ಶಿವಮೊಗ್ಗ : ರಾಷ್ಟಿಯ ಜನಗಣತಿ ಮನೆಪಟ್ಟಿ ತಯಾರಿಸಲು ನೇಮಕ ಮಾಡಿಕೊಳ್ಳಲು ಉದ್ದೇಶಿಸಿರುವ ಕೆಲವು ಶಿಕ್ಷಕರನ್ನು ಕೈಬಿಡುವಂತೆ ಒತ್ತಾಯಿಸಿ ಗುರುವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಾಗರ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶ್, ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ರಾಷ್ಟಿಯ ಜನಗಣತಿಗೆ ಸಂಬAಧಿಸಿದAತೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಾಗ ಒಂದಷ್ಟು ನಿಯಮವನ್ನು ಪಾಲನೆ ಮಾಡಲು ಸಂಘ ಮನವಿ ಮಾಡುತ್ತದೆ. ನಿವೃತ್ತಿ ಅಂಚಿನಲ್ಲಿರುವ ೫೫ ವರ್ಷಕ್ಕೂ ಮೇಲ್ಪಟ್ಟವರು ತೀವೃ ಸ್ವರಪದ ಕಾಯಿಲೆ ಇದ್ದು ಅದಕ್ಕೆ ಚಿಕಿತ್ಸೆ ಪಡೆಯುತ್ತಿರುವವರನ್ನು ನೇಮಿಸದಂತೆ ಮನವಿ ಮಾಡಿದರು.
ಗರ್ಭೀಣಿ ಶಿಕ್ಷಕಿಯರನ್ನು, ಎರಡು ವರ್ಷದ ಮಕ್ಕಳನ್ನು ಹೊಂದಿರುವ, ಅಂಗವಿಕಲ ನೌಕರರು, ಅಂಗವಿಕಲ ಮಕ್ಕಳು ಇರುವ ಶಿಕ್ಷಕರನ್ನು ಜನಗಣತಿಯಿಂದ ಕೈಬಿಡಬೇಕು. ಇದರಿಂದ ಶಿಕ್ಷಕರಿಗೆ ಕುಟುಂಬದ ಜೊತೆ ಇರಲು ಅವಕಾಶವಾಗುತ್ತದೆ. ಬ್ಲಾಕ್ ವಿಂಗಡಣೆ ಮಾಡುವಾಗ ಅಯಾ ಕ್ಷಸ್ಟರ್ನ ಸಿ.ಆರ್.ಪಿ., ಇಸಿಓಗಳ ನೆರವಿನೊಂದಿಗೆ ಗಣತಿದಾರರಿಗೆ ಬ್ಲಾಕ್ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಗಣತಿಗೆ ಶಿಕ್ಷಕರ ಕೊರತೆ ನೀಗಿಸಲು ಪೌಢಶಾಲಾ ಶಿಕ್ಷಕರನ್ನು ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಶಿಕ್ಷಕರು ಗಣತಿ ಕಾರ್ಯದಲ್ಲಿ ಸಂತೋಷದಿoದ ತೊಡಗಿಸಿಕೊಳ್ಳಬೇಕೆ ವಿನಃ ಅವರನ್ನು ಒತ್ತಾಯಪೂರ್ವಕವಾಗಿ ತೊಡಗಿಕೊಳ್ಳಿ ಎಂದು ಆದೇಶ ನೀಡುವಂತೆ ಇರಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸೇಕು ಎಂದರು.
ಈ ವೇಳೆ ದಿನೇಶ್, ಎಂ.ಪಿ.ಸತ್ಯನಾರಾಯಣ, ರಾಜಶೇಖ್ ಶೆಟ್ಟಿ, ಶಾರದಾ, ಅಲ್ಲಾಭಕ್ಷಿ, ಗವಿಯಪ್ಪ ಎಲ್.ಟಿ., ವಿಕ್ಟೋರಿಯಾ ಫರ್ನಾಂಡಿಸಿ ಇನ್ನಿತರರು ಹಾಜರಿದ್ದರು.
ಸಾಗರದ ಅರಣ್ಯ ಇಲಾಖೆ ನೌಕರರ ನೂತನ ‘ಸಮುದಾಯ ಭವನ ವನಸಿರಿ’ಯನ್ನು ಸಿಸಿಎಫ್ ಡಾ.ಹನುಮಂತಪ್ಪ ಉದ್ಘಾಟನೆ
GOOD NEWS: ರಾಜ್ಯದ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್: 26ನೇ ಕಂತಿನ ಹಣ ಬಿಡುಗಡೆ, ಖಾತಿಗೆ ಜಮಾ








