Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಳೆ ಬೆಂಗಳೂರು ನಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

22/08/2025 5:36 PM

ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲು ಅವಕಾಶ ನೀಡಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

22/08/2025 5:20 PM

ಕ್ಯಾನ್ಸರ್’ಗೆ ಕಾರಣವಾಗುವ 3 ಸಾಮಾನ್ಯ ಅಡುಗೆ ಸಾಮಗ್ರಿಗಳಿವು, ನಿಮ್ಮ ಆಹಾರ ವಿಷವಾಗುತ್ತೆ! ಕ್ಯಾನ್ಸರ್ ತಜ್ಞರ ಎಚ್ಚರಿಕೆ

22/08/2025 5:16 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲು ಅವಕಾಶ ನೀಡಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ
KARNATAKA

ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲು ಅವಕಾಶ ನೀಡಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

By kannadanewsnow0922/08/2025 5:20 PM

ಬೆಂಗಳೂರು: ರಾಜ್ಯಕ್ಕೆ ಒಂದೇ ಕಾನೂನು ಇರಬೇಕು. ಗಣೇಶೋತ್ಸವವನ್ನು ವಿಜೃಂಭಣೆಯಿಂದ ಹಿಂದೂಗಳು ಕೊಂಡಾಡುವಂತೆ ಆಚರಿಸಲು ಸರಕಾರ ಅವಕಾಶ ಮಾಡಿಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೇರೆ ಬೇರೆಯವರಿಗೆ ಬೇರೆ ಬೇರೆ ರೀತಿ ಮಣೆ ಹಾಕುವುದು, ಹಿಂದೂಗಳನ್ನು ದಮನಿಸುವ ನೀತಿಯನ್ನು ಮಾಡಿದ್ದೇ ಆದರೆ, ಇದರ ಪ್ರತಿಫಲವನ್ನು ನೀವೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಎಲ್ಲ ಕಡೆ ಹಿಂದೂಗಳು ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲು ಅನುವು ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದರು.

ಗಣಪತಿ ಹಬ್ಬವನ್ನು ಬಹುಕಾಲದಿಂದ, ತಲೆತಲಾಂತರದಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಗುಲ್ಬರ್ಗದಲ್ಲಿ ರಿಪಬ್ಲಿಕ್ ಆಫ್ ಗುಲ್ಬರ್ಗ ಎಂದು ಕರೆಯುತ್ತಾರೆ. ರಾಜ್ಯದ ಕಾನೂನು, ದೇಶದ ಕಾನೂನು ಅಲ್ಲಿ ನಡೆಯುವುದಿಲ್ಲ. ರಾಜ್ಯಕ್ಕೆ ಒಂದೇ ಕಾನೂನು, ನೀತಿ ಇರಬೇಕು ಎಂದು ಶಾಸಕರು ಪ್ರಸ್ತಾಪಿಸಿದ್ದರು. ಗುಲ್ಬರ್ಗದಲ್ಲಿ ಸದ್ದೇ ಮಾಡದೇ ಗಣಪತಿ ಉತ್ಸವ ಮಾಡಬೇಕೇ? ಕಾಂಗ್ರೆಸ್ಸಿನವರಿಗೆ ಮಾತ್ರ ಮೌನ ಗಣಪತಿ ಬೇಕು ಎಂದು ಟೀಕಿಸಿದರು.

ದಕ್ಷಿಣ ಕನ್ನಡದಲ್ಲೂ ಹಿಂದೂಗಳನ್ನು ತುಳಿಯುವ ಕೆಲಸ

ಬೇರೆಯವರಿಗೆ ಮಣೆ ಹಾಕಿ ಎತ್ತಿ ಕಟ್ಟಬೇಕು; ನೀವು ಓಲೈಕೆ ಮಾಡಬೇಕು. ಹಿಂದೂಗಳನ್ನು ತುಳಿಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ದಕ್ಷಣ ಕನ್ನಡದಲ್ಲೂ ಡಿಜೆ ಹಾಕಬಾರದು ಎಂದು ನಿಷೇಧಿಸಿದ್ದಾರೆ ಎಂದು ಆಕ್ಷೇಪಿಸಿದರು.

ದಕ್ಷಿಣ ಕನ್ನಡದಲ್ಲಿ 1300 ಸೌಂಡ್ ಸಿಸ್ಟಮ್ ನಡೆಸುವವರಿದ್ದಾರೆ. 6 ಸಾವಿರ ಜನ ಕೆಲಸ ಮಾಡುತ್ತಾರೆ. ಆದರೆ, ಪೊಲೀಸರು ಅವರನ್ನು ಕರೆದು ತಾಕೀತು ಮಾಡುವುದು, 8 ಗಂಟೆಗೇ ಮೈಕ್ ಸೆಟ್ ಕಿತ್ತೊಯ್ಯುವ ಕೆಲಸ, ಕೇಸ್ ಹಾಕಿ ಬಂಧಿಸುವ, ಜೈಲಿಗೆ ಕಳಿಸುವ ಕೆಲಸ ಮಾಡುತ್ತಾರೆ ಎಂದು ಟೀಕಿಸಿದರು. ಇದರಿಂದ ಅವರ ಕುಟುಂಬಗಳು ಬೀದಿಪಾಲಾಗುತ್ತವೆ. ಜೊತೆಗೆ ಇದು ಕಾನೂನು ಮೀರಿದ ಕ್ರಮ ಎಂದು ದೂರಿದರು.

ಇದು ಪಲಾಯನವಾದಿ ಸರಕಾರ…

ಗಣೇಶೋತ್ಸವಕ್ಕೆ ತೊಂದರೆ ಕೊಡಬಾರದು ಎಂದು ಸದನದಲ್ಲಿ ಸದಸ್ಯರು ತಿಳಿಸಿದರೆ ಸದನವನ್ನೇ ಮುಂದೂಡಿದ್ದಾರೆ. ಇದು ಪಲಾಯನವಾದಿ ಸರಕಾರ. ಒಳ ಮೀಸಲಾತಿಯ ತೊಂದರೆ, ದ್ವಂದ್ವ, ಯಾರಿಗೆ ಅನ್ಯಾಯ ಆಗಿದೆ? ಅಲೆಮಾರಿ ಸಮುದಾಯ ಅಹೋರಾತ್ರಿ ಧರಣಿ ಮಾಡುತ್ತಿದೆ. ನಾಗಮೋಹನದಾಸ್ ಸಮಿತಿ, ಸದಾಶಿವ ಆಯೋಗ, ಮಾಧುಸ್ವಾಮಿ ವರದಿ ಅನುಸರಿಸಿಲ್ಲ; ಸುಪ್ರೀಂ ಕೋರ್ಟಿನ ಪ್ರಸ್ತಾಪವೂ ಇಲ್ಲ ಎಂದು ಟೀಕಿಸಿದರು. ಇವರು 3 ಗುಂಪು ಮಾಡಿ ಅಲೆಮಾರಿಗಳನ್ನು ಬೀದಿಗೆ ಬಿಟ್ಟಿದ್ದಾರೆ ಎಂದು ದೂರಿದರು. ಇಂಥ ಯಾವುದನ್ನೂ ಚರ್ಚಿಸಲು ಈ ಸರಕಾರ ಸಿದ್ಧವಿಲ್ಲ; ಮುಖ್ಯಮಂತ್ರಿಗಳು ಕೂಡ ಪಲಾಯನವಾದ ಮಾಡುತ್ತಾರೆ ಎಂದರು.

ಹದಗೆಟ್ಟ ಕಾನೂನು- ಸುವ್ಯವಸ್ಥೆ..

ಪ್ರಶ್ನಿಸಿದರೆ, ನಮ್ಮನ್ನು ತೇಜೋವಧೆ ಮಾಡುತ್ತಾರೆ. ನಮ್ಮನ್ನು ಟೀಕಿಸುತ್ತಾರೆಯೇ ಹೊರತು ಉತ್ತರ ಕೊಡುವಲ್ಲಿ ಮುಖ್ಯಮಂತ್ರಿಗಳು ಅಸಮರ್ಥರಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇಡೀ ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಅತ್ಯಾಚಾರಗಳು ನಡೆಯುತ್ತಿವೆ. ಕೊಲೆಗಳೂ ಆಗುತ್ತಿವೆ. ಇವರು ಉತ್ತರ ಕೊಡದೇ ಮಸೂದೆಗಳನ್ನು ಅಂಗೀಕರಿಸಿ, ತೆರಿಗೆ ಹಾಕುವುದು, ಸೆಸ್ ವಿಧಿಸುವುದರಲ್ಲಿ ನಿರತರಾಗಿದ್ದಾರೆ. ಇಷ್ಟು ಮಾಡಿದರೂ ಅಲ್ಲಿ ಹಣವಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ, ಶ್ರೀಮತಿ ಭಾರತಿ ಶೆಟ್ಟಿ, ನವೀನ್ ಕೆ.ಎಸ್, ಡಿ.ಎಸ್ ಅರುಣ್, ಪ್ರದೀಪ್ ಶೆಟ್ಟರ್, ಕೇಶವ ಪ್ರಸಾದ್ ಎಸ್, ಕಿಶೋರ್ ಕುಮಾರ್ ಪುತ್ತೂರು ಅವರು ಭಾಗವಹಿಸಿದ್ದರು.

Share. Facebook Twitter LinkedIn WhatsApp Email

Related Posts

ನಾಳೆ ಬೆಂಗಳೂರು ನಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

22/08/2025 5:36 PM1 Min Read

ಸಿಂಗದೂರು ಸೇತುವೆ ನೋಡುವ ಆಸೆಯಲ್ಲಿದ್ದವರಿಗೆ KSRTC ಗುಡ್ ನ್ಯೂಸ್: ಬೆಂಗಳೂರಿಂದ ಬಸ್ ವ್ಯವಸ್ಥೆ

22/08/2025 5:10 PM1 Min Read

ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಕ್ ಆಯ್ಕೆ: ಅವರು ಹೇಳಿದ್ದೇನು ಗೊತ್ತಾ?

22/08/2025 4:48 PM1 Min Read
Recent News

ನಾಳೆ ಬೆಂಗಳೂರು ನಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

22/08/2025 5:36 PM

ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲು ಅವಕಾಶ ನೀಡಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

22/08/2025 5:20 PM

ಕ್ಯಾನ್ಸರ್’ಗೆ ಕಾರಣವಾಗುವ 3 ಸಾಮಾನ್ಯ ಅಡುಗೆ ಸಾಮಗ್ರಿಗಳಿವು, ನಿಮ್ಮ ಆಹಾರ ವಿಷವಾಗುತ್ತೆ! ಕ್ಯಾನ್ಸರ್ ತಜ್ಞರ ಎಚ್ಚರಿಕೆ

22/08/2025 5:16 PM

ಸಿಂಗದೂರು ಸೇತುವೆ ನೋಡುವ ಆಸೆಯಲ್ಲಿದ್ದವರಿಗೆ KSRTC ಗುಡ್ ನ್ಯೂಸ್: ಬೆಂಗಳೂರಿಂದ ಬಸ್ ವ್ಯವಸ್ಥೆ

22/08/2025 5:10 PM
State News
KARNATAKA

ನಾಳೆ ಬೆಂಗಳೂರು ನಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

By kannadanewsnow0922/08/2025 5:36 PM KARNATAKA 1 Min Read

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 220/66/11ಕೆ.ವಿ ಹೂಡಿ ಸ್ಟೇಷನ್ ವ್ಯಾಪ್ತಿಯಲ್ಲಿ ದಿನಾಂಕ 23.08.2025 (ಶನಿವಾರ) ರಂದು…

ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲು ಅವಕಾಶ ನೀಡಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

22/08/2025 5:20 PM

ಸಿಂಗದೂರು ಸೇತುವೆ ನೋಡುವ ಆಸೆಯಲ್ಲಿದ್ದವರಿಗೆ KSRTC ಗುಡ್ ನ್ಯೂಸ್: ಬೆಂಗಳೂರಿಂದ ಬಸ್ ವ್ಯವಸ್ಥೆ

22/08/2025 5:10 PM

ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಕ್ ಆಯ್ಕೆ: ಅವರು ಹೇಳಿದ್ದೇನು ಗೊತ್ತಾ?

22/08/2025 4:48 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.