ವಿಜಯನಗರ: ಜಿಲ್ಲೆಯಲ್ಲಿ ತಂದೆ-ತಾಯಿ, ತಂಗಿ ಸೇರಿದಂತೆ ತ್ರಿವಳಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೂವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಆರೋಪಿ ಅಕ್ಷಯ್ ಕೊಲೆ ಮಾಡಿರೋದಾಗಿ ಬೆಳಕಿಗೆ ಬಂದಿದೆ.
ಮೊದಲು ತಾಯಿ ಜಯಲಕ್ಷ್ಮೀಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದಂತ ಪಾಪಿ ಪುತ್ರ ಅಕ್ಷಯ್, ಆ ಬಳಿಕ ಮನೆಯ ಕೊಠಡಿಯಲ್ಲಿ ತಾಯಿಯ ಶವ ಹಾಕಿದ್ದಾನೆ. ಆ ನಂತ್ರ ತಂಗಿಗೆ ಕರೆ ಮಾಡಿದಂತ ಪಾಪಿ ಅಕ್ಷಯ್, ನಿನಗೆ ಗಿಫ್ಟ್ ತಂದಿದ್ದೇನೆ. ಕೊಡುತ್ತೇನೆ ಬಾ ಅಂತ ಕರೆದಿದ್ದಾನೆ. ಮನೆಗೆ ಬಂದಂತ ತಂಗಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರೋದಾಗಿ ಹೇಳಲಾಗುತ್ತಿದೆ.
ತಂಗಿ, ತಾಯಿಯ ಮೃತದೇಹ ಕೊಠಡಿಯಲ್ಲಿ ಇರಿಸಿ, ಮನೆಯಲ್ಲಿ ಟಿವಿ ನೋಡುತ್ತಾ ಕುಳಿತಿದ್ದಂತ ತಂದೆಯನ್ನು ಕೊಲೆಗೈದು, ಮನೆಯ ಹಾಲ್ ನಲ್ಲೇ ಮೂರು ಮೃತದೇಹಗಳನ್ನು ಹೂತು ಹಾಕಿದ್ದನು ಆರೋಪಿ ಅಕ್ಷಯ್ ಎಂಬುದಾಗಿ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ವಿಜಯನಗರದ ಕೊಟ್ಟೂರಿನ ಎಲ್ ಬಿ ಬಡಾವಣೆಯಲ್ಲಿನ ಬಾಡಿಗೆ ಮನೆಯಲ್ಲಿ ಈ ಕೃತ್ಯವನ್ನು ಆರೋಪಿ ಅಕ್ಷಯ್ ಎಸಗಿದ್ದಾನೆ. ಜನವರಿ.27ರಂದು ತಂದೆ, ತಾಯಿ, ಸಹೋದರಿಯನ್ನು ಆರೋಪಿ ಅಕ್ಷಯ್ ಕೊಂದು ಹಾಕಿದ್ದಾನೆ.








