Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ದೊಡ್ಡ ಅಂತರದ ಗೆಲುವು: ಡಿಸಿಎಂ ಡಿ.ಕೆ ಶಿವಕುಮಾರ್

04/04/2026 4:14 PM

ಕಾಯಕದ ನಡುವೆಯೂ ಮಾನವೀಯತೆ ಮೆರೆದ ಸಾಗರದ ಓಮಿನಿ ಚಾಲಕರು: ಅನಾಥಾಶ್ರಮಕ್ಕೆ ಪಡಿತರ ದೇಣಿಗೆ

04/04/2026 4:08 PM

BIG NEWS : ತೃತೀಯ ಭಾಷೆ ವಿಚಾರದಲ್ಲಿ ರಾಜ್ಯಪಾಲರ ಆಕ್ಷೇಪ : ಲೋಕಭವನ ಮುತ್ತಿಗೆಗೆ ಕರವೇ ನಿರ್ಧಾರ!

04/04/2026 3:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾಯಕದ ನಡುವೆಯೂ ಮಾನವೀಯತೆ ಮೆರೆದ ಸಾಗರದ ಓಮಿನಿ ಚಾಲಕರು: ಅನಾಥಾಶ್ರಮಕ್ಕೆ ಪಡಿತರ ದೇಣಿಗೆ
KARNATAKA

ಕಾಯಕದ ನಡುವೆಯೂ ಮಾನವೀಯತೆ ಮೆರೆದ ಸಾಗರದ ಓಮಿನಿ ಚಾಲಕರು: ಅನಾಥಾಶ್ರಮಕ್ಕೆ ಪಡಿತರ ದೇಣಿಗೆ

By kannadanewsnow0904/04/2026 4:08 PM

ಶಿವಮೊಗ್ಗ: ಕಷ್ಟಪಟ್ಟು ದುಡಿಯುವ ಕಾಯಕದ ನಡುವೆಯೂ ಸಮಾಜದ ಅಸಹಾಯಕರಿಗೆ ನೆರವಾಗುವ ಮೂಲಕ ಸಾಗರದ ಓಮಿನಿ ಚಾಲಕರು ಮತ್ತು ಮಾಲೀಕರ ಸಂಘವು ಎಲ್ಲರಿಗೂ ಮಾದರಿಯಾಗಿದೆ. ಶನಿವಾರ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಮುಗದೂರು ಬಳಿಯ ದೇವಸ್ಥಳದಲ್ಲಿರುವಂತ ‘ಪುನೀತ್ ರಾಜ್‌ಕುಮಾರ್ ಅನಾಥಾಶ್ರಮ ಸೇವಾ ಸಮಿತಿ’ಗೆ ಭೇಟಿ ನೀಡಿದ ಸಂಘದ ಪದಾಧಿಕಾರಿಗಳು, ಸುಮಾರು 20 ಸಾವಿರ ರೂ. ಮೌಲ್ಯದ ಅಕ್ಕಿ ಹಾಗೂ ಜೀವನಾವಶ್ಯಕ ಪಡಿತರ ವಸ್ತುಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ವೃದ್ಧರ ಮೌನ ವೇದನೆಗೆ ದನಿಯಾದ ಸಂಘ: ವಿಡಿಯೋದಲ್ಲಿ ಕಂಡುಬರುವಂತೆ, ಸಂಘದ ಸದಸ್ಯರು ಆಶ್ರಮದ ವೃದ್ಧರೊಂದಿಗೆ ಸಮಯ ಕಳೆದು ಅವರ ಯೋಗಕ್ಷೇಮ ವಿಚಾರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಕಾನೂನು ಸಲಹೆಗಾರರಾದ ವಿ. ಶಂಕರ್, “ನಾವು ದಿನವಿಡೀ ಓಮಿನಿ ಗಾಡಿ ಓಡಿಸಿ ದುಡಿದ ಹಣದಲ್ಲಿ ಒಂದು ಸಣ್ಣ ಪಾಲನ್ನು ಈ ರೀತಿಯ ಸಮಾಜಮುಖಿ ಕಾರ್ಯಕ್ಕೆ ಮೀಸಲಿಡುತ್ತಿದ್ದೇವೆ. ವಯಸ್ಸಾದ ಕಾಲದಲ್ಲಿ ಹೆತ್ತವರನ್ನು ಬೀದಿಗೆ ತಳ್ಳುವುದು ಅಥವಾ ಅನಾಥಾಶ್ರಮಕ್ಕೆ ಸೇರಿಸುವುದು ಕಾನೂನು ಮತ್ತು ಧರ್ಮ ಎರಡರಲ್ಲೂ ಅಪರಾಧ. ಆದರೆ, ಇಂತಹ ಕಷ್ಟದ ಸಂದರ್ಭದಲ್ಲಿಯೂ ನಾಗರಾಜ್ ನಾಯಕ್ ಮತ್ತು ಮಮತಾ ನಾಯಕ್ ದಂಪತಿಗಳು ಈ ವೃದ್ಧರ ಸೇವೆ ಮಾಡುತ್ತಿರುವುದು ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು.

ನಮ್ಮ ಈ ಕಾರ್ಯ ಪ್ರಚಾರಕ್ಕಲ್ಲ, ಬದಲಾಗಿ ನಮ್ಮನ್ನು ನೋಡಿ ಇನ್ನೂ ಹತ್ತು ಮಂದಿ ಇಂತಹ ಆಶ್ರಮಗಳಿಗೆ ಸಹಾಯ ಮಾಡಲು ಮುಂದೆ ಬರಲಿ ಎಂಬ ಆಶಯ ನಮ್ಮದು” ಎಂದು ಸಂಘದ ಸದಸ್ಯರು ತಿಳಿಸಿದರು. ಪೋಷಕರ ಸಂರಕ್ಷಣಾ ಕಾಯ್ದೆಯ ಬಗ್ಗೆಯೂ ಅರಿವು ಮೂಡಿಸಿದ ಅವರು, ವೃದ್ಧರಿಗೆ ಯಾವುದೇ ರೀತಿಯ ಕಾನೂನು ನೆರವು ಬೇಕಾದಲ್ಲಿ ತಮ್ಮ ಸಂಘವು ಸದಾ ಸಿದ್ಧವಿರುವುದಾಗಿ ಭರವಸೆ ನೀಡಿದರು.

ಈ ಮಾನವೀಯ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ನಾಗರಾಜ್ ಪಿ., ಕಾರ್ಯದರ್ಶಿ ನಾಗರಾಜ್ ಕೆ., ಖಜಾಂಚಿ ನಾಗರಾಜ್ ಎನ್., ಹಾಗೂ ಸದಸ್ಯರಾದ ಉದಯಕುಮಾರ್, ಶ್ರೀನಾಥ್, ಪರಶುರಾಮ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಮ್ಮ ಕಾಯಕದ ನಡುವೆಯೂ ಸಮಾಜದ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿರುವ ಓಮಿನಿ ಚಾಲಕರ ಮತ್ತು ಮಾಲೀಕರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

ಏ.27ರಂದು ಸಾಗರದಲ್ಲಿ ರೈತರ ಸಮಸ್ಯೆಗಳ ಬಗೆಹರಿಸದ ಸರ್ಕಾರದ ವಿರುದ್ಧ ಶಾಸಕರ ಕಚೇರಿ ಎದುರು ಪ್ರತಿಭಟನೆ: ತೀ.ನಾ.ಶ್ರೀನಿವಾಸ್

BIG Alert: ‘ಆನ್‌ಲೈನ್‌’ನಲ್ಲಿ ‘IPL ಟಿಕೆಟ್’ ಖರೀದಿಗಾಗಿ ಹುಡುಕುತ್ತಿದ್ದೀರಾ? ಅದಕ್ಕೂ ಮುನ್ನ ಈ ಸುದ್ದಿ ಓದಿ.!

Share. Facebook Twitter LinkedIn WhatsApp Email

Related Posts

ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ದೊಡ್ಡ ಅಂತರದ ಗೆಲುವು: ಡಿಸಿಎಂ ಡಿ.ಕೆ ಶಿವಕುಮಾರ್

04/04/2026 4:14 PM2 Mins Read

BIG NEWS : ತೃತೀಯ ಭಾಷೆ ವಿಚಾರದಲ್ಲಿ ರಾಜ್ಯಪಾಲರ ಆಕ್ಷೇಪ : ಲೋಕಭವನ ಮುತ್ತಿಗೆಗೆ ಕರವೇ ನಿರ್ಧಾರ!

04/04/2026 3:51 PM1 Min Read

ಏ.27ರಂದು ಸಾಗರದಲ್ಲಿ ರೈತರ ಸಮಸ್ಯೆಗಳ ಬಗೆಹರಿಸದ ಸರ್ಕಾರದ ವಿರುದ್ಧ ಶಾಸಕರ ಕಚೇರಿ ಎದುರು ಪ್ರತಿಭಟನೆ: ತೀ.ನಾ.ಶ್ರೀನಿವಾಸ್

04/04/2026 3:49 PM2 Mins Read
Recent News

ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ದೊಡ್ಡ ಅಂತರದ ಗೆಲುವು: ಡಿಸಿಎಂ ಡಿ.ಕೆ ಶಿವಕುಮಾರ್

04/04/2026 4:14 PM

ಕಾಯಕದ ನಡುವೆಯೂ ಮಾನವೀಯತೆ ಮೆರೆದ ಸಾಗರದ ಓಮಿನಿ ಚಾಲಕರು: ಅನಾಥಾಶ್ರಮಕ್ಕೆ ಪಡಿತರ ದೇಣಿಗೆ

04/04/2026 4:08 PM

BIG NEWS : ತೃತೀಯ ಭಾಷೆ ವಿಚಾರದಲ್ಲಿ ರಾಜ್ಯಪಾಲರ ಆಕ್ಷೇಪ : ಲೋಕಭವನ ಮುತ್ತಿಗೆಗೆ ಕರವೇ ನಿರ್ಧಾರ!

04/04/2026 3:51 PM

ಏ.27ರಂದು ಸಾಗರದಲ್ಲಿ ರೈತರ ಸಮಸ್ಯೆಗಳ ಬಗೆಹರಿಸದ ಸರ್ಕಾರದ ವಿರುದ್ಧ ಶಾಸಕರ ಕಚೇರಿ ಎದುರು ಪ್ರತಿಭಟನೆ: ತೀ.ನಾ.ಶ್ರೀನಿವಾಸ್

04/04/2026 3:49 PM
State News
KARNATAKA

ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ದೊಡ್ಡ ಅಂತರದ ಗೆಲುವು: ಡಿಸಿಎಂ ಡಿ.ಕೆ ಶಿವಕುಮಾರ್

By kannadanewsnow0904/04/2026 4:14 PM KARNATAKA 2 Mins Read

ಬೆಂಗಳೂರು : “ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದ ಮತಕ್ಕಿಂತ ಈ ಬಾರಿಯ…

ಕಾಯಕದ ನಡುವೆಯೂ ಮಾನವೀಯತೆ ಮೆರೆದ ಸಾಗರದ ಓಮಿನಿ ಚಾಲಕರು: ಅನಾಥಾಶ್ರಮಕ್ಕೆ ಪಡಿತರ ದೇಣಿಗೆ

04/04/2026 4:08 PM

BIG NEWS : ತೃತೀಯ ಭಾಷೆ ವಿಚಾರದಲ್ಲಿ ರಾಜ್ಯಪಾಲರ ಆಕ್ಷೇಪ : ಲೋಕಭವನ ಮುತ್ತಿಗೆಗೆ ಕರವೇ ನಿರ್ಧಾರ!

04/04/2026 3:51 PM

ಏ.27ರಂದು ಸಾಗರದಲ್ಲಿ ರೈತರ ಸಮಸ್ಯೆಗಳ ಬಗೆಹರಿಸದ ಸರ್ಕಾರದ ವಿರುದ್ಧ ಶಾಸಕರ ಕಚೇರಿ ಎದುರು ಪ್ರತಿಭಟನೆ: ತೀ.ನಾ.ಶ್ರೀನಿವಾಸ್

04/04/2026 3:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.