಿಹೆಚ್ಓ ಡಾ.ಭರತ್, ಸಾಗರ ನಗರಸಭೆಯ ಸದಸ್ಯರು ಸೇರಿದಂತೆ ಇತರರು ಹಾಜರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BREAKING: ‘ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಆಸ್ಟ್ರೇಲಿಯಾ ಕ್ರಿಕೆಟಿಗ ‘ಡೇವಿಡ್ ವಾರ್ನರ್’ ನಿವೃತ್ತಿ ಘೋಷಣೆ | David Warner

BREAKING: ದೆಹಲಿ CM ಅರವಿಂದ್ ಕೇಜ್ರಿವಾಲ್‌ಗೆ ಜೈಲೇಗತಿ, ಜಾಮೀನು ಆದೇಶಕ್ಕೆ ದೆಹಲಿ ಹೈಕೋರ್ಟ್‌ ತಡೆ

Share. Facebook Twitter LinkedIn WhatsApp Email

Related Posts

SHOCKING : ಮಡಿಕೇರಿಯಲ್ಲಿ ‘ಹನಿಟ್ರ್ಯಾಪ್’ ಗೆ ಬಲಿಯಾಗಿ, ನಡು ರಸ್ತೆಯಲ್ಲಿ ಬೆತ್ತಲಾಗಿ ಓಡಾಡಿದ ಯುವಕ!

13/12/2025 11:19 AM1 Min Read

ಬೆಂಗಳೂರಲ್ಲಿ ಉದ್ಯಮಿ ರಾಜಗೋಪಾಲ್ ಮೇಲೆ ಏರ್ ಗನ್ ನಿಂದ ಫೈರಿಂಗ್ ಕೇಸ್ : ಆರೋಪಿ ಅಫ್ಜಲ್ ಅರೆಸ್ಟ್

13/12/2025 11:03 AM1 Min Read

BREAKING: ಡಿ.17ರಂದು ‘ಸಾಗರ ಜಿಲ್ಲೆ’ಗೆ ಒತ್ತಾಯಿಸಿ ‘ಸಾಗರ ಬಂದ್’

13/12/2025 11:01 AM1 Min Read
Recent News

SHOCKING : ಮಡಿಕೇರಿಯಲ್ಲಿ ‘ಹನಿಟ್ರ್ಯಾಪ್’ ಗೆ ಬಲಿಯಾಗಿ, ನಡು ರಸ್ತೆಯಲ್ಲಿ ಬೆತ್ತಲಾಗಿ ಓಡಾಡಿದ ಯುವಕ!

13/12/2025 11:19 AM

ಅಪಹರಣಕ್ಕೊಳಗಾದ ಬಾಲಕಿಯ ಕುರ್ಚಿ ಕಟ್ಟಿದ ಫೋಟೋ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ :8 ಗಂಟೆಗಳಲ್ಲಿ ಆಕೆಯನ್ನು ರಕ್ಷಿಸಿದ ಪೊಲೀಸರು

13/12/2025 11:18 AM

ರಸ್ತೆಯಲ್ಲಿ ನಿಂತಿದ್ದಕ್ಕೆ ಮಗನ ಮೇಲೆ ಗಲಾಟೆ: ಗಾಯಗೊಂಡ ಪುತ್ರನ ಕಂಡು ತಂದೆ ಹೃದಯಾಘಾತ | Watch video

13/12/2025 11:08 AM

ಬೆಂಗಳೂರಲ್ಲಿ ಉದ್ಯಮಿ ರಾಜಗೋಪಾಲ್ ಮೇಲೆ ಏರ್ ಗನ್ ನಿಂದ ಫೈರಿಂಗ್ ಕೇಸ್ : ಆರೋಪಿ ಅಫ್ಜಲ್ ಅರೆಸ್ಟ್

13/12/2025 11:03 AM
State News
KARNATAKA

SHOCKING : ಮಡಿಕೇರಿಯಲ್ಲಿ ‘ಹನಿಟ್ರ್ಯಾಪ್’ ಗೆ ಬಲಿಯಾಗಿ, ನಡು ರಸ್ತೆಯಲ್ಲಿ ಬೆತ್ತಲಾಗಿ ಓಡಾಡಿದ ಯುವಕ!

By kannadanewsnow0513/12/2025 11:19 AM KARNATAKA 1 Min Read

ಮಡಿಕೇರಿ : ಮಡಿಕೇರಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು ಹನಿ ಟ್ರ್ಯಾಪ್ ಗೆ ಬಲಿಯಾದ ಯುವಕನೊಬ್ಬ ಬೆತ್ತಲಾಗಿ ಓಡಿ ಬಂದಿರುವ…

ಬೆಂಗಳೂರಲ್ಲಿ ಉದ್ಯಮಿ ರಾಜಗೋಪಾಲ್ ಮೇಲೆ ಏರ್ ಗನ್ ನಿಂದ ಫೈರಿಂಗ್ ಕೇಸ್ : ಆರೋಪಿ ಅಫ್ಜಲ್ ಅರೆಸ್ಟ್

13/12/2025 11:03 AM

BREAKING: ಡಿ.17ರಂದು ‘ಸಾಗರ ಜಿಲ್ಲೆ’ಗೆ ಒತ್ತಾಯಿಸಿ ‘ಸಾಗರ ಬಂದ್’

13/12/2025 11:01 AM

BREAKING : ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಪೇಸ್ಟ್ ರೂಪದಲ್ಲಿ, ಬೆಲ್ಟ್ ನಲ್ಲಿ ಗಾಂಜಾ ಸಪ್ಲೈ : ಬೆಚ್ಚಿದ ಅಧಿಕಾರಿಗಳು!

13/12/2025 10:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.