ಬೆಂಗಳೂರು : ನಟ ದರ್ಶನ್ ಗೆ ಕ್ರೌರ್ಯ ಮಾಡೋಕೆ ಬುದ್ದಿ ಕೊಟ್ಟಿದ್ದೇ ದೇವರು , ಅದಕ್ಕೆ ನಾವು ಈಗ ದೇವರ ಮೊರೆ ಹೋಗಿದ್ದೇವೆ ಎಂದು ಹಿರಿಯ ನಟಿ ಗಿರಿಜಾ ಲೋಕೇಶ್ ಹೇಳಿದ್ದಾರೆ.
ಸ್ಯಾಂಡಲ್ ವುಡ್ ಒಳಿತಿಗಾಗಿ ಹೋಮ ಹವನದಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಗಿರಿಜಾ ಲೋಕೇಶ್, ನಟ ದರ್ಶನ್ ನಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರು, ನಟ ದರ್ಶನ್ ಕನ್ನಡ ಚಿತ್ರರಂಗದ ಅಭಿವೃದ್ದಿಗೆ ಬಹಳ ಕಷ್ಟಪಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಆತನದ್ದೂ ಪಾಲೂ ಇದೆ ಎಂದು ಹೇಳಿದ್ದಾರೆ.
ತಾಯಿ ಮಗನಿಗೆ ಒಳ್ಳೆದು ಮಾಡಲಿ ಎಂದು ಬಯಸುವುದರಲ್ಲಿ ತಪ್ಪೇನಿದೆ. ಕ್ರೌರ್ಯ ಮಾಡೋಕೆ ದರ್ಶನ್ ಗೆ ಬುದ್ದಿ ಕೊಟ್ಟಿದ್ದೇ ದೇವರು , ಅದಕ್ಕೆ ನಾವು ಈಗ ದೇವರ ಮೊರೆ ಹೋಗಿದ್ದೇವೆ. ಅದರಲ್ಲಿ ತಪ್ಪೇನಿದೆ..? ದರ್ಶನ್ ಗಾಗಿ ಪೂಜೆ ಯಾಕೆ ಮಾಡಬಾರದು? ..? ಕನ್ನಡ ಚಿತ್ರರಂಗ ಈ ಮಟ್ಟಕ್ಕೆ ಬರಲು ಅವನು ಕೂಡ ಬಹಳ ಕಷ್ಟಪಪಟ್ಟಿದ್ದಾನೆ ಎಂದಿದ್ದಾರೆ.