Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ಯೋಜನೆಯಡಿ ಪ್ರತಿ ತಿಂಗಳು 210 ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 5,000 ರೂಪಾಯಿ ಪೆನ್ಷನ್.!

07/04/2026 11:17 AM

ALERT : `ಲೋನ್’ ಪಡೆಯುವಾಗ ಈ ತಪ್ಪುಗಳನ್ನು ಮಾಡಿದರೆ ಸಂಕಷ್ಟ ಗ್ಯಾರಂಟಿ!

07/04/2026 11:15 AM

BIG NEWS : ಮೋಜ್ತಬಾ ಖಮನೈ ವಾರ್ ರೂಂಗೆ ಎಂಟ್ರಿ ಕೊಟ್ಟಿದ್ದು ನಿಜಾನಾ? ಇಲ್ಲಿದೆ ವೈರಲ್ ವಿಡಿಯೋದ ಅಸಲಿಯತ್ತು!

07/04/2026 11:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಲ್ಲಿ ಅಕ್ರಮ ಸಂಬಂಧಕ್ಕೆ ಮತ್ತೊಂದು ಬಲಿ : ಪ್ರೇಯಸಿ ಪತಿಯನ್ನುಹತ್ಯೆಗೈದು ಮೂಟೆ ಕಟ್ಟಿ ಎಸೆದ ಪ್ರಿಯಕರ.!
KARNATAKA

BREAKING : ಬೆಂಗಳೂರಲ್ಲಿ ಅಕ್ರಮ ಸಂಬಂಧಕ್ಕೆ ಮತ್ತೊಂದು ಬಲಿ : ಪ್ರೇಯಸಿ ಪತಿಯನ್ನುಹತ್ಯೆಗೈದು ಮೂಟೆ ಕಟ್ಟಿ ಎಸೆದ ಪ್ರಿಯಕರ.!

By kannadanewsnow5707/04/2026 11:08 AM

ಬೆಂಗಳೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ನಗರದಲ್ಲಿ ಭೀಕರ ಕೊಲೆಯೊಂದು ನಡೆದಿದ್ದು, ತನ್ನ ಪ್ರೇಯಸಿಯ ಪತಿಯನ್ನೇ ಪ್ರಿಯಕರನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸುನೀಲ್ ನಾಯಕ್ ಕೊಲೆಯಾದ ದುರ್ದೈವಿ. ಈ ಸಂಬಂಧ ಆರೋಪಿ ಬಸುದೇವ್ ಮಲ್ಲಿಕ್ ಎಂಬಾತನನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ:

ಕೊಲೆಯಾದ ಸುನೀಲ್ ನಾಯಕ್ ಪತ್ನಿಯೊಂದಿಗೆ ಆರೋಪಿ ಬಸುದೇವ್ ಮಲ್ಲಿಕ್ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಷಯ ಸುನೀಲ್‌ಗೆ ತಿಳಿದು ಮನೆಯಲ್ಲಿ ದಂಪತಿಗಳ ನಡುವೆ ತೀವ್ರ ಗಲಾಟೆ ನಡೆದಿತ್ತು. ತನ್ನ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಸುನೀಲ್‌ನನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ಸಂಚು ರೂಪಿಸಿದ್ದ ಬಸುದೇವ್, ಅಂತಿಮವಾಗಿ ಆತನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ.

ಹತ್ಯೆ ನಡೆದಿದ್ದು ಹೇಗೆ?

ಆರೋಪಿ ಬಸುದೇವ್ ಅತ್ಯಂತ ಚಾಣಾಕ್ಷತನದಿಂದ ಸುನೀಲ್‌ನನ್ನು ಹತ್ಯೆ ಮಾಡಿದ್ದಾನೆ.   ಮದ್ಯಪಾನ ಮಾಡುವ ನೆಪದಲ್ಲಿ ಸುನೀಲ್‌ನನ್ನು ಆರೋಪಿ ಹೊರಗೆ ಕರೆದೊಯ್ದಿದ್ದಾನೆ. ಸುನೀಲ್‌ಗೆ ಕಂಠಪೂರ್ತಿ ಕುಡಿಸಿ ಆತ ಪ್ರಜ್ಞೆ ತಪ್ಪುವ ಹಂತಕ್ಕೆ ತಲುಪಿದಾಗ, ಬರ್ಬರವಾಗಿ ಕೊಲೆ ಮಾಡಿದ್ದಾನೆ.  ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಒಂದು ಮೂಟೆಯಲ್ಲಿ ಕಟ್ಟಿ, ಬೊಮ್ಮಸಂದ್ರದ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದನು.

ಪೊಲೀಸರ ಕಾರ್ಯಾಚರಣೆ:

ಬೊಮ್ಮಸಂದ್ರದ ನಿರ್ಜನ ಪ್ರದೇಶದಲ್ಲಿ ಮೂಟೆಯೊಳಗೆ ಮೃತದೇಹ ಪತ್ತೆಯಾದ ಬಳಿಕ ಪ್ರಕರಣ ದಾಖಲಿಸಿಕೊಂಡ ಬಂಡೇಪಾಳ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ತಾಂತ್ರಿಕ ಸಾಕ್ಷ್ಯಗಳು ಹಾಗೂ ವಿಚಾರಣೆಯ ಆಧಾರದ ಮೇಲೆ ಬಸುದೇವ್ ಮಲ್ಲಿಕ್‌ನನ್ನು ವಶಕ್ಕೆ ಪಡೆದಾಗ ಕೊಲೆಯ ಅಸಲಿ ಸತ್ಯ ಹೊರಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆತನನ್ನು ಕಠಿಣ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಕೃತ್ಯದಲ್ಲಿ ಸುನೀಲ್ ಪತ್ನಿಯ ಪಾತ್ರವೇನಾದರೂ ಇದೆಯೇ ಎಂಬ ಆಯಾಮದಲ್ಲೂ ತನಿಖೆ ಮುಂದುವರಿದಿದೆ.

BREAKING: Another victim of illicit relationship in Bengaluru: Lover kills husband wraps him in a bag and throws him away!
Share. Facebook Twitter LinkedIn WhatsApp Email

Related Posts

ALERT : `ಲೋನ್’ ಪಡೆಯುವಾಗ ಈ ತಪ್ಪುಗಳನ್ನು ಮಾಡಿದರೆ ಸಂಕಷ್ಟ ಗ್ಯಾರಂಟಿ!

07/04/2026 11:15 AM1 Min Read

ಜಮೀನು, ಮನೆ ಖರೀದಿಗೂ ಮುನ್ನ ಹುಷಾರ್ : ಮಾಲೀಕತ್ವದ ಅಸಲಿತನ ಪತ್ತೆ ಹಚ್ಚಲು ಜಸ್ಟ್ ಹೀಗೆ ಮಾಡಿ.!

07/04/2026 11:00 AM1 Min Read

BIG NEWS: ಸಮಾಜದ ಸ್ವಾಸ್ಥ್ಯ ಕೆಡಿಸುವ ‘ಯೂಟ್ಯೂಬ್ ಚಾನಲ್‌’ಗಳ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ

07/04/2026 10:53 AM1 Min Read
Recent News

ಈ ಯೋಜನೆಯಡಿ ಪ್ರತಿ ತಿಂಗಳು 210 ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 5,000 ರೂಪಾಯಿ ಪೆನ್ಷನ್.!

07/04/2026 11:17 AM

ALERT : `ಲೋನ್’ ಪಡೆಯುವಾಗ ಈ ತಪ್ಪುಗಳನ್ನು ಮಾಡಿದರೆ ಸಂಕಷ್ಟ ಗ್ಯಾರಂಟಿ!

07/04/2026 11:15 AM

BIG NEWS : ಮೋಜ್ತಬಾ ಖಮನೈ ವಾರ್ ರೂಂಗೆ ಎಂಟ್ರಿ ಕೊಟ್ಟಿದ್ದು ನಿಜಾನಾ? ಇಲ್ಲಿದೆ ವೈರಲ್ ವಿಡಿಯೋದ ಅಸಲಿಯತ್ತು!

07/04/2026 11:11 AM

BREAKING : ಬೆಂಗಳೂರಲ್ಲಿ ಅಕ್ರಮ ಸಂಬಂಧಕ್ಕೆ ಮತ್ತೊಂದು ಬಲಿ : ಪ್ರೇಯಸಿ ಪತಿಯನ್ನುಹತ್ಯೆಗೈದು ಮೂಟೆ ಕಟ್ಟಿ ಎಸೆದ ಪ್ರಿಯಕರ.!

07/04/2026 11:08 AM
State News
BUSINESS

ALERT : `ಲೋನ್’ ಪಡೆಯುವಾಗ ಈ ತಪ್ಪುಗಳನ್ನು ಮಾಡಿದರೆ ಸಂಕಷ್ಟ ಗ್ಯಾರಂಟಿ!

By kannadanewsnow5707/04/2026 11:15 AM BUSINESS 1 Min Read

ಇಂದಿನ ಕಾಲದಲ್ಲಿ ಮನೆ ಕಟ್ಟಲು, ಕಾರು ಖರೀದಿಸಲು ಅಥವಾ ವೈಯಕ್ತಿಕ ಅವಶ್ಯಕತೆಗಳಿಗಾಗಿ ಸಾಲ (Loan) ಪಡೆಯುವುದು ಸಾಮಾನ್ಯವಾಗಿದೆ. ಆದರೆ ಸಾಲ…

BREAKING : ಬೆಂಗಳೂರಲ್ಲಿ ಅಕ್ರಮ ಸಂಬಂಧಕ್ಕೆ ಮತ್ತೊಂದು ಬಲಿ : ಪ್ರೇಯಸಿ ಪತಿಯನ್ನುಹತ್ಯೆಗೈದು ಮೂಟೆ ಕಟ್ಟಿ ಎಸೆದ ಪ್ರಿಯಕರ.!

07/04/2026 11:08 AM

ಜಮೀನು, ಮನೆ ಖರೀದಿಗೂ ಮುನ್ನ ಹುಷಾರ್ : ಮಾಲೀಕತ್ವದ ಅಸಲಿತನ ಪತ್ತೆ ಹಚ್ಚಲು ಜಸ್ಟ್ ಹೀಗೆ ಮಾಡಿ.!

07/04/2026 11:00 AM

BIG NEWS: ಸಮಾಜದ ಸ್ವಾಸ್ಥ್ಯ ಕೆಡಿಸುವ ‘ಯೂಟ್ಯೂಬ್ ಚಾನಲ್‌’ಗಳ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ

07/04/2026 10:53 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.