ಮಂಡ್ಯ: ಜಿಲ್ಲೆಯಲ್ಲಿ ನಿರ್ಮಾಣ ಹಂತದ ಹೆಬ್ಬಾಗಿಲು ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿ, ಮೂವರು ಗಾಯಗೊಂಡಿರುವಂತ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೇವರಹಳ್ಳಿ ಗ್ರಾಮದ ತಪಸ್ವೀರಾಯ ದೇಗುಲದ ಮುಂಭಾಗದಲ್ಲಿ ಹೆಬ್ಬಾಗಿಲು ನಿರ್ಮಿಸುವಂತ ಕಾರ್ಯ ನಡೆಯುತ್ತಿತ್ತು. ತಪಸ್ವೀರಾಯ ದೇಗುಲದ ಮುಂಭಾಗದಲ್ಲಿ ನಿರ್ಮಿಸುತ್ತಿದ್ದಂತ ಹೆಬ್ಬಾಗಿಲು ಕಮಾನು ಕಾಮಗಾರಿಯ ವೇಳೆ ದಿಢೀರ್ ಕುಸಿತಗೊಂಡಿದೆ.
ಹೆಬ್ಬಾಗಿಲಿಗೆ ಎರಡು ಕಡೆ ನಿರ್ಮಿಸಿದ್ದಂತ ಫಿಲ್ಲರ್ ಮೇಲೆ ಕಬ್ಬಿಣ ಕಟ್ಟಿ ಕಾಂಕ್ರಿಟ್ ಹಾಕಲಾಗುತ್ತಿತ್ತು. ಈ ವೇಳೆ ಭಾರದಿಂದ ಏಕಏಕೆ ಕೆಲಸ ಮಾಡುತ್ತಿದ್ದಂತ ಕಾರ್ಮಿಕರ ಮೇಲೆ ಹೆಬ್ಬಾಗಿಲು ಕಮಾನು ಕುಸಿತಗೊಂಡಿದೆ.
ಈ ಘಟನೆಯಲ್ಲಿ ಕಾರ್ಮಿಕ ಶರಣ(35) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಮೂವರು ಗಾಯಗೊಂಡಿದ್ದು, ಅವರನ್ನು ಬೆಳ್ಳೂರಿನ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಗಿರೀಶ್ ರಾಜ್, ಮಂಡ್ಯ
ಪಾಕ್ 48 ಗಂಟೆಯ ದಾಳಿ ಯೋಜನೆ 8 ಗಂಟೆಯಲ್ಲೇ ಭಾರತ ಭಗ್ನ: CDS ಅನಿಲ್ ಚೌಹಾಣ್
BIG NEWS : ಬೆಂಗಳೂರಲ್ಲಿ ಐಪಿಎಲ್ ಸಂಭ್ರಮಾಚರಣೆ ವೇಳೆ ಸಾರ್ವಜನಿಕರಿಗೆ ತೊಂದರೆ ಕೊಟ್ರೆ ಕ್ರಮ | IPL-2025 ಫೈನಲ್