Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ನಂಜೇಗೌಡ ಶಾಸಕ ರದ್ದತಿಗೆ ಸುಪ್ರೀಂಕೋರ್ಟ್ ತಡೆ : ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಗೆ ಆದೇಶ

15/10/2025 5:42 AM

ರಾಜ್ಯ ಸರ್ಕಾರದಿಂದ `ಆಸ್ತಿ ಮಾಲೀಕರಿಗೆ’ ಗುಡ್ ನ್ಯೂಸ್ : ಇಂದು `ಬಿ-ಖಾತಾ’ಗಳಿಗೆ `ಎ’ ಖಾತಾ ವಿತರಣೆಗೆ ಚಾಲನೆ.!

15/10/2025 5:40 AM

BIG NEWS : `ಜಾತಿ ಗಣತಿ’ ಸಮೀಕ್ಷೆ ವೇಳೆ ಮೃತಪಟ್ಟ ಸರ್ಕಾರಿ ನೌಕರರ ಕುಟುಂಬಗಳಿಗೆ 20 ಲಕ್ಷ ಪರಿಹಾರ : ರಾಜ್ಯ ಸರ್ಕಾರ ಮಹತ್ವದ ಆದೇಶ

15/10/2025 5:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ಜಾತಿ ಗಣತಿ’ ಸಮೀಕ್ಷೆ ವೇಳೆ ಮೃತಪಟ್ಟ ಸರ್ಕಾರಿ ನೌಕರರ ಕುಟುಂಬಗಳಿಗೆ 20 ಲಕ್ಷ ಪರಿಹಾರ : ರಾಜ್ಯ ಸರ್ಕಾರ ಮಹತ್ವದ ಆದೇಶ
KARNATAKA

BIG NEWS : `ಜಾತಿ ಗಣತಿ’ ಸಮೀಕ್ಷೆ ವೇಳೆ ಮೃತಪಟ್ಟ ಸರ್ಕಾರಿ ನೌಕರರ ಕುಟುಂಬಗಳಿಗೆ 20 ಲಕ್ಷ ಪರಿಹಾರ : ರಾಜ್ಯ ಸರ್ಕಾರ ಮಹತ್ವದ ಆದೇಶ

By kannadanewsnow5715/10/2025 5:40 AM

ಬೆಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದ ಕರ್ತವ್ಯದ ವೇಳೆಯಲ್ಲಿ ಮರಣ ಹೊಂದಿದ ಸರ್ಕಾರಿ ನೌಕರರ ಅವಲಂಬಿತ ಕುಟುಂಬಗಳಿಗೆ ಪರಿಹಾರ ಧನ ಬಿಡುಗಡೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.  

ಉಲ್ಲೇಖ(1)ರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಆದೇಶದನ್ವಯ ರಾಜ್ಯಾದ್ಯಂತ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳಲು ಆದೇಶಿಸಲಾಗಿರುತ್ತದೆ.

ಅದರಂತೆ, ದಿನಾಂಕ:22.09.2025 ರಿಂದ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ಶಿಕ್ಷಕರ ಸೇವೆಯನ್ನು ಬಳಸಿಕೊಂಡು ಕೈಗೊಳ್ಳಲಾಗಿರುತ್ತದೆ.

ಉಲ್ಲೇಖ(2) ರಲ್ಲಿ ಜಿಲ್ಲಾಧಿಕಾರಿಗಳು, ಬಾಗಲಕೋಟೆ ಜಿಲ್ಲೆ ಇವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಸಮೀಕ್ಷಾದಾರರಾಗಿ ಪಾಲ್ಗೊಂಡಿದ್ದ ಶ್ರೀಮತಿ ದಾನಮ್ಮ ಐ ನಂದರಗಿ, ಸಹ ಶಿಕ್ಷಕಿ ಇವರು ಸಮೀಕ್ಷಾ ಕಾರ್ಯ ಮುಗಿಸಿಕೊಂಡು ಕರ್ತವ್ಯದಿಂದ ಹಿಂದಿರುಗುವಾಗ ದಿನಾಂಕ:03.10.2025 ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ. ಸದರಿ ನೌಕರರ ಅವಲಂಬಿತ ಕುಟುಂಬಕ್ಕೆ ಪರಿಹಾರ ಧನ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಿ ಕೋರಿರುತ್ತಾರೆ.

ಉಲ್ಲೇಖ(2) ರಲ್ಲಿ ಜಿಲ್ಲಾಧಿಕಾರಿಗಳು, ಚಿಕ್ಕಬಳ್ಳಾಪುರ ಜಿಲ್ಲೆ ಇವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಸಮೀಕ್ಷಾದಾರರಾಗಿ ಪಾಲ್ಗೊಂಡಿದ್ದ ಶ್ರೀ ವೈ.ವಿ ರಾಮಕೃಷ್ಣಪ್ಪ, ಸಹ ಶಿಕ್ಷಕರು ಇವರು ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ದಿನಾಂಕ:28.09.2025 ರಂದು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಉಲ್ಲೇಖ(4) ರಲ್ಲಿ ನಡೆದ ಸಭೆಯ ತೀರ್ಮಾನದಂತೆ ಮಾನ್ಯ ಮುಖ್ಯಮಂತ್ರಿಗಳು ಪತ್ರಿಕಾ ಗೋಷ್ಟಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕರ್ತವ್ಯದ ವೇಳೆಯಲ್ಲಿ ಮೃತರಾದ ಸರ್ಕಾರಿ ನೌಕರರಿಗೆ ತಲಾ ರೂ.20.00 ಲಕ್ಷ ಪರಿಹಾರ ಧನ ನೀಡುವುದಾಗಿ ಘೋಷಿಸಿರುತ್ತಾರೆ. ಅದರಂತೆ, ಉಲ್ಲೇಖ(5) ನಡೆದ ಸಭೆಯಲ್ಲಿ ಕರ್ತವ್ಯದ ವೇಳೆಯಲ್ಲಿ ಮೃತರಾದ ಇಬ್ಬರು ಸರ್ಕಾರಿ ನೌಕರರ ಅವಲಂಬಿತ ಕುಟುಂಬಗಳಿಗೆ ತಲಾ ರೂ.20.00 ಲಕ್ಷ ದಂತೆ ಪರಿಹಾರ ಧನ ನೀಡಲು ತೀರ್ಮಾನಿಸಲಾಗಿರುತ್ತದೆ. ಅದರಂತೆ ಒಟ್ಟು ರೂ.40.00 ಲಕ್ಷಗಳನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಗಳಿಗೆ ಬಿಡುಗಡೆ ಮಾಡಬೇಕಾಗಿರುತ್ತದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯದಲ್ಲಿ ಪಾಲ್ಗೊಂಡು ಕರ್ತವ್ಯದ ವೇಳೆಯಲ್ಲಿ ಮೃತರಾದ ಸರ್ಕಾರಿ ನೌಕರರಾದ ಶ್ರೀಮತಿ ದಾನಮ್ಮ ಐ ನಂದರಗಿ, ಸಹ ಶಿಕ್ಷಕಿ ಮತ್ತು ಶ್ರೀ ವೈ.ವಿ ರಾಮಕೃಷ್ಣಪ್ಪ, ಸಹ ಶಿಕ್ಷಕರು ಇವರ ಅವಲಂಬಿತ ಕುಟುಂಬಗಳಿಗೆ ವಿತರಿಸಲು ಪರಿಹಾರ ಧನವಾಗಿ ತಲಾ ರೂ.20.00 ಲಕ್ಷ(ರೂಪಾಯಿ ಇಪ್ಪತ್ತು ಲಕ್ಷ)ಗಳಂತೆ ಒಟ್ಟು ರೂ.40.00ಲಕ್ಷ(ರೂಪಾಯಿ ನಲವತ್ತು ಲಕ್ಷಗಳು) ಗಳನ್ನು ಈ ಕೆಳಗಿನ ಜಿಲ್ಲಾಧಿಕಾರಗಳ ಪಿ.ಡಿ ಖಾತೆಗಳಿಗೆ ಬಿಡುಗಡೆ ಮಾಡಿ ಆದೇಶಿಸಿದೆ.

BIG NEWS: Rs 20 lakh compensation for families of government employees who died during caste census survey: State government orders important order
Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರದಿಂದ `ಆಸ್ತಿ ಮಾಲೀಕರಿಗೆ’ ಗುಡ್ ನ್ಯೂಸ್ : ಇಂದು `ಬಿ-ಖಾತಾ’ಗಳಿಗೆ `ಎ’ ಖಾತಾ ವಿತರಣೆಗೆ ಚಾಲನೆ.!

15/10/2025 5:40 AM1 Min Read

ಶಿವಮೊಗ್ಗದಲ್ಲಿ ಗಣತಿಗೆ ತೆರಳಿದ್ದಾಗ ನಾಯಿ ದಾಳಿ : ಕಾಲಿನಲ್ಲಿ ರಕ್ತ ಬಂದರೂ ಗಣತಿ ಮುಗಿಸಿದ ಶಿಕ್ಷಕಿಗೆ ಎಲ್ಲೆಡೆ ಮೆಚ್ಚುಗೆ!

15/10/2025 5:37 AM1 Min Read

ಮತ್ತೊಂದು ದಾಖಲೆ ಬರೆದ ‘ಶಕ್ತಿ ಯೋಜನೆ’ : `ಲಂಡನ್ ಬುಕ್ ಆಫ್ ರೆಕಾರ್ಡ್ಸ್‌’ ಗೆ ಸೇರ್ಪಡೆ

15/10/2025 5:32 AM1 Min Read
Recent News

BIG NEWS : ನಂಜೇಗೌಡ ಶಾಸಕ ರದ್ದತಿಗೆ ಸುಪ್ರೀಂಕೋರ್ಟ್ ತಡೆ : ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಗೆ ಆದೇಶ

15/10/2025 5:42 AM

ರಾಜ್ಯ ಸರ್ಕಾರದಿಂದ `ಆಸ್ತಿ ಮಾಲೀಕರಿಗೆ’ ಗುಡ್ ನ್ಯೂಸ್ : ಇಂದು `ಬಿ-ಖಾತಾ’ಗಳಿಗೆ `ಎ’ ಖಾತಾ ವಿತರಣೆಗೆ ಚಾಲನೆ.!

15/10/2025 5:40 AM

BIG NEWS : `ಜಾತಿ ಗಣತಿ’ ಸಮೀಕ್ಷೆ ವೇಳೆ ಮೃತಪಟ್ಟ ಸರ್ಕಾರಿ ನೌಕರರ ಕುಟುಂಬಗಳಿಗೆ 20 ಲಕ್ಷ ಪರಿಹಾರ : ರಾಜ್ಯ ಸರ್ಕಾರ ಮಹತ್ವದ ಆದೇಶ

15/10/2025 5:40 AM

ಶಿವಮೊಗ್ಗದಲ್ಲಿ ಗಣತಿಗೆ ತೆರಳಿದ್ದಾಗ ನಾಯಿ ದಾಳಿ : ಕಾಲಿನಲ್ಲಿ ರಕ್ತ ಬಂದರೂ ಗಣತಿ ಮುಗಿಸಿದ ಶಿಕ್ಷಕಿಗೆ ಎಲ್ಲೆಡೆ ಮೆಚ್ಚುಗೆ!

15/10/2025 5:37 AM
State News
KARNATAKA

ರಾಜ್ಯ ಸರ್ಕಾರದಿಂದ `ಆಸ್ತಿ ಮಾಲೀಕರಿಗೆ’ ಗುಡ್ ನ್ಯೂಸ್ : ಇಂದು `ಬಿ-ಖಾತಾ’ಗಳಿಗೆ `ಎ’ ಖಾತಾ ವಿತರಣೆಗೆ ಚಾಲನೆ.!

By kannadanewsnow5715/10/2025 5:40 AM KARNATAKA 1 Min Read

ಬೆಂಗಳೂರು : ರಾಜ್ಯ ಸರ್ಕಾರವು ಆಸ್ತಿ ಮಾಲೀಕರಿಗೆ ಸಿಹಿಸುದ್ದಿ ನೀಡಿದ್ದು, ಬೆಂಗಳೂರು ನಗರದ ಬಿ-ಖಾತಾ ಮಾಲೀಕರಿಗೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ…

BIG NEWS : `ಜಾತಿ ಗಣತಿ’ ಸಮೀಕ್ಷೆ ವೇಳೆ ಮೃತಪಟ್ಟ ಸರ್ಕಾರಿ ನೌಕರರ ಕುಟುಂಬಗಳಿಗೆ 20 ಲಕ್ಷ ಪರಿಹಾರ : ರಾಜ್ಯ ಸರ್ಕಾರ ಮಹತ್ವದ ಆದೇಶ

15/10/2025 5:40 AM

ಶಿವಮೊಗ್ಗದಲ್ಲಿ ಗಣತಿಗೆ ತೆರಳಿದ್ದಾಗ ನಾಯಿ ದಾಳಿ : ಕಾಲಿನಲ್ಲಿ ರಕ್ತ ಬಂದರೂ ಗಣತಿ ಮುಗಿಸಿದ ಶಿಕ್ಷಕಿಗೆ ಎಲ್ಲೆಡೆ ಮೆಚ್ಚುಗೆ!

15/10/2025 5:37 AM

ಮತ್ತೊಂದು ದಾಖಲೆ ಬರೆದ ‘ಶಕ್ತಿ ಯೋಜನೆ’ : `ಲಂಡನ್ ಬುಕ್ ಆಫ್ ರೆಕಾರ್ಡ್ಸ್‌’ ಗೆ ಸೇರ್ಪಡೆ

15/10/2025 5:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.