Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿದ್ಯುತ್ ಸ್ಪರ್ಶಿಸಿ ಯುವಕ ಸಾವು:ಹಿಟ್ಟು, ಪುಡಿ ಮತ್ತು ರೋಲಿಂಗ್ ಪಿನ್ ನಿಂದ ಉಜ್ಜಿ ಬದುಕಿಸಲು ಪ್ರಯತ್ನಿಸಿದ ಕುಟುಂಬ!

26/07/2025 10:08 AM
vidhana soudha

BREAKING : ರಾಜ್ಯ ಸರ್ಕಾರದಿಂದ `ಕಟ್ಟಡ ನಕ್ಷೆ’ ಉಲ್ಲಂಘಿಸಿರುವವರಿಗೆ ಗುಡ್ ನ್ಯೂಸ್ : ಶೇ.15ರಷ್ಟು ಹೆಚ್ಚುವರಿ ನಿರ್ಮಾಣ ಸಕ್ರಮ!

26/07/2025 10:00 AM

ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣ : ಬಾಂಗ್ಲಾದೇಶದ ವ್ಯಕ್ತಿಗೆ ಜಾಮೀನು ನೀಡಲು ಮುಂಬೈ ಪೊಲೀಸರ ವಿರೋಧ

26/07/2025 9:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಇನ್ಮುಂದೆ ಈ ಎಲ್ಲದಕ್ಕೂ ಮೇಲಿನ ಅಧಿಕಾರಿ ಅನುಮೋದನೆ ಕಡ್ಡಾಯ: ಕರ್ನಾಟಕ ಡಿಜಿ-ಐಜಿಪಿ ಆದೇಶ
KARNATAKA

BIG NEWS: ಇನ್ಮುಂದೆ ಈ ಎಲ್ಲದಕ್ಕೂ ಮೇಲಿನ ಅಧಿಕಾರಿ ಅನುಮೋದನೆ ಕಡ್ಡಾಯ: ಕರ್ನಾಟಕ ಡಿಜಿ-ಐಜಿಪಿ ಆದೇಶ

By kannadanewsnow0925/07/2025 5:30 AM

ಬೆಂಗಳೂರು: ಇನ್ಮುಂದೆ ಪ್ರಥಮ ವರ್ತಮಾನ ವರದಿಯಲ್ಲಿ ಹಾಗೂ ತನಿಖೆಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ ಅಪರಾಧಿಕ ಕಲಂಗಳಾದ 304, 103(2), 111 ಮತ್ತು 113(ಬಿ)ಗಳನ್ನು ಅಳವಡಿಸಿಕೊಳ್ಳುವ ಮುನ್ನ ಮೇಲಾಧಿಕಾರಿಗಳ ಅನುಮೋದನೆ ಪಡೆಯುವುದು ಕಡ್ಡಾಯಗೊಳಿಸಿ ಕರ್ನಾಟಕ ಡಿಜಿ-ಐಜಿಪಿ ಡಾ.ಎಂ.ಎ ಸಲೀಂ ಆದೇಶಿಸಿದ್ದಾರೆ.

ಈ ಕುರಿತಂತೆ ಎಲ್ಲಾ ಘಟಕಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿರುವಂತ ಅವರು, ರಾಜ್ಯದ ಎಲ್ಲಾ ಠಾಣಾಧಿಕಾರಿಗಳು ಹಾಗೂ ತನಿಖಾಧಿಕಾರಿಗಳು ಪ್ರಥಮ ವರ್ತಮಾನ ವರದಿಯಲ್ಲಿ ಹಾಗೂ ತನಿಖೆಯಲ್ಲಿ ಭಾರತ ನ್ಯಾಯ ಸಂಹಿತೆಯ 304, 103(2), 111 & 113(ಬಿ) ಗಳನ್ನು ಅಳವಡಿಸಿಕೊಳ್ಳುವ ಮೊದಲು, ಮೇಲಾಧಿಕಾರಿಗಳ ಅನುಮೋದನೆಯನ್ನು ಪಡೆದುಕೊಳ್ಳುವುದು. ಈ ಸುತ್ತೋಲೆಯಾನುಸಾರ ಕರ್ನಾಟಕ ರಾಜ್ಯದ ಠಾಣಾಧಿಕಾರಿಗಳಿಗೆ ಹಾಗೂ ತನಿಖಾಧಿಕಾರಿಗಳಿಗೆ ಈ ಕೆಳಕಂಡ ಸೂಚನೆಗಳನ್ನು ನೀಡಲಾಗಿದೆ ಎಂದಿದ್ದಾರೆ.

1. ದೂರುದಾರರು ಸಲ್ಲಿಸುವ ದೂರನ್ನು ಸ್ವೀಕರಿಸಿದಾಗ, ಅದರಲ್ಲಿ ಭಾರತ ನ್ಯಾಯ ಸಂಹಿತೆ-2023 ರ ಅಪರಾಧಿಕ ಕಲಂ ಗಳಾದ 304, 103(2), 111 & 113(ಬಿ) ಗಳ ಅಪರಾಧಿಕ ಅಂಶಗಳು ಮೇಲ್ನೋಟಕ್ಕೆ ಕಂಡುಬರುತ್ತವೆಯೇ ಎಂಬುದನ್ನು ಪರಿಶೀಲಿಸುವುದು.

2. ಸದರಿ ದೂರಿನಲ್ಲಿ ಮೇಲ್ಕಾಣಿಸಿದ ಅಪರಾಧಿಕ ಅಂಶಗಳು ಮೇಲ್ನೋಟಕ್ಕೆ ಕಂಡುಬರುತ್ತಿವೆ ಎಂದು ಠಾಣಾಧಿಕಾರಿಗೆ ಅಥವಾ ತನಿಖಾಧಿಕಾರಿಗಳಿಗೆ ಕಂಡುಬಂದಾಗ ತನ್ನ ಅಭಿಪ್ರಾಯ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿ, ಸದರಿ ಅನ್ವಯವಾಗುವ ಕಲಂಗಳನ್ನು ಪ್ರಥಮ ವರ್ತಮಾನ ವರದಿಯಲ್ಲಿ ಅಥವಾ ತನಿಖೆಯಲ್ಲಿ ಅಳವಡಿಸಿಕೊಳ್ಳಲು ಅನುಮೋದಿಸುವಂತೆ ಕೋರಿಕೆ

3. ಸದರಿ ಅಭಿಪ್ರಾಯ ವರದಿ ಹಾಗೂ ಕೋರಿಕೆಯನ್ನು ಸ್ವೀಕರಿಸಿದ ಹಿರಿಯ ಪೊಲೀಸ್‌ ಅಧಿಕಾರಿಗಳು ಅವುಗಳನ್ನು ಪರಿಶೀಲಿಸಿ, ಮೇಲ್ನೋಟಕ್ಕೆ ದೂರಿನಲ್ಲಿ ಹಾಗೂ ತನಿಖೆಯಲ್ಲಿ ಸದರಿ ಅಪರಾಧಗಳ ಅಂಶಗಳು ಮೇಲ್ನೋಟಕ್ಕೆ ಕಂಡುಬಂದರೆ ಅಂತಹ ಕಲಂಗಳನ್ನು ಅಳವಡಿಸಿಕೊಳ್ಳಲು ಅನುಮೋದನೆಯನ್ನು ನೀಡುವುದು. ಸದರಿ ಅನುಮೋದನೆಯ ನಂತರ ಠಾಣಾಧಿಕಾರಿ | ತನಿಖಾಧಿಕಾರಿಯು ಅನುಮೋದಿತ ಅಪರಾಧಿಕ ಕಲಂಗಳನ್ನು ಪ್ರಥಮ ವರ್ತಮಾನ ವರದಿ | ತನಿಖೆಯಲ್ಲಿ ಅಳವಡಿಸಿಕೊಂಡು, ತನಿಖೆಯನ್ನು ಕೈಗೊಳ್ಳುವುದು.

4. ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರ ಮೇಲ್ಪಟ್ಟು ಹಾಗೂ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಂಬಂಧಿಸಿದ ವಿಭಾಗದ ಉಪ ಪೊಲೀಸ್ ಆಯುಕ್ತರನ್ನೊಳಗೊಂಡಂತೆ ಮೇಲಾಧಿಕಾರಿಗಳು 304, 103(2) & 111 ಅನುಮೋದನೆಯನ್ನು ನೀಡುವಂತ ಅಧಿಕಾರಿಗಳಾಗಿರುತ್ತಾರೆ.

5. ಕಲಂ, 113(ಬಿ) ಗೆ ಸಂಬಂಧಿಸಿದಂತೆ ಅನುಮೋದನೆ ನೀಡುವ ಅಧಿಕಾರಿಯು, ಜಿಲ್ಲಾ ಮಟ್ಟದಲ್ಲಿ ಪೊಲೀಸ್ ಅಧೀಕ್ಷಕರು ಹಾಗೂ ಕಮೀಷನರೇಟ್ ವ್ಯಾಪ್ತಿಯಲ್ಲಿ ಉಪ ಪೊಲೀಸ್ ಆಯುಕ್ತರು ಒಳಗೊಂಡಂತೆ ಮೇಲಾಧಿಕಾರಿಗಳು ಆಗಿರುತ್ತಾರೆ.

6. ಒಂದು ವೇಳೆ ಕಾನೂನು ಮತ್ತು ಸುವ್ಯವಸ್ಥೆ ಅಥವಾ ಸಾರ್ವಜನಿಕ ಸುರಕ್ಷತೆಯ ತುರ್ತು ಸಂದರ್ಭಗಳಲ್ಲಿ ಲಿಖಿತವಾಗಿ ಕೋರಿಕೆಯನ್ನು ಸಲ್ಲಿಸಲು ಮತ್ತು ಅನುಮೋದನೆಯನ್ನು ಪಡೆದುಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಆಗ ಸಂಬಂಧಿಸಿದ ಠಾಣಾಧಿಕಾರಿ | ತನಿಖಾಧಿಕಾರಿಗಳು ಮೌಖಿಕವಾಗಿ ತಮ್ಮ ಕೋರಿಕೆಯನ್ನು ಸಲ್ಲಿಸಿ, ಅನುಮೋದಿಸುವ ಹಿರಿಯ ಅಧಿಕಾರಿಯಿಂದ ಮೌಖಿಕವಾಗಿ ಅನುಮೋದನೆಯ ಆದೇಶವನ್ನು ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳುವುದು. ತದನಂತರ 24 ಘಂಟೆಯೊಳಗಾಗಿ ಲಿಖಿತ ರೂಪದಲ್ಲಿ ಘಟನೋತ್ತರ ಅನುಮೋದನೆಯನ್ನು ಘಟಕದ ಮುಖ್ಯಸ್ಥರು ಮೇಲ್ಕಂಡ ಎಲ್ಲಾ ಕ್ರಮಗಳು ಪಾಲನೆಯಾಗುವಂತೆ ನೋಡಿಕೊಳ್ಳುವುದು ಹಾಗೂ ಪ್ರತಿ ಅಪರಾಧ ವಿಶ್ಲೇಷಣಾ ಸಭೆಗಳಲ್ಲಿ ಈ ಈ ಕ್ರಮಗಳು ಪಾಲನೆಯಾಗುತ್ತಿರುವುದನ್ನು ಪರಿಶೀಲಿಸಿಕೊಳ್ಳುವುದು.

ಘಟಕಾಧಿಕಾರಿಗಳು ಮೇಲ್ಕಂಡ ಎಲ್ಲಾ ಸೂಚನೆಗಳನ್ನು ಕೂಡಲೇ ಅನುಷ್ಠಾನಗೊಳಿಸಿ, ಅನುಸರಿಸಲು ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ಪೊಲೀಸ್ ಠಾಣೆಗಳು, ವಿಶೇಷ ಘಟಕಗಳು ಮತ್ತು ತನಿಖಾ ತಂಡಗಳಿಗೆ ಸೂಚಿಸುವಂತೆ ನೀರ್ದೇಶಿಸಲಾಗಿದೆ.

ವರದಿ; ವಸಂತ ಬಿ ಈಶ್ವರಗೆರೆ..,

Share. Facebook Twitter LinkedIn WhatsApp Email

Related Posts

vidhana soudha

BREAKING : ರಾಜ್ಯ ಸರ್ಕಾರದಿಂದ `ಕಟ್ಟಡ ನಕ್ಷೆ’ ಉಲ್ಲಂಘಿಸಿರುವವರಿಗೆ ಗುಡ್ ನ್ಯೂಸ್ : ಶೇ.15ರಷ್ಟು ಹೆಚ್ಚುವರಿ ನಿರ್ಮಾಣ ಸಕ್ರಮ!

26/07/2025 10:00 AM1 Min Read

ALERT : ಸಾರ್ವಜನಿಕರೇ ಎಚ್ಚರ : ಇನ್ನು ಬೀದಿನಾಯಿಗಳಿಗೆ ರಸ್ತೆಯಲ್ಲಿ ಊಟ ಹಾಕಿದ್ರೆ ಕಠಿಣ ಕ್ರಮ ಫಿಕ್ಸ್.!

26/07/2025 9:34 AM1 Min Read

ಶನಿವಾರದಂದು ಈ ಮಂತ್ರವನ್ನು ಪಠಿಸುವುದರಿಂದ ಸಾಲದ ಮೇಲಿನ ಬಡ್ಡಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ.!

26/07/2025 9:19 AM3 Mins Read
Recent News

ವಿದ್ಯುತ್ ಸ್ಪರ್ಶಿಸಿ ಯುವಕ ಸಾವು:ಹಿಟ್ಟು, ಪುಡಿ ಮತ್ತು ರೋಲಿಂಗ್ ಪಿನ್ ನಿಂದ ಉಜ್ಜಿ ಬದುಕಿಸಲು ಪ್ರಯತ್ನಿಸಿದ ಕುಟುಂಬ!

26/07/2025 10:08 AM
vidhana soudha

BREAKING : ರಾಜ್ಯ ಸರ್ಕಾರದಿಂದ `ಕಟ್ಟಡ ನಕ್ಷೆ’ ಉಲ್ಲಂಘಿಸಿರುವವರಿಗೆ ಗುಡ್ ನ್ಯೂಸ್ : ಶೇ.15ರಷ್ಟು ಹೆಚ್ಚುವರಿ ನಿರ್ಮಾಣ ಸಕ್ರಮ!

26/07/2025 10:00 AM

ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣ : ಬಾಂಗ್ಲಾದೇಶದ ವ್ಯಕ್ತಿಗೆ ಜಾಮೀನು ನೀಡಲು ಮುಂಬೈ ಪೊಲೀಸರ ವಿರೋಧ

26/07/2025 9:58 AM

BREAKING : ದೇಶಾದ್ಯಂತ 26ನೇ ವರ್ಷದ `ಕಾರ್ಗಿಲ್ ವಿಜಯ್ ದಿವಸ್’ ಆಚರಣೆ | WATCH VIDEO

26/07/2025 9:55 AM
State News
vidhana soudha KARNATAKA

BREAKING : ರಾಜ್ಯ ಸರ್ಕಾರದಿಂದ `ಕಟ್ಟಡ ನಕ್ಷೆ’ ಉಲ್ಲಂಘಿಸಿರುವವರಿಗೆ ಗುಡ್ ನ್ಯೂಸ್ : ಶೇ.15ರಷ್ಟು ಹೆಚ್ಚುವರಿ ನಿರ್ಮಾಣ ಸಕ್ರಮ!

By kannadanewsnow5726/07/2025 10:00 AM KARNATAKA 1 Min Read

ಬೆಂಗಳೂರು : ರಾಜ್ಯ ಸರ್ಕಾರವು ಕಟ್ಟಡ ಮಾಲೀಕರಿಗೆ ಸಿಹಿಸುದ್ದಿ ನೀಡಿದ್ದು, ಶೇ.15 ರಷ್ಟು ಉಲ್ಲಂಘನೆಯಾಗಿದ್ರೆ ಸಕ್ರಮಗೊಳಿಸಲಾಗುತ್ತದೆ ಎಂದು ಸರ್ಕಾರ ಆದೇಶ…

ALERT : ಸಾರ್ವಜನಿಕರೇ ಎಚ್ಚರ : ಇನ್ನು ಬೀದಿನಾಯಿಗಳಿಗೆ ರಸ್ತೆಯಲ್ಲಿ ಊಟ ಹಾಕಿದ್ರೆ ಕಠಿಣ ಕ್ರಮ ಫಿಕ್ಸ್.!

26/07/2025 9:34 AM

ಶನಿವಾರದಂದು ಈ ಮಂತ್ರವನ್ನು ಪಠಿಸುವುದರಿಂದ ಸಾಲದ ಮೇಲಿನ ಬಡ್ಡಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ.!

26/07/2025 9:19 AM

BREAKING : ರಾಜ್ಯದಲ್ಲಿ ‘ಯೂರಿಯಾ ಗೊಬ್ಬರ’ಸಿಗದೇ ರೈತರ ಪರದಾಟ :ಹಲವೆಡೆ ಭುಗಿಲೆದ್ದ ಪ್ರತಿಭಟನೆ.!

26/07/2025 9:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.