ಚಿಕ್ಕಬಳ್ಳಾಪುರ: ವಿಧವೆಗೆ ಬಾಳು ಕೊಡುವೆ ಎನ್ನುವ ನೆಪದಲ್ಲಿ ಆಕೆಯನ್ನು ಪ್ರೀತಿಸಿ, ಕೊನೆಗೆ ಆಕೆ ಜೊತೆಗೆ ಇನ್ನೊಬ್ಬ ಇರುವುದನ್ನು ಸಹಿಸದೇ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಸಾವನ್ನಪ್ಪಿರುವ ವ್ಯಕ್ತಿಯನ್ನು, ಎಸ್.ಎನ್.ಪ್ರಶಾಂತ್ ಎನ್ನಲಾಗಿದೆ.

ಘಟನೆ ಹಿನ್ನಲೆ: ಚಿಕ್ಕಬಳ್ಳಾಪುರದ ನಗರಸಭೆಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ನೌಕರನೊಬ್ಬ ಕಳೆದ ಕರೋನ ಟೈಮ್‌ನಲ್ಲಿ ಸಾವನ್ನಪ್ಪಿದ್ದಾನೆ. ಇದೇ ವೇಳೆ ಸಾವನ್ನಪ್ಪಿದ್ದ ಗಂಡನ ಹೆಂಡ್ತಿ ಸುಮಾ ಎನ್ನುವ ಮಹಿಳೆಗೆ ತನ್ನ ಗಂಡನ ಗೆಳೆಯನ ಜೊತೆಗೆ ಲವ್‌ ಶುರುವಾಗಿದೆ. ಇದೇ ವೇಳೇ ಳಿಯ ನಗರಸಭಾ ಸದಸ್ಯ ಅಂಬರೀಶ ಜೊತೆಗೂ ಕೂಡ ಸುಮಾ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇದೇ ವೇಳೆ ಇದರಿಂದ ಮನನೊಂದ ಪ್ರಶಾಂತ್ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಘಟನೆ ಬಗ್ಗೆ ಮೃತನ ಸಂಬಂಧಿಗಳು ಸುಮಾ ಹಾಗೂ ಅಂಬರೀಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅಂಬರೀಶನೇ ತನ್ನ ಸಾವಿಗೆ ಕಾರಣ ಅಂತ ವೀಡಿಯೋ ರೆಕಾರ್ಡ್ ಮಾಡಿ ಪ್ರಶಾಂತ್‌ ಸಾವನ್ನಪ್ಪಿದ್ದಾನೆ. ಘಟನೆ ಬಗ್ಗೆ ಚಿಕ್ಕಬಳ್ಳಾಪುರ ಪೋಲಿಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

BREAKING NEWS : ಕೋಲಾರದಲ್ಲಿ7 ʻ PFI’ ಮುಖಂಡರು ಪೊಲೀಸರ ವಶಕ್ಕೆ | PFI leaders arrested

BIG NEWS: ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಕನ್ನಡ ಸಂಘಟನೆಗಳ ಪಟ್ಟು| Idgah Maidan

BIG NEWS: ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಕನ್ನಡ ಸಂಘಟನೆಗಳ ಪಟ್ಟು| Idgah Maidan

Share.
Exit mobile version