Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಗ್ರಾಮ ಪಂಚಾಯಿತಿ ನೌಕರರೇ ಗಮನಿಸಿ : ವೇತನ, ಭತ್ಯೆ ಹಾಗೂ ವಿವಿಧ ಸೌಲಭ್ಯಗಳ ಸಂಪೂರ್ಣ ವಿವರ ಇಲ್ಲಿದೆ

28/03/2026 10:36 AM

ಐಪಿಎಲ್ ಆರಂಭಕ್ಕೂ ಮುನ್ನವೇ ಸಿಎಸ್‌ಕೆಗೆ ಬಿಗ್ ಶಾಕ್: ಗಾಯದ ಸಮಸ್ಯೆಯಿಂದ ಧೋನಿ ಔಟ್ | IPL 2026

28/03/2026 10:28 AM

BIG NEWS : ರಾಯಚೂರಲ್ಲಿ ಘೋರ ದುರಂತ : ತುಂಗಾಭದ್ರಾ ನದಿಯಲ್ಲಿ ಈಜಲು ಹೋದ ನಾಲ್ವರು ಸಾವು!

28/03/2026 10:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : `WhatsApp’ ಬಳಕೆದಾರರೇ ಎಚ್ಚರ : ಈ `ಮೆಸೇಜ್’ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !
KARNATAKA

ALERT : `WhatsApp’ ಬಳಕೆದಾರರೇ ಎಚ್ಚರ : ಈ `ಮೆಸೇಜ್’ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !

By kannadanewsnow5708/03/2026 3:30 PM

ಸೈಬರ್ ವಂಚಕರು ಜನರನ್ನು ಮೋಸ ಮಾಡಲು ಪ್ರತಿದಿನ ಹೊಸ ಹೊಸ ದಾರಿಗಳನ್ನು ಹುಡುಕುತ್ತಲೇ ಇರುತ್ತಾರೆ. ಫೋನ್ ಕರೆ ಮಾಡಿ ಅಥವಾ ಒಟಿಪಿ (OTP) ಪಡೆದು ವಂಚಿಸುತ್ತಿದ್ದ ಖದೀಮರು ಇದೀಗ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ಮೂಲಕ ಹೊಸ ರೀತಿಯಲ್ಲಿ ವಂಚನೆಗೆ ಇಳಿದಿದ್ದಾರೆ. ವಾಟ್ಸಾಪ್‌ಗೆ ಬರುವ ಕೇವಲ ಒಂದು ಮೆಸೇಜ್ ನಿಮ್ಮ ಬ್ಯಾಂಕ್ ಖಾತೆಯನ್ನು ಕ್ಷಣಾರ್ಧದಲ್ಲಿ ಖಾಲಿ ಮಾಡಬಹುದು. ಹಾಗಾದರೆ ಈ ವಂಚನೆ ಹೇಗೆ ನಡೆಯುತ್ತದೆ ಮತ್ತು ಇದರಿಂದ ಪಾರಾಗುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ವಾಟ್ಸಾಪ್‌ನಲ್ಲಿ ಬರುವ ಆ ನಕಲಿ ಮೆಸೇಜ್ ಹೇಗಿರುತ್ತದೆ?

ಸೈಬರ್ ಖದೀಮರು ವಾಟ್ಸಾಪ್‌ನಲ್ಲಿ ಜನರನ್ನು ವಂಚಿಸಲು ಮದುವೆ ಕಾರ್ಡ್ (Wedding Card) ಅಥವಾ ಹಬ್ಬದ ಶುಭಾಶಯಗಳ (Festival greetings) ಹೆಸರಿನಲ್ಲಿ ಸಂದೇಶಗಳನ್ನು ಕಳುಹಿಸುತ್ತಾರೆ.

ಬಳಕೆದಾರರು ಈ ಸಂದೇಶಗಳನ್ನು ನಿಜವೆಂದು ನಂಬಿ ತೆರೆದು, ಅದರಲ್ಲಿರುವ ಫೋಟೋ ಅಥವಾ ಫೈಲ್ ಡೌನ್‌ಲೋಡ್ ಮಾಡಿದ ತಕ್ಷಣವೇ, ಅದರಲ್ಲಿ ಅಡಗಿರುವ ಎಪಿಕೆ (APK) ಆ್ಯಪ್ ಒಂದು ನಿಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಆಗುತ್ತದೆ.

ಒಮ್ಮೆ ಈ ಹಾನಿಕಾರಕ ಆ್ಯಪ್ ಇನ್‌ಸ್ಟಾಲ್ ಆದರೆ, ವಂಚಕರು ನಿಮ್ಮ ಮೊಬೈಲ್‌ನ ಸಂಪೂರ್ಣ ನಿಯಂತ್ರಣವನ್ನು ಪಡೆಯುತ್ತಾರೆ.

ನಂತರ ಯಾವುದೇ ಒಟಿಪಿ ಇಲ್ಲದೆ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಿ, ಹಣವನ್ನು ಲೂಟಿ ಮಾಡುತ್ತಾರೆ. ಇದೇ ಕಾರಣಕ್ಕೆ ಅಪರಿಚಿತರು ಕಳುಹಿಸುವ ಯಾವುದೇ ಫೈಲ್ ಅಥವಾ ಫೋಟೋಗಳ ಮೇಲೆ ಕ್ಲಿಕ್ ಮಾಡಬಾರದು ಎಂದು ಸೈಬರ್ ತಜ್ಞರು ಎಚ್ಚರಿಸುತ್ತಾರೆ.

ಅಪರಿಚಿತ ನಂಬರ್‌ಗಳಿಂದ ಬರುತ್ತವೆ ಮೆಸೇಜ್!

ಸಾಮಾನ್ಯವಾಗಿ ಇಂತಹ ನಕಲಿ ಸಂದೇಶಗಳು ಅಪರಿಚಿತ ನಂಬರ್‌ಗಳಿಂದ (Unknown numbers) ಬರುತ್ತವೆ. ಆದ್ದರಿಂದ ನಿಮಗೆ ಪರಿಚಯವಿಲ್ಲದ ನಂಬರ್‌ನಿಂದ ಬರುವ ಯಾವುದೇ ಲಿಂಕ್, ಮದುವೆ ಕಾರ್ಡ್ ಅಥವಾ ಫೈಲ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ನಿಮ್ಮ ಫೋನ್‌ನಲ್ಲಿ ಸೇವ್ ಆಗಿರುವ ಅಥವಾ ನಿಮಗೆ ಚೆನ್ನಾಗಿ ಪರಿಚಯವಿರುವ ವ್ಯಕ್ತಿಗಳ ಮೆಸೇಜ್‌ಗಳನ್ನು ಮಾತ್ರ ನಂಬಿ.

ಈ ವಂಚನೆಯಿಂದ ಪಾರಾಗಲು ಏನು ಮಾಡಬೇಕು?

ನಿಮ್ಮ ಹಣ ಮತ್ತು ಡೇಟಾವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:

ಆಟೋ-ಡೌನ್‌ಲೋಡ್ ಆಫ್ ಮಾಡಿ: ನಿಮ್ಮ ವಾಟ್ಸಾಪ್ ಸೆಟ್ಟಿಂಗ್ಸ್‌ಗೆ ಹೋಗಿ, ಫೋಟೋ ಮತ್ತು ವಿಡಿಯೋಗಳ ‘ಆಟೋ-ಡೌನ್‌ಲೋಡ್’ (Auto-download) ಆಯ್ಕೆಯನ್ನು ಆಫ್ ಮಾಡಿ. ಇದರಿಂದ ಯಾವುದೇ ಫೈಲ್ ತಾನಾಗಿಯೇ ಡೌನ್‌ಲೋಡ್ ಆಗುವುದಿಲ್ಲ. ನಿಮಗೆ ಬೇಕಾದಾಗ ಮಾತ್ರ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಿರಿ: ಅಪರಿಚಿತ ನಂಬರ್‌ನಿಂದ ಬಂದ ಫೋಟೋ, ವಿಡಿಯೋ ಅಥವಾ ಯಾವುದೇ ಸಂದೇಶದ ಮೇಲೆ ಅಥವಾ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ.

ಬ್ಲಾಕ್ ಮತ್ತು ರಿಪೋರ್ಟ್: ಅಪರಿಚಿತ ನಂಬರ್‌ನಿಂದ ಬರುವ ಅನುಮಾನಾಸ್ಪದ ಸಂದೇಶಗಳನ್ನು ತಕ್ಷಣವೇ ಡಿಲೀಟ್ ಮಾಡಿ. ಜೊತೆಗೆ ಆ ನಂಬರ್ ಅನ್ನು ವಾಟ್ಸಾಪ್‌ನಲ್ಲಿ ‘ರಿಪೋರ್ಟ್’ (Report) ಮಾಡಿ ಬ್ಲಾಕ್ ಮಾಡಿ.

ALERT: WhatsApp users beware: If you click on this message your bank account will be empty!
Share. Facebook Twitter LinkedIn WhatsApp Email

Related Posts

ರಾಜ್ಯದ ಗ್ರಾಮ ಪಂಚಾಯಿತಿ ನೌಕರರೇ ಗಮನಿಸಿ : ವೇತನ, ಭತ್ಯೆ ಹಾಗೂ ವಿವಿಧ ಸೌಲಭ್ಯಗಳ ಸಂಪೂರ್ಣ ವಿವರ ಇಲ್ಲಿದೆ

28/03/2026 10:36 AM2 Mins Read

BIG NEWS : ರಾಯಚೂರಲ್ಲಿ ಘೋರ ದುರಂತ : ತುಂಗಾಭದ್ರಾ ನದಿಯಲ್ಲಿ ಈಜಲು ಹೋದ ನಾಲ್ವರು ಸಾವು!

28/03/2026 10:25 AM1 Min Read

ಸಾಗರದ ಮಾರಿಗುಡಿ ಸಮಿತಿ ಅಧ್ಯಕ್ಷರಾಗಿ ನಾಗರಾಜ್, ಉಪಾಧ್ಯಕ್ಷರಾಗಿ ಶ್ರೀನಿವಾಸ್ ಮೇಸ್ತ್ರಿ, ಪ್ರ.ಕಾರ್ಯದರ್ಶಿಯಾಗಿ ಆನಂದ್ ಆಯ್ಕೆ, ಘೋಷಣೆ ಬಾಕಿ

28/03/2026 10:17 AM1 Min Read
Recent News

ರಾಜ್ಯದ ಗ್ರಾಮ ಪಂಚಾಯಿತಿ ನೌಕರರೇ ಗಮನಿಸಿ : ವೇತನ, ಭತ್ಯೆ ಹಾಗೂ ವಿವಿಧ ಸೌಲಭ್ಯಗಳ ಸಂಪೂರ್ಣ ವಿವರ ಇಲ್ಲಿದೆ

28/03/2026 10:36 AM

ಐಪಿಎಲ್ ಆರಂಭಕ್ಕೂ ಮುನ್ನವೇ ಸಿಎಸ್‌ಕೆಗೆ ಬಿಗ್ ಶಾಕ್: ಗಾಯದ ಸಮಸ್ಯೆಯಿಂದ ಧೋನಿ ಔಟ್ | IPL 2026

28/03/2026 10:28 AM

BIG NEWS : ರಾಯಚೂರಲ್ಲಿ ಘೋರ ದುರಂತ : ತುಂಗಾಭದ್ರಾ ನದಿಯಲ್ಲಿ ಈಜಲು ಹೋದ ನಾಲ್ವರು ಸಾವು!

28/03/2026 10:25 AM

ಸಾಗರದ ಮಾರಿಗುಡಿ ಸಮಿತಿ ಅಧ್ಯಕ್ಷರಾಗಿ ನಾಗರಾಜ್, ಉಪಾಧ್ಯಕ್ಷರಾಗಿ ಶ್ರೀನಿವಾಸ್ ಮೇಸ್ತ್ರಿ, ಪ್ರ.ಕಾರ್ಯದರ್ಶಿಯಾಗಿ ಆನಂದ್ ಆಯ್ಕೆ, ಘೋಷಣೆ ಬಾಕಿ

28/03/2026 10:17 AM
State News
KARNATAKA

ರಾಜ್ಯದ ಗ್ರಾಮ ಪಂಚಾಯಿತಿ ನೌಕರರೇ ಗಮನಿಸಿ : ವೇತನ, ಭತ್ಯೆ ಹಾಗೂ ವಿವಿಧ ಸೌಲಭ್ಯಗಳ ಸಂಪೂರ್ಣ ವಿವರ ಇಲ್ಲಿದೆ

By kannadanewsnow5728/03/2026 10:36 AM KARNATAKA 2 Mins Read

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯಿತಿ ನೌಕರರಿಗೆ ನೀಡಲಾಗುತ್ತಿರುವ ಕನಿಷ್ಠ ವೇತನ, ತುಟ್ಟಿಭತ್ಯೆ ಹಾಗೂ ಇತರ…

BIG NEWS : ರಾಯಚೂರಲ್ಲಿ ಘೋರ ದುರಂತ : ತುಂಗಾಭದ್ರಾ ನದಿಯಲ್ಲಿ ಈಜಲು ಹೋದ ನಾಲ್ವರು ಸಾವು!

28/03/2026 10:25 AM

ಸಾಗರದ ಮಾರಿಗುಡಿ ಸಮಿತಿ ಅಧ್ಯಕ್ಷರಾಗಿ ನಾಗರಾಜ್, ಉಪಾಧ್ಯಕ್ಷರಾಗಿ ಶ್ರೀನಿವಾಸ್ ಮೇಸ್ತ್ರಿ, ಪ್ರ.ಕಾರ್ಯದರ್ಶಿಯಾಗಿ ಆನಂದ್ ಆಯ್ಕೆ, ಘೋಷಣೆ ಬಾಕಿ

28/03/2026 10:17 AM

IPL 2026: ಐಪಿಎಲ್‌ನಲ್ಲಿ ‘ಬಾಡಿ ಕಂಟ್ರೋಲ್’ ನಿಯಮ ಜಾರಿ : ಇನ್ನು ಮುಂದೆ ಈ ತಪ್ಪು ಮಾಡಿದ್ರೆ ಔಟ್ ಇಲ್ಲ!

28/03/2026 10:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.