Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಲ್ಲಿ ಕುಡಿದು ಮಹಿಂದ್ರಾ ಕಾರು ಟೆಸ್ಟ್ ಡ್ರೈವ್ ಮಾಡಿದ ವ್ಯಕ್ತಿಯಿಂದ ಅಪಘಾತ : ಓರ್ವನ ಕಾಲು ಕಟ್!

17/04/2026 10:28 AM

BIG NEWS : ರಾಜ್ಯದ ಡಿಪ್ಲೋಮಾ, ITI ವಿದ್ಯಾರ್ಥಿಗಳೂ `LLB’ ಪ್ರವೇಶ ಪಡೆಯಬಹುದು : ಹೈಕೋರ್ಟ್ ಮಹತ್ವದ ತೀರ್ಪು!

17/04/2026 10:10 AM

BREAKING : H5N1 ಹಿನ್ನೆಲೆ : ಹೇಸರಘಟ್ಟದ ಪೌಲ್ಟ್ರಿ ಫಾರ್ಮ್ ನಲ್ಲಿ 8 ತಳಿಯ 7400ಕ್ಕೂ ಹೆಚ್ಚು ಕೋಳಿಗಳ ಮಾರಣಹೋಮ!

17/04/2026 10:05 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಡಿಪ್ಲೋಮಾ, ITI ವಿದ್ಯಾರ್ಥಿಗಳೂ `LLB’ ಪ್ರವೇಶ ಪಡೆಯಬಹುದು : ಹೈಕೋರ್ಟ್ ಮಹತ್ವದ ತೀರ್ಪು!
KARNATAKA

BIG NEWS : ರಾಜ್ಯದ ಡಿಪ್ಲೋಮಾ, ITI ವಿದ್ಯಾರ್ಥಿಗಳೂ `LLB’ ಪ್ರವೇಶ ಪಡೆಯಬಹುದು : ಹೈಕೋರ್ಟ್ ಮಹತ್ವದ ತೀರ್ಪು!

By kannadanewsnow5717/04/2026 10:10 AM

ಬೆಂಗಳೂರು: ಉನ್ನತ ಶಿಕ್ಷಣದ ಕನಸು ಕಾಣುತ್ತಿದ್ದ ಡಿಪ್ಲೊಮಾ, ಐಟಿಐ ಮತ್ತು ಜೆಓಸಿ (JOC) ವಿದ್ಯಾರ್ಥಿಗಳಿಗೆ ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪೊಂದನ್ನು ನೀಡಿದೆ. ಇಷ್ಟು ದಿನ “ಪಿಯುಸಿ ಮಾಡಿಲ್ಲ” ಎಂಬ ಕಾರಣಕ್ಕೆ ಕಾನೂನು ಪದವಿ (LLB) ಪ್ರವೇಶದಿಂದ ವಂಚಿತರಾಗಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಈಗ ನ್ಯಾಯ ಸಿಕ್ಕಂತಾಗಿದೆ.

ಹೋರಾಟಕ್ಕೆ ಸಿಕ್ಕ ಜಯ

ಕಳೆದ 2023ರಿಂದ ಆರಂಭವಾದ ಸುದೀರ್ಘ ಕಾನೂನು ಹೋರಾಟಕ್ಕೆ ಈಗ ತಾರ್ಕಿಕ ಅಂತ್ಯ ಸಿಕ್ಕಿದೆ. ಐಟಿಐ ಮುಗಿಸಿ ನಂತರ ಪದವಿ ಪಡೆದಿದ್ದ ನರೇಂದ್ರ ಎಂಬ ವಿದ್ಯಾರ್ಥಿ ಸೇರಿದಂತೆ ಹಲವರು ಕಾನೂನು ಪದವಿ ಪಡೆಯಲು ಮುಂದಾದಾಗ, ಕಾಲೇಜು ಆಡಳಿತ ಮಂಡಳಿಗಳು “ಪಿಯುಸಿ ಮಾಡಿಲ್ಲ” ಎಂಬ ತಾಂತ್ರಿಕ ಕಾರಣವೊಡ್ಡಿ ಪ್ರವೇಶ ನಿರಾಕರಿಸಿದ್ದವು. ಕೆಲವರ ಅಡ್ಮಿಷನ್ ಕೂಡ ಕ್ಯಾನ್ಸಲ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.

ಹೈಕೋರ್ಟ್ ನೀಡಿದ ಪ್ರಮುಖ ತೀರ್ಪುಗಳು:

ಪಿಯುಸಿಗೆ ತತ್ಸಮಾನ: ಐಟಿಐ, ಡಿಪ್ಲೊಮಾ ಮತ್ತು ಜೆಓಸಿ ಕೋರ್ಸ್‌ಗಳನ್ನು ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಬೇಕು.

ಪ್ರವೇಶ ನಿರಾಕರಿಸುವಂತಿಲ್ಲ: ವಿದ್ಯಾರ್ಥಿಗಳು ಪಿಯುಸಿ ಮಾಡಿಲ್ಲ ಎಂಬ ಒಂದೇ ಕಾರಣಕ್ಕೆ ಎಲ್‌ಎಲ್‌ಬಿ (LLB) ಸೀಟು ನೀಡಲು ನಿರಾಕರಿಸುವಂತಿಲ್ಲ.

ತಾಂತ್ರಿಕ ಶಿಕ್ಷಣಕ್ಕೂ ಮಾನ್ಯತೆ: ಯಾವುದೇ ತಾಂತ್ರಿಕ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಕಾನೂನು ಪದವಿ ಪಡೆಯಲು ಅರ್ಹರು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

“ಇದು ಕೇವಲ ನನ್ನೊಬ್ಬನ ಗೆಲುವಲ್ಲ, ನನ್ನಂತೆ ಕನಸು ಕಂಡಿದ್ದ ಸಾವಿರಾರು ವಿದ್ಯಾರ್ಥಿಗಳ ಗೆಲುವು. ಕಾನೂನು ಪದವಿ ಪಡೆಯಲಾಗದೆ ಎಷ್ಟೋ ಯುವಕರ ಕನಸುಗಳು ಅರ್ಧಕ್ಕೆ ನಿಂತಿದ್ದವು. ಇಂದು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಹೆಚ್ಚಾಗಿದೆ. ನಮ್ಮ ಹೋರಾಟಕ್ಕೆ ತಕ್ಕ ಫಲ ಸಿಕ್ಕಿದೆ ಎಂದು ಅರ್ಜಿದಾರ ವಿದ್ಯಾರ್ಥಿ ನರೇಂದ್ರ ಹೇಳಿದ್ದಾರೆ.

ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ

ಮಾರ್ಚ್ 27, 2026ರಂದು ಹೊರಬಿದ್ದ ಈ ಮಹತ್ವದ ತೀರ್ಪಿನಿಂದಾಗಿ, ವಕೀಲರಾಗಬೇಕೆಂದು ಕನಸು ಹೊತ್ತಿದ್ದ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಈ ತೀರ್ಪಿನಿಂದಾಗಿ ಇನ್ಮುಂದೆ ರಾಜ್ಯದ ಯಾವುದೇ ಕಾನೂನು ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳು ಮುಕ್ತವಾಗಿ ಪ್ರವೇಶ ಪಡೆಯಲು ಹಾದಿ ಸುಗಮವಾಗಿದೆ.

BIG NEWS: State diploma and ITI students can also get admission in `LLB`: High Court's important verdict!
Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ಕುಡಿದು ಮಹಿಂದ್ರಾ ಕಾರು ಟೆಸ್ಟ್ ಡ್ರೈವ್ ಮಾಡಿದ ವ್ಯಕ್ತಿಯಿಂದ ಅಪಘಾತ : ಓರ್ವನ ಕಾಲು ಕಟ್!

17/04/2026 10:28 AM1 Min Read

BREAKING : H5N1 ಹಿನ್ನೆಲೆ : ಹೇಸರಘಟ್ಟದ ಪೌಲ್ಟ್ರಿ ಫಾರ್ಮ್ ನಲ್ಲಿ 8 ತಳಿಯ 7400ಕ್ಕೂ ಹೆಚ್ಚು ಕೋಳಿಗಳ ಮಾರಣಹೋಮ!

17/04/2026 10:05 AM1 Min Read

BREAKING : ರಾಜ್ಯಕ್ಕೆ ಮತ್ತೆ ಕಾಲಿಟ್ಟ ‘H5, N1’ ವೈರಸ್ : ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್ ಘೋಷಣೆ!

17/04/2026 10:01 AM2 Mins Read
Recent News

BREAKING : ಬೆಂಗಳೂರಲ್ಲಿ ಕುಡಿದು ಮಹಿಂದ್ರಾ ಕಾರು ಟೆಸ್ಟ್ ಡ್ರೈವ್ ಮಾಡಿದ ವ್ಯಕ್ತಿಯಿಂದ ಅಪಘಾತ : ಓರ್ವನ ಕಾಲು ಕಟ್!

17/04/2026 10:28 AM

BIG NEWS : ರಾಜ್ಯದ ಡಿಪ್ಲೋಮಾ, ITI ವಿದ್ಯಾರ್ಥಿಗಳೂ `LLB’ ಪ್ರವೇಶ ಪಡೆಯಬಹುದು : ಹೈಕೋರ್ಟ್ ಮಹತ್ವದ ತೀರ್ಪು!

17/04/2026 10:10 AM

BREAKING : H5N1 ಹಿನ್ನೆಲೆ : ಹೇಸರಘಟ್ಟದ ಪೌಲ್ಟ್ರಿ ಫಾರ್ಮ್ ನಲ್ಲಿ 8 ತಳಿಯ 7400ಕ್ಕೂ ಹೆಚ್ಚು ಕೋಳಿಗಳ ಮಾರಣಹೋಮ!

17/04/2026 10:05 AM

ದೆಹಲಿಯ ನೂತನ ಎಲ್‌ಜಿಯಾಗಿ ತರಂಜಿತ್ ಸಿಂಗ್ ಸಂಧು ನೇಮಕ: ಅಮೆರಿಕ ಅಧ್ಯಕ್ಷ ಟ್ರಂಪ್‌ರಿಂದ ಅಭಿನಂದನೆ !

17/04/2026 10:05 AM
State News
KARNATAKA

BREAKING : ಬೆಂಗಳೂರಲ್ಲಿ ಕುಡಿದು ಮಹಿಂದ್ರಾ ಕಾರು ಟೆಸ್ಟ್ ಡ್ರೈವ್ ಮಾಡಿದ ವ್ಯಕ್ತಿಯಿಂದ ಅಪಘಾತ : ಓರ್ವನ ಕಾಲು ಕಟ್!

By kannadanewsnow0517/04/2026 10:28 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಕುಡಿದ ನಶೆಯಲ್ಲಿ ವ್ಯಕ್ತಿಗೆ ಕಾರ್ ಶೋರೂಮ್ ಸಿಬ್ಬಂದಿಗಳು ಕಾರನ್ನು ಟೆಸ್ಟ್ ಡ್ರೈವ್ ಮಾಡಲು ಕೊಟ್ಟಿದ್ದಾರೆ. ಈ…

BIG NEWS : ರಾಜ್ಯದ ಡಿಪ್ಲೋಮಾ, ITI ವಿದ್ಯಾರ್ಥಿಗಳೂ `LLB’ ಪ್ರವೇಶ ಪಡೆಯಬಹುದು : ಹೈಕೋರ್ಟ್ ಮಹತ್ವದ ತೀರ್ಪು!

17/04/2026 10:10 AM

BREAKING : H5N1 ಹಿನ್ನೆಲೆ : ಹೇಸರಘಟ್ಟದ ಪೌಲ್ಟ್ರಿ ಫಾರ್ಮ್ ನಲ್ಲಿ 8 ತಳಿಯ 7400ಕ್ಕೂ ಹೆಚ್ಚು ಕೋಳಿಗಳ ಮಾರಣಹೋಮ!

17/04/2026 10:05 AM

BREAKING : ರಾಜ್ಯಕ್ಕೆ ಮತ್ತೆ ಕಾಲಿಟ್ಟ ‘H5, N1’ ವೈರಸ್ : ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್ ಘೋಷಣೆ!

17/04/2026 10:01 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.