Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶನಿ ಗ್ರಹದ ಮಹತ್ವ ತಿಳಿಯಿರಿ

28/05/2025 1:56 PM

‘ಥಗ್ ಲೈಫ್’ ವಿವಾದ: ಕಮಲ್ ಹಾಸನ್ ಭಾಷಾ ಹೇಳಿಕೆಗೆ ಬಹಿಷ್ಕಾರ ಕರೆ | Thug of life

28/05/2025 1:48 PM

ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣ: ಜ್ಞಾನಶೇಖರನ್ ದೋಷಿ ಎಂದು ತೀರ್ಪು ನೀಡಿದ ಚೆನ್ನೈ ಕೋರ್ಟ್

28/05/2025 1:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ : ಆ ಎಲ್ಲಾ ‘ಮೊಬೈಲ್ ಫೋನ್’ಗಳು ಬ್ಯಾನ್
INDIA

ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ : ಆ ಎಲ್ಲಾ ‘ಮೊಬೈಲ್ ಫೋನ್’ಗಳು ಬ್ಯಾನ್

By KannadaNewsNow16/05/2024 6:54 PM

ನವದೆಹಲಿ : ಎಲ್ಲಾ ಮೊಬೈಲ್ ಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದು, ಟೆಲಿಕಾಂ ಕಂಪನಿಗಳಿಗೆ ಸರ್ಕಾರ ಮಹತ್ವದ ನಿರ್ದೇಶನ ನೀಡಿದೆ. ಸೈಬರ್ ಅಪರಾಧದಲ್ಲಿ ಭಾಗಿಯಾಗಿರುವ 28,200 ಮೊಬೈಲ್ ಫೋನ್’ಗಳನ್ನು ನಿಷೇಧಿಸುವಂತೆ ಸ್ಪಷ್ಟ ಸೂಚನೆ ನೀಡಿದೆ. ಈ ನಿರ್ಧಾರ ದೇಶಾದ್ಯಂತ ಜಾರಿಯಾಗಲಿದೆ. ಅಲ್ಲದೇ ಮೊಬೈಲ್ ಸಿಮ್ ಕಾರ್ಡ್ ಬಗ್ಗೆಯೂ ಕೇಂದ್ರ ಮಹತ್ವದ ನಿರ್ಧಾರ ಕೈಗೊಂಡಿದೆ. ಸಿಮ್ ಕಾರ್ಡ್’ಗಳ ಮರುಪರಿಶೀಲನೆಯನ್ನ ಶಿಫಾರಸು ಮಾಡಲಾಗಿದೆ. 20 ಲಕ್ಷ ಮೊಬೈಲ್ ಸಂಪರ್ಕಗಳನ್ನ ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ. ಸಿಮ್ ಕಾರ್ಡ್‌ಗಳ ಮರುಪರಿಶೀಲನೆ ವಿಫಲವಾದ್ರೆ, ಆ ಸಿಮ್ ಸಂಪರ್ಕಗಳನ್ನ ತೆಗೆದುಹಾಕುವಂತೆ ಕೇಂದ್ರವು ಕಂಪನಿಗಳಿಗೆ ಸೂಚಿಸಿದೆ. ಆದ್ದರಿಂದ ಸಿಮ್ ಕಾರ್ಡ್ ಬಳಕೆದಾರರು ಮತ್ತು ಮೊಬೈಲ್ ಹ್ಯಾಂಡ್‌ಸೆಟ್ ಮಾಲೀಕರು ಈ ವಿಷಯದಲ್ಲಿ ಸ್ಪಷ್ಟವಾಗಿರಬೇಕು. ಸೈಬರ್ ಅಪರಾಧಗಳನ್ನ ತಡೆಯುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, 28,200 ಮೊಬೈಲ್ ಹ್ಯಾಂಡ್ಸೆಟ್ಗಳು ಸೈಬರ್ ಅಪರಾಧದಲ್ಲಿ ತೊಡಗಿವೆ. ಈ ಮೊಬೈಲ್ ಹ್ಯಾಂಡ್ ಸೆಟ್’ಗಳಲ್ಲಿ ಸುಮಾರು 20 ಲಕ್ಷ ಸಂಖ್ಯೆಗಳನ್ನ ಬಳಸಲಾಗಿದೆ. ಮರುಪರಿಶೀಲನೆಯ ನಂತರ ಈ ಎಲ್ಲಾ ಸಿಮ್ ಕಾರ್ಡ್‌ಗಳನ್ನ ನಿಷೇಧಿಸಲಾಗುತ್ತದೆ. ಫೋನ್‌’ಗಳನ್ನ ಸಹ ನಿಷೇಧಿಸಲಾಗುವುದು. ದೂರಸಂಪರ್ಕ ಇಲಾಖೆಯು ದೇಶದಾದ್ಯಂತ ಈ ಮೊಬೈಲ್ ಹ್ಯಾಂಡ್‌ಸೆಟ್‌’ಗಳನ್ನ ನಿಷೇಧಿಸುವಂತೆ ಟೆಲಿಕಾಂ ಕಂಪನಿಗಳಿಗೆ ಪ್ರಮುಖ ಸೂಚನೆಗಳನ್ನ ನೀಡಿದೆ. 20 ಲಕ್ಷ ಮೊಬೈಲ್ ಸಂಪರ್ಕಗಳ ಮರುಪರಿಶೀಲನೆಗೂ ಸೂಚಿಸಿದೆ. ಡಿಜಿಟಲ್ ವಂಚನೆಯಿಂದ ನಾಗರಿಕರನ್ನ ರಕ್ಷಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಸರ್ಕಾರವು ಇತ್ತೀಚೆಗೆ ಡಿಜಿಟಲ್ ಗುಪ್ತಚರ ವೇದಿಕೆಯನ್ನ ಪರಿಚಯಿಸಿದೆ. ಈ ಮೂಲಕ ಸೈಬರ್ ಅಪರಾಧಗಳು ಮತ್ತು ಹಣಕಾಸು ವಂಚನೆಗಳಿಗೆ ಕಡಿವಾಣ ಹಾಕಬಹುದು. ಮಾಹಿತಿ ವಿನಿಮಯ, ನೈಜ-ಸಮಯದ ಗುಪ್ತಚರ ಹಂಚಿಕೆ, ಇತರ ಇಲಾಖೆಗಳ ನಡುವೆ ಸಮನ್ವಯವನ್ನ ಈ ಹೊಸ ವೇದಿಕೆಯ ಮೂಲಕ ಸುಲಭವಾಗಿ ಮಾಡಬಹುದು. ಟೆಲಿಕಾಂ ಕಂಪನಿಗಳು, ಕಾನೂನು ಜಾರಿ ಸಂಸ್ಥೆಗಳು, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು, ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಗುರುತಿನ ದಾಖಲೆ ನೀಡುವ ಅಧಿಕಾರಿಗಳು ಮುಂತಾದ ವಿವಿಧ ಇಲಾಖೆಗಳು ಈ ವೇದಿಕೆಯ ಅಡಿಯಲ್ಲಿ ಲಿಂಕ್ ಆಗಿವೆ. ಅವರು ಒಟ್ಟಿಗೆ ಕೆಲಸ ಮಾಡುತ್ತಾರೆ. ಆದ್ದರಿಂದ, ಸಮಸ್ಯೆಗಳನ್ನ ತ್ವರಿತವಾಗಿ ಪರಿಹರಿಸಬಹುದು.

 

 

ಮಾಲಿನ್ಯದ ಆತಂಕದ ನಡುವೆ ಭಾರತೀಯ ‘ಮಸಾಲೆ’ ಆಮದಿನ ಮೇಲೆ ಯುಕೆ ಕಠಿಣ ನಿಯಂತ್ರಣ

ರಜೆಯಲ್ಲಿ ಮಕ್ಕಳ ಸುರಕ್ಷತೆಗೆ ಗಮನ ನೀಡಿ: ಪಾಲಕರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮನವಿ

ಕೇಂದ್ರ ಸರ್ಕಾರದಿಂದ ‘ಪಿಂಚಣಿದಾರ’ರಿಗೆ ಸಿಹಿ ಸುದ್ದಿ ; ಎಲ್ಲ ಸಮಸ್ಯೆಗಳಿಗೆ ಒಂದೇ ಕಡೆ ಪರಿಹಾರ

All those mobile phones banned ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ : ಆ ಎಲ್ಲಾ 'ಮೊಬೈಲ್ ಫೋನ್'ಗಳು ಬ್ಯಾನ್
Share. Facebook Twitter LinkedIn WhatsApp Email

Related Posts

‘ಥಗ್ ಲೈಫ್’ ವಿವಾದ: ಕಮಲ್ ಹಾಸನ್ ಭಾಷಾ ಹೇಳಿಕೆಗೆ ಬಹಿಷ್ಕಾರ ಕರೆ | Thug of life

28/05/2025 1:48 PM1 Min Read

ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣ: ಜ್ಞಾನಶೇಖರನ್ ದೋಷಿ ಎಂದು ತೀರ್ಪು ನೀಡಿದ ಚೆನ್ನೈ ಕೋರ್ಟ್

28/05/2025 1:24 PM1 Min Read

Big News: ವಿಶ್ವಾದ್ಯಂತ ವಿದ್ಯಾರ್ಥಿ ವೀಸಾ ಸಂದರ್ಶನಗಳನ್ನು ಸ್ಥಗಿತಗೊಳಿಸಿದ ಅಮೇರಿಕಾ

28/05/2025 1:12 PM1 Min Read
Recent News

ಶನಿ ಗ್ರಹದ ಮಹತ್ವ ತಿಳಿಯಿರಿ

28/05/2025 1:56 PM

‘ಥಗ್ ಲೈಫ್’ ವಿವಾದ: ಕಮಲ್ ಹಾಸನ್ ಭಾಷಾ ಹೇಳಿಕೆಗೆ ಬಹಿಷ್ಕಾರ ಕರೆ | Thug of life

28/05/2025 1:48 PM

ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣ: ಜ್ಞಾನಶೇಖರನ್ ದೋಷಿ ಎಂದು ತೀರ್ಪು ನೀಡಿದ ಚೆನ್ನೈ ಕೋರ್ಟ್

28/05/2025 1:24 PM

Big News: ವಿಶ್ವಾದ್ಯಂತ ವಿದ್ಯಾರ್ಥಿ ವೀಸಾ ಸಂದರ್ಶನಗಳನ್ನು ಸ್ಥಗಿತಗೊಳಿಸಿದ ಅಮೇರಿಕಾ

28/05/2025 1:12 PM
State News
KARNATAKA

ಶನಿ ಗ್ರಹದ ಮಹತ್ವ ತಿಳಿಯಿರಿ

By kannadanewsnow8928/05/2025 1:56 PM KARNATAKA 3 Mins Read

ಶನಿ ಗ್ರಹದ ಮಹತ್ವ ತಿಳಿಯಿರಿ ? ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ…

BIG NEWS : ಬ್ಲ್ಯಾಕ್ ಅಲ್ಲಿ IPL ಪಂದ್ಯಗಳ ಟಿಕೆಟ್ ಮಾರಾಟ : ಬೆಂಗಳೂರಲ್ಲಿ ಖಾಸಗಿ ಕಂಪನಿ ಉದ್ಯೋಗಿ ಅರೆಸ್ಟ್

28/05/2025 12:03 PM

BREAKING : ವಿದೇಶಕ್ಕೆ ತೆರಳಲು ಅನುಮತಿ ಕೋರಿ ಕೊಲೆ ಆರೋಪಿ ನಟ ದರ್ಶನ್ ಅರ್ಜಿ ಸಲ್ಲಿಕೆ | Actor Darshan

28/05/2025 11:38 AM

BIG NEWS : ಬೆಂಗಳೂರಲ್ಲಿ ಕುಖ್ಯಾತ ಮನೆಗಳ್ಳ ಏಡ್ಸ್ ಮುರುಗನ್ ಸಹಚರರಿಬ್ಬರ ಬಂಧನ : 600 ಗ್ರಾಂ ಚಿನ್ನ ವಶ

28/05/2025 11:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.