Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ‘ಹಾಲು’ ಕುಡಿಯುತ್ತೀರಾ.? ಆರೋಗ್ಯ ತಜ್ಞರು ಹೇಳುವುದೇನು ಗೊತ್ತಾ.?

04/08/2025 10:10 PM

ಅಸಂಘಟಿತ ಕಾರ್ಮಿಕರ ಹಿತಕಾಯಲು ಸರ್ಕಾರ ಬದ್ಧ: ಸಚಿವ ಸಂತೋಷ್‌ ಲಾಡ್

04/08/2025 9:52 PM

ಒಂದೇ ಹಳ್ಳಿಯಲ್ಲಿ 47 ‘IAS, IPS ಅಧಿಕಾರಿ’ಗಳು.! ಪ್ರತಿ ಮನೆಯಲ್ಲೂ ಒಬ್ಬ ಅಧಿಕಾರಿ, ಇದು ಭಾರತದ ‘UPSC ವಿಲೇಜ್’

04/08/2025 9:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿದ್ಯಾರ್ಥಿಗಳು ಪದವಿಗಳಿಗಷ್ಟೇ ಸೀಮಿತವಾಗದೇ, ಸ್ಪರ್ಧಾತ್ಮಕ ಜಗತ್ತಿಗೆ ಅಣಿಯಾಗಿ: ಸಂಸದ ಸಿ.ಎನ್.ಮಂಜುನಾಥ್
KARNATAKA

ವಿದ್ಯಾರ್ಥಿಗಳು ಪದವಿಗಳಿಗಷ್ಟೇ ಸೀಮಿತವಾಗದೇ, ಸ್ಪರ್ಧಾತ್ಮಕ ಜಗತ್ತಿಗೆ ಅಣಿಯಾಗಿ: ಸಂಸದ ಸಿ.ಎನ್.ಮಂಜುನಾಥ್

By kannadanewsnow0903/08/2025 7:55 PM

ಮಂಡ್ಯ : ವಿದ್ಯಾರ್ಥಿಗಳು ಕೇವಲ ಪದವಿಗಳನ್ನು ಪಡೆದರೇ ಸಾಲದು ವೃತ್ತಿ ಕೌಶಲ್ಯತೆಯ ತರಬೇತಿಗಳನ್ನು ಪಡೆದುಕೊಂಡು ಸ್ಪರ್ಧಾತ್ಮಕ ಜಗತ್ತಿಗೆ ಅಣಿಯಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸೋಮನಹಳ್ಳಿ ವಿದ್ಯಾಸಂಸ್ಥೆ ಮತ್ತು ಪ್ರಯೋಗ್ ಸಹಯೋಗದಲ್ಲಿ ನಿರ್ಮಿಸಿರುವ ವಿಜ್ಞಾನ ಪ್ರಯೋಗ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ವಿದ್ಯೆಯೇ ರಕ್ಷಣಾ ಕವಚವಾಗಿದೆ. 40 ವರ್ಷಗಳ ಹಿಂದೆ ಇದ್ದ ಶಿಕ್ಷಣ ವ್ಯವಸ್ಥೆ ಈಗ ಬದಲಾಗಿದೆ. ಆಗ ಓದುವುದು, ಬರೆಯುವುದು ಪದವಿಗಳನ್ನು ಪಡೆಯುವುದಕ್ಕೆ ಅಷ್ಟೆ ಸೀಮಿತವಾಗಿತ್ತು. ಆದರೆ, ಈಗ ಜಗತ್ತಿನಲ್ಲಿ ಎಲ್ಲವು ಬದಲಾಗುತ್ತ ಸಾಗುತ್ತಿದೆ. ವಿದ್ಯಾರ್ಥಿಗಳು ಕೇವಲ ಪದವಿಗಳನ್ನು ಪಡೆದರೇ ಸಾಲದು ವೃತ್ತಿ ಕೌಶಲ್ಯತೆಯ ತರಬೇತಿಗಳನ್ನು ಪಡೆದುಕೊಳ್ಳುವುದರ ಜೊತೆಗೆ ಸ್ಪರ್ಧಾತ್ಮಕ ಜಗತ್ತಿಗೆ ತಯಾರಿಯಾಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

ಹಿಂದಿನ ದಿನಗಳಲ್ಲಿ ಈ ರೀತಿ ಉತ್ತಮವಾದ ಪ್ರಯೋಗಾಲಯಗಳು ನಗರ ಪ್ರದೇಶಗಳಿಗಷ್ಟೆ ಸೀಮೀತವಾಗಿದ್ದವು. ಆದರೆ, ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಇಂತಹ ಸೌಲಭ್ಯವಿರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅಂಕಗಳಿಸುವುದೇ ಮುಖ್ಯವಾದರು ಅಂತಿಮವಾಗಿ ಅಂಕಗಳಿಕೆಯೇ ಶಿಕ್ಷಣದ ಮೂಲ ಗುರಿಯಾಗಬಾರದು. ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಬೇಕೆಂದರು.

ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ಎಸ್.ಎಂ.ಕೃಷ್ಣ ರವರಂತ ಮಹಾನ್ ವ್ಯಕ್ತಿಗಳು ವಿದ್ಯಾಭ್ಯಾಸ ಮಾಡಿದ ಸೋಮನಹಳ್ಳಿ ವಿದ್ಯಾ ಸಂಸ್ಥೆಯಲ್ಲಿ ಕರಣ್ ರವರ ಆಸಕ್ತಿಯಿಂದ ರಾಜ್ಯಮಟ್ಟದ ಸುಸಜ್ಜಿತ ವಿಜ್ಞಾನ ಪ್ರಯೋಗ ಶಾಲೆಯನ್ನು ಸಂಸ್ಥೆಯಲ್ಲಿ ಆರಂಭಿಸಿರುವುದು ಸ್ವಾಗತಾರ್ಹವೆಂದರು.

ಅತ್ಯಂತ ಕಡಿಮೆ ಶುಲ್ಕದಿಂದ ಅತ್ಯುನ್ನತ ಶಿಕ್ಷಣವನ್ನು ನೀಡುವ ಪರಿಕಲ್ಪನೆಯಿಂದ ಸಿಬಿಎಸ್ಸಿ ಪ್ರೌಢಶಾಲೆಯನ್ನು ಆರಂಭಿಸಿರುವುದು ಒಂದು ಹೊಸ ಆಲೋಚನೆಯಾಗಿದ್ದು, ಇದರಿಂದ ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸ್ವಾಮೀಜಿ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನಯ, ವಿನಯ ಬೆಳೆಸಿಕೊಳ್ಳಬೇಕು ಸಾಮಾಜಿಕ ಜಾಲತಾಣಗಳಿಂದ ದೂರು ಉಳಿದು ವೃತ್ತಿ ಕೌಶಲ್ಯ ಬೆಳೆಸಿಕೊಳ್ಳಬೇಕು ಮತ್ತು ತಾವು ವ್ಯಾಸಂಗ ಮಾಡಿದ ಶಿಕ್ಷಣ ಸಂಸ್ಥೆ ಹಾಗೂ ಪೋಷಕರಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ಪ್ರಯೋಗ್ ಸಂಸ್ಥೆಯ ಮುಖ್ಯಸ್ಥ ಕರಣ್, ಸಂಸ್ಥೆಯ ಛೇರ್ಮನ್ ಟಿ.ವಿ.ರಾಜು, ಬಿಇಒ ಧನಂಜಯ, ಸಂಸ್ಥಾಪಕ ಹೆಚ್.ಎಸ್. ನಾಗರಾಜ್, ನಿರ್ದೇಶಕ ಡಾ.ಕೆ.ಎಸ್.ನಾಗಭೂಷಣ್,
ಆಡಳಿತಾಧಿಕಾರಿ ಮುರಳಿ ಮೋಹನ್, ಡಾ.ಆನಂದ, ಡಾ.ವಿಷ್ಣುಕಾಂತ್ ಸೇರಿದಂತೆ ಸಂಸ್ಥೆಯ ವಿವಿಧ ಭಾಗಗಳ ಸದಸ್ಯರು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

‘ಬ್ಯಾಂಕ್ ಖಾತೆದಾರ’ರೇ ಹುಷಾರ್.! ಹೀಗೂ ವಂಚಿಸ್ತಾರೆ ‘ಆನ್ ಲೈನ್ ವಂಚಕ’ರು | Cyber Crime

SHOCKING: ಧರ್ಮಸ್ಥಳದಲ್ಲಿ ಕೇಸ್: ಪಾಯಿಂಟ್ ನಂ.6ರಲ್ಲಿ ಸಿಕ್ಕ ಮೂಳೆ 40 ವರ್ಷ ಹಳೆಯದ್ದು

Share. Facebook Twitter LinkedIn WhatsApp Email

Related Posts

ಅಸಂಘಟಿತ ಕಾರ್ಮಿಕರ ಹಿತಕಾಯಲು ಸರ್ಕಾರ ಬದ್ಧ: ಸಚಿವ ಸಂತೋಷ್‌ ಲಾಡ್

04/08/2025 9:52 PM3 Mins Read

ಹೈಕೋರ್ಟ್ ತಡೆಯಾಜ್ಞೆ ನೀಡಿದೆ, ಸಾರಿಗೆ ಮುಷ್ಕರದಲ್ಲಿ ಪಾಲ್ಗೊಳ್ಳಬೇಡಿ: ನೌಕರರಿಗೆ KSRTC, BMTC ಎಂಡಿ ಮನವಿ

04/08/2025 9:45 PM1 Min Read

ನಾಳೆ ಮುಷ್ಕರದಲ್ಲಿ ‘ಸಾರಿಗೆ ನೌಕರ’ರು ಪಾಲ್ಗೊಳ್ಳಬಾರದು: ‘KSRTC, BMTC ಎಂಡಿ’ ಮನವಿ

04/08/2025 8:34 PM1 Min Read
Recent News

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ‘ಹಾಲು’ ಕುಡಿಯುತ್ತೀರಾ.? ಆರೋಗ್ಯ ತಜ್ಞರು ಹೇಳುವುದೇನು ಗೊತ್ತಾ.?

04/08/2025 10:10 PM

ಅಸಂಘಟಿತ ಕಾರ್ಮಿಕರ ಹಿತಕಾಯಲು ಸರ್ಕಾರ ಬದ್ಧ: ಸಚಿವ ಸಂತೋಷ್‌ ಲಾಡ್

04/08/2025 9:52 PM

ಒಂದೇ ಹಳ್ಳಿಯಲ್ಲಿ 47 ‘IAS, IPS ಅಧಿಕಾರಿ’ಗಳು.! ಪ್ರತಿ ಮನೆಯಲ್ಲೂ ಒಬ್ಬ ಅಧಿಕಾರಿ, ಇದು ಭಾರತದ ‘UPSC ವಿಲೇಜ್’

04/08/2025 9:46 PM

ಹೈಕೋರ್ಟ್ ತಡೆಯಾಜ್ಞೆ ನೀಡಿದೆ, ಸಾರಿಗೆ ಮುಷ್ಕರದಲ್ಲಿ ಪಾಲ್ಗೊಳ್ಳಬೇಡಿ: ನೌಕರರಿಗೆ KSRTC, BMTC ಎಂಡಿ ಮನವಿ

04/08/2025 9:45 PM
State News
KARNATAKA

ಅಸಂಘಟಿತ ಕಾರ್ಮಿಕರ ಹಿತಕಾಯಲು ಸರ್ಕಾರ ಬದ್ಧ: ಸಚಿವ ಸಂತೋಷ್‌ ಲಾಡ್

By kannadanewsnow0904/08/2025 9:52 PM KARNATAKA 3 Mins Read

ಶಿವಮೊಗ್ಗ : ರಾಜ್ಯದಲ್ಲಿ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಹಿನ್ನೆಲೆಯಲ್ಲಿ ಸರ್ಕಾರವು ಈಗಾಗಲೇ ಅನೇಕ…

ಹೈಕೋರ್ಟ್ ತಡೆಯಾಜ್ಞೆ ನೀಡಿದೆ, ಸಾರಿಗೆ ಮುಷ್ಕರದಲ್ಲಿ ಪಾಲ್ಗೊಳ್ಳಬೇಡಿ: ನೌಕರರಿಗೆ KSRTC, BMTC ಎಂಡಿ ಮನವಿ

04/08/2025 9:45 PM

ನಾಳೆ ಮುಷ್ಕರದಲ್ಲಿ ‘ಸಾರಿಗೆ ನೌಕರ’ರು ಪಾಲ್ಗೊಳ್ಳಬಾರದು: ‘KSRTC, BMTC ಎಂಡಿ’ ಮನವಿ

04/08/2025 8:34 PM

ನಾಳೆ ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ‘ಸಾರಿಗೆ ನೌಕರ’ರಿಗೆ ‘KSRTC ಎಂಡಿ ಅಕ್ರಂ ಪಾಷಾ’ ಮನವಿ

04/08/2025 8:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.