Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಂಡ್ಯದಲ್ಲಿ ಹೈಟೆಕ್ ಆಟೋ ನಿಲ್ದಾಣ ಉದ್ಘಾಟಿದ ಕೇಂದ್ರ ಸಚಿವ HD ಕುಮಾರಸ್ವಾಮಿ

16/10/2025 11:52 AM

BREAKING : ರಾಜ್ಯದ ಸರ್ಕಾರಿ `ಶಾಲಾ ಮೈದಾನಗಳಲ್ಲಿ’ ಖಾಸಗಿ ಕಾರ್ಯಕ್ರಮಗಳು ನಿಷೇಧ : ಸರ್ಕಾರದಿಂದ ಅಧಿಕೃತ ಆದೇಶ

16/10/2025 11:51 AM

ಸಿಜೆಐ ಗವಾಯಿ ಮೇಲೆ ಶೂ ಎಸೆದ ಘಟನೆ ‘ನೈಸರ್ಗಿಕ ಅಂತ್ಯ’ ಕಾಣಲಿ: ಸುಪ್ರೀಂ ಕೋರ್ಟ್

16/10/2025 11:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದ ಸರ್ಕಾರಿ `ಶಾಲಾ ಮೈದಾನಗಳಲ್ಲಿ’ ಖಾಸಗಿ ಕಾರ್ಯಕ್ರಮಗಳು ನಿಷೇಧ : ಸರ್ಕಾರದಿಂದ ಅಧಿಕೃತ ಆದೇಶ
KARNATAKA

BREAKING : ರಾಜ್ಯದ ಸರ್ಕಾರಿ `ಶಾಲಾ ಮೈದಾನಗಳಲ್ಲಿ’ ಖಾಸಗಿ ಕಾರ್ಯಕ್ರಮಗಳು ನಿಷೇಧ : ಸರ್ಕಾರದಿಂದ ಅಧಿಕೃತ ಆದೇಶ

By kannadanewsnow5716/10/2025 11:51 AM

ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳ ಆವರಣ ಸೇರಿದಂತೆ ಸರ್ಕಾರಿ ಜಾಗಗಳಲ್ಲಿ ಆರ್.ಎಸ್.ಎಸ್. ಕಾರ್ಯ ಚಟುವಟಿಕೆ ನಿರ್ಬಂಧಿಸುವ ಕುರಿತಂತೆ ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಈ ನಡುವೆ ರಾಜ್ಯ ಸರ್ಕಾರಿ ಶಾಲಾ ಆವರಣದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ನಿಷೇಧ ಹೇರಿ ಈ ಹಿಂದೆಯೇ ಸರ್ಕಾರ ಆದೇಶ ಹೊರಡಿಸಿದೆ.

ಆರ್.ಎಸ್.ಎಸ್. ಮಾತ್ರವಲ್ಲ, ಬೇರೆ ಯಾವುದೇ ಸಂಘಟನೆಯೂ ಸರ್ಕಾರಿ ಶಾಲೆ ಅಥವಾ ಸಾರ್ವಜನಿಕ ಜಾಗದಲ್ಲಿ ಚಟುವಟಿಕೆ ನಡೆಸಬಾರದು. ತಮಿಳುನಾಡಿನಲ್ಲಿ ಇದನ್ನು ನಿಷೇಧ ಮಾಡಿದ್ದರೆ ಅಲ್ಲಿಯ ವಿಧಾನ ನೋಡಿಕೊಂಡು ವರದಿ ಪಡೆದು ರಾಜ್ಯದಲ್ಲಿಯೂ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ನಡುವೆ ಹಳೆಯ ಆದೇಶದ ಪ್ರತಿ ವೈರಲ್ ಆಗಿದ್ದು, ರಾಜ್ಯ ಸರ್ಕಾರದ ಆದೇಶ ಹೀಗಿದೆ : ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಮೈದಾನಗಳನ್ನು ಅನುಮತಿ ನೀಡುವ ಬಗ್ಗೆ 2013ರಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ, ಉಪನಿರ್ದೇಶಕರು (ಆಡಳಿತ), ಬೆಂಗಳೂರು ದಕ್ಷಿಣ ಜಿಲ್ಲೆ ಇವರು ಖಾಸಗಿ ಸಂಸ್ಥೆಗಳ ಮನವಿಯ ಮೇರಗೆ ಖಾಸಗಿ ಕಾರ್ಯಕ್ರಮಗಳಿಗೆ ಸರ್ಕಾರಿ ಪ್ರೌಢಶಾಲೆ, ಕೋಟೆ, ಚಾಮರಾಜಪೇಟೆ, ಬೆಂಗಳೂರು ಈ ಶಾಲೆಯ ಮೈದಾನದಲ್ಲಿ ನಡೆಸುವ ಬಗ್ಗೆ ಅನುಮತಿ ಕೋರಿರುತ್ತಾರೆ.
ಈ ಕುರಿತು ಪರಿಶೀಲಿಸಲಾಗಿ, ಶಾಲಾ ಆವರಣವು ಶಾಲೆಯಲ್ಲಿ ಮಕ್ಕಳಿಗೆ ದೈನಂದಿನ ಪಾಠಪ್ರವಚನಗಳೊಂದಿಗೆ ಪಠ್ಯತರ ಚಟುವಟಿಕೆಗಳು ಮತ್ತು ಆಟೋಟ ಕಾರ್ಯಕ್ರಮಗಳು, ಶಾರೀರಿಕ ಶಿಕ್ಷಣ ಹಾಗೂ ವ್ಯಾಯಾಮ ಮತ್ತಿತರ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸದ್ವಿವಿನಿಯೋಗವಾಗಬೇಕು.

ಆದ್ದರಿಂದ, ಶಾಲಾ ಮೈದಾನ / ಆವರಣವನ್ನು ಯಾವುದೇ ಸಂದರ್ಭದಲ್ಲಿ ಯಾವುದೇ ಕಾರಣಕ್ಕಾಗಲಿ ಶೈಕ್ಷಣಿಕೇತರ ಚಟುವಟಿಕೆಗಳಿಗೆ / ಉದ್ದೇಶಗಳಿಗೆ ಬಳಸಬಾರದಾಗಿ ಹಾಗೂ ಅನುಮತಿಯನ್ನು ನೀಡಬಾರದಾಗಿ ಸೂಚಿಸಿದೆ.

ಮುಂದುವರೆದು, ಈ ರೀತಿಯ ಖಾಸಗಿ/ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ಸಂಬಂದಿಸಿದಂತೆ ಶಾಲಾ ಮೈದಾನ/ಆವರಣವನ್ನು ಬಳಸಲು ಅನುಮತಿಗಾಗಿ ಈ ಕಛೇರಿಗೆ ಪ್ರಸ್ತಾವನೆಗಳು/ಮನವಿಗಳನ್ನು ಸಲ್ಲಿಸ ಬಾರದಾಗಿಯೂ ಸಹಾ ಸೂಚಿಸಿದೆ.

BREAKING: Private events banned on state government 'school grounds': Official order from government
Share. Facebook Twitter LinkedIn WhatsApp Email

Related Posts

ಮಂಡ್ಯದಲ್ಲಿ ಹೈಟೆಕ್ ಆಟೋ ನಿಲ್ದಾಣ ಉದ್ಘಾಟಿದ ಕೇಂದ್ರ ಸಚಿವ HD ಕುಮಾರಸ್ವಾಮಿ

16/10/2025 11:52 AM1 Min Read

ನಾನು ಕೈಗಾರಿಕಾ ಮಂತ್ರಿ ಅಷ್ಟೆ ಕೈಗಾರಿಕಾ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ : ಕೇಂದ್ರ ಸಚಿವ HD ಕುಮಾರಸ್ವಾಮಿ

16/10/2025 11:48 AM1 Min Read

BIG NEWS : ಕರ್ತವ್ಯಲೋಪ ಆರೋಪ ಹಿನ್ನೆಲೆ : ಹಾವೇರಿಯ ಇಬ್ಬರು ‘PDO’ ಅಧಿಕಾರಿಗಳು ಸಸ್ಪೆಂಡ್

16/10/2025 11:42 AM1 Min Read
Recent News

ಮಂಡ್ಯದಲ್ಲಿ ಹೈಟೆಕ್ ಆಟೋ ನಿಲ್ದಾಣ ಉದ್ಘಾಟಿದ ಕೇಂದ್ರ ಸಚಿವ HD ಕುಮಾರಸ್ವಾಮಿ

16/10/2025 11:52 AM

BREAKING : ರಾಜ್ಯದ ಸರ್ಕಾರಿ `ಶಾಲಾ ಮೈದಾನಗಳಲ್ಲಿ’ ಖಾಸಗಿ ಕಾರ್ಯಕ್ರಮಗಳು ನಿಷೇಧ : ಸರ್ಕಾರದಿಂದ ಅಧಿಕೃತ ಆದೇಶ

16/10/2025 11:51 AM

ಸಿಜೆಐ ಗವಾಯಿ ಮೇಲೆ ಶೂ ಎಸೆದ ಘಟನೆ ‘ನೈಸರ್ಗಿಕ ಅಂತ್ಯ’ ಕಾಣಲಿ: ಸುಪ್ರೀಂ ಕೋರ್ಟ್

16/10/2025 11:50 AM

ನಾನು ಕೈಗಾರಿಕಾ ಮಂತ್ರಿ ಅಷ್ಟೆ ಕೈಗಾರಿಕಾ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ : ಕೇಂದ್ರ ಸಚಿವ HD ಕುಮಾರಸ್ವಾಮಿ

16/10/2025 11:48 AM
State News
KARNATAKA

ಮಂಡ್ಯದಲ್ಲಿ ಹೈಟೆಕ್ ಆಟೋ ನಿಲ್ದಾಣ ಉದ್ಘಾಟಿದ ಕೇಂದ್ರ ಸಚಿವ HD ಕುಮಾರಸ್ವಾಮಿ

By kannadanewsnow0516/10/2025 11:52 AM KARNATAKA 1 Min Read

ಮಂಡ್ಯ : ಇಂದು ಮಂಡ್ಯ ಜಿಲ್ಲೆಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿದರು. ಈ ವೇಳೆ ಮಂಡ್ಯದ…

BREAKING : ರಾಜ್ಯದ ಸರ್ಕಾರಿ `ಶಾಲಾ ಮೈದಾನಗಳಲ್ಲಿ’ ಖಾಸಗಿ ಕಾರ್ಯಕ್ರಮಗಳು ನಿಷೇಧ : ಸರ್ಕಾರದಿಂದ ಅಧಿಕೃತ ಆದೇಶ

16/10/2025 11:51 AM

ನಾನು ಕೈಗಾರಿಕಾ ಮಂತ್ರಿ ಅಷ್ಟೆ ಕೈಗಾರಿಕಾ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ : ಕೇಂದ್ರ ಸಚಿವ HD ಕುಮಾರಸ್ವಾಮಿ

16/10/2025 11:48 AM

BIG NEWS : ಕರ್ತವ್ಯಲೋಪ ಆರೋಪ ಹಿನ್ನೆಲೆ : ಹಾವೇರಿಯ ಇಬ್ಬರು ‘PDO’ ಅಧಿಕಾರಿಗಳು ಸಸ್ಪೆಂಡ್

16/10/2025 11:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.