ನವದೆಹಲಿ: ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಂತ ವಿಮಾನ ಪತನ ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆ ಬಳಿಕ ನಿಖರವಾದಂತ ಖಚಿತ ಸಾವಿನ ಸಂಖ್ಯೆಯ ಮಾಹಿತಿ ನೀಡುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು ಗುಜರಾತಿನ ಅಹಮದಾಬಾದ್ ಬಳಿಯಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ ದುರಂತ ಸಂಭವಿಸಿದೆ. ಇದು ಅತ್ಯಂತ ದುರಂತ ಅಪಘಾತವಾಗಿದೆ. ನಾವು ಬಹಳಷ್ಟು ಜನರನ್ನು ಕಳೆದುಕೊಂಡಿದ್ದೇವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನಾವು ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಎಂದರು.
ಪತನಗೊಂಡ ಏರ್ ಇಂಡಿಯಾ ವಿಮಾನದಲ್ಲಿ ಹಲವಾರು ವಿದೇಶಿಯರು ಇದ್ದರು. ಸಂಬಂಧಿತ ಇಲಾಖೆಗಳಿಂದ ನಿಮಗೆ ನವೀಕರಣಗಳು ಸಿಗುತ್ತವೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ನಿಖರವಾದ ವಿವರಗಳನ್ನು ನೀಡಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ.
#WATCH | Air India Plane Crash | Delhi: Replying to a question by ANI, MEA Spokesperson Randhir Jaiswal says, "What has happened in Ahmedabad is a very tragic accident. We have lost a lot of people. We extend our deepest condolences to all those who have lost their loved ones.… pic.twitter.com/H5zaotV0Q9
— ANI (@ANI) June 12, 2025
ಉಜ್ಜೀವನ್ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ: ಇಲ್ಲಿ ಖಾತೆ ಹೊಂದಿದ್ದರೆ ನಿಮಗೆ ಸಿಗಲಿದೆ ರಿವಾಡ್ಸ್ ಪಾಯಿಂಟ್ಸ್
BREAKING : ರಾಜ್ಯದಲ್ಲಿ ‘ಜಾತಿಗಣತಿ’ ಮರು ಸಮೀಕ್ಷೆಗೆ ಸಚಿವ ಸಂಪುಟ ಅಸ್ತು