ಯಾದಗಿರಿ: ಜಿಲ್ಲೆಯಲ್ಲಿ ಶಾಕಿಂಗ್ ಘಟನೆ ಎನ್ನುವಂತೆ ಕುಡಿಯೋದು ಬಿಡು ಎಂದಿದ್ದಕ್ಕೆ 11 ವರ್ಷದ ಮಗಳನ್ನೇ ಪಾಪಿ ಕೊಂದಿರುವಂತ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ರಾಜೀವ್ ಗಾಂಧಿ ನಗರದಲ್ಲಿ ಎಣ್ಣೆ ಕುಡಿಯೋದು ಬಿಡು ಎಂದಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಮಗಳನ್ನೇ ಕತ್ತು ಹಿಸುಕಿ ಕೊಂದಿರುವಂತ ಘಟನೆ ನಡೆದಿದೆ.
ಕೊಲೆಯಾದಂತ ಬಾಲಕಿಯನ್ನು ಪ್ರತಿಭಾ(11) ಎಂಬುದಾಗಿ ಗುರುತಿಸಲಾಗಿದೆ. ಆಕೆಯ ತಾಯಿ ನಿರ್ಮಲಾ ಎಂಬುವರೇ ಕೊಲೆ ಮಾಡಿದಂತ ಪಾಪಿ ತಾಯಿಯಾಗಿದ್ದಾಳೆ.
ಪುತ್ರಿಯನ್ನು ಕೊಂದಿದ್ದಂತ ತಾಯಿ ನಿರ್ಮಲಾ ಮಾತ್ರ ಕತೆ ಕಟ್ಟಿದ್ದಳು. ಜ್ಯೂಸ್ ಕುಡಿಯೋದಕ್ಕೆ ಹಣ ನೀಡಿಲ್ಲ ಎಂಬುದಾಗಿ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದಾಗಿ ಹೇಳಿದ್ದಳು. ಆದರೇ ಮದ್ಯ ಸೇವನೆ ಮಾಡಿ ಹಣ ಖರ್ಚು ಮಾಡಿದರೇ ನಮಗೆ ಊಟಕ್ಕೆ ತೊಂದರೆಯಾಗುತ್ತೆ. ನೀನು ಕುಡಿದು ಸತ್ತರೇ ನಮ್ಮನ್ನು ನೋಡಿಕೊಳ್ಳೋರು ಯಾರು? ಅಮ್ಮ ಕುಡಿಯಬೇಡ. ಕುಡಿಯೋದು ಬಿಡು ಅಂತ ಪುತ್ರಿ ಪ್ರತಿಭಾ ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡು ತಾಯಿ ನಿರ್ಮಲಾ ಕತ್ತು ಹಿಸುಕಿ ಕೊಲೆಗೈದಿರೋದು ತನಿಖೆಯ ವೇಳೆಯಲ್ಲಿ ಬಯಲಾಗಿದೆ.
ಯಾದಗಿರಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಲವರ ಸಾಕ್ಷಿಯ ಆಧಾರದ ಮೇಲೆ ಆರೋಪಿ ತಾಯಿ ನಿರ್ಮಲಾ ಅವರನ್ನು ಬಂಧಿಸಿದ್ದಾರೆ.








