Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾನೂನಿಗೂ ಡೋಂಟ್‌ ಕೇರ್‌: ಇನ್ನೂ ಕನ್ನಡದಲ್ಲಿ ಬರ್ತಾ ಇದೇ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು

18/03/2026 6:12 PM

BREAKING : ಹೋಟೆಲ್ ಮಾಲೀಕರಿಗೆ ಬಿಗ್ ರಿಲೀಫ್ ; ‘ವಾಣಿಜ್ಯ LPG’ಯಲ್ಲಿ ರಾಜ್ಯಗಳಿಗೆ ಶೇ.10ರಷ್ಟು ಹೆಚ್ಚುವರಿ ಕೋಟಾ!

18/03/2026 6:04 PM

ಭಾರತದಲ್ಲಿ ಕೈಗಾರಿಕಾ ಅಭಿವೃದ್ಧಿ ವೇಗಕ್ಕಾಗಿ 33,660 ಕೋಟಿ ಭವ್ಯ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ

18/03/2026 5:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬೇಡವೆಂದು ಮನೆಯಿಂದಲೇ ಪ್ರತಿಭಟನೆ ಧ್ವನಿ ಬರಬೇಕು: ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್
KARNATAKA

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬೇಡವೆಂದು ಮನೆಯಿಂದಲೇ ಪ್ರತಿಭಟನೆ ಧ್ವನಿ ಬರಬೇಕು: ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್

By kannadanewsnow0913/10/2025 5:51 PM

ಶಿವಮೊಗ್ಗ : ಶರಾವತಿ ಪಂಪ್ಡ್ ಸ್ಟೋರೇಜ್ ಆಘಾತಕಾರಿ ಯೋಜನೆ. ಇದರ ಶವ ದಹನವಾಗಲೇಬೇಕು. ಯೋಜನೆ ಬೇಡ ಎಂದು ಪ್ರತಿಯೊಂದು ಮನೆಯಿಂದಲೂ ಪ್ರತಿಭಟನೆ ಧ್ವನಿ ಬರಬೇಕು ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಕರೆ ನೀಡಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಸೋಮವಾರ ಶಿವಮೊಗ್ಗ ಜಿಲ್ಲಾ ರೈತ ಸಂಘ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಹಮ್ಮಿಕೊಂಡಿರುವ 10ನೇ ದಿನದ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ಸುರಂಗ ಮಾರ್ಗ ತೋಡಿ ಯೋಜನೆ ಅನುಷ್ಟಾನಕ್ಕೆ ತಂದರೆ ಪರಿಸರದ ಮೇಲಾಗುವ ದುಷ್ಟರಿಣಾಮದ ಬಗ್ಗೆ ಸರ್ಕಾರ ಯೋಜನೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ವಿದ್ಯುತ್ ದೊಡ್ಡದೋ, ಮನುಷ್ಯ, ಜೀವವೈವಿಧ್ಯದ ಬದುಕು ದೊಡ್ಡದೋ ಎನ್ನುವುದನ್ನು ಸರ್ಕಾರ ಮೊದಲು ನಿರ್ಧಾರ ಕೈಗೊಳ್ಳಬೇಕು. ಸಸ್ಯ ಸಂಪತ್ತು, ಪ್ರಾಣಿ ಪಕ್ಷಿ ಸಂಕುಲ. ಮನುಷ್ಯ ಬದುಕು ನಾಶ ಮಾಡುವ ಯೋಜನೆ ನಮಗೆ ಬೇಡ. ಪಶ್ಚಿಮಘಟ್ಟ ಇಷ್ಟು ದೊಡ್ಡ ಯೋಜನೆಯನ್ನು ಹೊರುವ ಶಕ್ತಿ ಹೊಂದಿಲ್ಲ. ಈ ನಿಟ್ಟಿನಲ್ಲಿ ರೈತ ಸಂಘ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಸಮಯೋಚಿತವಾಗಿದೆ. ಎಲ್ಲರೂ ಹೋರಾಟಕ್ಕೆ ಬೆಂಬಲ ನೀಡಬೇಕು. ಸ್ಥಳೀಯ ಶಾಸಕರು, ಸಂಸದರು ಯೋಜನೆ ವಿರೋಧಿಸಬೇಕು. ಯೋಜನೆ ವಿರೋಧಿಸುವಾಗ ಪಕ್ಷಪಾರ್ಟಿ ನೋಡಬೇಡಿ. ಜಿನಜೀವನದ ಬಗ್ಗೆ ಗಮನಿಸಿ. ತಕ್ಷಣ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಟಾನವನ್ನು ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ರೈತ ಮೋರ್ಚಾದ ಪ್ರಮುಖರಾದ ಪ್ರಸನ್ನ ಕೆರೆಕೈ ಮಾತನಾಡಿ, ಪಶ್ಚಿಮಘಟ್ಟ ಸುಸ್ಥಿರವಾಗಿದೆ ಪ್ರಪಂಚವೇ ಆರೋಗ್ಯಕರವಾಗಿರುತ್ತದೆ ಎಂದು ವೈಜ್ಞಾನಿಕ ವರದಿಗಳು ಹೇಳುತ್ತವೆ. ಆದರೆ ಪಶ್ಚಿಮಘಟ್ಟದ ಪರಿಸರದ ಅಸ್ತಿತ್ವವನ್ನೇ ನಾಶಪಡಿಸುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಯಾವುದೇ ಕಾರಣಕ್ಕೂ ಅನುಷ್ಟಾನಕ್ಕೆ ತರಬಾರದು. ಸ್ಥಳೀಯ ಶಾಸಕರು ಶಾಸನ ಸಭೆಯಲ್ಲಿ ಯೋಜನೆ ಪರವಾಗಿ ಮಾತನಾಡಿದ್ದು ಬೇಸರ ತರಿಸಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸಾಧಕ ಬಾಧಕಗಳ ಕುರಿತು ಸಾರ್ವಜನಿಕ ಚರ್ಚೆಯಾಗಬೇಕು. ರಾಜ್ಯ ಸರ್ಕಾರ ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ರೈತರ ಪ್ರತಿಭಟನೆ ಶತಾಯುಷಿ ಬಂಗಾರಮ್ಮ ಸಾಥ್

ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಸೋಮವಾರ ಶಿವಮೊಗ್ಗ ಜಿಲ್ಲಾ ರೈತ ಸಂಘ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಹಮ್ಮಿಕೊಂಡಿರುವ 10ನೇ ದಿನದ ಹೋರಾಟದಲ್ಲಿ ನೇರಗಲಿ ಗ್ರಾಮದ 100 ವರ್ಷದ ಶತಾಯುಷಿ ಬಂಗಾರಮ್ಮ ಪಾಲ್ಗೊಂಡು ಎಲ್ಲರ ಗಮನ ಸೆಳೆದರು. ಹೋರಾಟಕ್ಕೆ ಬೆಂಬಲ ಸೂಚಿಸಿ ರೈತ ಸಂಘ ಏರ್ಪಡಿಸುವ ಸಹಿ ಸಂಗ್ರಹದಲ್ಲೂ ಅವರು ಹೆಬ್ಬೆಟ್ಟು ಒತ್ತುವ ಮೂಲಕ ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ಅಖಿಲೇಶ್ ಚಿಪ್ಪಳಿ, ಮಲ್ಲಿಕಾರ್ಜುನ ಹಕ್ರೆ, ಗಣಪತಿ ಹೆನಗೆರೆ, ರಮೇಶ್ ಕೆಳದಿ, ಭದ್ರೇರ್ಶ ಬಾಳಗೋಡು, ಡಾ. ರಾಮಚಂದ್ರಪ್ಪ, ಕಬಸೆ ಅಶೋಕ ಮೂರ್ತಿ, ಸ್ವಾಮಿ ಗೌಡ ಇನ್ನಿತರರು ಹಾಜರಿದ್ದರು.

‘MBBS ವ್ಯಾಸಂಗ’ದ ನಿರೀಕ್ಷೆಯಲ್ಲಿದ್ದವರ ಗಮನಕ್ಕೆ: 3ನೇ ಸುತ್ತಿಗೆ ಹೆಚ್ಚುವರಿ ‘200 ವೈದ್ಯಕೀಯ ಸೀಟು’ ಲಭ್ಯ

SHOCKING : ರಾಜ್ಯದಲ್ಲಿ ‘ಪೈಶಾಚಿಕ ಘಟನೆ’ : ಯುವತಿ ಮೇಲೆ ಗ್ಯಾಂಗ್ ರೇಪ್, ಚಿನ್ನ ಕದ್ದು ಕಾಮುಕರು ಎಸ್ಕೇಪ್.!

Share. Facebook Twitter LinkedIn WhatsApp Email

Related Posts

ಕಾನೂನಿಗೂ ಡೋಂಟ್‌ ಕೇರ್‌: ಇನ್ನೂ ಕನ್ನಡದಲ್ಲಿ ಬರ್ತಾ ಇದೇ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು

18/03/2026 6:12 PM2 Mins Read

ಧರ್ಮಸ್ಥಳ ಅಸಹಜ ಸಾವುಗಳ ಪ್ರಕರಣ: 74 ಸಾವುಗಳ ಸಮಗ್ರ ವರದಿ ಸಲ್ಲಿಕೆಗೆ ಹೈಕೋರ್ಟ್ ಆದೇಶ

18/03/2026 5:42 PM2 Mins Read

ವಿಧಾನಸೌಧದ ‘ಸಾರಥಿಗಳ’ ಮೌನ ರೋದನೆ: ‘ಮೂಲಭೂತ ಸೌಕರ್ಯ’ಕ್ಕಾಗಿ ‘ಶಾಸಕ ಸುರೇಶ್ ಕುಮಾರ್’ ಆಗ್ರಹ

18/03/2026 5:33 PM2 Mins Read
Recent News

ಕಾನೂನಿಗೂ ಡೋಂಟ್‌ ಕೇರ್‌: ಇನ್ನೂ ಕನ್ನಡದಲ್ಲಿ ಬರ್ತಾ ಇದೇ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು

18/03/2026 6:12 PM

BREAKING : ಹೋಟೆಲ್ ಮಾಲೀಕರಿಗೆ ಬಿಗ್ ರಿಲೀಫ್ ; ‘ವಾಣಿಜ್ಯ LPG’ಯಲ್ಲಿ ರಾಜ್ಯಗಳಿಗೆ ಶೇ.10ರಷ್ಟು ಹೆಚ್ಚುವರಿ ಕೋಟಾ!

18/03/2026 6:04 PM

ಭಾರತದಲ್ಲಿ ಕೈಗಾರಿಕಾ ಅಭಿವೃದ್ಧಿ ವೇಗಕ್ಕಾಗಿ 33,660 ಕೋಟಿ ಭವ್ಯ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ

18/03/2026 5:59 PM

BREAKING: ಕೆಡಿ ಚಿತ್ರದ ‘ಸರ್ಕೆ ಚುನರಿಯಾ’ ಹಾಡಿಗೆ ಕೇಂದ್ರದ ಬ್ರೇಕ್: ‘ಅಭಿವ್ಯಕ್ತಿ ಸ್ವಾತಂತ್ರ್ಯ ಅಬಾಧಿತವಲ್ಲ’ ಎಂದ ಅಶ್ವಿನಿ ವೈಷ್ಣವ್

18/03/2026 5:50 PM
State News
KARNATAKA

ಕಾನೂನಿಗೂ ಡೋಂಟ್‌ ಕೇರ್‌: ಇನ್ನೂ ಕನ್ನಡದಲ್ಲಿ ಬರ್ತಾ ಇದೇ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು

By kannadanewsnow0918/03/2026 6:12 PM KARNATAKA 2 Mins Read

ಬೆಂಗಳೂರು: ಧ್ರುವ ಸರ್ಜಾ ನಟನೆಯ ಮತ್ತು ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ…

ಧರ್ಮಸ್ಥಳ ಅಸಹಜ ಸಾವುಗಳ ಪ್ರಕರಣ: 74 ಸಾವುಗಳ ಸಮಗ್ರ ವರದಿ ಸಲ್ಲಿಕೆಗೆ ಹೈಕೋರ್ಟ್ ಆದೇಶ

18/03/2026 5:42 PM

ವಿಧಾನಸೌಧದ ‘ಸಾರಥಿಗಳ’ ಮೌನ ರೋದನೆ: ‘ಮೂಲಭೂತ ಸೌಕರ್ಯ’ಕ್ಕಾಗಿ ‘ಶಾಸಕ ಸುರೇಶ್ ಕುಮಾರ್’ ಆಗ್ರಹ

18/03/2026 5:33 PM

ಆನೆ ಕಂದಕ, ಸೌರಬೇಲಿ ಸಮರ್ಪಕ ನಿರ್ವಹಣೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ

18/03/2026 4:46 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.