Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ

‘ಬೀಜ ಬಿತ್ತಿ’ ಸಸಿ ಬೆಳೆಸಿದ ವಿದ್ಯಾರ್ಥಿಗಳು: ರಾಜ್ಯದ ಗ್ರಾಮ ಪಂಚಾಯ್ತಿಯಲ್ಲೊಂದು ವಿನೂತನ ‘ಪರಿಸರ ಪಾಠ’!

BREAKING: ನಾಳೆ ಯುಜಿಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ; ಕೆಇಎ ಘೋಷಣೆ | UGCET Exam Results

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಬೀಜ ಬಿತ್ತಿ’ ಸಸಿ ಬೆಳೆಸಿದ ವಿದ್ಯಾರ್ಥಿಗಳು: ರಾಜ್ಯದ ಗ್ರಾಮ ಪಂಚಾಯ್ತಿಯಲ್ಲೊಂದು ವಿನೂತನ ‘ಪರಿಸರ ಪಾಠ’!
KARNATAKA

‘ಬೀಜ ಬಿತ್ತಿ’ ಸಸಿ ಬೆಳೆಸಿದ ವಿದ್ಯಾರ್ಥಿಗಳು: ರಾಜ್ಯದ ಗ್ರಾಮ ಪಂಚಾಯ್ತಿಯಲ್ಲೊಂದು ವಿನೂತನ ‘ಪರಿಸರ ಪಾಠ’!

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಜೂನ್ 5 ಬಂತೆಂದರೆ ಸಾಕು, ಪರಿಸರ ದಿನಾಚರಣೆಯ ಹೆಸರಿನಲ್ಲಿ ಗಿಡ ನೆಡುವುದು, ಫೋಟೋ ಕ್ಲಿಕ್ಕಿಸಿಕೊಳ್ಳುವುದು ಮತ್ತು ಭಾಷಣ ಬಿಗಿಯುವುದು ಮಾಮೂಲಿ. ಆದರೆ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಒಂದು ಗ್ರಾಮ ಪಂಚಾಯ್ತಿ ಮಾತ್ರ ಇವೆಲ್ಲದಕ್ಕಿಂತ ಭಿನ್ನವಾಗಿ, ಪರಿಸರ ಕಾಳಜಿಯನ್ನು ಮಕ್ಕಳ ರಕ್ತಗತವಾಗಿಸುವ ನಿಟ್ಟಿನಲ್ಲಿ ವಿನೂತನ ಹಾಗೂ ಮಾದರಿ ಅಭಿಯಾನವೊಂದನ್ನು ನಡೆಸಿ ರಾಜ್ಯದ ಗಮನ ಸೆಳೆದಿದೆ. ಅದುವೇ ಸಾಗರ ತಾಲ್ಲೂಕಿನ ಕಸಬ ಹೋಬಳಿಯ ಮಾಲ್ವೆ ಗ್ರಾಮ ಪಂಚಾಯ್ತಿ. ಇಲ್ಲಿ ಕೇವಲ ಪರಿಸರ ದಿನದಂದು ಗಿಡ ನೆಡುವ ನಾಟಕವಾಡದೆ, ಮಕ್ಕಳ ಕೈಯಿಂದಲೇ ಬೀಜ ಬಿತ್ತಿಸಿ, ಸಸಿಗಳನ್ನು ಹೆಮ್ಮರವಾಗಿ ಬೆಳೆಸುವಂತಹ ಜವಾಬ್ದಾರಿಯುತ ಶಿಕ್ಷಣವನ್ನು ಪ್ರಾಯೋಗಿಕವಾಗಿ ನೀಡಿ, ವಿನೂತನವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

‘ನನ್ನ ನೆಲ ನನ್ನ ಸಸಿ’: ಬೇಸಿಗೆ ರಜೆಯ ಸಾರ್ಥಕ ಬಳಕೆ

ಈ ಅಭಿಯಾನ ಇಂದು ನಿನ್ನೆ ಶುರುವಾಗಿದ್ದಲ್ಲ. ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಘೋಷಣೆಯಾದ ಬೆನ್ನಲ್ಲೇ ಮಾಲ್ವೆ ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿ ಡಾ.ಅವಿನಾಶ್ ಹಾಗೂ ಪಿಡಿಓ ಅಷ್ಪಕ್ ಅಹಮದ್ ಅವರು ತಮ್ಮ ಪಂಚಾಯ್ತಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ‘ನನ್ನ ನೆಲ ನನ್ನ ಸಸಿ’ ಎನ್ನುವ ವಿನೂತನ ಅಭಿಯಾನದಡಿ ನುಗ್ಗೆಕಾಯಿ, ವಿವಿಧ ಹಣ್ಣುಗಳು ಹಾಗೂ ಗೇರು ಸೇರಿದಂತೆ ಬಗೆ ಬಗೆಯ ಬೀಜಗಳನ್ನು ವಿತರಿಸಿದ್ದರು.

ಕೇವಲ ಬೀಜ ಕೊಟ್ಟು ಕೈತೊಳೆದುಕೊಳ್ಳದ ಪಿಡಿಓ ಅಷ್ಪಕ್ ಅಹಮದ್ ಅವರು, ಈ ಬೀಜಗಳನ್ನು ಪ್ಯಾಕೆಟ್‌ಗಳಲ್ಲಿ ನೆಟ್ಟು, ಪ್ರೀತಿಯಿಂದ ನೀರುಣಿಸಿ, ಉತ್ತಮ ರೀತಿಯಲ್ಲಿ ಸಸಿಯನ್ನಾಗಿ ಪೋಷಿಸಿ ಬೆಳೆಸಿದ ಮಕ್ಕಳಿಗೆ ಪರಿಸರ ದಿನಾಚರಣೆಯಂದು ಆಕರ್ಷಕ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡುವುದಾಗಿ ಘೋಷಿಸಿದ್ದರು. ಇದು ಮಕ್ಕಳಲ್ಲಿ ಹೊಸ ಹುರುಪು ಮೂಡಿಸಿತ್ತು.

ರಜೆಯಿಡೀ ಮೊಬೈಲ್, ಟಿವಿ ಎಂದು ಕಾಲ ಕಳೆಯುತ್ತಿದ್ದ ಮಕ್ಕಳು, ಪಂಚಾಯ್ತಿ ನೀಡಿದ ಬೀಜಗಳನ್ನು ಮನೆಗೆ ಕೊಂಡೊಯ್ದು ಮಣ್ಣು ತುಂಬಿದ ಕವರ್‌ಗಳಲ್ಲಿ ನೆಟ್ಟು, ದಿನವೂ ನೀರುಣಿಸಿ ಪೋಷಿಸಿದರು.

ಪರಿಸರ ದಿನದಂದು ಗಣ್ಯರನ್ನೇ ಬೆರಗುಗೊಳಿಸಿದ ಪುಟಾಣಿಗಳ ಹಸಿರು ಲೋಕ!

ಜೂನ್ 5ರ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಇಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ತಾವು ಕಷ್ಟಪಟ್ಟು ಬೆಳೆಸಿದ ಸಸಿಗಳನ್ನು ಹೆಮ್ಮೆಯಿಂದ ಪ್ರದರ್ಶಿಸಿದರು. ಮಕ್ಕಳ ಕೈಯಲ್ಲಿ ಫಲವತ್ತಾಗಿ, ಹಚ್ಚ ಹಸಿರಾಗಿ ಬೆಳೆದು ನಿಂತಿದ್ದ ಸಸಿಗಳನ್ನು ಕಂಡು ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ಹಾಗೂ ಅಧಿಕಾರಿಗಳೇ ಮೂಗಿನ ಮೇಲೆ ಬೆರಳಿಡುವಂತಾಯಿತು. ಮಕ್ಕಳ ಶ್ರಮ ಮತ್ತು ಕಾಳಜಿ ನಿಜಕ್ಕೂ ಶ್ಲಾಘನೀಯವಾಗಿತ್ತು.

ಮಕ್ಕಳಿಗೆ ಬಹುಮಾನದ ಗೌರವ: ಪರಿಸರ ಜಾಗೃತಿಯ ಹೊಸ ಅಲೆ

ಮಕ್ಕಳ ಈ ಹಸಿರು ಸಾಧನೆಯನ್ನು ಗುರುತಿಸಿದ ಮಾಲ್ವೆ ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿ ಹಾಗೂ ತೋಟಗಾರಿಕಾ ಅಧಿಕಾರಿಯಾದ ಡಾ. ಅವಿನಾಶ್ ಅವರು, ಅತ್ಯುತ್ತಮವಾಗಿ ಸಸಿ ಬೆಳೆಸಿದ ಒಂದೊಂದು ಶಾಲೆಯ ಮೂವರು ಮಕ್ಕಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಿದರು.

ಅಷ್ಟೇ ಅಲ್ಲದೆ, ಗಿಡಗಳನ್ನು ಪ್ರದರ್ಶಿಸಿದ ಮತ್ತು ಅತ್ಯಂತ ಕಾಳಜಿಯಿಂದ ಬೀಜ ನೆಟ್ಟು ಸಸಿ ಬೆಳೆಸಿದ ಉಳಿದೆಲ್ಲಾ ವಿದ್ಯಾರ್ಥಿಗಳಿಗೂ ಪ್ರೋತ್ಸಾಹಕ ಪ್ರಶಸ್ತಿ ಪತ್ರಗಳನ್ನು ವಿತರಿಸಿ, ಅವರಲ್ಲಿ ಪರಿಸರ ಪ್ರೇಮವನ್ನು ಮತ್ತಷ್ಟು ಗಟ್ಟಿಗೊಳಿಸಲಾಯಿತು.

ಈ ಅಭಿಯಾನದಿಂದ ವಿದ್ಯಾರ್ಥಿಗಳು ಕಲಿತಿದ್ದೇನು?

ನೆಲದೊಂದಿಗೆ ಬಾಂಧವ್ಯ:* “ನನ್ನ ನೆಲ” ಎಂಬ ಭಾವನೆ ಮಕ್ಕಳಲ್ಲಿ ಬಾಲ್ಯದಲ್ಲೇ ಮೂಡಿದಾಗ, ಅವರು ತಮ್ಮ ಗ್ರಾಮದ ಪರಿಸರ ಮತ್ತು ಮಣ್ಣನ್ನು ಪ್ರೀತಿಸಲು ಕಲಿಯುತ್ತಾರೆ.

ಜೀವ ಸೃಷ್ಟಿಯ ಅನುಭವ: ಒಂದು ಸಣ್ಣ ಬೀಜವು ಮಣ್ಣು ಮತ್ತು ನೀರಿನ ಸಂಸ್ಕಾರದಿಂದ ಹೇಗೆ ಜೀವ ಪಡೆದು ಸಸಿಯಾಗಿ ಬೆಳೆಯುತ್ತದೆ ಎಂಬ ಪ್ರಕೃತಿಯ ಅದ್ಭುತ ನಿಯಮವನ್ನು ಮಕ್ಕಳು ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳುವುದು.

ಬೇಸಿಗೆ ರಜೆಯ ಸದ್ಬಳಕೆ: ಮೊಬೈಲ್ ಮತ್ತು ಇತರ ಆಟಗಳಲ್ಲೇ ಕಳೆಯುವ ರಜೆಯ ದಿನಗಳನ್ನು, ದಿನನಿತ್ಯವೂ ಒಂದು ಜೀವವನ್ನು ಪೋಷಿಸುವ ಸೃಜನಾತ್ಮಕ ಕಾಯಕಕ್ಕೆ ಬಳಸಿಕೊಳ್ಳುವುದು.

ಮಣ್ಣು ಮತ್ತು ಪೋಷಣೆ: ಮಕ್ಕಳು ತಮ್ಮ ಮನೆಯ ಸುತ್ತಮುತ್ತಲಿನ ಮಣ್ಣನ್ನು ಸಂಗ್ರಹಿಸಿ, ನರ್ಸರಿ ಬ್ಯಾಗ್‌ಗಳಲ್ಲಿ ಅಥವಾ ಹಳೆಯ ಕುಂಡಗಳಲ್ಲಿ ತುಂಬಿ ಬೀಜ ಬಿತ್ತಿದ್ದರು.

ದಿನನಿತ್ಯದ ಆರೈಕೆ: ಬೇಸಿಗೆಯ ಕಠಿಣ ಬಿಸಿಲಿನಿಂದ ಬೀಜಗಳು ಮತ್ತು ಎಳೆಯ ಮೊಳಕೆಗಳು ಒಣಗದಂತೆ ದಿನಕ್ಕೆರಡು ಬಾರಿ ಹದವಾಗಿ ನೀರುಣಿಸಿ, ನೆರಳಿನ ಜಾಗದಲ್ಲಿಟ್ಟು ಮಕ್ಕಳು ತಾಯಿಯಂತೆ ಆ ಸಸಿಗಳನ್ನು ಜತನದಿಂದ ಪೋಷಿಸಿದ್ದಾರೆ.

ಕುಟುಂಬದ ಸಹಭಾಗಿತ್ವ: ಪ್ರಾಥಮಿಕ ಶಾಲೆಯ ಸಣ್ಣ ಮಕ್ಕಳು ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರಿಂದ, ಮನೆಯ ಪೋಷಕರು ಮತ್ತು ಹಿರಿಯರು ಕೂಡ ಉತ್ಸಾಹದಿಂದ ಮಕ್ಕಳಿಗೆ ಮಾರ್ಗದರ್ಶನ ನೀಡಿದ್ದಾರೆ. ಇದರಿಂದಾಗಿ ಇದು ಕೇವಲ ಶಾಲಾ ಕಾರ್ಯಕ್ರಮವಾಗಿ ಉಳಿಯದೆ, ಇಡೀ ಗ್ರಾಮದ “ಮನೆ-ಮನೆಯ ಅಭಿಯಾನ”ವಾಗಿ ಮಾರ್ಪಟ್ಟಿದೆ.

ಬೆಳೆಸಿದ ಹೆಮ್ಮೆ: ದಿನನಿತ್ಯವೂ ಸಸಿಯ ಬೆಳವಣಿಗೆಯನ್ನು ಕಣ್ಣಾರೆ ಕಂಡ ಮಕ್ಕಳು, ಅದರೊಂದಿಗೆ ಒಂದು ಸುಂದರವಾದ ಭಾವನಾತ್ಮಕ ಬಂಧವನ್ನು ಬೆಳೆಸಿಕೊಂಡಿದ್ದಾರೆ.

ಯಾರೆಲ್ಲಾ ಉಪಸ್ಥಿತರಿದ್ದರು?

ಗ್ರಾಮದ ಹಸಿರು ಹಬ್ಬದಂತಿದ್ದ ಈ ಕಾರ್ಯಕ್ರಮದಲ್ಲಿ ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಾಲತೇಶ್, ಇಳಿ ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರಪ್ಪ, ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ತ್ರಿವೇಣಿ, ಮಾಲ್ವೆ ಗ್ರಾಮ ಪಂಚಾಯ್ತಿಯ ಪಿಡಿಓ (PDO) ಅಷ್ಪಕ್ ಅಹಮದ್, ದ್ವಿತೀಯ ದರ್ಜೆ ಸಹಾಯಕಿ ಸುಮಾ, ಪಂಚಾಯ್ತಿ ಸಿಬ್ಬಂದಿಗಳು, ಎನ್‌ಆರ್‌ಇಜಿ (MGNREGA) ಮಹಿಳಾ ಕಾರ್ಮಿಕರು ಹಾಗೂ ನೂರಾರು ಮಾಲ್ವೆ ಗ್ರಾಮಸ್ಥರು ಸಾಕ್ಷಿಯಾದರು.

ಒಟ್ಟಾರೆಯಾಗಿ ಗಿಡಗಳನ್ನು ಕತ್ತರಿಸಿ ಕಾಂಕ್ರೀಟ್ ನಾಡು ಮಾಡುತ್ತಿರುವ ಇಂದಿನ ದಿನಗಳಲ್ಲಿ, ಮುಂದಿನ ಪೀಳಿಗೆಯಾದ ಶಾಲಾ ಮಕ್ಕಳಲ್ಲಿ ಇಂತಹ ಪರಿಸರ ಪ್ರಜ್ಞೆ ಮೂಡಿಸುತ್ತಿರುವ ಮಾಲ್ವೆ ಗ್ರಾಮ ಪಂಚಾಯ್ತಿ PDO ಕಾರ್ಯ ನಿಜಕ್ಕೂ ಶ್ಲಾಘನೀಯ. ರಾಜ್ಯದ ಉಳಿದ ಗ್ರಾಮ ಪಂಚಾಯ್ತಿಗಳ PDOಗಳು ಇಂತಹ ವಿನೂತನ ಮಾದರಿಯನ್ನು ಅಳವಡಿಸಿಕೊಂಡರೆ, ನಮ್ಮ ನಾಡು ಮತ್ತೆ ಹಸಿರು ಹೊದಿಕೆಯನ್ನು ಹೊದ್ದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

ವಿಶೇಷ ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

BREAKING: ನಾಳೆ ಯುಜಿಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ; ಕೆಇಎ ಘೋಷಣೆ | UGCET Exam Results

ಮುಂದಿನ ಬಾರಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ; ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ

Share. Facebook Twitter LinkedIn WhatsApp Email

Related Posts

ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ

2 Mins Read

BREAKING: ನಾಳೆ ಯುಜಿಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ; ಕೆಇಎ ಘೋಷಣೆ | UGCET Exam Results

1 Min Read

ಮುಂದಿನ ಬಾರಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ; ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ

1 Min Read
Recent News

ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ

‘ಬೀಜ ಬಿತ್ತಿ’ ಸಸಿ ಬೆಳೆಸಿದ ವಿದ್ಯಾರ್ಥಿಗಳು: ರಾಜ್ಯದ ಗ್ರಾಮ ಪಂಚಾಯ್ತಿಯಲ್ಲೊಂದು ವಿನೂತನ ‘ಪರಿಸರ ಪಾಠ’!

BREAKING: ನಾಳೆ ಯುಜಿಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ; ಕೆಇಎ ಘೋಷಣೆ | UGCET Exam Results

ಮುಂದಿನ ಬಾರಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ; ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ

State News
KARNATAKA

ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ಹೊಸ ಸಚಿವ ಸಂಪುಟ ರಚನೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಮತ್ತು ರಾಜೀನಾಮೆ ಹೈಡ್ರಾಮಾಗಳು ಮುನ್ನೆಲೆಗೆ…

‘ಬೀಜ ಬಿತ್ತಿ’ ಸಸಿ ಬೆಳೆಸಿದ ವಿದ್ಯಾರ್ಥಿಗಳು: ರಾಜ್ಯದ ಗ್ರಾಮ ಪಂಚಾಯ್ತಿಯಲ್ಲೊಂದು ವಿನೂತನ ‘ಪರಿಸರ ಪಾಠ’!

BREAKING: ನಾಳೆ ಯುಜಿಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ; ಕೆಇಎ ಘೋಷಣೆ | UGCET Exam Results

ಮುಂದಿನ ಬಾರಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ; ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.