Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

28 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಹಿಮನದಿಯಲ್ಲಿ ಪತ್ತೆ

09/08/2025 7:38 AM

BIG NEWS : ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆಗೆ ನೀಡಿದ್ರೆ ಮಾಲಿಕರಿಗೆ 25000 ರೂ.ದಂಡ, ಜೈಲು ಶಿಕ್ಷೆ ಫಿಕ್ಸ್.!

09/08/2025 7:27 AM

ರಕ್ಷಾ ಬಂಧನ 2025: ಈ ಮುಹೂರ್ತದ ಸಮಯದಲ್ಲಿ ರಾಖಿ ಕಟ್ಟಿ : ರಾಹುಕಾಲದಿಂದ ದೂರವಿರಿ | Raksha bandhan

09/08/2025 7:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆಗೆ ನೀಡಿದ್ರೆ ಮಾಲಿಕರಿಗೆ 25000 ರೂ.ದಂಡ, ಜೈಲು ಶಿಕ್ಷೆ ಫಿಕ್ಸ್.!
KARNATAKA

BIG NEWS : ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆಗೆ ನೀಡಿದ್ರೆ ಮಾಲಿಕರಿಗೆ 25000 ರೂ.ದಂಡ, ಜೈಲು ಶಿಕ್ಷೆ ಫಿಕ್ಸ್.!

By kannadanewsnow5709/08/2025 7:27 AM

ರಸ್ತೆ ಅಪಘಾತಗಳು ಸಂಭವಿಸಬಾರದು, ಇದಕ್ಕಾಗಿ ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆಕಸ್ಮಿಕ ಅಪಘಾತಗಳಿಂದ ಜೀವಹಾನಿ ಜೊತೆಗೆ ಜೀವನಪೂರ್ತಿ ಗಾಯಾಳುಗಳಾಗಿ ಕಾಲ ಕಳೆಯಬೇಕಾಗುತ್ತದೆ. ಆದರೆ ಕ್ಷಣ ಮಾತ್ರದ ಅಪಘಾತಗಳನ್ನು ತಪ್ಪಿಸಲು ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕೆಂದು ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಗಂಗಾಧರಸ್ವಾಮಿ ಜಿ.ಎಂ ತಿಳಿಸಿದ್ದಾರೆ. 

 ಅನೇಕ ರಸ್ತೆ ಅಪಘಾತಗಳು ಕುಟುಂಬದ ಆಸರೆಯೇ ಇಲ್ಲದಂತಹ ಸ್ಥಿತಿಗಳಿಗೆ ತಳ್ಳುತ್ತವೆ. ಎಲ್ಲರ ಜೀವಗಳು ಅಮೂಲ್ಯವಾದದ್ದು ಬೇರೊಬ್ಬರ ಜೀವ ಉಳಿಸಲು ವಾಹನ ಸಾವರ ಸೇರಿದಂತೆ ಪಾದಚಾರಿಗಳು ಸಹ ರಸ್ತೆ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಆದರೆ ದಾವಣಗೆರೆ ನಗರದ ಅನೇಕ ವೃತ್ತ, ರಸ್ತೆಗಳಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಸಿಗ್ನಲ್ ಜಂಪ್ ಮಾಡುವುದು, ಏಕಮುಖ ಸಂಚಾರದ ರಸ್ತೆಯಲ್ಲಿ ವಿರುದ್ದ ದಿಕ್ಕಿನಲ್ಲಿ ಸಂಚರಿಸುವುದು ಸರ್ವೆ ಸಾಮಾನ್ಯವಾಗಿದೆ. ಜೊತೆಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ದ್ವಿ ಚಕ್ರದಲ್ಲಿ ನೊಂದಣಿ ಸಂಖ್ಯೆಯ ಫಲಕವನ್ನು ತೆಗೆದಿಟ್ಟು ವಾಹನ ಚಾಲನೆ ಮಾಡುವುದು, ತ್ರಿಬಲ್ ರೈಡಿಂಗ್, ಹೆಲ್ಮೆಟ್ ಧರಿಸದೇ ಇರುವುದನ್ನು ಗಮನಿಸಲಾಗಿದೆ. ಜೊತೆಗೆ ಅಪ್ರಾಪ್ತ ಮಕ್ಕಳು ವಾಹನವನ್ನು ಚಾಲನೆ ಮಾಡುವುದು ಕಂಡು ಬಂದಿರುತ್ತದೆ.

ಅಪ್ರಾಪ್ತರಿಂದ ವಾಹನ ಚಾಲನೆ; ದಾವಣಗೆರೆ ನಗರದಲ್ಲಿ ಆಗಸ್ಟ್ 8 ರಂದು ವಿವಿಧ ರಸ್ತೆಗಳಲ್ಲಿ ಅಪ್ರಾಪ್ತರು ತ್ರಿಬಲ್ ರೈಡಿಂಗ್ನನಲ್ಲಿ ವಾಹನ ಚಾಲನೆ ಮಾಡುವುದನ್ನು ಜಿಲ್ಲಾಧಿಕಾರಿಗಳು ಗಮನಿಸಿ ಸ್ಥಳದಲ್ಲಿಯೇ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲು ಸಂಚಾರಿ ಪೊಲೀಸ್ ಠಾಣೆಗೆ ಸೂಚನೆ ನೀಡಿದರು. ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡಿದಲ್ಲಿ ವಾಹನ ನೀಡಿದ ಮಾಲಿಕರಿಗೆ ರೂ.25000 ಗಳ ವರೆಗೆ ದಂಡದ ಜೊತೆಗೆ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಬಹುದು. ವಾಹನ ಮಾಲಿಕರೆ ತಮ್ಮ ಮಕ್ಕಳಿಗೆ ವಾಹನ ನೀಡುವುದಕ್ಕಿಂತ ಮೊದಲು ಯೋಚಿಸಿ.

ವಿರುದ್ದ ದಿಕ್ಕಿನಲ್ಲಿನ ಸಾಗುವ ಸವಾರರು; ವಿವಿಧ ವೃತ್ತಗಳಲ್ಲಿ ಸಿಗ್ನಲ್ ಅಳವಡಿಸಲಾಗಿದ್ದರೂ ಕೆಲವರು ಸಿಗ್ನಲ್ ಜಂಪ್ ಮಾಡುವುದು ಮತ್ತು ಸಿಗ್ನಲ್ನಗಲ್ಲಿ ವಿರುದ್ದ ದಿಕ್ಕಿನಲ್ಲಿ ವಾಹನ ಚಲಾಯಿಸಿಕೊಂಡು ಹೋಗುತ್ತಾರೆ. ಆದರೆ ಸಿಗ್ನಲ್ ಬಿದ್ದತಕ್ಷಣ ಸಂಚರಿಸುವ ವಾಹನ ಸವಾರರು ಹೆಚ್ಚಿನ ವೇಗದಲ್ಲಿಯೇ ಇರುತ್ತಾರೆ. ಇಂತಹ ಸಂದರ್ಭದಲ್ಲಿ ವಿರುದ್ದ ದಿಕ್ಕಿನಲ್ಲಿ ವಾಹನ ಸಂಚರಿಸಿದಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗೆ ಅಡ್ಡಲಾಗಿ ಬರುವುದರಿಂದ ಅನೇಕ ಅಪಘಾತಗಳು ಸಂಭವಿಸಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಏಕಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಲ್ಲಿ ಸಂಚರಿಸಿದಲ್ಲಿ ಅಂತಹ ಸವಾರರಿಗೆ ಭಾರಿ ದಂಡ ಹಾಕಲಾಗುತ್ತದೆ ಎಂದು ಅನೇಕ ವಾಹನ ಸವಾರರನ್ನು ನಿಲ್ಲಿಸಿ ಜಿಲ್ಲಾಧಿಕಾರಿ ಅವರು ಶುಕ್ರವಾರ ವಿವಿಧ ವೃತ್ತಗಳಲ್ಲಿ ಮನವರಿಕೆ ಮಾಡಿಕೊಟ್ಟರು.

BIG NEWS: Owners fined Rs. 25000 and jailed for letting minors drive!
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ `ಸೈಬರ್ ಅಪರಾಧ’ ತಡೆಗೆ ಸಹಾಯವಾಣಿ ಆರಂಭ.!

09/08/2025 7:09 AM2 Mins Read

Rain Alert : ರಾಜ್ಯಾದ್ಯಂತ ಇಂದೂ ಭಾರೀ `ಮಳೆ’ : ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

09/08/2025 6:59 AM1 Min Read

BIG NEWS : ರಾಜ್ಯದ ಎಲ್ಲಾ `ಬೋರ್ಡ್ ಶಾಲೆಗಳಲ್ಲಿ `ಕನ್ನಡ ಬೋಧನೆ’ ಕಡ್ಡಾಯ : ಸರ್ಕಾರಕ್ಕೆ `ರಾಜ್ಯ ಶಿಕ್ಷಣ ನೀತಿ’ ವರದಿ ಸಲ್ಲಿಕೆ.!

09/08/2025 6:51 AM8 Mins Read
Recent News

28 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಹಿಮನದಿಯಲ್ಲಿ ಪತ್ತೆ

09/08/2025 7:38 AM

BIG NEWS : ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆಗೆ ನೀಡಿದ್ರೆ ಮಾಲಿಕರಿಗೆ 25000 ರೂ.ದಂಡ, ಜೈಲು ಶಿಕ್ಷೆ ಫಿಕ್ಸ್.!

09/08/2025 7:27 AM

ರಕ್ಷಾ ಬಂಧನ 2025: ಈ ಮುಹೂರ್ತದ ಸಮಯದಲ್ಲಿ ರಾಖಿ ಕಟ್ಟಿ : ರಾಹುಕಾಲದಿಂದ ದೂರವಿರಿ | Raksha bandhan

09/08/2025 7:19 AM

ಹಿಜ್ಬುಲ್ ಮುಖ್ಯಸ್ಥನ ಹಿರಿಯ ಮಗನಿಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್ | Hizbul

09/08/2025 7:14 AM
State News
KARNATAKA

BIG NEWS : ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆಗೆ ನೀಡಿದ್ರೆ ಮಾಲಿಕರಿಗೆ 25000 ರೂ.ದಂಡ, ಜೈಲು ಶಿಕ್ಷೆ ಫಿಕ್ಸ್.!

By kannadanewsnow5709/08/2025 7:27 AM KARNATAKA 2 Mins Read

ರಸ್ತೆ ಅಪಘಾತಗಳು ಸಂಭವಿಸಬಾರದು, ಇದಕ್ಕಾಗಿ ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆಕಸ್ಮಿಕ ಅಪಘಾತಗಳಿಂದ ಜೀವಹಾನಿ ಜೊತೆಗೆ ಜೀವನಪೂರ್ತಿ ಗಾಯಾಳುಗಳಾಗಿ…

BIG NEWS : ರಾಜ್ಯದಲ್ಲಿ `ಸೈಬರ್ ಅಪರಾಧ’ ತಡೆಗೆ ಸಹಾಯವಾಣಿ ಆರಂಭ.!

09/08/2025 7:09 AM

Rain Alert : ರಾಜ್ಯಾದ್ಯಂತ ಇಂದೂ ಭಾರೀ `ಮಳೆ’ : ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

09/08/2025 6:59 AM

BIG NEWS : ರಾಜ್ಯದ ಎಲ್ಲಾ `ಬೋರ್ಡ್ ಶಾಲೆಗಳಲ್ಲಿ `ಕನ್ನಡ ಬೋಧನೆ’ ಕಡ್ಡಾಯ : ಸರ್ಕಾರಕ್ಕೆ `ರಾಜ್ಯ ಶಿಕ್ಷಣ ನೀತಿ’ ವರದಿ ಸಲ್ಲಿಕೆ.!

09/08/2025 6:51 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.