ವಿಜಯಪುರ: ಪತ್ನಿಯನ್ನು ಕೊಂದು ಮನೆಯ ಆವರಣದಲ್ಲೇ ಪತಿಯೊಬ್ಬ ಶವ ಹೂತಿಟ್ಟ ಘಟನೆ ವಿಜಯಪುರದಲ್ಲಿ ನಡೆದಿದೆ. 24 ದಿನಗಳ ಬಳಿಕ ಪತಿಯ ಕೊಲೆ ರಹಸ್ಯವನ್ನು ಪೊಲೀಸರು ಬಯಲು ಮಾಡಿದ್ದಾರೆ.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟದಲ್ಲಿ ಈ ಘಟನೆ ನಡೆದಿದೆ. ಪತ್ನಿ ಸರೋಜಿನಿಯನ್ನು ಕೊಂದಿರುವಂತ ಪತಿ ಪ್ರಭು, ಮನೆಯ ಆವರಣದಲ್ಲೇ ಶವವನ್ನು ಹೂತಿಟ್ಟಿದ್ದಾನೆ. ಇದಕ್ಕೆ ಕಾರಣ ಪತ್ನಿ ಸರೋಜಿನಿ ಹೆಸರಿನಲ್ಲಿ ಪತಿ ಪ್ರಭು ಸಾಲ ಮಾಡಿದ್ದೇ ಕಾರಣ ಎನ್ನಲಾಗಿದೆ.
ಸಾಲದ ವಿಷಯವಾಗಿ ಪತಿ ಪ್ರಭು, ಪತ್ನಿ ಸರೋಜಿನಿ ನಡುವೆ ಆಗಾಗ ಜಗಳ ಕೂಡ ಆಗುತ್ತಿತ್ತು. ಇದೇ ಕಾರಣಕ್ಕೆ ಜನವರಿ.23ರಂದು ಇಬ್ಬರ ಮಧ್ಯೆ ಜಗಳ ಉಂಟಾಗಿತ್ತು. ಈ ವೇಳೆ ಪತ್ನಿ ಸರೋಜಿನಿ ತಲೆಗೆ ಪತಿ ಪ್ರಭು ರಾಡ್ ನಿಂದ ಹೊಡೆದಿದ್ದರು. ಈ ಹೊಡೆದ ಹೊಡೆತಕ್ಕೆ ಪತ್ನಿ ಸರೋಜಿನಿ ಸಾವನ್ನಪ್ಪಿದ್ದರು.
ಪತ್ನಿ ಸರೋಜಿನಿ(45) ರಾಡ್ ನಿಂದ ತೆಲೆಗೆ ಹೊಡೆದು ಕೊಂದಂತ ಪತಿ ಪ್ರಭು ರತ್ನಾಕರ, ತಮ್ಮ ಮನೆಯ ಆವರಣದಲ್ಲೇ ಗುಂಡಿ ತೆಗೆದು ಹೂತು ಹಾಕಿದ್ದನು. ತನಿಖೆಗೆ ಇಳಿದಂತ ಪೊಲೀಸರು ಕೊಲೆ ಮಾಡಿದ 24 ದಿನಗಳ ಬಳಿಕ ಪ್ರಭು ಕೊಲೆಯ ಹಿಂದಿನ ರಹಸ್ಯ ಬಯಲು ಮಾಡಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: 2026ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗೆ ಅರ್ಜಿ ಆಹ್ವಾನ
ಮದುವೆ ಮಂಟಪದವರು ವಧು-ವರರ ವಯಸ್ಸಿನ ದಾಖಲೆ ಪರಿಶೀಲಿಸಬೇಕೆಂಬ ನಿಯಮಗಳಿಲ್ಲ : ಹೈಕೋರ್ಟ್








