ನವದೆಹಲಿ: ಗುಜರಾತಿನ ಅಹಮದಾಬಾದ್ ನಲ್ಲಿ ಸಂಭವಿಸಿದಂತ ವಿಮಾನ ದುರಂತದಲ್ಲಿ ಮೃತರಾದಂತ ಕುಟುಂಬಸ್ಥರಿಗೆ ತಲಾ 1 ಕೋಟಿ ಪರಿಹಾರವನ್ನು ಟಾಟಾ ಗ್ರೂಪ್ ಘೋಷಣೆ ಮಾಡಿತ್ತು. ಇದೀಗ ಏರ್ ಇಂಡಿಯಾವು ಮೃತರ ಕುಟುಂಬಗಳಿಗೆ 25 ಲಕ್ಷ ಹೆಚ್ಚುವರಿ ಮಧ್ಯಂತರ ಪರಿಹಾರ ಘೋಷಿಸಿದೆ.
ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಮೃತರ ಕುಟುಂಬಗಳಿಗೆ ಮತ್ತು ಬದುಕುಳಿದವರಿಗೆ ತಕ್ಷಣದ ಆರ್ಥಿಕ ಅಗತ್ಯಗಳನ್ನು ಪೂರೈಸಲು ಏರ್ ಇಂಡಿಯಾ 25 ಲಕ್ಷ ರೂ. ಅಥವಾ ಸರಿಸುಮಾರು 21,000 ಜಿಬಿಪಿ ಮಧ್ಯಂತರ ಪರಿಹಾರವನ್ನು ಘೋಷಿಸಿದೆ.
Air India tweets, "Air India will provide an interim payment of Rs 25 lakh or approximately 21,000 GBP each to the families of the deceased and to the survivor, to help address immediate financial needs. This is in addition to the Rs 1 crore or approximately 85,000 GBP support… pic.twitter.com/UdwNJgsBbA
— ANI (@ANI) June 14, 2025
ಈಗಾಗಲೇ ಟಾಟಾ ಟಾಟಾ ಗ್ರೂಪ್ಸ್ ಘೋಷಿಸಿರುವ 1 ಕೋಟಿ ರೂ. ಅಥವಾ ಸರಿಸುಮಾರು 85,000 ಜಿಬಿಪಿ ಬೆಂಬಲದ ಜೊತೆಗೆ 25 ಲಕ್ಷ ಹೆಚ್ಚುವರಿ ಮದ್ಯಂತರ ಪರಿಹಾರವಾಗಿದೆ. ಇದು ಕೂಡ ಒಂದು ಕೋಟಿ ರೂ. ಆಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಹಮದಾಬಾದ್ ತಲುಪಿ, ಏರ್ ಇಂಡಿಯಾ ವಿಮಾನ ಅಪಘಾತದ ಸ್ಥಳವನ್ನು ಪರಿಶೀಲಿಸಿದರು. ಅಲ್ಲದೇ ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿ, ಅವರ ಆರೋಗ್ಯವನ್ನು ವಿಚಾರಿಸಿದರು.
ಯಾರೋ ಹೆದರಿಸುತ್ತಾರೆಂದ ಮಾತ್ರಕ್ಕೆ ನಿಮ್ಮ ಕರ್ತವ್ಯದಿಂದ ವಿಮುಖರಾಗಬೇಡಿ: ಪತ್ರಕರ್ತರಿಗೆ ಸಾಗರ ಡಿವೈಎಸ್ಪಿ ಕಿವಿಮಾತು
BIG NEWS: ರಾಜ್ಯ ಸರ್ಕಾರದಿಂದ ‘ಆಶಾ ಮೆಂಟರ್ಸ್’ಗಳಿಗೆ ಬಿಗ್ ಶಾಕ್: ‘ಕರ್ತವ್ಯದಿಂದ ಮುಕ್ತ’ಗೊಳಿಸಿ ಆದೇಶ