Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಂಡ್ಯದಲ್ಲಿ KUWJ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನ ಆಚರಣೆ: ಸಮಾಜದ ಸ್ವಾಸ್ತ್ಯ ಕಾಪಾಡಲು ಆದಿಚುಂಚನಗಿರಿ ಸ್ವಾಮೀಜಿ ಕರೆ

17/11/2025 10:11 PM

ನಾಳೆ ಸಾಗರ ನೆಹರೂ ಮೈದಾನದ 70 ಲಕ್ಷದ ವಿವಿಧ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ

17/11/2025 10:01 PM

ನಿಮ್ಗೆ ಮೋಸ ಮಾಡಿದವ್ರ ಮೇಲೆ ದ್ವೇಷವಿದ್ಯಾ.? ಹಾಗಿದ್ರೆ, ಹೀಗೆ ಮಾಡಿ!

17/11/2025 9:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದವರ ವಿರುದ್ಧ ‘FIR’ ದಾಖಲು
KARNATAKA

BREAKING: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದವರ ವಿರುದ್ಧ ‘FIR’ ದಾಖಲು

By kannadanewsnow0929/08/2025 5:03 PM

ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದಂತ ಪೋಸ್ಟ್ ಗೆ ಅಶ್ಲೀಲ ಕಮೆಂಟ್ ಮಾಡಲಾಗಿತ್ತು. ಹೀಗೆ ಕಾಮೆಂಟ್ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮಹಿಳಾ ಆಯೋಗ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ವಿಜಲಕ್ಷ್ಮೀಗೆ ಅಶ್ಲೀಲ ಕಮೆಂಟ್ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ನಿನ್ನೆ ಸಾಮಾಜಿಕ ಹೋರಾಟಗಾರ ಬಿಆರ್ ಭಾಸ್ಕರ್ ಪ್ರಸಾದ್ ಅವರು ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸಿದ್ದಂತ ಮನವಿಯ ಮೇರೆಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಪುತ್ರರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಸಂದೇಶ ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮಕ್ಕೆ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಗೆ ಸೂಚಿಸಲಾಗಿತ್ತು.

ಈ ಹಿನ್ನಲೆಯಲ್ಲಿ ವಿಜಯಲಕ್ಷ್ಮಿ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ದರ್ಶನ್ ಪತ್ನಿ ಎಂಬುದಾಗಿ ಕಮೆಂಟ್ ಮಾಡಿದ್ದಂತವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸ್ವಯಂ ಪ್ರೇರಿತವಾಗಿ ಕೇಸ್ ಅನ್ನು ಸಿಕೆ ಅಚ್ಚುಕಟ್ಟು ಠಾಣೆಯ ಪೊಲೀಸರು ದಾಖಲಿಸಿದ್ದಾರೆ. ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ನಿಂದ ಸ್ವಯಂ ಪ್ರೇರಿತ ಕೇಸ್ ದಾಖಲಿಸಲಾಗಿದೆ.

ಪೊಲೀಸರ ದೂರಿನಲ್ಲಿ ಏನಿದೆ.?

ಪಿರ್ಯಾದುದಾರರಾದ ಲೋಕೇಶ್ ಕೆ ಹೆಚ್, ಪೊಲೀಸ್ ಸಬ್‌ ಇನ್ಸ್ ಪೆಕ್ಟರ್‌ ರವರು ದಿನಾಂಕ: 27/08/2025 ರಂದು ನೀಡಿದ ದೂರಿನ ಸಂಕ್ಷೀಪ್ತ ಸಾರಾಂಶವೇನೆಂದರೆ, ತಾನು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಈಗೆ ಸುಮಾರು 2 ವರ್ಷಗಳಿಂದ ಪೊಲೀಸ್ ಸಬ್‌ ಇನ್ಸ್ ಪೆಕ್ಟರ್ ಆಗಿ ಕರ್ತವ್ಯನಿರ್ವಹಿಸಿಕೊಂಡಿದ್ದು ಕರ್ತವ್ಯದ ಜೊತೆಯಲಿ ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಇನ್ಸಾರ್ಜ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತೇನೆ, ಸದರಿ ಸೆಲ್ ನಲ್ಲಿ ಠಾಣಾ ಸಿಬ್ಬಂದಿಗಳಾದ ಕಿರಣ್ ಕುಮಾರ್ ಪಿಸಿ-20106 ಮತ್ತು ಸುರೇಶ್‌ ಜಾಲಳ್ಳಿ, ಪಿಸಿ-21798 ರವರು ಸಹ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ.

ಈಗಿರುವಾಗ ಈ ದಿನ ದಿನಾಂಕ: 27/08/2025 ರಂದು ಗಣೇಶ ಹಬ್ಬದ ಪ್ರಯಕ್ತ ಠಾಣಾ ಸರಹದ್ದಿನಲ್ಲಿ, ವಿಶೇಷ ಗಸ್ತಿನಲಿರುವಾಗ, ಸೋಷಿಯಲ್‌ ಮೀಡಿಯಾ ಮಾನಿಟರಿಂಗ್ ಸೆಲ್ ನಲ್ಲಿ, ಕರ್ತವ್ಯ ನಿರ್ವಹಿಸಿಕೊಂಡಿರುವ ಠಾಣಾ ಸಿಬ್ಬಂದಿಯವರಾದ ಕಿರಣ್ ಕುಮಾ‌ ಪಿಸಿ-20106 ರವರು ಸಂಪರ್ಕಿಸಿ, ಸಂಜೆ ಸೋಷಿಯಲ್ ಮೀಡಿಯಾ ವೀಕ್ಷಣೆ ಮಾಡುತ್ತಿರುವಾಗ ಈ ದಿನ TV14 ಎಂಬ ಸೋಷಿಯಲ್ ಮೀಡಿಯಾದಲ್ಲಿ, “ ದರ್ಶನ್ ಪತ್ನಿಯ ಮೇಲೆ ಅಟ್ಯಾಕ್! ” ಎಂಬ ಶೀರ್ಷಿಕೆಯ ಅಡಿಯಲ್ಲಿ ನಿರೂಪಕರು ಸುಮಾರು 16 ನಿಮಿಷಗಳ ವಿಡಿಯೋವನ್ನು ಪ್ರಸಾರ ಮಾಡಿರುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ನಾನು ಸದರಿ ಯೂಟ್ಯೂಬ್ ಚಾನೆಲ್ ಅನ್ನು ನೋಡಲಾಗಿ ಸದರಿ ಶೀರ್ಷಿಕೆಯ ವಿಡಿಯೋದಲ್ಲಿ ಹಲವಾರು ಗ್ರೀನ್ ಶಾಟ್ ಗಳನ್ನು ನಿರೂಪಕರು ಪ್ರಸಾರ ಮಾಡಿರುತ್ತಾರೆ. ಅವುಗಳಲ್ಲಿ, ವಿಜಯಲಕ್ಷ್ಮಿ ಎಂಬ ಮಹಿಳೆಗೆ ಸೂಳೆ, ಡಗಾರ್, ಕೆಯುತ್ತಿನಿ ಎಂಬಿತ್ಯಾದಿಯಾಗಿ ಅವಾಚ್ಯ ಪದಗಳನ್ನು ಬಳಸಿರುವುದು ಕಂಡುಬಂದಿರುವುದಾಗಿ ತಿಳಿಸಿರುತ್ತಾರೆ. ಕೂಡಲೇ ನಾನು ಸಹ ಸದರಿ ವಿಡಿಯೋವನ್ನು ನೋಡಲಾಗಿ ದರ್ಶನ್ ಪತ್ನಿಯ ಮೇಲೆ ಅಟಾಕ್ ಎಂಬ ಶೀರ್ಷಿಕೆಯಡಿಯಲಿ., ನ್ಯೂಸ್ ಒಂದು ಯೂಟ್ಯೂಬ್ ನಲ್ಲಿ URL Link : https://youtu.be/ceSPkcXSXZl?si=WiuzzQle2opmxc_p” ಪ್ರಸಾರವಾಗಿದ್ದು, ಅದರಲ್ಲಿ ಪ್ರಸಾರವಾದ ಸ್ತ್ರೀನ್ ಶಾಟ್ ಗಳಲಿ 1) DODDAMANE SOL…, 2) POWERISM 3) SF, 4) mann Off Masssesss… 5) appu_cultz_official and b… 6) uneducated@DevilM6755… ಎಂಬ ಟ್ವಿಟರ್ ಖಾತೆಗಳಲ್ಲಿ, ವಿಜಯಲಕ್ಷ್ಮೀ ಎಂಬ ಮಹಿಳೆಯ ಬಗ್ಗೆ ಸೂಳೆ, ಡಗಾರ್, ಕೆಯುತ್ತಿನಿ ಎಂಬ ಅವಾಚ್ಯ ಶಬ್ದಗಳನ್ನು ಬಳಸಿರುವುದು ಮತ್ತು ಅಸಭ್ಯ ಪೋಟೋಗಳನ್ನು ಹಾಕಿರುವುದು ಕಂಡುಬದದಿರುತ್ತದೆ.

ಸದರಿ ಟ್ವಿಟರ್ ಖಾತೆಗಳನ್ನು ಬಳಸಿ ಸೋಷಿಯಲ್ ಮೀಡಿಯಾದಲ್ಲಿ, ಶ್ರೀಮತಿ ವಿಜಯಲಕ್ಷ್ಮೀ ಎಂಬ ಮಹಿಳೆಗೆ ಅವಾಚ್ಯ ಶಬ್ದಗಳನ್ನು ಬಳಸಿರುವುದು ಮತ್ತು ಅಸಭ್ಯ ಪೋಟೋಗಳನ್ನು ಹಾಕಿರುವವರನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರಿದ್ದಾರೆ.

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ `ಡಿಜಿಟಲ್ ರೂಪದಲ್ಲಿ ಸಿಗಲಿವೆ ಭೂದಾಖಲೆ’ಗಳು.!

Share. Facebook Twitter LinkedIn WhatsApp Email

Related Posts

ಮಂಡ್ಯದಲ್ಲಿ KUWJ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನ ಆಚರಣೆ: ಸಮಾಜದ ಸ್ವಾಸ್ತ್ಯ ಕಾಪಾಡಲು ಆದಿಚುಂಚನಗಿರಿ ಸ್ವಾಮೀಜಿ ಕರೆ

17/11/2025 10:11 PM1 Min Read

ನಾಳೆ ಸಾಗರ ನೆಹರೂ ಮೈದಾನದ 70 ಲಕ್ಷದ ವಿವಿಧ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ

17/11/2025 10:01 PM1 Min Read

BIG NEWS: ಜಾತಿಗಣತಿ ವರದಿಯೆಂದು ಗೊಂದಲಕಾರಿ ಮಾಹಿತಿ ಶೇರ್ ಮಾಡಿದ ವ್ಯಕ್ತಿ ವಿರುದ್ಧ ದೂರು ದಾಖಲು

17/11/2025 9:30 PM2 Mins Read
Recent News

ಮಂಡ್ಯದಲ್ಲಿ KUWJ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನ ಆಚರಣೆ: ಸಮಾಜದ ಸ್ವಾಸ್ತ್ಯ ಕಾಪಾಡಲು ಆದಿಚುಂಚನಗಿರಿ ಸ್ವಾಮೀಜಿ ಕರೆ

17/11/2025 10:11 PM

ನಾಳೆ ಸಾಗರ ನೆಹರೂ ಮೈದಾನದ 70 ಲಕ್ಷದ ವಿವಿಧ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ

17/11/2025 10:01 PM

ನಿಮ್ಗೆ ಮೋಸ ಮಾಡಿದವ್ರ ಮೇಲೆ ದ್ವೇಷವಿದ್ಯಾ.? ಹಾಗಿದ್ರೆ, ಹೀಗೆ ಮಾಡಿ!

17/11/2025 9:58 PM

BIG NEWS: ಜಾತಿಗಣತಿ ವರದಿಯೆಂದು ಗೊಂದಲಕಾರಿ ಮಾಹಿತಿ ಶೇರ್ ಮಾಡಿದ ವ್ಯಕ್ತಿ ವಿರುದ್ಧ ದೂರು ದಾಖಲು

17/11/2025 9:30 PM
State News
KARNATAKA

ಮಂಡ್ಯದಲ್ಲಿ KUWJ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನ ಆಚರಣೆ: ಸಮಾಜದ ಸ್ವಾಸ್ತ್ಯ ಕಾಪಾಡಲು ಆದಿಚುಂಚನಗಿರಿ ಸ್ವಾಮೀಜಿ ಕರೆ

By kannadanewsnow0917/11/2025 10:11 PM KARNATAKA 1 Min Read

ಬೆಂಗಳೂರು: ಸಮಾಜದ ಸ್ವಾಸ್ತ್ಯ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನದ…

ನಾಳೆ ಸಾಗರ ನೆಹರೂ ಮೈದಾನದ 70 ಲಕ್ಷದ ವಿವಿಧ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ

17/11/2025 10:01 PM

BIG NEWS: ಜಾತಿಗಣತಿ ವರದಿಯೆಂದು ಗೊಂದಲಕಾರಿ ಮಾಹಿತಿ ಶೇರ್ ಮಾಡಿದ ವ್ಯಕ್ತಿ ವಿರುದ್ಧ ದೂರು ದಾಖಲು

17/11/2025 9:30 PM

ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದಕ್ಕೂ ಮುನ್ನ ಎಚ್ಚರ: ಡಿಜಿಟಲ್‌ ಅರೆಸ್ಟ್‌ ವಂಚನೆಗೆ ಬಲಿಯಾಗದಿರಿ | Digital Arrest Scam

17/11/2025 9:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.