Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಇ-ರಿಕ್ಷಾಕ್ಕೆ ವೇಗವಾಗಿ ಬಂದು ಢಿಕ್ಕಿ ಹೊಡೆದ ಟ್ರಕ್, ಮೂವರ ದಾರುಣ ಸಾವು, ಹಲವರಿಗೆ ಗಂಭೀರ ಗಾಯ!

ಮನುಷ್ಯನ ದೇಹದ ಯಾವ ಭಾಗದ ಮೇಲೆ ‘ಹಲ್ಲಿ’ ಬಿದ್ದರೆ ಏನರ್ಥ? ಇಲ್ಲಿದೆ ಜ್ಯೋತಿಷ್ಯ ಶಾಸ್ತ್ರದ ಮಾಹಿತಿ!

Explosion in a car near the Red Fort in Delhi

ಕೆಂಪುಕೋಟೆ ಸ್ಫೋಟದ ತನಿಖೆಯಲ್ಲಿ ಆಘಾತಕಾರಿ ಸತ್ಯ: ‘ChatGPT’ ಮತ್ತು ‘YouTube’ ಬಳಸಿ ಐಇಡಿ ಬಾಂಬ್ ತಯಾರಿಸಿದ್ದ ಉಗ್ರರು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ 2ನೇ ವಿಮಾನ ನಿಲ್ದಾಣದ ವಿಚಾರವಾಗಿ 2-3 ದಿನಗಳಲ್ಲಿ ಎಎಐ ವರದಿ ನೀಡಲಿದೆ: ಸಚಿವ ಎಂ.ಬಿ.ಪಾಟೀಲ
KARNATAKA

ಬೆಂಗಳೂರಲ್ಲಿ 2ನೇ ವಿಮಾನ ನಿಲ್ದಾಣದ ವಿಚಾರವಾಗಿ 2-3 ದಿನಗಳಲ್ಲಿ ಎಎಐ ವರದಿ ನೀಡಲಿದೆ: ಸಚಿವ ಎಂ.ಬಿ.ಪಾಟೀಲ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಎರಡನೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧ ಸ್ಥಳ ಪರಿಶೀಲನೆ ಮಾಡಿಕೊಂಡು ಹೋಗಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ಇನ್ನು 2-3 ದಿನಗಳಲ್ಲಿ ವರದಿ ಕೊಡಲಿದೆ. ಇದಾದ ನಂತರ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ‌ ಬಿ ಪಾಟೀಲ ಗುರುವಾರ ಹೇಳಿದ್ದಾರೆ.

ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಎರಡನೆಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಮಗೆ 2033ರವರೆಗೂ ನಿರ್ಬಂಧವಿದೆ. ಆದರೆ, ಈಗಿನಿಂದಲೇ ಅಗತ್ಯ ಪ್ರಕ್ರಿಯೆಗಳನ್ನು ಆರಂಭಿಸಿದರೆ ಅಷ್ಟು ಹೊತ್ತಿಗೆ ಮುಗಿಸಬಹುದು. ಒಂದು ವಿಮಾನ ನಿಲ್ದಾಣ ನಿರ್ಮಿಸಲು ಕನಿಷ್ಠ ಪಕ್ಷ ಐದಾರು ವರ್ಷಗಳಾದರೂ ಹಿಡಿಯುತ್ತದೆ ಎಂದಿದ್ದಾರೆ.

ಎಎಐ ತಾನು ಪರಿಶೀಲಿಸಿರುವ ಎರಡು ಸ್ಥಳಗಳಿಗೂ ಹಸಿರು ನಿಶಾನೆ ತೋರಿಸಬಹುದು. ನಾವೂ ಒಂದು ಕಡೆ ಐದಾರು ಸಾವಿರ ಎಕರೆ ಭೂಮಿ ಕೊಡಬಹುದು. ಆದರೆ ವಿಮಾನ‌ ನಿಲ್ದಾಣ ನಿರ್ಮಾಣ ಸಂಸ್ಥೆಗಳು ಇದು ಆರ್ಥಿಕವಾಗಿ ಲಾಭದಾಯಕವೇ ಎನ್ನುವಂತಹ ಅಂಶಗಳನ್ನು ನೋಡುತ್ತವೆ. ಇದೊಂದು ಜಟಿಲವಾದ ಕೆಲಸ ಎನ್ನುವುದು ನನಗೆ ಎಲ್ಲರಿಗಿಂತ ಚೆನ್ನಾಗಿ ಗೊತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ದೇಶದಲ್ಲಿ ಹೊಸದೆಹಲಿ (ನೋಯಿಡಾ) ಮತ್ತು ಮುಂಬೈ (ನವೀಮುಂಬೈ) ನಗರಗಳು ಮಾತ್ರ ಎರಡೆರಡು ವಿಮಾನ ನಿಲ್ದಾಣ ಹೊಂದಿವೆ. ಆ ವಿಮಾನ‌‌ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಿದ ಸಂಸ್ಥೆಗಳ ಜತೆಯೂ ನಾವು ಮಾತನಾಡುತ್ತೇವೆ. ತಮಿಳುನಾಡು ಸರಕಾರವು ಹೊಸೂರಿನಲ್ಲಿ ವಿಮಾನ‌ ನಿಲ್ದಾಣ ನಿರ್ಮಿಸಲಿರುವ ವಿಚಾರವೂ ಗಮನದಲ್ಲಿದೆ ಎಂದು ಅವರು ವಿವರಿಸಿದ್ದಾರೆ.

ಉತ್ತರ ಕರ್ನಾಟಕದ ಶಾಸಕರು ತುಮಕೂರಿಗೆ ಸಮೀಪದಲ್ಲಿ ವಿಮಾನ‌ ನಿಲ್ದಾಣ ಬರಲಿ ಎನ್ನುತ್ತಿದ್ದಾರೆ. ಇನ್ನು ಕೆಲವರು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಈ ಯೋಜನೆ ಬಂದರೆ ಅನುಕೂಲ ಎನ್ನುತ್ತಿದ್ದಾರೆ. ಪ್ರಯಾಣಿಕರ ದಟ್ಟಣೆ, ಕೈಗಾರಿಕಾ ಅಗತ್ಯ ಇತ್ಯಾದಿಗಳು ಇದರಲ್ಲಿ ಪರಿಗಣನೆಗೆ ಬರಲಿವೆ. ಒಟ್ಟಿನಲ್ಲಿ ಇದರಲ್ಲಿ ವಶೀಲಿಬಾಜಿಯ ಪ್ರಶ್ನೆ ಇಲ್ಲ. ಅಗತ್ಯ ಮತ್ತು ಅನುಕೂಲ ಎರಡನ್ನೂ ನೋಡಲಾಗುವುದು ಎಂದು ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಕಡ್ಡಾಯ ಕನ್ನಡ ಪರೀಕ್ಷೆ ಉತ್ತೀರ್ಣರಾದವರಿಗೆ ‘ಪ್ರಮಾಣ ಪತ್ರ ಡೌನ್ ಲೋಡ್’ ಕುರಿತು ‘KEA’ ಮಹತ್ವದ ಮಾಹಿತಿ

ಅ.25ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ವ್ಯತ್ಯಯ | Power Cut

Share. Facebook Twitter LinkedIn WhatsApp Email

Related Posts

ಮನುಷ್ಯನ ದೇಹದ ಯಾವ ಭಾಗದ ಮೇಲೆ ‘ಹಲ್ಲಿ’ ಬಿದ್ದರೆ ಏನರ್ಥ? ಇಲ್ಲಿದೆ ಜ್ಯೋತಿಷ್ಯ ಶಾಸ್ತ್ರದ ಮಾಹಿತಿ!

2 Mins Read

ಬ್ಯಾಂಕ್ ಚೆಕ್ ಬರೆಯುವಾಗ Lakh ಅಥವಾ Lac? ನಿಮಗೂ ಈ ಕನ್ಫ್ಯೂಷನ್ ಇದೆಯಾ? RBI ನಿಯಮ ಏನು ಹೇಳುತ್ತೆ ನೋಡಿ!

2 Mins Read

ರಾಜ್ಯದ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ ‘ಡಿಜಿಟಲ್ TC’ |Digital TC

2 Mins Read
Recent News

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಇ-ರಿಕ್ಷಾಕ್ಕೆ ವೇಗವಾಗಿ ಬಂದು ಢಿಕ್ಕಿ ಹೊಡೆದ ಟ್ರಕ್, ಮೂವರ ದಾರುಣ ಸಾವು, ಹಲವರಿಗೆ ಗಂಭೀರ ಗಾಯ!

ಮನುಷ್ಯನ ದೇಹದ ಯಾವ ಭಾಗದ ಮೇಲೆ ‘ಹಲ್ಲಿ’ ಬಿದ್ದರೆ ಏನರ್ಥ? ಇಲ್ಲಿದೆ ಜ್ಯೋತಿಷ್ಯ ಶಾಸ್ತ್ರದ ಮಾಹಿತಿ!

Explosion in a car near the Red Fort in Delhi

ಕೆಂಪುಕೋಟೆ ಸ್ಫೋಟದ ತನಿಖೆಯಲ್ಲಿ ಆಘಾತಕಾರಿ ಸತ್ಯ: ‘ChatGPT’ ಮತ್ತು ‘YouTube’ ಬಳಸಿ ಐಇಡಿ ಬಾಂಬ್ ತಯಾರಿಸಿದ್ದ ಉಗ್ರರು!

ಬ್ಯಾಂಕ್ ಚೆಕ್ ಬರೆಯುವಾಗ Lakh ಅಥವಾ Lac? ನಿಮಗೂ ಈ ಕನ್ಫ್ಯೂಷನ್ ಇದೆಯಾ? RBI ನಿಯಮ ಏನು ಹೇಳುತ್ತೆ ನೋಡಿ!

State News
KARNATAKA

ಮನುಷ್ಯನ ದೇಹದ ಯಾವ ಭಾಗದ ಮೇಲೆ ‘ಹಲ್ಲಿ’ ಬಿದ್ದರೆ ಏನರ್ಥ? ಇಲ್ಲಿದೆ ಜ್ಯೋತಿಷ್ಯ ಶಾಸ್ತ್ರದ ಮಾಹಿತಿ!

By kannadanewsnow57 KARNATAKA 2 Mins Read

ಬೆಂಗಳೂರು: ಭಾರತೀಯ ಸಂಪ್ರದಾಯ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಶಕುನಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಅದರಲ್ಲೂ ಮನೆಯಲ್ಲಿ ಓಡಾಡುವ ‘ಹಲ್ಲಿ’ ಮನುಷ್ಯನ…

ಬ್ಯಾಂಕ್ ಚೆಕ್ ಬರೆಯುವಾಗ Lakh ಅಥವಾ Lac? ನಿಮಗೂ ಈ ಕನ್ಫ್ಯೂಷನ್ ಇದೆಯಾ? RBI ನಿಯಮ ಏನು ಹೇಳುತ್ತೆ ನೋಡಿ!

ರಾಜ್ಯದ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ ‘ಡಿಜಿಟಲ್ TC’ |Digital TC

BIG NEWS : ರಾಜ್ಯದ ರೈತರ ಗಮನಕ್ಕೆ : `ಭೂಸ್ವಾಧೀನ’ ಪ್ರಕರಣಗಳಲ್ಲಿ ಭೂಮಿಯ ಬೆಲೆ ನಿಗದಿಪಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.