Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ |Lokayukta Raid

ಇರಾನ್ ಶಾಂತಿ ಒಪ್ಪಂದ: ಅಮೆರಿಕ ಪರವಾಗಿ ಸ್ವಿಟ್ಜರ್ಲೆಂಡ್‌ನಲ್ಲಿ ಸಹಿ ಹಾಕಲಿದ್ದಾರಾ ಟ್ರಂಪ್? ಕೊನೆಗೂ ಮೌನ ಮುರಿದ ಯುಎಸ್ ಅಧ್ಯಕ್ಷ

BREAKING : ‘UPSC’ ಪ್ರಿಲಿಮ್ಸ್ ಫಲಿತಾಂಶ ಪ್ರಕಟ :13,343 ಮಂದಿ ಅರ್ಹರು | UPSC prelims 2026 result

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರ ಮಾರಿ ಸಮಿತಿ ಚುನಾವಣೆಯಲ್ಲಿ ದಾಖಲೆಯ ಮತಗಳಿಂದ ಗೆದ್ದ ‘ಪುರುಷೋತ್ತಮ್’ಗೆ ಅಧ್ಯಕ್ಷ ಪಟ್ಟ?
KARNATAKA

ಸಾಗರ ಮಾರಿ ಸಮಿತಿ ಚುನಾವಣೆಯಲ್ಲಿ ದಾಖಲೆಯ ಮತಗಳಿಂದ ಗೆದ್ದ ‘ಪುರುಷೋತ್ತಮ್’ಗೆ ಅಧ್ಯಕ್ಷ ಪಟ್ಟ?

By ವಸಂತ ಬಿ ಈಶ್ವರಗೆರೆ

ಸಾಗರ: ಮಲೆನಾಡಿನ ಆರಾಧ್ಯ ದೈವ, ಸಾಗರದ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಬರೊಬ್ಬರಿ 20 ವರ್ಷಗಳ ಸುದೀರ್ಘ ಬಿಡುವಿನ ನಂತರ ನಡೆದ ಚುನಾವಣೆ ಹೊಸ ಇತಿಹಾಸ ಬರೆದಿದೆ. ಈ ಚುನಾವಣೆಯಲ್ಲಿ ಅತ್ಯಂತ ಗಮನಾರ್ಹ ಅಂಶವೆಂದರೆ, ಯುವ ಉದ್ಯಮಿ ಹಾಗೂ ಸಮಾಜ ಸೇವಕ ಪುರುಷೋತ್ತಮ್ (ಪುಚ್ಚಿ) ಅವರು ಬರೋಬ್ಬರಿ 205 ಮತಗಳ ಅಂತರದಿಂದ ಅತೀ ಹೆಚ್ಚು ಮತಗಳನ್ನು ಪಡೆದು ಪ್ರಚಂಡ ಗೆಲುವು ಸಾಧಿಸಿರುವುದು.

​ದಾಖಲೆಯ ಗೆಲುವು: ಬದಲಾವಣೆಯ ಗಾಳಿ?

​ಸುಮಾರು ಎರಡು ದಶಕಗಳ ಕಾಲ ಹಳೆಯ ಸಮಿತಿಯ ಮುಂದುವರಿಕೆಗೆ ಸಾಕ್ಷಿಯಾಗಿದ್ದ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಈ ಬಾರಿ ಚುನಾವಣೆ ನಡೆದದ್ದು ಭಕ್ತರಲ್ಲಿ ಹೊಸ ಸಂಚಲನ ಮೂಡಿಸಿತ್ತು. ಈ ಪೈಪೋಟಿಯ ನಡುವೆಯೂ ಪುರುಷೋತ್ತಮ್(ಪುಚ್ಚಿ) ಅವರು ಅತೀ ಹೆಚ್ಚು ಮತಗಳನ್ನು ಗಳಿಸುವ ಮೂಲಕ ತಮ್ಮ ಜನಪ್ರಿಯತೆಯನ್ನು ಸಾಬೀತುಪಡಿಸಿದ್ದಾರೆ. ಈ ಭರ್ಜರಿ ಗೆಲುವು ಸಾಗರದ ಮಾರಿಕಾಂಬಾ ಸಮಿತಿಯ ಸದಸ್ಯರು ಅವರ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ.

​ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿರುವ ಬಲವಾದ ಧ್ವನಿ

​ಗೆಲುವಿನ ಬೆನ್ನಲ್ಲೇ ಈಗ ಎಲ್ಲರ ಚಿತ್ತ “ಅಧ್ಯಕ್ಷರ ಪಟ್ಟ ಯಾರಿಗೆ?” ಎಂಬತ್ತ ನೆಟ್ಟಿದೆ. ಹಾಲಿ ಸಮಿತಿಯು ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕುವ ಮೂಲಕ ಆಡಳಿತದಲ್ಲಿ ಹೊಸತನ ತರಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಅತೀ ಹೆಚ್ಚು ಮತಗಳ ಅಂತರದಿಂದ ಗೆದ್ದಿರುವ ಪುರುಷೋತ್ತಮ್ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ಅವರ ಅಪಾರ ಅಭಿಮಾನಿಗಳ ಹಾಗೂ ಮತದಾರರ ಬಲವಾದ ಒತ್ತಾಯವಾಗಿದೆ.

​“ಸೇವೆಯೇ ಗುರಿಯಾಗಿಸಿಕೊಂಡಿರುವ ಪುರುಷೋತ್ತಮ್ ಅವರು ಸಮಿತಿಯ ಸಾರಥ್ಯ ವಹಿಸಿಕೊಂಡರೆ ದೇವಸ್ಥಾನದ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ” ಎಂಬುದು ಬೆಂಬಲಿಗರ ಆಶಯ.

​ಸೇವೆ ಮತ್ತು ಸಂಘಟನೆಯೇ ಇವರ ಶಕ್ತಿ

​ಪುರುಷೋತ್ತಮ್ ಕೇವಲ ಚುನಾವಣೆಯ ಕಾರಣಕ್ಕೆ ಮುನ್ನೆಲೆಗೆ ಬಂದವರಲ್ಲ. ಕಳೆದ ಹಲವು ವರ್ಷಗಳಿಂದ ಶ್ರೀ ಮಾರಿಕಾಂಬಾ ದೇವಿಯ ಸೇವೆಯಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡಿದ್ದಾರೆ.

  • ​ಧಾರ್ಮಿಕ ಮತ್ತು ಸಾಮಾಜಿಕ ಸೇವೆ: ದೇವಸ್ಥಾನದ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಇವರು ಸಕ್ರಿಯ.
  • ​ಉದ್ಯಮಿಯಾಗಿ ಯಶಸ್ಸು: ಯಶಸ್ವಿ ಉದ್ಯಮಿಯಾಗಿರುವ ಇವರು, ಹಾಲಿ ಸಮಿತಿಯ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಮತ್ತು ಸಮನ್ವಯತೆಯನ್ನು ಹೊಂದಿದ್ದಾರೆ.
  • ​ಸೌಮ್ಯ ಸ್ವಭಾವ: ಇವರ ಸೌಮ್ಯ ವ್ಯಕ್ತಿತ್ವ ಮತ್ತು ಎಲ್ಲರನ್ನೂ ಕೊಂಡೊಯ್ಯುವ ಗುಣವೇ ಇವರನ್ನು ‘ಜನಾನುರಾಗಿ’ಯನ್ನಾಗಿ ಮಾಡಿದೆ.

​ಮುಂದಿನ ಹಾದಿ ಸವಾಲಿನದೇ?

​ದಶಕಗಳ ನಂತರ ಹೊಸ ಸಮಿತಿ ಅಸ್ತಿತ್ವಕ್ಕೆ ಬರುತ್ತಿರುವುದರಿಂದ, ಸಾಗರದ ಇತಿಹಾಸ ಪ್ರಸಿದ್ಧ ಮಾರಿಕಾಂಬಾ ಜಾತ್ರೆ ಹಾಗೂ ದೇವಸ್ಥಾನದ ಆಡಳಿತವನ್ನು ಸುಸೂತ್ರವಾಗಿ ನಡೆಸುವ ಹೊಣೆಗಾರಿಕೆ ಗೆದ್ದವರ ಮೇಲಿದೆ. ಹಾಲಿ ಸಮಿತಿಯು ಹೊಸ ಮುಖಗಳಿಗೆ ಆದ್ಯತೆ ನೀಡಿ, ಅತೀ ಹೆಚ್ಚು ಮತದಾರರ ಪ್ರೀತಿ ಗಳಿಸಿರುವ ಪುರುಷೋತ್ತಮ್ ಅವರಿಗೆ ಅಧ್ಯಕ್ಷ ಪಟ್ಟ ನೀಡುತ್ತದೆಯೇ ಎಂಬ ಕುತೂಹಲ ಸಾಗರ ತಾಲ್ಲೂಕಿನಾದ್ಯಂತ ಮನೆಮಾಡಿದೆ.

​ಒಟ್ಟಿನಲ್ಲಿ, ಚುನಾವಣೆಯ ಫಲಿತಾಂಶವಂತೂ ಸ್ಪಷ್ಟವಾಗಿದೆ. ಜನರ ಒಲವು ಪುರುಷೋತ್ತಮ್ ಅವರ ಕಡೆಗಿದೆ. ಈಗ ಹಾಲಿ ಸಮಿತಿಯ ನಿರ್ಣಯ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಅದು ಮಾರ್ಚ್.29ರಂದು ನಿಗದಿ ಆಗಿರುವ ಅಧ್ಯಕ್ಷರ ಆಯ್ಕೆಯಲ್ಲಿ ಖಚಿತವಾಗಲಿದೆ. ಅಲ್ಲಿಯವರೆಗೆ ಯಾರು ಸಾಗರದ ಶ್ರೀ ಮಾರಿಕಾಂಬಾ ದೇವಿಯ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷರು ಅಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು….

Share. Facebook Twitter LinkedIn WhatsApp Email

Related Posts

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ |Lokayukta Raid

1 Min Read

LPG Gas Subsidy: `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ ಕೆಲಸ ಮಾಡದಿದ್ದರೆ ಸಬ್ಸಿಡಿ ಬಂದ್.!

2 Mins Read

ALERT : `ATM’ ಗ್ರಾಹಕರೇ ಎಚ್ಚರ: ಬ್ಯಾಂಕ್ ಖಾತೆ ಖಾಲಿ ಮಾಡಬಲ್ಲ 5 ವಂಚನೆಗಳ ಬಗ್ಗೆ ನೀವು ತಿಳಿಯಲೇಬೇಕು.!

3 Mins Read
Recent News

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ |Lokayukta Raid

ಇರಾನ್ ಶಾಂತಿ ಒಪ್ಪಂದ: ಅಮೆರಿಕ ಪರವಾಗಿ ಸ್ವಿಟ್ಜರ್ಲೆಂಡ್‌ನಲ್ಲಿ ಸಹಿ ಹಾಕಲಿದ್ದಾರಾ ಟ್ರಂಪ್? ಕೊನೆಗೂ ಮೌನ ಮುರಿದ ಯುಎಸ್ ಅಧ್ಯಕ್ಷ

BREAKING : ‘UPSC’ ಪ್ರಿಲಿಮ್ಸ್ ಫಲಿತಾಂಶ ಪ್ರಕಟ :13,343 ಮಂದಿ ಅರ್ಹರು | UPSC prelims 2026 result

​ರಾಮ ಮಂದಿರ ದೇಣಿಗೆ ವಿವಾದಕ್ಕೆ ಬಿಗ್ ಟ್ವಿಸ್ಟ್: ಕಣಕ್ಕಿಳಿದ ಎಸ್‌ಐಟಿ! ರಾಜಕೀಯ ಜಿದ್ದಾಜಿದ್ದಿ ತೀವ್ರ

State News
KARNATAKA

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ |Lokayukta Raid

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಬೇಟೆ ಮುಂದುವರಿದಿದೆ. ಇಂದು ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ವಿವಿಧೆಡೆ ಏಕಕಾಲದಲ್ಲಿ…

LPG Gas Subsidy: `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ ಕೆಲಸ ಮಾಡದಿದ್ದರೆ ಸಬ್ಸಿಡಿ ಬಂದ್.!

ALERT : `ATM’ ಗ್ರಾಹಕರೇ ಎಚ್ಚರ: ಬ್ಯಾಂಕ್ ಖಾತೆ ಖಾಲಿ ಮಾಡಬಲ್ಲ 5 ವಂಚನೆಗಳ ಬಗ್ಗೆ ನೀವು ತಿಳಿಯಲೇಬೇಕು.!

ರಾಜ್ಯದ ರೈತರೇ ಗಮನಿಸಿ: ಸಬ್ಸಿಡಿ ರಸಗೊಬ್ಬರಕ್ಕೆ ಹೆಚ್ಚು ಹಣ ಕೇಳಿದರೆ ತಕ್ಷಣ ದೂರು ನೀಡಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.