Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಅಪರೇಷನ್ ಸಿಂಧೂರ್’ನಲ್ಲಿ ‘ಅಸಾಧಾರಣ ಶೌರ್ಯ’ ಮೆರೆದ 16 BSF ಸಿಬ್ಬಂದಿಗೆ ‘ಶೌರ್ಯ ಪದಕ’ ಪ್ರದಾನ

14/08/2025 2:58 PM

ಸಾರ್ವಜನಿಕರ ಗಮನಕ್ಕೆ: ವಿಧಾನಸೌಧ, ವಿಕಾಸ ಸೌಧ ಪ್ರವೇಶಕ್ಕೆ ಆನ್ ಲೈನ್ ಮೂಲಕ ಪಾಸ್ ಪಡೆಯಲು ಅವಕಾಶ

14/08/2025 2:54 PM

Chanakya Niti : ಎಷ್ಟೇ ಕಷ್ಟವಾದ್ರೂ ನಿಮ್ಮ ಸಂಬಂಧಿಕರ ಬಳಿ ಈ 5 ರಹಸ್ಯಗಳನ್ನ ಹೇಳಲೇಬೇಡಿ!

14/08/2025 2:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರ ಗಮನಕ್ಕೆ: ವಿಧಾನಸೌಧ, ವಿಕಾಸ ಸೌಧ ಪ್ರವೇಶಕ್ಕೆ ಆನ್ ಲೈನ್ ಮೂಲಕ ಪಾಸ್ ಪಡೆಯಲು ಅವಕಾಶ
KARNATAKA

ಸಾರ್ವಜನಿಕರ ಗಮನಕ್ಕೆ: ವಿಧಾನಸೌಧ, ವಿಕಾಸ ಸೌಧ ಪ್ರವೇಶಕ್ಕೆ ಆನ್ ಲೈನ್ ಮೂಲಕ ಪಾಸ್ ಪಡೆಯಲು ಅವಕಾಶ

By kannadanewsnow0914/08/2025 2:54 PM

ಬೆಂಗಳೂರು: ರಾಜ್ಯದ ಶಕ್ತಿ ಸೌಧ ವಿಧಾನಸೌಧ ಪ್ರವೇಶಕ್ಕೆ ಆನ್ ಲೈನ್ ಮೂಲಕ ಪಾಸ್ ವಿತರಣೆ ಕಾರ್ಯವನ್ನು ಆರಂಭಿಸಲಾಗಿದೆ. ಸಾರ್ವಜನಿಕರು ಆನ್ ಲೈನ್ ಮೂಲಕ ಪಾಸ್ ಖರೀದಿಸಿ ವಿಧಾನಸೌಧ, ವಿಕಾಸಸೌಧಕ್ಕೆ ಪ್ರವೇಶಿಸಬಹುದಾಗಿದೆ.

ಈ ಕುರಿತು ರಾಜ್ಯ ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ವಿಧಾನ ಸೌಧ/ವಿಕಾಸ ಸೌಧ ಕಟ್ಟಡಗಳಿಗೆ ಸಂದರ್ಶಕರು ಭೇಟಿ ನೀಡುವ ಸಲುವಾಗಿ ನಿಗದಿಪಡಿಸಲಾಗಿರುವ ಸಂದರ್ಶಕರ ಸಮಯದಲ್ಲಿ ಪ್ರವೇಶ ಪಡೆಯಲು ವಿಧಾನ ಸೌಧದ ಗೋಪಾಲಗೌಡ ವೃತ್ತ ಮತ್ತು ದೇವರಾಜ ಅರಸು ಪುತ್ಥಳಿ ಬಳಿ ಇರುವ ಸ್ವಾಗತ ಕೇಂದ್ರಗಳಿಂದ ಪ್ರವೇಶ ಪತ್ರವನ್ನು ಭೌತಿಕವಾಗಿ ನೀಡಲಾಗುತ್ತಿತ್ತು.

ಸಾರ್ವಜನಿಕರು/ಸಂದರ್ಶಕರಿಗೆ ಪ್ರವೇಶ ಪತ್ರ ನೀಡುವ ವಿಧಾನವನ್ನು ಸುಲಲಿತಗೊಳಿಸುವ ದೃಷ್ಠಿಯಿಂದ ಆನ್‌ಲೈನ್‌ ಮೂಲಕ ಪ್ರವೇಶ ಪತ್ರ ವಿತರಿಸುವ ಪ್ರಕ್ರಿಯೆಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ.

ಇನ್ನು ಮುಂದೆ ಸಾರ್ವಜನಿಕರು/ಸಂದರ್ಶಕರು ಈ ನೂತನ ಆನ್‌ಲೈನ್‌ ವ್ಯವಸ್ಥೆ ಮೂಲಕ ವಿಧಾನಸೌಧ/ವಿಕಾಸಸೌಧ ಕಟ್ಟಡಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ.

ಸಾರ್ವಜನಿಕರು/ಸಂದರ್ಶಕರು ತಮ್ಮ ಮೊಬೈಲ್‌ನಲ್ಲೇ ಹೀಗೆ ಪಾಸ್ ಖರೀದಿಸಿ

1 ) ಗೂಗಲ್‌ ಪ್ಲೇ ಸ್ಟೋರ್‌ ಆಪ್‌ನಲ್ಲಿ (Google Play Store App) ಕರ್ನಾಟಕ ಒನ್‌ ಆಪ್‌ (Karnataka One App)  ಡೌನ್‌ಲೋಡ್‌ ಮಾಡಿಕೊಳ್ಳಬೇಕು.

2.) ಸದರಿ ಆಪ್‌ನಲ್ಲಿ ಒದಗಿಸಲಾಗಿರುವ ʻವಿಧಾನಸೌಧ ಪಾಸ್‌ (Vidhana Soudha Pass)ʼ ಎಂಬ ಕಿಂಡಿಯನ್ನು ತೆರೆದು ʻಪಾಸ್‌ಗಾಗಿ ವಿನಂತಿʼ ಎಂಬುದನ್ನು ಕ್ಲಿಕ್‌ ಮಾಡಿದ ನಂತರ ಸಂದರ್ಶಕರು ತಮ್ಮ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ʻಒಟಿಪಿ ಪಡೆಯಿರಿʼ ಎಂಬುದನ್ನು ಕ್ಲಿಕ್‌ ಮಾಡಬೇಕು.

3) ತಮ್ಮ ಮೊಬೈಲ್‌ನ SMS ಮೂಲಕ ಸ್ವೀಕರಿಸಿದ ಒಟಿಪಿ ಅನ್ನು ನಮೂದಿಸಿ ನಂತರ ʻಒಟಿಪಿ ಪರಿಶೀಲಿಸಿʼ ಬಟನ್‌ ಕ್ಲಿಕ್‌ ಮಾಡಬೇಕು.

ನಂತರ ತೆರೆದುಕೊಳ್ಳುವ ʻಫಾರ್ಮ್‌ ಭರ್ತಿ ಮಾಡಿʼ ಎಂಬ ಪುಟದಲ್ಲಿ ಸಂದರ್ಶಕರು ತಮ್ಮ ಹೆಸರು, ಭೇಟಿ ನೀಡಬೇಕಾದ ಕಟ್ಟಡ, ಇಲಾಖೆ, ಉದ್ದೇಶ, ದಿನಾಂಕ ಮತ್ತು ಸಮಯ ಭರ್ತಿ ಮಾಡಿ, ನಂತರ ಯಾವುದಾದರೊಂದು ವಿಳಾಸದ ಧೃಡೀಕರಣವನ್ನು ನಮೂದಿಸಿ (ಆಧಾರ್‌/ಚಾಲನಾ ಪರವಾನಗಿ/ಪಾನ್‌/ಪಾಸ್‌ ಪೋರ್ಟ್/ಮತದಾರರ ಗುರುತಿನ ಚೀಟಿ) ʻಪೋಟೋ ಅಪ್‌ ಲೋಡ್‌ ಮಾಡಿʼ ಎಂಬ ಕಡೆ ತಮ್ಮ ಭಾವಚಿತ್ರವನ್ನು ಅಪ್‌ಲೋಡ್‌ ಮಾಡಿ ʻಡ್ಯಾಕ್ಯುಮೆಂಟ್‌ ಅಪ್‌ಲೋಡ್‌ ಮಾಡಿʼ ಎಂಬ ಕಡೆ ಸಂಬಂಧಪಟ್ಟ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ನಂತರ ʻಸಲ್ಲಿಸಿʼ ಎನ್ನುವ ಬಟನ್‌ ಕ್ಲಿಕ್‌ ಮಾಡಿದಲ್ಲಿ ʻವಿಧಾನ ಸೌಧ ಗೇಟ್‌ ಪಾಸ್‌ಗಾಗಿ ನಿಮ್ಮ ಅರ್ಜಿಯನ್ನು ನಾವು ಯಶಸ್ವಿಯಾಗಿ ಸ್ವೀಕರಿಸಿದ್ದೇವೆ, ಭೇಟಿಯು ಅನುಮೋದನೆಗೆ ಒಳಪಟ್ಟಿರುತ್ತದೆʼ ಎಂದು ತಮ್ಮ ಮೊಬೈಲ್‌ನಲ್ಲಿ ನಮೂದಾಗುತ್ತದೆ.

ಈ ರೀತಿ ಆನ್‌ಲೈನ್‌ ಮೂಲಕ ಸ್ವೀಕೃತಗೊಂಡ ಅರ್ಜಿಯನ್ನು ಸಿಆಸುಇ (ಕಾರ್ಯಕಾರಿ) ವಿಭಾಗ ಪರಿಶೀಲಿಸಿ ಎಲ್ಲಾ ದಾಖಲೆಗಳು ಸರಿಯಿದ್ದಲ್ಲಿ ಆನ್‌ಲೈನ್‌ ಮೂಲಕವೇ ಅನುಮತಿ ನೀಡುತ್ತದೆ.

ಅನುಮತಿ ನೀಡಿದ ನಂತರ QR Code ಸೃಜನೆಗೊಂಡು ಅರ್ಜಿದಾರನ ಮೊಬೈಲ್‌ಗೆ ರವಾನೆ ಆಗುತ್ತದೆ.

ಒಂದು ವೇಳೆ ದಾಖಲೆಗಳು ತಾಳೆಹೊಂದದಿದ್ದಲ್ಲಿ ಅನುಮತಿ ನಿರಾಕರಿಸಲಾಗುವುದು. ಸಂದರ್ಶಕರು ಅನುಮತಿ ನೀಡಿದ ದಿನಾಂಕ ಮತ್ತು ಸಮಯದಂದು ತಮ್ಮ ಮೊಬೈಲ್‌ಗೆ ಬಂದಿರುವ QR Code ಅನ್ನು ವಿಧಾನಸೌಧ/ವಿಕಾಸಸೌಧ ಪ್ರವೇಶ ದ್ವಾರಗಳಲ್ಲಿ ಪೋಲೀಸ್‌ ಸಿಬ್ಬಂದಿಗಳಿಗೆ ತೋರಿಸಬೇಕು.

ಪೋಲೀಸ್‌ ಸಿಬ್ಬಂದಿಗಳು QR Code ಅನ್ನು ಸ್ಕ್ಯಾನ್‌ ಮಾಡಿ, ಸಂದರ್ಶಕ ಪೋಟೋ ಐಡಿಯನ್ನು ದೃಢೀಕರಿಸಿದ ನಂತರ ಸಂದರ್ಶಕರಿಗೆ ವಿಧಾನಸೌಧ/ವಿಕಾಸಸೌಧ ಪ್ರವೇಶಿಸಲು ಅನುಮತಿ ನೀಡುತ್ತಾರೆ.

ವಿಧಾನಸೌಧ ಮತ್ತು ವಿಕಾಸಸೌಧಕ್ಕೆ ಭೇಟಿ ನೀಡಲು ಇಚ್ಚಿಸುವ ಸಂದರ್ಶಕರು ದಿನದ ಯಾವುದೇ ಸಮಯದಲ್ಲಿ (24×7) ಯಾವುದೇ ಸ್ಥಳದಲ್ಲಿ ವಿಧಾನ ಸೌಧ ಪಾಸ್‌ಗೆ ವಿನಂತಿಯನ್ನು ಆನ್‌ಲೈನ್‌ ಮೂಲಕ ಸಲ್ಲಿಸಬಹುದು.

ಸಚಿವ ಸಂಪುಟದ ಸಭೆ ನಡೆಯುವ ದಿನ ಮತ್ತು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ನಿಗದಿಪಡಿಸಲಾಗಿರುವ ಸಂದರ್ಶಕರ ಸಮಯದಲ್ಲಿ ಭೇಟಿಗೆ ಆಯ್ಕೆ ಮಾಡಿಕೊಳ್ಳಬಹುದು.

ಆದಕಾರಣ, ಕಾರ್ಯನಿಮಿತ್ತ ವಿಧಾನಸೌಧ/ವಿಕಾಸಸೌಧ ಕಟ್ಟಡಕ್ಕೆ ಪ್ರವೇಶಿಸಲು ಕರ್ನಾಟಕ ಒನ್‌ ಆನ್‌ಲೈನ್‌ ಆಪ್‌ ಮೂಲಕ ಪ್ರವೇಶ ಪತ್ರ ಪಡೆಯುವ ನೂತನ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೋರಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಮೇಘಸ್ಪೋಟ: ಕನಿಷ್ಠ 10 ಮಂದಿ ಸಾವು, ಹಲವರು ನಾಪತ್ತೆ

BIG NEWS : ಸುಪ್ರೀಂ ಕೋರ್ಟ್ ಜಾಮೀನು ರದ್ದು ಬೆನ್ನಲ್ಲೇ ದರ್ಶನ್‌ ಆಪ್ತ A14 ಆರೋಪಿ ಪ್ರದೋಶ್, A12 ಲಕ್ಶ್ಮಣ ಅರೆಸ್ಟ್‌

Share. Facebook Twitter LinkedIn WhatsApp Email

Related Posts

BIG NEWS : ಸುಪ್ರೀಂ ಕೋರ್ಟ್ ಜಾಮೀನು ರದ್ದು ಬೆನ್ನಲ್ಲೇ ದರ್ಶನ್‌ ಆಪ್ತ A14 ಆರೋಪಿ ಪ್ರದೋಶ್, A12 ಲಕ್ಶ್ಮಣ ಅರೆಸ್ಟ್‌

14/08/2025 2:15 PM1 Min Read

BREAKING NEWS: ಸುಪ್ರಿಂಕೋರ್ಟ್‌ ಜಾಮೀನು ರದ್ದುಗೊಳಿಸಿದ ಬೆನ್ನಲೇ ಪವಿತ್ರಗೌಡ ಅರೆಸ್ಟ್‌…!

14/08/2025 1:57 PM1 Min Read

BREAKING : ಸುಪ್ರೀಂ ಕೋರ್ಟ್ ಜಾಮೀನು ರದ್ದು ಹಿನ್ನೆಲೆ, A1 ಆರೋಪಿ ಪವಿತ್ರಾಗೌಡ ಅರೆಸ್ಟ್!

14/08/2025 1:52 PM1 Min Read
Recent News

BREAKING : ಅಪರೇಷನ್ ಸಿಂಧೂರ್’ನಲ್ಲಿ ‘ಅಸಾಧಾರಣ ಶೌರ್ಯ’ ಮೆರೆದ 16 BSF ಸಿಬ್ಬಂದಿಗೆ ‘ಶೌರ್ಯ ಪದಕ’ ಪ್ರದಾನ

14/08/2025 2:58 PM

ಸಾರ್ವಜನಿಕರ ಗಮನಕ್ಕೆ: ವಿಧಾನಸೌಧ, ವಿಕಾಸ ಸೌಧ ಪ್ರವೇಶಕ್ಕೆ ಆನ್ ಲೈನ್ ಮೂಲಕ ಪಾಸ್ ಪಡೆಯಲು ಅವಕಾಶ

14/08/2025 2:54 PM

Chanakya Niti : ಎಷ್ಟೇ ಕಷ್ಟವಾದ್ರೂ ನಿಮ್ಮ ಸಂಬಂಧಿಕರ ಬಳಿ ಈ 5 ರಹಸ್ಯಗಳನ್ನ ಹೇಳಲೇಬೇಡಿ!

14/08/2025 2:47 PM

ಜಮ್ಮು-ಕಾಶ್ಮೀರದಲ್ಲಿ ಮೇಘಸ್ಪೋಟ: ಕನಿಷ್ಠ 10 ಮಂದಿ ಸಾವು, ಹಲವರು ನಾಪತ್ತೆ

14/08/2025 2:41 PM
State News
KARNATAKA

ಸಾರ್ವಜನಿಕರ ಗಮನಕ್ಕೆ: ವಿಧಾನಸೌಧ, ವಿಕಾಸ ಸೌಧ ಪ್ರವೇಶಕ್ಕೆ ಆನ್ ಲೈನ್ ಮೂಲಕ ಪಾಸ್ ಪಡೆಯಲು ಅವಕಾಶ

By kannadanewsnow0914/08/2025 2:54 PM KARNATAKA 2 Mins Read

ಬೆಂಗಳೂರು: ರಾಜ್ಯದ ಶಕ್ತಿ ಸೌಧ ವಿಧಾನಸೌಧ ಪ್ರವೇಶಕ್ಕೆ ಆನ್ ಲೈನ್ ಮೂಲಕ ಪಾಸ್ ವಿತರಣೆ ಕಾರ್ಯವನ್ನು ಆರಂಭಿಸಲಾಗಿದೆ. ಸಾರ್ವಜನಿಕರು ಆನ್…

BIG NEWS : ಸುಪ್ರೀಂ ಕೋರ್ಟ್ ಜಾಮೀನು ರದ್ದು ಬೆನ್ನಲ್ಲೇ ದರ್ಶನ್‌ ಆಪ್ತ A14 ಆರೋಪಿ ಪ್ರದೋಶ್, A12 ಲಕ್ಶ್ಮಣ ಅರೆಸ್ಟ್‌

14/08/2025 2:15 PM

BREAKING NEWS: ಸುಪ್ರಿಂಕೋರ್ಟ್‌ ಜಾಮೀನು ರದ್ದುಗೊಳಿಸಿದ ಬೆನ್ನಲೇ ಪವಿತ್ರಗೌಡ ಅರೆಸ್ಟ್‌…!

14/08/2025 1:57 PM

BREAKING : ಸುಪ್ರೀಂ ಕೋರ್ಟ್ ಜಾಮೀನು ರದ್ದು ಹಿನ್ನೆಲೆ, A1 ಆರೋಪಿ ಪವಿತ್ರಾಗೌಡ ಅರೆಸ್ಟ್!

14/08/2025 1:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.