Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಶೀಘ್ರದಲ್ಲಿ ಚಿಕ್ಕೋಡಿ ತಾಲೂಕು ಜಿಲ್ಲೆಯಾಗಿ ರಚನೆ : ಸಚಿವ ಹೆಚ್.ಕೆ ಪಾಟೀಲ್ ಮುನ್ಸೂಚನೆ

21/12/2025 8:02 PM

ಈ ಹೋಟೆಲ್ ‘ನಾನ್ ವೆಜ್’ ಊಟದ ರುಚಿಗೆ 5*, 4*, 3* ಹೋಟೆಲ್ ಸರಿ ಸಾಟಿಯೇ ಇಲ್ಲ!

21/12/2025 7:49 PM

BIG NEWS : ಚಾಮರಾಜನಗರದಲ್ಲಿ ಭೀತಿ ಹುಟ್ಟಿಸಿದ್ದ ಹುಲಿಯನ್ನು ಕೊನೆಗು ಸೆರೆ ಹಿಡಿದ ಅರಣ್ಯ ಸಿಬ್ಬಂದಿ

21/12/2025 7:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಸಾಗರ ನಗರಸಭೆ ಪೌರಾಯುಕ್ತರ ಹುದ್ದೆಗೆ ‘ಹೆಚ್.ಕೆ ನಾಗಪ್ಪ’ ರಾಜೀನಾಮೆ: ಡಿಸಿಗೆ ಪತ್ರ
KARNATAKA

BREAKING: ಸಾಗರ ನಗರಸಭೆ ಪೌರಾಯುಕ್ತರ ಹುದ್ದೆಗೆ ‘ಹೆಚ್.ಕೆ ನಾಗಪ್ಪ’ ರಾಜೀನಾಮೆ: ಡಿಸಿಗೆ ಪತ್ರ

By kannadanewsnow0906/11/2025 9:19 AM

ಶಿವಮೊಗ್ಗ: ಬೀದಿ ಬದಿಯ ವ್ಯಾಪಾರಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ ನಿಂದಿಸಿದ ವೀಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೇ ಸಾಗರ ನಗರಸಭೆ ಪೌರಾಯುಕ್ತರ ಹುದ್ದೆಯಿಂದ ಮುಕ್ತಗೊಳಿಸುವಂತೆ ಡಿಸಿ ಅವರಿಗೆ ಪತ್ರದಲ್ಲಿ ಮನವಿ ಮಾಡಿರುವುದಾಗಿ ಹೇಳಲಾಗುತ್ತಿದೆ. 

ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದಂತ ಹೆಚ್.ಕೆ ನಾಗಪ್ಪ ಅವರು, ನವೆಂಬರ್.31, 2025ರಂದು ಕನ್ನಡ ರಾಜ್ಯೋತ್ಸವದ ಹಿಂದಿನ ದಿನದಂದು ಕೆಳದಿ ರಸ್ತೆಯಲ್ಲಿನ ಕೆಳದಿ ಚೆನ್ನಮ್ಮ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ನಡೆಸಲು ತಯಾರಿ ನಡೆಸಲಾಗಿತ್ತು.  ಈ ವೃತ್ತದಲ್ಲಿ ಸುಮಾರು 14 ಪೆಟ್ಟಿಗೆ ಅಂಗಡಿಗಳಿದ್ದವು. ನವೆಂಬರ್.1, 2025ರ ಕನ್ನಡ ರಾಜ್ಯೋತ್ಸವದಂದು ವಿದ್ಯಾರಣ್ಯ ಜೋತಿಯನ್ನು ಅದ್ಧೂರಿಯಾಗಿ ಸ್ವೀಕರಿಸುವಂತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದರು.

ಸಾಗರದ ಕೆಳದಿ ಚೆನ್ನಮ್ಮ ವೃತ್ತದಲ್ಲಿ ನವೆಂಬರ್.1ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದಂತ ಕಾರ್ಯಕ್ರಮಕ್ಕೆ ಅಲ್ಲಿದ್ದಂತ ಗೂಡಂಗಡಿಗಳು ಅಡ್ಡಿಯಾಗುತ್ತಿದ್ದವು. ಅವುಗಳನ್ನು ಒಂದು ದಿನದ ಮಟ್ಟಿಗೆ ತೆರವುಗೊಳಿಸಲು ಎರಡು ದಿನಗಳ ಹಿಂದೆಯೇ ಸೂಚಿಸಲಾಗಿತ್ತು. ಸುಮಾರು 13 ಅಂಗಡಿಗಳು ನಗರಸಭೆಯ ಸೂಚನೆಯ ಮೇರೆಗೆ ತೆರವುಗೊಳಿಸಿದ್ದರು. ಆದರೇ ಒಂದು ಅಂಗಡಿಯವರು ಮಾತ್ರ ತೆರವುಗೊಳಿಸಿರಲಿಲ್ಲ. ನಮ್ಮ ನಗರಸಭೆ ನೌಕರರ ವಿರುದ್ಧ ದೌರ್ಜನ್ಯ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ, ಸ್ಥಳಕ್ಕೆ ತೆರಳಿದ್ದೆನು. ಅವರು ತೆರವುಗೊಳಿಸೋದಕ್ಕೆ ಒಪ್ಪದಿದ್ದಾಗ ಆಯ್ತು ಇಟ್ಟುಕೊಳ್ಳಿ ಎಂಬುದಾಗಿ ತಿಳಿಸಿ ಬಂದಿದ್ದೆ ಎಂದರು.

ನಾನು ಬೀದಿ ಬದಿ ವ್ಯಾಪಾರಿಗಳಿಗೆ ನಿಂದಿಸಿಲ್ಲ

ಕೆಳದಿ ಚೆನ್ನಮ್ಮ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವೇದಿಕೆಯನ್ನು ಸಿದ್ಧಗೊಳಿಸಲಾಗುತ್ತಿತ್ತು. ಅವರಿಗೆ ಕೆಲವು ಸೂಚನೆಗಳನ್ನು ನೀಡಲಾಗಿತ್ತು. ಆದರೇ ಅವರಲ್ಲಿ ಸರಿಯಾಗಿ ಹೊಂದಾಣಿಕೆಯಾಗದೇ ಸೂಕ್ತ ರೀತಿಯಲ್ಲಿ ವೇದಿಕೆಯನ್ನು ಸಿದ್ಧಗೊಳಿಸಿರಲಿಲ್ಲ. ಹೀಗಾಗಿ ಕಾರ್ಯಕ್ರಮ ಮಾಡುತ್ತಿದ್ದಂತ ಸಂಘಟನೆಯ ಪ್ರದೀಪ್ ಎಂಬುವರಿಗೆ ನಾನು ಮಾತನಾಡಿದ್ದೇನೆ. ಅದರ ಹೊರತಾಗಿ ನಾನು ಯಾವುದೇ ಬೀದಿ ಬದಿಯ ವ್ಯಾಪಾರಿಗೆ ನಿಂದಿಸಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.

ನಾನೇ ಕಳೆದ ಕೆಲ ವರ್ಷಗಳಿಂದ ಬೀದಿ ಬದಿಯ ವ್ಯಾಪಾರಿಗಳ ಸಂಘದ ಅಧ್ಯಕ್ಷನಾಗಿದ್ದೇನೆ. ಅವರ ಕಷ್ಟ ಸುಖಗಳಿಗೆ ಹಲವು ವರ್ಷಗಳಿಂದ ಸ್ಪಂದಿಸಿದ್ದೇನೆ. ಹಲವು ಸಂದರ್ಭಗಳಲ್ಲಿ ನಾನು ಬೀದಿ ವ್ಯಾಪಾರಿಗಳಿಗೆ ನ್ಯಾಯ ಕೊಡಿಸಿದ್ದೇನೆ. ನಾನು ಯಾವುದೇ ಬೀದಿ ಬದಿಯ ವ್ಯಾಪಾರಿಗಳಿಗೆ ನಿಂದಿಸಿಲ್ಲ. ನಾನು ತಪ್ಪು ಮಾಡಿದ್ದರೇ ಕಾನೂನಿಗಿಂತ ದೊಡ್ಡವನೇನು ಅಲ್ಲ. ನನ್ನ ವಿರುದ್ಧ ದೂರು ನೀಡಲಾಗಿದೆ. ಕಾನೂನಾತ್ಮಕವಾಗಿ ಹೋರಾಡುತ್ತೇನೆ. ಇಂದಿನಿಂದ ಪೌರಾಯುಕ್ತರ ಹುದ್ದೆಯನ್ನು ಬೇರೆಯವರಿಗೆ ವಹಿಸಿಕೊಟ್ಟು, ನಾನು ಈ ಹಿಂದಿನ ಹುದ್ದೆಯಲ್ಲಿ ಮುಂದುವರೆಯುವುದಾಗಿ ತಿಳಿಸಿದರು.

ಸಾಗರ ನಗರಸಭೆ ಪೌರಾಯುಕ್ತರ ಹುದ್ದೆಗೆ ರಾಜೀನಾಮೆ

ಇನ್ನೂ ಅವಾಚ್ಯ ಶಬ್ದಗಳಿಂದ ಹೆಚ್.ಕೆ ನಾಗಪ್ಪ ಸಾರ್ವಜನಿಕವಾಗಿ ನಿಂದಿಸಿದ ವೀಡಿಯೋ ವೈರಲ್ ಆಗಿ, ದೊಡ್ಡಮಟ್ಟದ ಸುದ್ದಿಯಾಗಿತ್ತು.  ಈ ಹಿನ್ನಲೆಯಲ್ಲಿ ಸಾಗರ ನಗರಸಭೆಯ ಪೌರಾಯುಕ್ತರ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆ ಮೂಲಕ ಸಾಗರ ನಗರಸಭೆಯ ಪ್ರಭಾರ ಪೌರಾಯುಕ್ತರ ಹುದ್ದೆಯನ್ನು ಹೆಚ್.ಕೆ ನಾಗಪ್ಪ ತೊರೆದು, ಬೇರೆಯವರಿಗೆ ಅಧಿಕಾರ ವಹಿಸಿಕೊಟ್ಟು, ತಾವು ಈ ಹಿಂದಿನ ಎಇಇ ಹುದ್ದೆಯಲ್ಲೇ ಮುಂದುವರೆಯಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

Share. Facebook Twitter LinkedIn WhatsApp Email

Related Posts

BREAKING : ಶೀಘ್ರದಲ್ಲಿ ಚಿಕ್ಕೋಡಿ ತಾಲೂಕು ಜಿಲ್ಲೆಯಾಗಿ ರಚನೆ : ಸಚಿವ ಹೆಚ್.ಕೆ ಪಾಟೀಲ್ ಮುನ್ಸೂಚನೆ

21/12/2025 8:02 PM1 Min Read

ಈ ಹೋಟೆಲ್ ‘ನಾನ್ ವೆಜ್’ ಊಟದ ರುಚಿಗೆ 5*, 4*, 3* ಹೋಟೆಲ್ ಸರಿ ಸಾಟಿಯೇ ಇಲ್ಲ!

21/12/2025 7:49 PM2 Mins Read

BIG NEWS : ಚಾಮರಾಜನಗರದಲ್ಲಿ ಭೀತಿ ಹುಟ್ಟಿಸಿದ್ದ ಹುಲಿಯನ್ನು ಕೊನೆಗು ಸೆರೆ ಹಿಡಿದ ಅರಣ್ಯ ಸಿಬ್ಬಂದಿ

21/12/2025 7:43 PM1 Min Read
Recent News

BREAKING : ಶೀಘ್ರದಲ್ಲಿ ಚಿಕ್ಕೋಡಿ ತಾಲೂಕು ಜಿಲ್ಲೆಯಾಗಿ ರಚನೆ : ಸಚಿವ ಹೆಚ್.ಕೆ ಪಾಟೀಲ್ ಮುನ್ಸೂಚನೆ

21/12/2025 8:02 PM

ಈ ಹೋಟೆಲ್ ‘ನಾನ್ ವೆಜ್’ ಊಟದ ರುಚಿಗೆ 5*, 4*, 3* ಹೋಟೆಲ್ ಸರಿ ಸಾಟಿಯೇ ಇಲ್ಲ!

21/12/2025 7:49 PM

BIG NEWS : ಚಾಮರಾಜನಗರದಲ್ಲಿ ಭೀತಿ ಹುಟ್ಟಿಸಿದ್ದ ಹುಲಿಯನ್ನು ಕೊನೆಗು ಸೆರೆ ಹಿಡಿದ ಅರಣ್ಯ ಸಿಬ್ಬಂದಿ

21/12/2025 7:43 PM

ಹಾಲಿ ಶಿಕ್ಷಕರು ‘TET ಪರೀಕ್ಷೆ’ ಬರೆಯಬೇಕೆಂಬ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ: ಸಚಿವ ಮಧು ಬಂಗಾರಪ್ಪ

21/12/2025 7:35 PM
State News
KARNATAKA

BREAKING : ಶೀಘ್ರದಲ್ಲಿ ಚಿಕ್ಕೋಡಿ ತಾಲೂಕು ಜಿಲ್ಲೆಯಾಗಿ ರಚನೆ : ಸಚಿವ ಹೆಚ್.ಕೆ ಪಾಟೀಲ್ ಮುನ್ಸೂಚನೆ

By kannadanewsnow0521/12/2025 8:02 PM KARNATAKA 1 Min Read

ಬೆಳಗಾವಿ : ಚಿಕ್ಕೋಡಿ ಜಿಲ್ಲೆಯಾಗಲು ಬಹಳ ದಿನವಿಲ್ಲ. ಮುಂದಿನ ಹೆಜ್ಜೆಗಳನ್ನಿಡಲು ಬೇಗ ಪ್ರಕ್ರಿಯೆ ಆರಂಭ ಆಗಬಹುದು ಎಂದು ಕಾನೂನು ಸಚಿವ…

ಈ ಹೋಟೆಲ್ ‘ನಾನ್ ವೆಜ್’ ಊಟದ ರುಚಿಗೆ 5*, 4*, 3* ಹೋಟೆಲ್ ಸರಿ ಸಾಟಿಯೇ ಇಲ್ಲ!

21/12/2025 7:49 PM

BIG NEWS : ಚಾಮರಾಜನಗರದಲ್ಲಿ ಭೀತಿ ಹುಟ್ಟಿಸಿದ್ದ ಹುಲಿಯನ್ನು ಕೊನೆಗು ಸೆರೆ ಹಿಡಿದ ಅರಣ್ಯ ಸಿಬ್ಬಂದಿ

21/12/2025 7:43 PM

ಹಾಲಿ ಶಿಕ್ಷಕರು ‘TET ಪರೀಕ್ಷೆ’ ಬರೆಯಬೇಕೆಂಬ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ: ಸಚಿವ ಮಧು ಬಂಗಾರಪ್ಪ

21/12/2025 7:35 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.