ಹುಬ್ಬಳ್ಳಿ: ಅಖಿಲ ಭಾರತ ಸ್ಟೇಷನ್ ಮಾಸ್ಟರ್ ಅಸೋಸಿಯೇಷನ್ (AISMA), ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ತನ್ನ ವಾರ್ಷಿಕ ಸಾಮಾನ್ಯ ಸಭೆ ಯಶಸ್ವಿಯಾಗಿ ನೆರವೇರಿತು. ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ವಿಭಾಗದಾದ್ಯಂತದ ಸ್ಟೇಷನ್ ಮಾಸ್ಟರ್ಗಳು ಉತ್ಸಾಹದಿಂದ ಭಾಗವಹಿಸಿದ್ದರು. ಸಂಘದ ಹಿಂದಿನ ಅವಧಿಯ ಸಾಧನೆಗಳ ವಿಮರ್ಶೆ, ಭವಿಷ್ಯದ ಕಾರ್ಯತಂತ್ರಗಳ ರೂಪರೇಷೆ, ಹಾಗೂ ನೂತನ ಪದಾಧಿಕಾರಿಗಳ ನೇಮಕವು ಸಭೆಯ ಪ್ರಮುಖಾಂಶಗಳಾಗಿದ್ದವು.
ಹಿಂದಿನ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಈ ಸಂದರ್ಭದಲ್ಲಿ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ನೂತನವಾಗಿ ನೇಮಕಗೊಂಡ ಪ್ರಮುಖ ಪದಾಧಿಕಾರಿಗಳ ವಿವರ ಇಂತಿದೆ:
- ವಿಭಾಗೀಯ ಅಧ್ಯಕ್ಷರು: ಮಾನವೇಂದ್ರ ಓಜಾ
- ಕಾರ್ಯಕಾರಿ ಅಧ್ಯಕ್ಷರು: ನೂರಪ್ಪ ಸಿ. ಲಮಾಣಿ
- ವಿಭಾಗೀಯ ಕಾರ್ಯದರ್ಶಿ: ರಂಜನ್ ಕುಮಾರ್ ಝಾ
- ವಿಭಾಗೀಯ ಹಣಕಾಸು ಕಾರ್ಯದರ್ಶಿ: ಪ್ರಕಾಶ್ ಕುಮಾರ್ ರಜಾಕ್
- ಉಪಾಧ್ಯಕ್ಷರು: ಲೋಕೇಶ್ ಕುಮಾರ ಜಾಟವ ಮತ್ತು ಅಶೋಕ್ ಕುಮಾರ್ ಸಿಂಗ್
- ಸಂಯುಕ್ತ ವಿಭಾಗೀಯ ಕಾರ್ಯದರ್ಶಿ: ಹೇಮೇಶ್ ಕುಮಾರ್
- ಸಂಘಟನಾ ಕಾರ್ಯದರ್ಶಿ: ಬರುಣ್ ಕುಮಾರ್ ದಾಸ್ ಮತ್ತು ರಾಜೇಶ್ ನಹಾಕ್ ಅವರು ನೇಮಕಗೊಂಡಿದ್ದಾರೆ.
ಇದೇ ತಿಂಗಳು ಅಕ್ಟೋಬರ್ 31, 2025 ರಂದು ಸೇವೆಯಿಂದ ನಿವೃತ್ತರಾಗಲಿರುವ ನೈಋತ್ಯ ರೈಲ್ವೆಯ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಡಾ. ಅನೂಪ್ ದಯಾನಂದ ಸಾಧು ಅವರಿಗೆ ಸಂಘವು ವಿಶೇಷ ಸನ್ಮಾನ ಸಮಾರಂಭವನ್ನು ಆಯೋಜಿಸಿತ್ತು. ರೈಲ್ವೆ ವ್ಯವಸ್ಥೆಗೆ ಡಾ. ಸಾಧು ಅವರು ನೀಡಿದ ಸುದೀರ್ಘ, ಸಮರ್ಪಿತ ಸೇವೆ ಮತ್ತು ಗಣನೀಯ ಕೊಡುಗೆಗಳನ್ನು ಗುರುತಿಸಿ ಸಂಘವು ಕೃತಜ್ಞತೆ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸಾಧು, ‘ಭಾರತೀಯ ರೈಲ್ವೆಯಲ್ಲಿ ಸ್ಟೇಷನ್ ಮಾಸ್ಟರ್ಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಅವರೇ ರೈಲ್ವೆಯ ಹೃದಯ ಭಾಗ ಎಂದು,’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ವತಿಯಿಂದ ಡಾ. ಸಾಧು ಅವರು ನಿವೃತ್ತಿಯ ನಂತರವೂ ಸಂತೋಷದ ಜೀವನ ನಡೆಸಲಿ ಎಂದು ಶುಭ ಕೋರಲಾಯಿತು.
ಸಭೆಯಲ್ಲಿ ಸಂಘದ ವಿಭಾಗೀಯ ಕಾರ್ಯದರ್ಶಿ ಮಾನವೇಂದ್ರ ಓಜಾ ಅವರು 2021 ರಿಂದ 2025 ರವರೆಗಿನ ಸಂಘದ ಚಟುವಟಿಕೆಗಳು, ಆಯವ್ಯಯ ವರದಿ ಮತ್ತು ಸಾಧನೆಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಸ್ಟೇಷನ್ ಮಾಸ್ಟರ್ಗಳ ಹಕ್ಕುಗಳ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ನಡೆಸಿದ ಕಾರ್ಯಗಳನ್ನು ಅವರು ವಿವರಿಸಿದರು.
ಸದಸ್ಯರ ಹಕ್ಕುಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ಅವರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಕುಮಾರ ಸ್ವಾಮಿ ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಸ್ಟೇಷನ್ ಮಾಸ್ಟರ್ ಹುದ್ದೆಯಿಂದ ಸಹಾಯಕ ಆಪರೇಷನ್ ಮ್ಯಾನೇಜರ್ ಆಗಿ ನೇಮಕಗೊಂಡ ರಾಮಕೃಷ್ಣ ರುದ್ರಗಂಟಿ ಅವರಿಗೂ ಸಹ ಸನ್ಮಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸತೀಶ್ ಕುಮಾರ್ ಸೇರಿದಂತೆ ಅರವಿಂದ ಹರ್ಲೆ, ಆನಂದ ರಾವ್, ಕುಮಾರ ಸ್ವಾಮಿ, ಜಯಣ್ಣ ಹರಿ ವಲ್ಲಭ್ ಮತ್ತು ಐಸ್ಮಾ (AISMA) ಸಂಘದ ಅನೇಕ ಹಿರಿಯ ಗಣ್ಯರು ಉಪಸ್ಥಿತರಿದ್ದರು.
ಸಾಮಾನ್ಯ ಸಭೆ ಮತ್ತು ಸನ್ಮಾನ ಸಮಾರಂಭಗಳ ಯಶಸ್ಸು AISMA ಹುಬ್ಬಳ್ಳಿ ವಿಭಾಗದ ಏಕತೆ ಮತ್ತು ಸಕ್ರಿಯ ಮನೋಭಾವವನ್ನು ಎತ್ತಿ ತೋರಿಸಿತು.
‘ವೈದ್ಯಕೀಯ ವ್ಯಾಸಂಗ’ದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: MCCಯಿಂದ ‘ಹೆಚ್ಚುವರಿ ಸೀಟು’ ಮಂಜೂರು
SHOCKING : ರಾಜ್ಯದಲ್ಲಿ ‘ಪೈಶಾಚಿಕ ಘಟನೆ’ : ಯುವತಿ ಮೇಲೆ ಗ್ಯಾಂಗ್ ರೇಪ್, ಚಿನ್ನ ಕದ್ದು ಕಾಮುಕರು ಎಸ್ಕೇಪ್.!