Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಬುಧಾಬಿಯ ಕೈಗಾರಿಕಾ ವಲಯದ ಮೇಲೆ ಕ್ಷಿಪಣಿ ಅವಶೇಷಗಳ ಮಳೆ: ಐವರು ಭಾರತೀಯರಿಗೆ ಗಾಯ, ಯುದ್ಧದ ಭೀತಿಯಲ್ಲಿ ಯುಎಇ!

28/03/2026 12:07 PM

ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ವಿರುದ್ಧದ ಭೂ ಕಬಳಿಕೆ ಪ್ರಕರಣ ರದ್ದು : ಹೈ ಕೋರ್ಟ್ ಮಹತ್ವದ ತೀರ್ಪು

28/03/2026 12:05 PM

BREAKING : ತಾಂತ್ರಿಕ ದೋಷದಿಂದ ದೆಹಲಿ ಏರ್ ಪೋರ್ಟ್ ನಲ್ಲಿ `ಇಂಡಿಗೋ ವಿಮಾನ’ ತುರ್ತು ಭೂಸ್ಪರ್ಶ; ಪ್ರಯಾಣಿಕರೆಲ್ಲರೂ ಸುರಕ್ಷಿತ

28/03/2026 12:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಜನರೇ ಗಮನಿಸಿ : ಏ.1 ರಿಂದ ‘ಸ್ವಯಂ-ಗಣತಿ’ ಆರಂಭ, ಮನೆಯಲ್ಲೇ ಕುಳಿತು ಜಸ್ಟ್ ಈ ರೀತಿ ಮಾಹಿತಿ ಸಲ್ಲಿಸಿ!
KARNATAKA

ರಾಜ್ಯದ ಜನರೇ ಗಮನಿಸಿ : ಏ.1 ರಿಂದ ‘ಸ್ವಯಂ-ಗಣತಿ’ ಆರಂಭ, ಮನೆಯಲ್ಲೇ ಕುಳಿತು ಜಸ್ಟ್ ಈ ರೀತಿ ಮಾಹಿತಿ ಸಲ್ಲಿಸಿ!

By kannadanewsnow5728/03/2026 12:02 PM

ಬೆಂಗಳೂರು: ಮುಂಬರುವ 2027ರ ಜನಗಣತಿಯ ಅಂಗವಾಗಿ, ಸಾರ್ವಜನಿಕರು ಆನ್ಲೈನ್ ಮೂಲಕ ತಾವೇ ಸ್ವತಃ ತಮ್ಮ ಕುಟುಂಬದ ಮಾಹಿತಿಯನ್ನು ಒದಗಿಸಲು (ಸ್ವಯಂ-ಗಣತಿ) ಅವಕಾಶ ಕಲ್ಪಿಸಲಾಗಿದೆ. ಈ ಸುರಕ್ಷಿತ ವೆಬ್ ಪೋರ್ಟಲ್ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡು ಜನಗಣತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಏಪ್ರಿಲ್ 16 ರಿಂದ ಮನೆ ಪಟ್ಟಿ ಮತ್ತು ಮನೆಗಣತಿ ಕಾರ್ಯ ಅಧಿಕೃತವಾಗಿ ಆರಂಭವಾಗಲಿದೆ. ಇದಕ್ಕೂ 15 ದಿನಗಳ ಮುಂಚಿತವಾಗಿ, ಅಂದರೆ ಏಪ್ರಿಲ್ 1, 2026 ರಿಂದ ಆನ್ಲೈನ್ ಪೋರ್ಟಲ್ ತೆರೆಯಲಿದ್ದು, ಸಾರ್ವಜನಿಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಮಾಹಿತಿಯನ್ನು ದಾಖಲಿಸಬಹುದಾಗಿದೆ.

ಸ್ವಯಂ ಗಣತಿ ಅವಧಿ: ಏಪ್ರಿಲ್ 01, 2026 ರಿಂದ ಏಪ್ರಿಲ್ 15, 2026 ರವರೆಗೆ.

ಅಧಿಕೃತ ವೆಬ್ ಪೋರ್ಟಲ್: se.census.gov.in

ಸಾಧನಗಳು: ಮೊಬೈಲ್, ಡೆಸ್ಕ್ಟಾಪ್, ಲ್ಯಾಪ್ಟಾಪ್ ಮೂಲಕ ಲಭ್ಯ.

ಮಾಹಿತಿ ಭರ್ತಿ ಪ್ರಕ್ರಿಯೆ ಹೇಗೆ?
ಸಾರ್ವಜನಿಕರು ಪೋರ್ಟಲ್ನಲ್ಲಿ ತಮ್ಮ ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮ/ಪಟ್ಟಣ/ನಗರ ಸೇರಿದಂತೆ ಸ್ಥಳದ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ನಿಖರತೆಗಾಗಿ ಪಿನ್ಕೋಡ್ ಹಾಗೂ ಡಿಜಿಟಲ್ ಮ್ಯಾಪ್ ಮೂಲಕ ಮನೆಯ ಸ್ಥಳವನ್ನು ಗುರುತಿಸುವ ಅತ್ಯಾಧುನಿಕ ವ್ಯವಸ್ಥೆಯನ್ನು ಪೋರ್ಟಲ್ನಲ್ಲಿ ಅಳವಡಿಸಲಾಗಿದೆ.

ಸ್ವಯಂ-ಗಣತಿ (Self-Enumeration) ಪೋರ್ಟಲ್ನಲ್ಲಿನ ಪ್ರಶ್ನೆಗಳನ್ನು ಗಣತಿದಾರರು ಬಳಸುವ ಮೊಬೈಲ್ ಆಪ್ ಮಾದರಿಯಲ್ಲೇ ರೂಪಿಸಲಾಗಿದೆ. ಕೆಲವು ಮಾಹಿತಿಗಳು ಮೊದಲೇ ಭರ್ತಿಯಾಗಿರುವ (Pre-filled) ಸಾಧ್ಯತೆಯಿದ್ದು, ನಾಗರಿಕರ ಅನುಕೂಲಕ್ಕಾಗಿ ಮಾರ್ಗಸೂಚಿಗಳು ಹಾಗೂ ಪದೇ ಪದೇ ಕೇಳಲಾಗುವ ಪ್ರಶ್ನೆಗಳ (FAQs) ವಿವರಗಳನ್ನೂ ವೆಬ್ಸೈಟ್ನಲ್ಲಿ ಒದಗಿಸಲಾಗಿದೆ.

ಗಣತಿದಾರರಿಗೆ ‘ಐಡಿ’ ನೀಡಿದರೆ ಸಾಕು:
ಕುಟುಂಬದ ಮಾಹಿತಿಯನ್ನು ಯಶಸ್ವಿಯಾಗಿ ಆನ್ಲೈನ್ನಲ್ಲಿ ಸಲ್ಲಿಸಿದ ಬಳಿಕ, ನಾಗರಿಕರ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ (SMS) ಹಾಗೂ ಇ-ಮೇಲ್ ಮೂಲಕ ವಿಶಿಷ್ಟ ‘ಸ್ವಯಂ-ಗಣತಿ ಐಡಿ’ (Self-Enumeration ID) ರವಾನೆಯಾಗುತ್ತದೆ. ತದನಂತರ ಮನೆಗೆ ಭೇಟಿ ನೀಡುವ ಗಣತಿದಾರರಿಗೆ (Enumerators) ಕೇವಲ ಈ ಐಡಿಯನ್ನು ಹಂಚಿಕೊಂಡರೆ ಸಾಕಾಗುತ್ತದೆ.

ಆನ್ಲೈನ್ ಮೂಲಕ ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳುವುದರಿಂದ ಸಾರ್ವಜನಿಕರ ಹಾಗೂ ಸಿಬ್ಬಂದಿಯ ಸಮಯ ಉಳಿತಾಯವಾಗುವುದಲ್ಲದೆ, ನಿಖರ ಮತ್ತು ಸಮಗ್ರ ಮಾಹಿತಿ ಸಂಗ್ರಹಿಸಲು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

just submit information like this while sitting at home! People of the state take note: 'Self-Census' begins from April 1
Share. Facebook Twitter LinkedIn WhatsApp Email

Related Posts

ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ವಿರುದ್ಧದ ಭೂ ಕಬಳಿಕೆ ಪ್ರಕರಣ ರದ್ದು : ಹೈ ಕೋರ್ಟ್ ಮಹತ್ವದ ತೀರ್ಪು

28/03/2026 12:05 PM1 Min Read

ವಿಕ್ಟೋರಿಯಾ ಆಸ್ಪತ್ರೆ ಮೇಲೆ ಲೋಕಾಯುಕ್ತ ದಿಢೀರ್ ದಾಳಿ : ಅವಧಿ ಮೀರಿದ ಔಷಧಿಗಳು, ಆಂಬುಲೆನ್ಸ್ ಮಾಫಿಯ ಬಯಲು!

28/03/2026 11:58 AM1 Min Read

ಬೆಂಗಳೂರಲ್ಲಿ ಕ್ರಿಕೆಟ್ ನಿಲ್ಲಿಸಿದರೆ ರಾಜ್ಯಕ್ಕೆ ಅಪಕೀರ್ತಿ ಬರುತ್ತೆ ಹಾಗಾಗಿ ಪರ್ಮಿಷನ್ ಕೊಟ್ಟಿದ್ದೆವೆ : ಗೃಹ ಸಚಿವ ಪರಮೇಶ್ವರ್

28/03/2026 11:48 AM1 Min Read
Recent News

ಅಬುಧಾಬಿಯ ಕೈಗಾರಿಕಾ ವಲಯದ ಮೇಲೆ ಕ್ಷಿಪಣಿ ಅವಶೇಷಗಳ ಮಳೆ: ಐವರು ಭಾರತೀಯರಿಗೆ ಗಾಯ, ಯುದ್ಧದ ಭೀತಿಯಲ್ಲಿ ಯುಎಇ!

28/03/2026 12:07 PM

ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ವಿರುದ್ಧದ ಭೂ ಕಬಳಿಕೆ ಪ್ರಕರಣ ರದ್ದು : ಹೈ ಕೋರ್ಟ್ ಮಹತ್ವದ ತೀರ್ಪು

28/03/2026 12:05 PM

BREAKING : ತಾಂತ್ರಿಕ ದೋಷದಿಂದ ದೆಹಲಿ ಏರ್ ಪೋರ್ಟ್ ನಲ್ಲಿ `ಇಂಡಿಗೋ ವಿಮಾನ’ ತುರ್ತು ಭೂಸ್ಪರ್ಶ; ಪ್ರಯಾಣಿಕರೆಲ್ಲರೂ ಸುರಕ್ಷಿತ

28/03/2026 12:05 PM

ರಾಜ್ಯದ ಜನರೇ ಗಮನಿಸಿ : ಏ.1 ರಿಂದ ‘ಸ್ವಯಂ-ಗಣತಿ’ ಆರಂಭ, ಮನೆಯಲ್ಲೇ ಕುಳಿತು ಜಸ್ಟ್ ಈ ರೀತಿ ಮಾಹಿತಿ ಸಲ್ಲಿಸಿ!

28/03/2026 12:02 PM
State News
KARNATAKA

ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ವಿರುದ್ಧದ ಭೂ ಕಬಳಿಕೆ ಪ್ರಕರಣ ರದ್ದು : ಹೈ ಕೋರ್ಟ್ ಮಹತ್ವದ ತೀರ್ಪು

By kannadanewsnow0528/03/2026 12:05 PM KARNATAKA 1 Min Read

ಬೆಂಗಳೂರು : ರವಿಶಂಕರ್ ವಿರುದ್ಧ ಯಾವುದೇ ಸ್ಪಷ್ಟ ಆರೋಪಗಳಿಲ್ಲದೆ ಪ್ರಕರಣ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ರವಿಶಂಕರ್ ವಿರುದ್ಧದ…

ರಾಜ್ಯದ ಜನರೇ ಗಮನಿಸಿ : ಏ.1 ರಿಂದ ‘ಸ್ವಯಂ-ಗಣತಿ’ ಆರಂಭ, ಮನೆಯಲ್ಲೇ ಕುಳಿತು ಜಸ್ಟ್ ಈ ರೀತಿ ಮಾಹಿತಿ ಸಲ್ಲಿಸಿ!

28/03/2026 12:02 PM

ವಿಕ್ಟೋರಿಯಾ ಆಸ್ಪತ್ರೆ ಮೇಲೆ ಲೋಕಾಯುಕ್ತ ದಿಢೀರ್ ದಾಳಿ : ಅವಧಿ ಮೀರಿದ ಔಷಧಿಗಳು, ಆಂಬುಲೆನ್ಸ್ ಮಾಫಿಯ ಬಯಲು!

28/03/2026 11:58 AM

ಬೆಂಗಳೂರಲ್ಲಿ ಕ್ರಿಕೆಟ್ ನಿಲ್ಲಿಸಿದರೆ ರಾಜ್ಯಕ್ಕೆ ಅಪಕೀರ್ತಿ ಬರುತ್ತೆ ಹಾಗಾಗಿ ಪರ್ಮಿಷನ್ ಕೊಟ್ಟಿದ್ದೆವೆ : ಗೃಹ ಸಚಿವ ಪರಮೇಶ್ವರ್

28/03/2026 11:48 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.