Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹಾಸನದ ಬೆಟ್ಟದ ಭೈರವೇಶ್ವರ ಸನ್ನಿಧಿಯಲ್ಲಿ ಪ್ರಿ-ವೆಡ್ಡಿಂಗ್ ಶೂಟ್ ಅತಿರೇಕ: ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ

30/03/2026 2:00 PM

‘ಲಿವರ್ ಸಮಸ್ಯೆ’ಗೆ ವಿಟಮಿನ್ ಬಿ3 ಸಂಜೀವಿನಿ: ಫ್ಯಾಟಿ ಲಿವರ್ ಹಾನಿ ತಡೆಯಲಿದೆ ಹೊಸ ಸಂಶೋಧನೆ!

30/03/2026 1:56 PM

ಏ.1ರಿಂದ ಡಿಜಿಟಲ್ ಪಾವತಿ ಬದಲಾಗಲಿದೆ: ಆರ್‌ಬಿಐನ ಹೊಸ ನಿಯಮಗಳ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ!

30/03/2026 1:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಗ್ರಾಮ ಪಂಚಾಯಿತಿ ನೌಕರರೇ ಗಮನಿಸಿ : ವೇತನ, ಭತ್ಯೆ ಹಾಗೂ ವಿವಿಧ ಸೌಲಭ್ಯಗಳ ಸಂಪೂರ್ಣ ವಿವರ ಇಲ್ಲಿದೆ
KARNATAKA

ರಾಜ್ಯದ ಗ್ರಾಮ ಪಂಚಾಯಿತಿ ನೌಕರರೇ ಗಮನಿಸಿ : ವೇತನ, ಭತ್ಯೆ ಹಾಗೂ ವಿವಿಧ ಸೌಲಭ್ಯಗಳ ಸಂಪೂರ್ಣ ವಿವರ ಇಲ್ಲಿದೆ

By kannadanewsnow5728/03/2026 10:36 AM

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯಿತಿ ನೌಕರರಿಗೆ ನೀಡಲಾಗುತ್ತಿರುವ ಕನಿಷ್ಠ ವೇತನ, ತುಟ್ಟಿಭತ್ಯೆ ಹಾಗೂ ಇತರ ಸೌಲಭ್ಯಗಳ ಅಧಿಕೃತ ವಿವರಗಳನ್ನು ಬಿಡುಗಡೆ ಮಾಡಿದೆ. ಕಾರ್ಮಿಕ ಇಲಾಖೆ ಕಾಲಕಾಲಕ್ಕೆ ನಿಗದಿಪಡಿಸುವ ಈ ವೇತನ ಹಾಗೂ ಭತ್ಯೆಗಳನ್ನು ಗ್ರಾಮ ಪಂಚಾಯಿತಿಗಳು ಪಾವತಿಸುತ್ತಿದ್ದು, ಇದರ ಸಂಪೂರ್ಣ ವಿವರಗಳು ಕೆಳಗಿನಂತಿವೆ.

ವಿವಿಧ ಹುದ್ದೆಗಳ ವೇತನ ವಿವರ (ರೂ.ಗಳಲ್ಲಿ):

ಕ್ಲೀನರ್ಸ್: ಒಟ್ಟು ವೇತನ ₹18,243.12 (ಕನಿಷ್ಠ ವೇತನ ₹16,019.52 + ತುಟ್ಟಿಭತ್ಯೆ ₹2,223.60)

ಬಿಲ್ ಕಲೆಕ್ಟರ್ / ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್: ಒಟ್ಟು ವೇತನ ₹17,420.32 (ಕನಿಷ್ಠ ವೇತನ ₹15,196.72 + ತುಟ್ಟಿಭತ್ಯೆ ₹2,223.60)

ವಾಟರ್ ಆಪರೇಟರ್: ಒಟ್ಟು ವೇತನ ₹15,732.92 (ಕನಿಷ್ಠ ವೇತನ ₹13,509.32 + ತುಟ್ಟಿಭತ್ಯೆ ₹2,223.60)

ಅಟೆಂಡೆಂಟ್: ಒಟ್ಟು ವೇತನ ₹15,097.12 (ಕನಿಷ್ಠ ವೇತನ ₹12,873.52 + ತುಟ್ಟಿಭತ್ಯೆ ₹2,223.60)

ನೌಕರರಿಗೆ ಲಭ್ಯವಿರುವ ಇತರೆ ಪ್ರಮುಖ ಸೌಲಭ್ಯಗಳು:

ರಜೆ ಸೌಲಭ್ಯ: ಸಿಬ್ಬಂದಿಗೆ 10 ದಿನಗಳ ಸಾಂದರ್ಭಿಕ ರಜೆ ಹಾಗೂ 2 ದಿನಗಳ ನಿರ್ಬಂಧಿತ ರಜೆ ಲಭ್ಯವಿದೆ. ಮಹಿಳಾ ನೌಕರರಿಗೆ 180 ದಿನಗಳ ಪ್ರಸೂತಿ ರಜೆ ಮತ್ತು ಪುರುಷ ನೌಕರರಿಗೆ 15 ದಿನಗಳ ಪಿತೃತ್ವ ರಜೆ ನೀಡಲಾಗುತ್ತದೆ.

ನಿವೃತ್ತಿ ಮತ್ತು ಮರಣೋತ್ತರ ಉಪದಾನ: ನಿವೃತ್ತರಾಗುವ ಅಥವಾ ಸೇವೆಯಲ್ಲಿರುವಾಗ ಮರಣ ಹೊಂದುವ ನೌಕರರಿಗೆ, ಅವರು ಸಲ್ಲಿಸಿದ ಪ್ರತಿ ವರ್ಷದ ಸೇವೆಗೆ 15 ದಿನಗಳ ವೇತನದಂತೆ ಲೆಕ್ಕಹಾಕಿ, ಗರಿಷ್ಠ 20 ತಿಂಗಳ ವೇತನದ ಮಿತಿಗೆ ಒಳಪಟ್ಟು ಉಪದಾನ (Gratuity) ನೀಡಲಾಗುತ್ತದೆ.

ಶವಸಂಸ್ಕಾರಕ್ಕೆ ಆರ್ಥಿಕ ನೆರವು: ನೌಕರರು ಸೇವೆಯಲ್ಲಿರುವಾಗಲೇ ಮೃತಪಟ್ಟರೆ, ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ಶವಸಂಸ್ಕಾರಕ್ಕಾಗಿ ಗ್ರಾಮ ಪಂಚಾಯಿತಿ ನಿಧಿಯಿಂದ ₹10,000 ಗಳನ್ನು ನೀಡಲಾಗುತ್ತದೆ.

ಅನುಕಂಪದ ಆಧಾರದ ನೌಕರಿ: ಸೇವೆಯಲ್ಲಿರುವಾಗ ಮರಣ ಹೊಂದುವ ನೌಕರರ ನ್ಯಾಯಬದ್ಧ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಕಲ್ಪಿಸಲು ಅವಕಾಶ ಕಲ್ಪಿಸಲಾಗಿದೆ.

ವಿಮೆ ಹಾಗೂ ವೈದ್ಯಕೀಯ ನೆರವು:

ಪ್ರಧಾನ ಮಂತ್ರಿ ಜೀವನ ಜ್ಯೋತಿ, ಪ್ರಧಾನ ಮಂತ್ರಿ ಸುರಕ್ಷಾ ಜ್ಯೋತಿ ಹಾಗೂ ಎಸ್ಬಿಐ ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿಗಳನ್ನು ಕಡ್ಡಾಯವಾಗಿ ಮಾಡಿಸಿ, ವೇತನ ಖಾತೆಗೆ ಲಿಂಕ್ ಮಾಡಲಾಗುತ್ತದೆ.

ಕ್ಯಾನ್ಸರ್, ಹೃದಯ ಶಸ್ತ್ರಚಿಕಿತ್ಸೆ, ಕಿಡ್ನಿ ಕಸಿಯಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ₹50,000 ವರೆಗೆ ವೈದ್ಯಕೀಯ ವೆಚ್ಚವನ್ನು ಭರಿಸಲು ಆದೇಶಿಸಲಾಗಿದೆ.

ಕೋವಿಡ್-19 ಕರ್ತವ್ಯದ ವೇಳೆ ಮೃತಪಟ್ಟರೆ ₹30 ಲಕ್ಷ ಪರಿಹಾರ ಹಾಗೂ ಕೋವಿಡ್ ಚಿಕಿತ್ಸಾ ವೆಚ್ಚವನ್ನು ಭರಿಸುವ ಸೌಲಭ್ಯವಿದೆ.

ಬಡ್ತಿ ಮತ್ತು ಮೀಸಲಾತಿ:

ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಮತ್ತು ಕ್ಲರ್ಕ್ ಹುದ್ದೆಗಳು ಖಾಲಿ ಇದ್ದಾಗ, ವಾಟರ್ ಆಪರೇಟರ್, ಅಟೆಂಡೆಂಟ್ ಹಾಗೂ ಕ್ಲೀನರ್ಸ್ಗಳಿಗೆ ಅವರ ಸೇವಾ ಜೇಷ್ಠತೆ ಮತ್ತು ಅರ್ಹತೆಯ ಆಧಾರದ ಮೇಲೆ ಬಡ್ತಿ ಹೊಂದಲು ಅವಕಾಶವಿದೆ.

ಗ್ರೇಡ್-2 ಕಾರ್ಯದರ್ಶಿ ಅಥವಾ ದ್ವಿತೀಯ ದರ್ಜೆ ಸಹಾಯಕರ (SDA) ನೇರ ನೇಮಕಾತಿಯಲ್ಲಿ, ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಹಾಗೂ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಗಳಿಗೆ ಶೇ. 50% ರಷ್ಟು ಮೀಸಲಾತಿ ನೀಡಲಾಗಿದೆ.

ಗಮನಿಸಬೇಕಾದ ಅಂಶ:
ಗ್ರಾಮ ಪಂಚಾಯಿತಿ ಸಿಬ್ಬಂದಿ ಸರ್ಕಾರಿ ನೌಕರರಲ್ಲದ ಕಾರಣ, ಅವರಿಗೆ ಸರ್ಕಾರಿ ನೌಕರರ ‘ಸಿ’ ಮತ್ತು ‘ಡಿ’ ದರ್ಜೆಯ ವೇತನ ಶ್ರೇಣಿಯನ್ನು ನೀಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು (ಸಂಖ್ಯೆ: ಗ್ರಾಅಪ 682 ಗ್ರಾಪಂಅ 2024) ಸ್ಪಷ್ಟಪಡಿಸಿದೆ.

allowances and various benefits Attention Gram Panchayat employees of the state: Here is the complete details of salaries
Share. Facebook Twitter LinkedIn WhatsApp Email

Related Posts

ಹಾಸನದ ಬೆಟ್ಟದ ಭೈರವೇಶ್ವರ ಸನ್ನಿಧಿಯಲ್ಲಿ ಪ್ರಿ-ವೆಡ್ಡಿಂಗ್ ಶೂಟ್ ಅತಿರೇಕ: ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ

30/03/2026 2:00 PM1 Min Read

BREAKING : ಗ್ರಾಹಕರ ಜೇಬಿಗೆ ಕತ್ತರಿ : ಯುದ್ಧದ ಪರಿಣಾಮದಿಂದ ನಂದಿನಿ ಉತ್ಪನ್ನಗಳ ದರ ಏರಿಕೆಗೆ ‘KMF’ ಚಿಂತನೆ?

30/03/2026 1:37 PM1 Min Read

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯಾವಳಿ ವೇಳೆ ಕಳ್ಳರ ಕೈಚಳಕ: 50ಕ್ಕೂ ಹೆಚ್ಚು ಮೊಬೈಲ್‌ಗಳು ಮಾಯ!

30/03/2026 1:15 PM2 Mins Read
Recent News

ಹಾಸನದ ಬೆಟ್ಟದ ಭೈರವೇಶ್ವರ ಸನ್ನಿಧಿಯಲ್ಲಿ ಪ್ರಿ-ವೆಡ್ಡಿಂಗ್ ಶೂಟ್ ಅತಿರೇಕ: ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ

30/03/2026 2:00 PM

‘ಲಿವರ್ ಸಮಸ್ಯೆ’ಗೆ ವಿಟಮಿನ್ ಬಿ3 ಸಂಜೀವಿನಿ: ಫ್ಯಾಟಿ ಲಿವರ್ ಹಾನಿ ತಡೆಯಲಿದೆ ಹೊಸ ಸಂಶೋಧನೆ!

30/03/2026 1:56 PM

ಏ.1ರಿಂದ ಡಿಜಿಟಲ್ ಪಾವತಿ ಬದಲಾಗಲಿದೆ: ಆರ್‌ಬಿಐನ ಹೊಸ ನಿಯಮಗಳ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ!

30/03/2026 1:45 PM

BREAKING : ಗ್ರಾಹಕರ ಜೇಬಿಗೆ ಕತ್ತರಿ : ಯುದ್ಧದ ಪರಿಣಾಮದಿಂದ ನಂದಿನಿ ಉತ್ಪನ್ನಗಳ ದರ ಏರಿಕೆಗೆ ‘KMF’ ಚಿಂತನೆ?

30/03/2026 1:37 PM
State News
KARNATAKA

ಹಾಸನದ ಬೆಟ್ಟದ ಭೈರವೇಶ್ವರ ಸನ್ನಿಧಿಯಲ್ಲಿ ಪ್ರಿ-ವೆಡ್ಡಿಂಗ್ ಶೂಟ್ ಅತಿರೇಕ: ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ

By kannadanewsnow0930/03/2026 2:00 PM KARNATAKA 1 Min Read

ಬೆಂಗಳೂರು: ಹಾಸನ ಜಿಲ್ಲೆಯ ಸಕಲೇಶಪುರದ ಐತಿಹಾಸಿಕ ಬೆಟ್ಟದ ಭೈರವೇಶ್ವರ ದೇವಾಲಯದ ಆವರಣದಲ್ಲಿ ನಡೆದ ಪ್ರಿ-ವೆಡ್ಡಿಂಗ್ ಫೋಟೋ ಶೂಟ್ ವೇಳೆ ಉಂಟಾದ…

BREAKING : ಗ್ರಾಹಕರ ಜೇಬಿಗೆ ಕತ್ತರಿ : ಯುದ್ಧದ ಪರಿಣಾಮದಿಂದ ನಂದಿನಿ ಉತ್ಪನ್ನಗಳ ದರ ಏರಿಕೆಗೆ ‘KMF’ ಚಿಂತನೆ?

30/03/2026 1:37 PM

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯಾವಳಿ ವೇಳೆ ಕಳ್ಳರ ಕೈಚಳಕ: 50ಕ್ಕೂ ಹೆಚ್ಚು ಮೊಬೈಲ್‌ಗಳು ಮಾಯ!

30/03/2026 1:15 PM

BIG NEWS : ತುಮಕೂರಲ್ಲಿ ಭೀಕರ ಅಪಘಾತ : ನಿಯಂತ್ರಣ ತಪ್ಪಿ ಬೈಕ್ ನಿಂದ ಬಿದ್ದು ಇಬ್ಬರು ಯುವಕರು ಸಾವು!

30/03/2026 1:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.