Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ರೌಡಿಗಳ ನಿಯಂತ್ರಣಕ್ಕೆ ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕ ಪಡೆ ರಚಿಸಲು ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

Kidney Disease: ‘ಕಿಡ್ನಿ ಸಮಸ್ಯೆ’ಯು ಆರಂಭದಲ್ಲಿ ಲಕ್ಷಣಗಳೇ ತಿಳಿಯದ ‘ಸೈಲೆಂಟ್ ಕಿಲ್ಲರ್’ ಕಾಯಿಲೆ: ಈ ಎಚ್ಚರವಿರಲಿ!

BREAKING: ಸಿಎಂ ಡಿಕೆಶಿ ಸಭೆಯಲ್ಲಿ ಹೈ-ಡ್ರಾಮಾ: ಸಿಟ್ಟಿಗೆದ್ದು ಸಭೆಯಿಂದಲೇ ಹೊರನಡೆದ ಸಚಿವ ರಾಮಲಿಂಗಾರೆಡ್ಡಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಡಿಪ್ಲೋಮಾ, ITI ವಿದ್ಯಾರ್ಥಿಗಳೂ `LLB’ ಪ್ರವೇಶ ಪಡೆಯಬಹುದು : ಹೈಕೋರ್ಟ್ ಮಹತ್ವದ ತೀರ್ಪು!
KARNATAKA

BIG NEWS : ರಾಜ್ಯದ ಡಿಪ್ಲೋಮಾ, ITI ವಿದ್ಯಾರ್ಥಿಗಳೂ `LLB’ ಪ್ರವೇಶ ಪಡೆಯಬಹುದು : ಹೈಕೋರ್ಟ್ ಮಹತ್ವದ ತೀರ್ಪು!

By kannadanewsnow57

ಬೆಂಗಳೂರು: ಉನ್ನತ ಶಿಕ್ಷಣದ ಕನಸು ಕಾಣುತ್ತಿದ್ದ ಡಿಪ್ಲೊಮಾ, ಐಟಿಐ ಮತ್ತು ಜೆಓಸಿ (JOC) ವಿದ್ಯಾರ್ಥಿಗಳಿಗೆ ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪೊಂದನ್ನು ನೀಡಿದೆ. ಇಷ್ಟು ದಿನ “ಪಿಯುಸಿ ಮಾಡಿಲ್ಲ” ಎಂಬ ಕಾರಣಕ್ಕೆ ಕಾನೂನು ಪದವಿ (LLB) ಪ್ರವೇಶದಿಂದ ವಂಚಿತರಾಗಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಈಗ ನ್ಯಾಯ ಸಿಕ್ಕಂತಾಗಿದೆ.

ಹೋರಾಟಕ್ಕೆ ಸಿಕ್ಕ ಜಯ

ಕಳೆದ 2023ರಿಂದ ಆರಂಭವಾದ ಸುದೀರ್ಘ ಕಾನೂನು ಹೋರಾಟಕ್ಕೆ ಈಗ ತಾರ್ಕಿಕ ಅಂತ್ಯ ಸಿಕ್ಕಿದೆ. ಐಟಿಐ ಮುಗಿಸಿ ನಂತರ ಪದವಿ ಪಡೆದಿದ್ದ ನರೇಂದ್ರ ಎಂಬ ವಿದ್ಯಾರ್ಥಿ ಸೇರಿದಂತೆ ಹಲವರು ಕಾನೂನು ಪದವಿ ಪಡೆಯಲು ಮುಂದಾದಾಗ, ಕಾಲೇಜು ಆಡಳಿತ ಮಂಡಳಿಗಳು “ಪಿಯುಸಿ ಮಾಡಿಲ್ಲ” ಎಂಬ ತಾಂತ್ರಿಕ ಕಾರಣವೊಡ್ಡಿ ಪ್ರವೇಶ ನಿರಾಕರಿಸಿದ್ದವು. ಕೆಲವರ ಅಡ್ಮಿಷನ್ ಕೂಡ ಕ್ಯಾನ್ಸಲ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.

ಹೈಕೋರ್ಟ್ ನೀಡಿದ ಪ್ರಮುಖ ತೀರ್ಪುಗಳು:

ಪಿಯುಸಿಗೆ ತತ್ಸಮಾನ: ಐಟಿಐ, ಡಿಪ್ಲೊಮಾ ಮತ್ತು ಜೆಓಸಿ ಕೋರ್ಸ್‌ಗಳನ್ನು ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಬೇಕು.

ಪ್ರವೇಶ ನಿರಾಕರಿಸುವಂತಿಲ್ಲ: ವಿದ್ಯಾರ್ಥಿಗಳು ಪಿಯುಸಿ ಮಾಡಿಲ್ಲ ಎಂಬ ಒಂದೇ ಕಾರಣಕ್ಕೆ ಎಲ್‌ಎಲ್‌ಬಿ (LLB) ಸೀಟು ನೀಡಲು ನಿರಾಕರಿಸುವಂತಿಲ್ಲ.

ತಾಂತ್ರಿಕ ಶಿಕ್ಷಣಕ್ಕೂ ಮಾನ್ಯತೆ: ಯಾವುದೇ ತಾಂತ್ರಿಕ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಕಾನೂನು ಪದವಿ ಪಡೆಯಲು ಅರ್ಹರು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

“ಇದು ಕೇವಲ ನನ್ನೊಬ್ಬನ ಗೆಲುವಲ್ಲ, ನನ್ನಂತೆ ಕನಸು ಕಂಡಿದ್ದ ಸಾವಿರಾರು ವಿದ್ಯಾರ್ಥಿಗಳ ಗೆಲುವು. ಕಾನೂನು ಪದವಿ ಪಡೆಯಲಾಗದೆ ಎಷ್ಟೋ ಯುವಕರ ಕನಸುಗಳು ಅರ್ಧಕ್ಕೆ ನಿಂತಿದ್ದವು. ಇಂದು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಹೆಚ್ಚಾಗಿದೆ. ನಮ್ಮ ಹೋರಾಟಕ್ಕೆ ತಕ್ಕ ಫಲ ಸಿಕ್ಕಿದೆ ಎಂದು ಅರ್ಜಿದಾರ ವಿದ್ಯಾರ್ಥಿ ನರೇಂದ್ರ ಹೇಳಿದ್ದಾರೆ.

ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ

ಮಾರ್ಚ್ 27, 2026ರಂದು ಹೊರಬಿದ್ದ ಈ ಮಹತ್ವದ ತೀರ್ಪಿನಿಂದಾಗಿ, ವಕೀಲರಾಗಬೇಕೆಂದು ಕನಸು ಹೊತ್ತಿದ್ದ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಈ ತೀರ್ಪಿನಿಂದಾಗಿ ಇನ್ಮುಂದೆ ರಾಜ್ಯದ ಯಾವುದೇ ಕಾನೂನು ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳು ಮುಕ್ತವಾಗಿ ಪ್ರವೇಶ ಪಡೆಯಲು ಹಾದಿ ಸುಗಮವಾಗಿದೆ.

BIG NEWS: State diploma and ITI students can also get admission in `LLB`: High Court's important verdict!
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ರೌಡಿಗಳ ನಿಯಂತ್ರಣಕ್ಕೆ ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕ ಪಡೆ ರಚಿಸಲು ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

2 Mins Read

BREAKING: ಸಿಎಂ ಡಿಕೆಶಿ ಸಭೆಯಲ್ಲಿ ಹೈ-ಡ್ರಾಮಾ: ಸಿಟ್ಟಿಗೆದ್ದು ಸಭೆಯಿಂದಲೇ ಹೊರನಡೆದ ಸಚಿವ ರಾಮಲಿಂಗಾರೆಡ್ಡಿ!

1 Min Read

ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್, ನೂತನ ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ

1 Min Read
Recent News

ರಾಜ್ಯದಲ್ಲಿ ರೌಡಿಗಳ ನಿಯಂತ್ರಣಕ್ಕೆ ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕ ಪಡೆ ರಚಿಸಲು ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

Kidney Disease: ‘ಕಿಡ್ನಿ ಸಮಸ್ಯೆ’ಯು ಆರಂಭದಲ್ಲಿ ಲಕ್ಷಣಗಳೇ ತಿಳಿಯದ ‘ಸೈಲೆಂಟ್ ಕಿಲ್ಲರ್’ ಕಾಯಿಲೆ: ಈ ಎಚ್ಚರವಿರಲಿ!

BREAKING: ಸಿಎಂ ಡಿಕೆಶಿ ಸಭೆಯಲ್ಲಿ ಹೈ-ಡ್ರಾಮಾ: ಸಿಟ್ಟಿಗೆದ್ದು ಸಭೆಯಿಂದಲೇ ಹೊರನಡೆದ ಸಚಿವ ರಾಮಲಿಂಗಾರೆಡ್ಡಿ!

ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್, ನೂತನ ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ

State News
KARNATAKA

ರಾಜ್ಯದಲ್ಲಿ ರೌಡಿಗಳ ನಿಯಂತ್ರಣಕ್ಕೆ ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕ ಪಡೆ ರಚಿಸಲು ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಪೊಲೀಸರು ಪ್ರತಿ ತಾಲ್ಲೂಕಿನಲ್ಲಿ ರೌಡಿಗಳ ನಿಗ್ರಹಕ್ಕೆ ಪ್ರತ್ಯೇಕ ಪಡೆ ರಚಿಸಬೇಕು. ಇವರು ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಬೇಕು. ಹಳೇ…

BREAKING: ಸಿಎಂ ಡಿಕೆಶಿ ಸಭೆಯಲ್ಲಿ ಹೈ-ಡ್ರಾಮಾ: ಸಿಟ್ಟಿಗೆದ್ದು ಸಭೆಯಿಂದಲೇ ಹೊರನಡೆದ ಸಚಿವ ರಾಮಲಿಂಗಾರೆಡ್ಡಿ!

ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್, ನೂತನ ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ

BIG NEWS : ಸಿಎಂ ಡಿಕೆ ಶಿವಕುಮಾರ್ ಜೊತೆಗೆ ರಾಮಲಿಂಗಾರೆಡ್ಡಿ ಸಂಧಾನ ವಿಫಲ : ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಪೋಟ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.