Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಬೆಂಗಳೂರಲ್ಲಿ ಮಾರ್ಗಸೂಚಿ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ‘ವಸತಿ ಗೃಹ ಬಂದ್’

04/11/2025 5:55 PM

ಬಿಜೆಪಿ ಮುಖಂಡತ್ವ ರೈತರ ಪರವಾಗಿ ನಿಲ್ಲುವ ತೀರ್ಮಾನ ಮಾಡಿದೆ: ಛಲವಾದಿ ನಾರಾಯಣಸ್ವಾಮಿ

04/11/2025 5:49 PM

ಬಿಹಾರದಲ್ಲಿ ಬದಲಾವಣೆಗಾಗಿ ತೇಜಸ್ವಿ ಯಾದವ್ ಸಿಎಂ ಆಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

04/11/2025 5:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಿಜೆಪಿ ಮುಖಂಡತ್ವ ರೈತರ ಪರವಾಗಿ ನಿಲ್ಲುವ ತೀರ್ಮಾನ ಮಾಡಿದೆ: ಛಲವಾದಿ ನಾರಾಯಣಸ್ವಾಮಿ
KARNATAKA

ಬಿಜೆಪಿ ಮುಖಂಡತ್ವ ರೈತರ ಪರವಾಗಿ ನಿಲ್ಲುವ ತೀರ್ಮಾನ ಮಾಡಿದೆ: ಛಲವಾದಿ ನಾರಾಯಣಸ್ವಾಮಿ

By kannadanewsnow0904/11/2025 5:49 PM

ಬೆಂಗಳೂರು: ಸರಕಾರದ ಕೆಟ್ಟ ನಡೆಯನ್ನು ವಿರೋಧಿಸಲು ಇಡೀ ರಾಜ್ಯದಲ್ಲಿ ರೈತರು ಮುಂದಾಗಿದ್ದಾರೆ. ಬಿಜೆಪಿ ಮುಖಂಡತ್ವ ರೈತರ ಪರವಾಗಿ ನಿಲ್ಲುವ ತೀರ್ಮಾನ ಮಾಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಮೊದಲಿನಿಂದಲೂ ರೈತಪರ ನಿಲುವನ್ನು ತೆಗೆದುಕೊಂಡಿದೆ. ಕಾಂಗ್ರೆಸ್ಸಿನ ರೈತವಿರೋಧಿ ನೀತಿಯನ್ನು ಖಂಡಿಸುವುದಲ್ಲದೇ ವಿರೋಧಿಸುತ್ತೇವೆ ಎಂದು ತಿಳಿಸಿದರು. ಅತಿವೃಷ್ಟಿ ಆದಾಗ ಎಲ್ಲರಿಗಿಂತ ಮೊದಲು ನಾವೇ ಹೋಗಿದ್ದೇವೆ. ವಿಜಯೇಂದ್ರ, ನಾನು ಮತ್ತು ಅಶೋಕ್ ಅವರು ತೆರಳಿದ್ದೇವೆ ಎಂದು ಪ್ರಶ್ನೆಗೆ ಉತ್ತರವಾಗಿ ವಿವರಿಸಿದರು. ನಾವು ಹೋಗುವ ವರೆಗೆ ಸರಕಾರ ಎಚ್ಚತ್ತುಕೊಂಡಿರಲಿಲ್ಲ ಎಂದು ತಿಳಿಸಿದರು.

ನಾನು ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಅವರು ನಾಳೆ ಗುಂಡ್ಲುಪೇಟೆಗೆ ಹೋಗಲಿದ್ದೇವೆ ಎಂದರು. ಬೆಳಗಾವಿಯಲ್ಲಿ ಸರಕಾರ ತಕ್ಷಣ ಕಬ್ಬು ಬೆಳೆಗೆ ಬೆಲೆ ನಿಗದಿಪಡಿಸಬೇಕು. ಹಳೆಯ ಬಾಕಿ ಸಿಗದೇ ರೈತರು ಕಂಗಾಲಾಗಿದ್ದು, ಅದನ್ನು ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿದರು.

ನಮ್ಮ ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಈಗಾಗಲೇ ಬೆಳಗಾವಿಯಲ್ಲಿ ಬೀಡು ಬಿಟ್ಟಿದ್ದಾರೆ. ನಾಳೆ ಅವರ ಜನ್ಮ ದಿನಾಚರಣೆ ಇದೆ. ರೈತರ ಸಮಸ್ಯೆಗಿಂತ ನನ್ನ ಜನ್ಮ ದಿನಾಚರಣೆ ದೊಡ್ಡದಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ. ರೈತÀರ ಸಮಸ್ಯೆ ಪರಿಹಾರವೇ ಮುಖ್ಯ. ಅಂಥದ್ದೇನಾದರೂ ಆದರೆ, ಜನ್ಮ ದಿನಾಚರಣೆ ಮಾಡಿಕೊಳ್ಳದೇ ಇಲ್ಲೇ ಇರುವುದಾಗಿ ಹೇಳಿದ್ದಾರೆ. ಹಾಗೇನಾದರೂ ಆದರೆ ನಾನು ಮತ್ತು ಆರ್.ಅಶೋಕ್ ಅವರು ಗುಂಡ್ಲುಪೇಟೆ ಕಾರ್ಯಕ್ರಮ ಮುಗಿದ ತಕ್ಷಣ ನಾವು ಕೂಡ ಬೆಳಗಾವಿಗೆ ಹೋಗಲಿದ್ದೇವೆ ಎಂದರು.

ಕಾಂಗ್ರೆಸ್ಸಿನ ಬಹುಮತದ ಸರಕಾರವಿದ್ದರೂ ಬೀದಿನಾಟಕ..

ಕಾಂಗ್ರೆಸ್ಸಿಗೆ ಸಂಪೂರ್ಣ ಬಹುಮತವಿದ್ದರೂ ಈ ರೀತಿ ಬೀದಿನಾಟಕ ಮಾಡುತ್ತಿರುವುದೇಕೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಸಂಪೂರ್ಣ ಬಹುಮತ ಇದ್ದಾಗ ಜನರ ಸಮಸ್ಯೆ ಆಲಿಸಿ, ಪರಿಹಾರಕ್ಕೆ ಉತ್ತಮ ಅವಕಾಶ. ಆ ಕೆಲಸ ಮಾಡದೇ ಒಂದು ವರ್ಷದಿಂದ ಸಂಪುಟ ಪುನಾರಚನೆ ಮಾತನಾಡುತ್ತಿದ್ದಾರೆ; ಅಧಿಕಾರ ಹಸ್ತಾಂತರ, ನವೆಂಬರ್ ಕ್ರಾಂತಿ- ಇವೆಲ್ಲ ಏನು? ಈ ನಾಟಕ ಬಿಡಿ ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಬದಲಾವಣೆ ಅವರ ಇಷ್ಟ. ಏನಾದರೂ ಮಾಡಿ; ನಾವು ಅದನ್ನು ಕೇಳುತ್ತಿಲ್ಲ; ಸಂಪುಟ ಪುನಾರಚನೆಯನ್ನು ಹಬ್ಬದಂತೆ ಮಾಡದಿರಿ. ಅದು ಜನರಿಗೆ, ವಿಪಕ್ಷಕ್ಕೆ ಬೇಕಾಗಿಲ್ಲ. ನಮಗೆ ಬೇಕಾಗಿರುವುದು ಜನರ ಸಮಸ್ಯೆಗೆ ಪರಿಹಾರ ಎಂದು ತಿಳಿಸಿದರು. ಗುಂಡಿ ಮುಚ್ಚಲಾಗದೇ ಇವರು ಮೂರು- ನಾಲ್ಕು ವರ್ಷಗಳ ಹಿಂದೆ ಇದ್ದ ಸರಕಾರವನ್ನು ದೂಷಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ನಿಮ್ಮ ಸರಕಾರ ಬಂದ ಬಳಿಕ ಹಳ್ಳಗಳು ಬಿದ್ದಿವೆ. ಅದನ್ನು ಮುಚ್ಚಿರಿ ಎಂದು ಆಗ್ರಹಿಸಿದರು. ಅದನ್ನು ಬಿಟ್ಟು ಅಧಿಕಾರ ಹಸ್ತಾಂತರ, ಕ್ರಾಂತಿ ಎನ್ನುತ್ತೀರಿ. ಏನಿದೆಲ್ಲ ಎಂದು ಪ್ರಶ್ನಿಸಿದರು.

ಸಚಿವ ಸಂಪುಟದ ವಿರೋಧದ ನಡುವೆಯೂ ಕೃಷಿ ವಿಶ್ವವಿದ್ಯಾಲಯ ತಂದಿದ್ದೇನೆ: ಸಚಿವ ಎನ್.ಚಲುವರಾಯಸ್ವಾಮಿ

ಬಿಹಾರದಲ್ಲಿ ಬದಲಾವಣೆಗಾಗಿ ತೇಜಸ್ವಿ ಯಾದವ್ ಸಿಎಂ ಆಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

Share. Facebook Twitter LinkedIn WhatsApp Email

Related Posts

BIG NEWS: ಬೆಂಗಳೂರಲ್ಲಿ ಮಾರ್ಗಸೂಚಿ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ‘ವಸತಿ ಗೃಹ ಬಂದ್’

04/11/2025 5:55 PM2 Mins Read

ಬಿಹಾರದಲ್ಲಿ ಬದಲಾವಣೆಗಾಗಿ ತೇಜಸ್ವಿ ಯಾದವ್ ಸಿಎಂ ಆಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

04/11/2025 5:46 PM2 Mins Read

ಸಚಿವ ಸಂಪುಟದ ವಿರೋಧದ ನಡುವೆಯೂ ಕೃಷಿ ವಿಶ್ವವಿದ್ಯಾಲಯ ತಂದಿದ್ದೇನೆ: ಸಚಿವ ಎನ್.ಚಲುವರಾಯಸ್ವಾಮಿ

04/11/2025 5:42 PM2 Mins Read
Recent News

BIG NEWS: ಬೆಂಗಳೂರಲ್ಲಿ ಮಾರ್ಗಸೂಚಿ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ‘ವಸತಿ ಗೃಹ ಬಂದ್’

04/11/2025 5:55 PM

ಬಿಜೆಪಿ ಮುಖಂಡತ್ವ ರೈತರ ಪರವಾಗಿ ನಿಲ್ಲುವ ತೀರ್ಮಾನ ಮಾಡಿದೆ: ಛಲವಾದಿ ನಾರಾಯಣಸ್ವಾಮಿ

04/11/2025 5:49 PM

ಬಿಹಾರದಲ್ಲಿ ಬದಲಾವಣೆಗಾಗಿ ತೇಜಸ್ವಿ ಯಾದವ್ ಸಿಎಂ ಆಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

04/11/2025 5:46 PM

ಸಚಿವ ಸಂಪುಟದ ವಿರೋಧದ ನಡುವೆಯೂ ಕೃಷಿ ವಿಶ್ವವಿದ್ಯಾಲಯ ತಂದಿದ್ದೇನೆ: ಸಚಿವ ಎನ್.ಚಲುವರಾಯಸ್ವಾಮಿ

04/11/2025 5:42 PM
State News
KARNATAKA

BIG NEWS: ಬೆಂಗಳೂರಲ್ಲಿ ಮಾರ್ಗಸೂಚಿ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ‘ವಸತಿ ಗೃಹ ಬಂದ್’

By kannadanewsnow0904/11/2025 5:55 PM KARNATAKA 2 Mins Read

ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ರವರು ಇಂದು ಆರೋಗ್ಯ ವಿಭಾಗದ ಪ್ರಗತಿ…

ಬಿಜೆಪಿ ಮುಖಂಡತ್ವ ರೈತರ ಪರವಾಗಿ ನಿಲ್ಲುವ ತೀರ್ಮಾನ ಮಾಡಿದೆ: ಛಲವಾದಿ ನಾರಾಯಣಸ್ವಾಮಿ

04/11/2025 5:49 PM

ಬಿಹಾರದಲ್ಲಿ ಬದಲಾವಣೆಗಾಗಿ ತೇಜಸ್ವಿ ಯಾದವ್ ಸಿಎಂ ಆಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

04/11/2025 5:46 PM

ಸಚಿವ ಸಂಪುಟದ ವಿರೋಧದ ನಡುವೆಯೂ ಕೃಷಿ ವಿಶ್ವವಿದ್ಯಾಲಯ ತಂದಿದ್ದೇನೆ: ಸಚಿವ ಎನ್.ಚಲುವರಾಯಸ್ವಾಮಿ

04/11/2025 5:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.