Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Childrens Day 2025 : ಇಂದು `ಮಕ್ಕಳ ದಿನಾಚರಣೆ’ : ಈ ದಿನದ ಇತಿಹಾಸ, ಥೀಮ್, ಮಹತ್ವ ತಿಳಿಯಿರಿ

14/11/2025 7:41 AM

ALERT : ರಕ್ತ ಸೋಂಕಿನ ಮೊದಲ ಲಕ್ಷಣಗಳು ಇವು : ತಡಮಾಡಿದರೆ ನಿಮ್ಮ ಅಂಗಾಂಗಗಳಿಗೆ ಹಾನಿ.!

14/11/2025 7:37 AM

ಭಾರತ ಮತ್ತು ನೇಪಾಳ ನಡುವೆ ರೈಲ್ವೆ ವ್ಯಾಪಾರ ಸಂಪರ್ಕ ವೃದ್ಧಿಗೆ ಒಪ್ಪಂದ

14/11/2025 7:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಜ್ವಲಿಸಿದ ಕಬ್ಬು ಬೆಳೆಗಾರರ ಕಿಚ್ಚು: ಬೆಳಗಾವಿಯಲ್ಲಿ 50ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳು ಸುಟ್ಟು ಭಸ್ಮ.!
KARNATAKA

BIG NEWS : ಜ್ವಲಿಸಿದ ಕಬ್ಬು ಬೆಳೆಗಾರರ ಕಿಚ್ಚು: ಬೆಳಗಾವಿಯಲ್ಲಿ 50ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳು ಸುಟ್ಟು ಭಸ್ಮ.!

By kannadanewsnow5714/11/2025 7:28 AM

ಬೆಳಗಾವಿ: ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಆಕ್ರೋಶದ ಕಿಚ್ಚು ಜ್ವಲಿಸಿದೆ. ರೂ.3,500 ಪ್ರತಿ ಟನ್ ಕಬ್ಬಿಗೆ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ನಡೆಸುತ್ತಿದ್ದಂತ ಹೋರಾಟ ತೀವ್ರ ಸ್ವರೂಪಕ್ಕೆ ತಿರುಗಿದೆ. ಸಕ್ಕರೆ ಕಾರ್ಖಾನೆಯ ಮುಂದೆ ನಿಲ್ಲಿಸಿದ್ದಂತ ಬೈಕ್, ಟ್ರ್ಯಾಕ್ಟರ್, ಟ್ರ್ಯಾಕ್ಟರ್ ಟ್ರಾಲಿ ಸೇರಿದಂತೆ 50 ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಬೆಳಗಾವಿ ಜಿಲ್ಲೆಯ ಮುಧೋಳದ ಸೈದಾಪುರದಲ್ಲಿ ಕಬ್ಬು ಬೆಳೆಗಾರರ ಆಕ್ರೋಶವು ಕಟ್ಟೆ ಹೊಡೆದಿದೆ. ಸೈದಾಪುರದ ಸಕ್ಕರೆ ಕಾರ್ಖಾನೆಯ ಬಳಿಯಲ್ಲಿ ನಿಲ್ಲಿಸಿದ್ದಂತ ವಾಹನಗಳಿಗೆ ಪ್ರತಿಭಟನಾ ನಿರತ ರೈತರು ಬೆಂಕಿ ಹಚ್ಚಿದ್ದಾರೆ. ಬೈಕ್, ಟ್ರ್ಯಾಕ್ಟರ್ ಗೆ ಇಟ್ಟಂತ ಬೆಂಕಿಯು ಕ್ಷಣಾರ್ಥದಲ್ಲಿ ಸಕ್ಕರೆ ಕಾರ್ಖಾನೆ ಮುಂದೆ ನಿಲ್ಲಿಸಿದ್ದಂತ ಟ್ರ್ಯಾಕ್ಟರ್ ಟ್ರಾಲಿಗಳಿಗೆ ತಗುಲಿದ ಪರಿಣಾಮ ಧಗಧಗಿಸಿ ಹೊತ್ತಿ  ಉರಿದಿವೆ.

ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ತಾಗುವಂತೆ ಉರಿದಿವೆ, 50ಕ್ಕೂ ಹೆಚ್ಚು ಟ್ರಾಲಿಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ.

ಬೆಳಗಾವಿಯ ಸೈದಾಪುರದಲ್ಲಿ ಸಕ್ಕರೆ ಕಾರ್ಖಾನೆ ಮುಂದೆ ನಿಲ್ಲಿಸಿದ್ದಂತ ಕಬ್ಬು ತುಂಬಿದ್ದಂತ ಟ್ರ್ಯಾಕ್ಟರ್ ಟ್ರಾಲಿಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಘಟನೆಯ ಬಗ್ಗೆ ತೀವ್ರ ಖೇದ ವ್ಯಕ್ತ ಪಡಿಸಿರುವಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ತನಿಖೆಗೆ ಆದೇಶಿಸಿದ್ದಾರೆ.

ಈ ಕುರಿತಂತೆ ಬೆಳಗಾವಿಯ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪುರ ಅವರಿಗೆ ದೂರವಾಣಿ ಕರೆ ಮಾಡಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಜೊತೆಗೆ ಅಧಿಕಾರಿಗಳೊಂದಿಗೂ ಮಾತನಾಡಿದಂತ ಅವರು, ಅವರಿಂದಲೂ ಮಾಹಿತಿಯನ್ನು ಪಡೆದರು.

ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು, ರೈತರು ತಮ್ಮ ಟ್ರ್ಯಾಕ್ಟರ್ ಗಳನ್ನೇ ಸುಡ್ತಾರಾ? ಸರ್ಕಾರ ಏನ್ಮಾಡಬೇಕು ಎಲ್ಲ ಮಾಡಿದೆ. ಯಾರದ್ದೋ ಮನಸ್ಸಿನಲ್ಲಿ ಅಸೂಯೆ ಇರಬೇಕು ಎಂದರು.

ರೈತರಾದವರು ಯಾರೂ ಕೂಡ ಈ ರೀತಿ ಮಾಡುವುದಿಲ್ಲ. ಇತಿಹಾಸದಲ್ಲೇ ಯಾವ ಸರ್ಕಾರ ಕೊಡದ ದರ ನಾವು ಕೊಟ್ಟಿದ್ದೇವೆ. ರಾಜ್ಯದಲ್ಲಿ ಇಡೀ ರೈತ ಸಂಕುಲ ತುಂಬಾ ಸಂತೋಷದಿಂದ ಇದೆ ಎಂದರು.

BIG NEWS: Sugarcane growers' anger ignites: More than 50 tractor trolleys burnt to ashes in Belgaum!
Share. Facebook Twitter LinkedIn WhatsApp Email

Related Posts

Childrens Day 2025 : ಇಂದು `ಮಕ್ಕಳ ದಿನಾಚರಣೆ’ : ಈ ದಿನದ ಇತಿಹಾಸ, ಥೀಮ್, ಮಹತ್ವ ತಿಳಿಯಿರಿ

14/11/2025 7:41 AM2 Mins Read

ALERT : ರಕ್ತ ಸೋಂಕಿನ ಮೊದಲ ಲಕ್ಷಣಗಳು ಇವು : ತಡಮಾಡಿದರೆ ನಿಮ್ಮ ಅಂಗಾಂಗಗಳಿಗೆ ಹಾನಿ.!

14/11/2025 7:37 AM1 Min Read

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ 310 ಪ್ರಾಂಶುಪಾಲರ ಹುದ್ದೆಗಳ ನೇರ ನೇಮಕಾತಿ : ಸರ್ಕಾರದಿಂದ ಮಹತ್ವದ ಆದೇಶ

14/11/2025 7:34 AM2 Mins Read
Recent News

Childrens Day 2025 : ಇಂದು `ಮಕ್ಕಳ ದಿನಾಚರಣೆ’ : ಈ ದಿನದ ಇತಿಹಾಸ, ಥೀಮ್, ಮಹತ್ವ ತಿಳಿಯಿರಿ

14/11/2025 7:41 AM

ALERT : ರಕ್ತ ಸೋಂಕಿನ ಮೊದಲ ಲಕ್ಷಣಗಳು ಇವು : ತಡಮಾಡಿದರೆ ನಿಮ್ಮ ಅಂಗಾಂಗಗಳಿಗೆ ಹಾನಿ.!

14/11/2025 7:37 AM

ಭಾರತ ಮತ್ತು ನೇಪಾಳ ನಡುವೆ ರೈಲ್ವೆ ವ್ಯಾಪಾರ ಸಂಪರ್ಕ ವೃದ್ಧಿಗೆ ಒಪ್ಪಂದ

14/11/2025 7:37 AM

GOOD NEWS : ದೇಶಾದ್ಯಂತ ಮತ್ತೆ 100 `ಸೈನಿಕ ಶಾಲೆ’ಗಳ ಸ್ಥಾಪನೆ : ಗೃಹ ಸಚಿವ ಅಮಿತ್ ಶಾ ಘೋಷಣೆ.!

14/11/2025 7:34 AM
State News
KARNATAKA

Childrens Day 2025 : ಇಂದು `ಮಕ್ಕಳ ದಿನಾಚರಣೆ’ : ಈ ದಿನದ ಇತಿಹಾಸ, ಥೀಮ್, ಮಹತ್ವ ತಿಳಿಯಿರಿ

By kannadanewsnow5714/11/2025 7:41 AM KARNATAKA 2 Mins Read

ಪ್ರತಿ ವರ್ಷದಂತೆ, ನವೆಂಬರ್ 14 ರಂದು ಭಾರತದಾದ್ಯಂತ ಮಕ್ಕಳ ದಿನವನ್ನು ಬಹಳ ಉತ್ಸಾಹ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತಿದೆ. ಈ ದಿನವು…

ALERT : ರಕ್ತ ಸೋಂಕಿನ ಮೊದಲ ಲಕ್ಷಣಗಳು ಇವು : ತಡಮಾಡಿದರೆ ನಿಮ್ಮ ಅಂಗಾಂಗಗಳಿಗೆ ಹಾನಿ.!

14/11/2025 7:37 AM

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ 310 ಪ್ರಾಂಶುಪಾಲರ ಹುದ್ದೆಗಳ ನೇರ ನೇಮಕಾತಿ : ಸರ್ಕಾರದಿಂದ ಮಹತ್ವದ ಆದೇಶ

14/11/2025 7:34 AM

BREAKING : ‘ರಾಜ್ಯ ಸರ್ಕಾರ’ದಿಂದ 2026 ನೇ ಸಾಲಿನ ‘ಸಾರ್ವತ್ರಿಕ ರಜೆ’ ದಿನಗಳ ಪಟ್ಟಿ ಬಿಡುಗಡೆ : ಇಲ್ಲಿದೆ ಸಂಪೂರ್ಣ ಮಾಹಿತಿ | Karnataka holiday

14/11/2025 7:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.