Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ತೂಗು ಸೇತುವೆ ಬಳಿಕ ‘ಸಿಗಂದೂರು ಜಾತ್ರೆ’ಗೆ ಸಜ್ಜಾದ ಶ್ರೀ ಚೌಡಮ್ಮನ ದೇವಾಲಯ: ಭಕ್ತ ಸಾಗರ ಬರುವ ನಿರೀಕ್ಷೆ

12/01/2026 8:56 PM

BREAKING: KEAಯಿಂದ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ನಡೆದ ನೇಮಕಾತಿ ಪರೀಕ್ಷೆಯ ಕೀ-ಉತ್ತರ ಪ್ರಕಟ | KEA Recruitment

12/01/2026 8:44 PM

BREAKING: ಬೆಂಗಳೂರಲ್ಲಿ ದಂತ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಆರು ಉಪನ್ಯಾಸಕರನ್ನು ಕೆಲಸದಿಂದ ವಜಾ

12/01/2026 8:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಸರ್ಕಾರದಿಂದ `ಅನರ್ಹ BPL ಕಾರ್ಡ್’ದಾರರಿಗೆ ಬಿಗ್ ಶಾಕ್ : ರಾಜ್ಯಾದ್ಯಂತ 7.76 ಲಕ್ಷ ರೇಷನ್ ಕಾರ್ಡ್ ರದ್ದು.!
KARNATAKA

BIG NEWS : ರಾಜ್ಯದ ಸರ್ಕಾರದಿಂದ `ಅನರ್ಹ BPL ಕಾರ್ಡ್’ದಾರರಿಗೆ ಬಿಗ್ ಶಾಕ್ : ರಾಜ್ಯಾದ್ಯಂತ 7.76 ಲಕ್ಷ ರೇಷನ್ ಕಾರ್ಡ್ ರದ್ದು.!

By kannadanewsnow5727/11/2025 5:58 AM

ಬೆಂಗಳೂರು : ಅನರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ರಾಜ್ಯಾದ್ಯಂತ ಆದ್ಯತಾ ಪಡಿತರ ಚೀಟಿಗಳನ್ನು (PHH) ಹೊಂದಿರುವ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಿ ನಿಯಮಾನುಸಾರ ಕ್ರಮಕೈಗೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (1)(2) ಮತ್ತು (3) ರಲ್ಲಿನ ಆದೇಶಗಳಲ್ಲಿ ಸಾರ್ವಜನಿಕ ವಿತರಣಾ ಪದ್ಧತಿಯಲ್ಲಿ ಆದ್ಯತೇತರ ಕುಟುಂಬಗಳನ್ನು ಗುರುತಿಸಲು ಹೊರಗಿಡುವ ಮಾನದಂಡಗಳನ್ನು (Exclusion criteria) ಹೊರಡಿಸಲಾಗಿದೆ. ಸದರಿ ಮಾನದಂಡಗಳಲ್ಲಿ ಸ್ಪಷ್ಟಿಕರಿಸಿರುವಂತೆ ಪಡಿತರ ಚೀಟಿಗಳನ್ನು ವಿತರಿಸಲಾಗುತ್ತಿದ್ದು, ಪ್ರಸ್ತುತ ಕೇಂದ್ರ ಸರ್ಕಾರವು ಎನ್ಎಫ್ಎಸ್ಎ ಮಿತಿಯನ್ನು 4,01,93,000ಕ್ಕೆ ನಿಗಧಿಪಡಿಸಿದೆ. ಆದಾಗ್ಯೂ ದಿನಾಂಕ:25.08.2025ಕ್ಕೆ ಇರುವಂತೆ ರಾಜ್ಯದಲ್ಲಿ ಒಟ್ಟು 4,54,00,838 ಪಡಿತರ ಫಲಾನುಭವಿಗಳಿದ್ದು ಕೇಂದ್ರ ಸರ್ಕಾರವು ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಫಲಾನುಭವಿಗಳಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (4)ರಲ್ಲಿನ ಆರ್ಥಿಕ ಇಲಾಖೆಯ ದಿನಾಂಕ:16.09.2023 ರ ಹಿಂಬರಹದಲ್ಲಿ ಈ ಕೆಳಕಂಡಂತೆ ಅಭಿಪ್ರಾಯಿಸಲಾಗಿದೆ.

“ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಹಣಕಾಸು ಇಲಾಖೆಯು ಅಸ್ತಿತ್ವದಲ್ಲಿರುವ 2.96 PHH ಅರ್ಜಿಗಳನ್ನು ಈ ಕೆಳಗಿನ ಷರತ್ತುಗಳಿಗೆ ಒಳಪಟ್ಟು ಪ್ರಕ್ರಿಯೆಗೊಳಿಸಲು ಸಮ್ಮತಿಸುತ್ತದೆ.

1. ಹೊಸ ಪಡಿತರ ಚೀಟಿಗಳಿಗಾಗಿ ಅಸ್ತಿತ್ವದಲ್ಲಿರುವ 2.96 ಲಕ್ಷ ಅರ್ಜಿಗಳ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಯಾವುದೇ ಹೊಸ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

2. ಹಣಕಾಸಿನ ನಿರ್ಬಂಧಗಳನ್ನು ಪರಿಗಣಿಸಿ, ಎಪಿಎಲ್ ಕಾರ್ಡ್ಗಳಿಗಾಗಿ ಯಾವುದೇ ಹೊಸ ಅಥವಾ ಅಸ್ತಿತ್ವದಲ್ಲಿರುವ ಅರ್ಜಿಗಳನ್ನು ಈಗ ಪ್ರಕ್ರಿಯೆಗೊಳಿಸಲು ಸಾಧ್ಯವಿಲ್ಲ.

3. ಈ 2.96 ಲಕ್ಷ ಅರ್ಜಿಗಳ ಪ್ರಕ್ರಿಯೆಯ ನಂತರವೂ ಒಟ್ಟಾರೆ PHH/AAY ಕಾರ್ಡ್ಗಳ ಸಂಖ್ಯೆ ರಾಜ್ಯ ಮಟ್ಟದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಸಂಖ್ಯೆಗಳನ್ನು ದಾಟಬಾರದು.

4. ಪ್ರಕ್ರಿಯೆ ಮುಗಿದ ನಂತರ, ADಯು NFSA ಮತ್ತು ರಾಜ್ಯ ವರ್ಗದ ಅಡಿಯಲ್ಲಿ PHH, NPHH ಮತ್ತು AAY ಕಾರ್ಡ್ಗಳ ಸಂಖ್ಯೆಯ ವಿವರಗಳನ್ನು FD ಗೆ ನೀಡಬೇಕು.

5. ಕಳೆದ ಆರು ತಿಂಗಳಿನಿಂದ ನಿರಂತರವಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸದ ಪಡಿತರ ಚೀಟಿಗಳನ್ನು ಅಮಾನತುಗೊಳಿಸಲು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕು. ಕಳೆದ ಆರು ತಿಂಗಳಿನಿಂದ ಪಡಿತರವನ್ನು ಪಡೆಯದ PHH ಪಡಿತರ ಚೀಟಿಗಳನ್ನು ಅಮಾನತುಗೊಳಿಸುವ ಪ್ರಕ್ರಿಯೆಯು 2.96 ಲಕ್ಷ ಅರ್ಜಿಗಳ ಪ್ರಕ್ರಿಯೆಯೊಂದಿಗೆ ಏಕಕಾಲದಲ್ಲಿ ಪ್ರಾರಂಭವಾಗಬೇಕು.

6. ಒಮ್ಮೆ ಅಮಾನತುಗೊಂಡ ನಂತರ, ಆ ಅಮಾನತುಗೊಂಡ ಪ್ರಕರಣಗಳನ್ನು ರದ್ದುಗೊಳಿಸಲು, ತಹಶೀಲ್ದಾರ್ ಅವರ ಸ್ಥಳ ಪರಿಶೀಲನೆ ಮತ್ತು ದಾಖಲೆ ಪರಿಶೀಲನೆಯ ಆಧಾರದ ಮೇಲೆ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಡಿಡಿ ಅನುಮೋದನೆಯ ನಂತರ ಮಾತ್ರ ಮಾಡಬಹುದು. ಅಮಾನತುಗೊಂಡ ಪ್ರಕರಣಗಳ ಮಾಹಿತಿ ಮತ್ತು ರದ್ದುಗೊಂಡ ಪ್ರಕರಣಗಳ ಸಂಖ್ಯೆಯನ್ನು ಎಫ್ಡಿ ಜೊತೆ ಹಂಚಿಕೊಳ್ಳಬೇಕು.

ಈ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯದಲ್ಲಿರುವ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಅನರ್ಹ ಪಡಿತರ ಚೀಟಿಗಳನ್ನು ಸಮರ್ಪಕವಾಗಿ ಪತ್ತೆ ಹಚ್ಚಿ ಸದರಿ ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಮಾರ್ಪಡಿಸಿದಲ್ಲಿ ಅಷ್ಟೇ ಪ್ರಮಾಣದ ಆದ್ಯತಾ ಪಡಿತರ ಚೀಟಿಗಳನ್ನು (PHH) ಬಡತನ ರೇಖೆಗಿಂತ ಕೆಳಗಿರುವ ಅರ್ಹ ನಾಗರಿಕರಿಗೆ ವಿತರಿಸಬಹುದಾಗಿದೆ. ಆದ್ದರಿಂದ ಅನರ್ಹ ಪಡಿತರ ಚೀಟಿಗಳನ್ನು ಪತ್ತೆಹಚ್ಚಿ ಸದರಿ ಅನರ್ಹ ಪಡಿತರ ಚೀಟಿಗಳನ್ನು ಆದ್ಯತೇತರ ಪಡಿತರ ಚೀಟಿಗಳನ್ನಾಗಿ (NPHH) ಪರಿವರ್ತಿಸುವುದು ಸಮಂಜಸವಾಗಿರುತ್ತದೆ.

ಕೇಂದ್ರ ಸರ್ಕಾರವು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ ಈ ಕೆಳಕಂಡ ಪಡಿತರ ಚೀಟಿಗಳನ್ನು ಅನರ್ಹ ಪಡಿತರ ಚೀಟಿಗಳೆಂದು ಗುರುತಿಸಿ ಮಾಹಿತಿಯನ್ನು ಹಂಚಿಕೊಂಡಿರುತ್ತದೆ. ವಿವರ ಈ ಕೆಳಕಂಡಂತಿದೆ.

BIG NEWS: Big shock for 'ineligible BPL card' holders from the state government: 7.76 lakh ration cards cancelled across the state!
Share. Facebook Twitter LinkedIn WhatsApp Email

Related Posts

ತೂಗು ಸೇತುವೆ ಬಳಿಕ ‘ಸಿಗಂದೂರು ಜಾತ್ರೆ’ಗೆ ಸಜ್ಜಾದ ಶ್ರೀ ಚೌಡಮ್ಮನ ದೇವಾಲಯ: ಭಕ್ತ ಸಾಗರ ಬರುವ ನಿರೀಕ್ಷೆ

12/01/2026 8:56 PM3 Mins Read

BREAKING: KEAಯಿಂದ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ನಡೆದ ನೇಮಕಾತಿ ಪರೀಕ್ಷೆಯ ಕೀ-ಉತ್ತರ ಪ್ರಕಟ | KEA Recruitment

12/01/2026 8:44 PM1 Min Read

BREAKING: ಬೆಂಗಳೂರಲ್ಲಿ ದಂತ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಆರು ಉಪನ್ಯಾಸಕರನ್ನು ಕೆಲಸದಿಂದ ವಜಾ

12/01/2026 8:06 PM1 Min Read
Recent News

ತೂಗು ಸೇತುವೆ ಬಳಿಕ ‘ಸಿಗಂದೂರು ಜಾತ್ರೆ’ಗೆ ಸಜ್ಜಾದ ಶ್ರೀ ಚೌಡಮ್ಮನ ದೇವಾಲಯ: ಭಕ್ತ ಸಾಗರ ಬರುವ ನಿರೀಕ್ಷೆ

12/01/2026 8:56 PM

BREAKING: KEAಯಿಂದ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ನಡೆದ ನೇಮಕಾತಿ ಪರೀಕ್ಷೆಯ ಕೀ-ಉತ್ತರ ಪ್ರಕಟ | KEA Recruitment

12/01/2026 8:44 PM

BREAKING: ಬೆಂಗಳೂರಲ್ಲಿ ದಂತ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಆರು ಉಪನ್ಯಾಸಕರನ್ನು ಕೆಲಸದಿಂದ ವಜಾ

12/01/2026 8:06 PM

ರಾಜ್ಯದ ರೈತರೇ ಗಮನಿಸಿ : `ಕೃಷಿ ಇಲಾಖೆ’ಯಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!

12/01/2026 8:00 PM
State News
KARNATAKA

ತೂಗು ಸೇತುವೆ ಬಳಿಕ ‘ಸಿಗಂದೂರು ಜಾತ್ರೆ’ಗೆ ಸಜ್ಜಾದ ಶ್ರೀ ಚೌಡಮ್ಮನ ದೇವಾಲಯ: ಭಕ್ತ ಸಾಗರ ಬರುವ ನಿರೀಕ್ಷೆ

By kannadanewsnow0912/01/2026 8:56 PM KARNATAKA 3 Mins Read

ಶಿವಮೊಗ್ಗ: ಪ್ರತಿ ವರ್ಷದಂತೆ ಈ ವರ್ಷವೂ ಮಕರ ಸಂಕ್ರಾಂತಿಯ ಸಿಗಂದೂರು ಜಾತ್ರೆಗೆ ಶ್ರೀ ಸಿಗಂದೂರು ಕ್ಷೇತ್ರ ಸಜ್ಜಾಗಿದೆ. ಮೊದಲ ಬಾರಿಗೆ…

BREAKING: KEAಯಿಂದ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ನಡೆದ ನೇಮಕಾತಿ ಪರೀಕ್ಷೆಯ ಕೀ-ಉತ್ತರ ಪ್ರಕಟ | KEA Recruitment

12/01/2026 8:44 PM

BREAKING: ಬೆಂಗಳೂರಲ್ಲಿ ದಂತ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಆರು ಉಪನ್ಯಾಸಕರನ್ನು ಕೆಲಸದಿಂದ ವಜಾ

12/01/2026 8:06 PM

ರಾಜ್ಯದ ರೈತರೇ ಗಮನಿಸಿ : `ಕೃಷಿ ಇಲಾಖೆ’ಯಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!

12/01/2026 8:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.