ಚಿಕ್ಕಮಗಳೂರು: ಮಗನ ಸಾವಿನ ಸುದ್ದಿ ಕೇಳಿ ತಾಯಿಯೊಬ್ಬಳು ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಕೊಳಮಾಗೆ ಗ್ರಾಮದ ಶಮಂತ್(23) ಭದ್ರಾನದಿಯಲ್ಲಿ ಪಿಕಪ್ ವಾಹನ ಸಹಿತ ಕೊಚ್ಚಿ ಹೋಗಿದ್ದನು. ಈ ಸುದ್ದಿಯನ್ನು ಕೇಳಿದಂತ ಶಮಂತ್ ತಾಯಿ ರವಿಕಲಾ(45) ಕೆರೆಗೆ ಹಾರಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಂದಹಾಗೇ ಗುರುವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಭದ್ರಾನದಿಗೆ ಬಿದ್ದು ಕೊಚ್ಚಿ ಹೋಗಿತ್ತು. ಇನ್ನೂ ಆತನ ಮೃತದೇಹ ಪತ್ತೆಯಾಗಿಲ್ಲ. ಮಗನ ಮೃತದೇಹ ಸಿಗುವ ಮೊದಲೇ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.