Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಎಲ್ಲಾ ಶಾಲೆಗಳಲ್ಲಿ `ರಾಷ್ಟ್ರೀಯ ರಸಪ್ರಶ್ನೆ’ ಕಾರ್ಯಕ್ರಮ ಆಯೋಜನೆ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

24/07/2025 6:00 AM

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆ’ (OPS) ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

24/07/2025 5:58 AM

ರಾಜ್ಯದಲ್ಲಿ `ಪೌತಿ ಖಾತೆ’ ಮುಗಿದ ತಕ್ಷಣ `ಪೋಡಿ ಮುಕ್ತ ಗ್ರಾಮ’ ಅಭಿಯಾನ : ಸಚಿವ ಕೃಷ್ಣ ಬೈರೇಗೌಡ

24/07/2025 5:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಪ್ರಯಾಣ ಭತ್ಯೆ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | Govt Employee
KARNATAKA

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಪ್ರಯಾಣ ಭತ್ಯೆ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | Govt Employee

By kannadanewsnow5724/07/2025 5:47 AM

ಬೆಂಗಳೂರು : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಯ ಅಧಿಕಾರಿಗಳು /ನೌಕರರು ಅಧಿಕೃತ ಪ್ರಯಾಣ ಸಂಬಂಧ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್(MSIL) ನಿಂದ ಖರೀದಿಸಲಾದ ಪ್ರಯಾಣ ಟಿಕೆಟ್ಗಳ ಮೊತ್ತವನ್ನು ಖಜಾನೆ-2 ರ ಮೂಲಕ ಪಾವತಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲೆ(1) ರಲ್ಲಿ ಓದಲಾದಂತೆ ಕರ್ನಾಟಕ ಆರ್ಥಿಕ ಸಂಹಿತೆ 1958, ಅನುಚ್ಛೇದ 137ರ ಪ್ರಕಾರ ಪ್ರಯಾಣ ಭತ್ಯೆಯನ್ನು “Pay bill” ನಲ್ಲಿ ಸೆಳೆದು ಸರ್ಕಾರಿ ನೌಕರರ/ಅಧಿಕಾರಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.

ಮೇಲೆ (2) ರಲ್ಲಿ ಓದಲಾದ ಕಡತದಲ್ಲಿ, ಅಡ್ವಕೇಟ್ ಜನರಲ್ ಹಾಗೂ ಹೆಚ್ಚುವರಿ ಅಡ್ವಕೇಟ್ ಜನರಲ್ರವರು ಕೈಗೊಳ್ಳುವ ಪ್ರವಾಸಕ್ಕೆ ಟ್ರಾವೆಲ್ ಏಜೆನ್ಸಿಯವರಿಂದ ಖರೀದಿಸಲಾದ ಪ್ರಯಾಣ ಟಿಕೇಟ್ಗಳ ಮೊತ್ತವನ್ನು ಖಜಾನೆಯಿಂದ ಪಾವತಿ ಪಡೆದ ಮೇಲೆ ಟ್ರಾವೆಲ್ ಏಜೆನ್ಸಿಗೆ ಚೆಕ್ ಅಥವಾ ಡಿ.ಡಿ. ಮೂಲಕ ಪಾವತಿಸಿದಲ್ಲಿ ವಿಳಂಬವಾಗಿ, ಮುಂದೆ ತುರ್ತು ಸಂದರ್ಭದಲ್ಲಿ ಟ್ರಾವೆಲ್ ಏಜೆನ್ಸಿರವರು ಟಿಕೆಟ್ ಕಾದಿರಿಸಲು ನಿರಾಕರಿಸುವ ಸಂಭವವಿರುವುದರಿಂದ, ಟ್ರಾವೆಲ್ ಏಜೆನ್ಸಿರವರಿಗೆ ಟಿಕೆಟ್ ಮೊತ್ತವನ್ನು ನೇರವಾಗಿ ಖಜಾನೆ-2ರ ಮೂಲಕ ಪಾವತಿಸುವಂತೆ ಸೂಚನೆಗಳನ್ನು ನೀಡಲು ಕೋರಿರುತ್ತಾರೆ.

ಮೇಲೆ(3) ರಲ್ಲಿ ಓದಲಾದ ಸುತ್ತೋಲೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಅಧಿಕೃತ ಪ್ರಯಾಣ ಮಾಡುವಾಗ ವಿಮಾನಯಾನದ ಟಿಕೆಟ್ಗಳನ್ನು ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ನಿಂದ ಅಥವಾ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯ ವೆಬ್ಸೈಟ್ ನಿಂದ ಮಾತ್ರ ಖರೀದಿಸುವಂತೆ ಸೂಚಿಸಲಾಗಿದೆ.

ಆದ್ದರಿಂದ, ಪ್ರಯಾಣದ ಟಿಕೇಟ್ಗಳ ಮೊತ್ತವನ್ನು ಖಜಾನೆ-2 ರ ಮೂಲಕ ನೇರವಾಗಿ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ರವರಿಗೆ ಪಾವತಿಸುವ ಸಲುವಾಗಿ ಈ ಕೆಳಕಂಡಂತೆ ಆದೇಶಿಸಲಾಗಿದೆ.

1. ಸರ್ಕಾರದ ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ಅಧಿಕೃತ ಪ್ರಯಾಣ ಸಂಬಂಧ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ನಿಂದ ಖರೀದಿಸಿದ ಪ್ರಯಾಣ ಟಿಕೆಟ್ಗಳ ದರವನ್ನು ನೇರವಾಗಿ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಗೆ ಪಾವತಿಸುವ ಸಲುವಾಗಿ, ಪ್ರಯಾಣಕ್ಕೆ ಸಂಬಂಧಿಸಿದಂತೆ ಸಲ್ಲಿಸುವ ಪ್ಲೇಮಿನೊಂದಿಗೆ “ಪ್ರಯಾಣದ ಟಿಕೆಟ್ ನ ಮೊತ್ತವನ್ನು ನೇರವಾಗಿ ಟ್ರಾವೆಲ್ ಏಜೆನ್ಸಿಗೆ ಪಾವತಿಸುವುದು ಹಾಗೂ ಆ ರೀತಿ ಪಾವತಿಸಿದಲ್ಲಿ ನನ್ನ ಅಭ್ಯಂತರವೇನೂ ಇರುವುದಿಲ್ಲ” ಎಂಬ ದೃಢೀಕರಣವನ್ನು ಕಡ್ಡಾಯವಾಗಿ ಲಗತ್ತಿಸಿ ಸಲ್ಲಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಪ್ರಯಾಣದ ಬಿಲ್ಲನ್ನು ಖಜಾನೆಗೆ ಸಲ್ಲಿಸುವ ಅಧಿಕಾರಿಗಳು, ಟ್ರಾವೆಲ್ ಏಜೆನ್ಸಿಯನ್ನು ಖಜಾನೆಯಲ್ಲಿ “Recipient ID” ಯಾಗಿ ಸೃಜಿಸಿ, ಪ್ರಯಾಣದ ಟಿಕೆಟ್ ದರವನ್ನು ಖಜಾನೆ-2 ರ ಮೂಲಕ ನೇರವಾಗಿ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಗೆ ಪಾವತಿಸಲು ಮಂಜೂರಾತಿ ನೀಡಿದೆ.

2. ಇನ್ನಿತರೆ ದಿನಭತ್ಯೆ ಮುಂತಾದವುಗಳನ್ನು ನೌಕರನ/ಅಧಿಕಾರಿಯ ಬ್ಯಾಂಕ್ ಖಾತೆಗೆ ಹಿಂದಿನಂತೆಯೇ ಜಮೆ ಮಾಡಬಹುದಾಗಿದೆ.

3. ಪ್ರಯಾಣ ಟಿಕೆಟ್ ಖರೀದಿಸುವಾಗ ಈ ಸಂಬಂಧ ಸಿ.ಆ.ಸು ಇಲಾಖೆ ಹೊರಡಿಸಿರುವ ಸುತ್ತೋಲೆ ಸಂ: ಸಿಆಸುಇ 45 ಹೆಚ್ಜಿಜಿ 2021, ದಿನಾಂಕ:05.07.2021 ಹಾಗೂ ದಿನಾಂಕ:24.08.2021 ರಲ್ಲಿ ನೀಡಿರುವ ಸೂಚನೆಗಳನ್ನು ಅಧಿಕಾರಿಗಳು ಪಾಲಿಸತಕ್ಕದ್ದು.

4. ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ಗೆ, ಪ್ರಯಾಣ ಮಾಡುವ ಅಧಿಕಾರಿಯಿಂದ ಚೆಕ್ ಮೂಲಕ ಪಾವತಿಯಾಗದೆ ಖಜಾನೆಯಿಂದ ನೇರವಾಗಿ ಪಾವತಿಯಾಗುವುದರಿಂದ, ಸ್ವೀಕರಿಸುವ ಮೊತ್ತವು ಯಾವ ಟಿಕೆಟ್ ಗೆ ಸಂಬಂಧಿಸಿದೆ ಎಂಬುದು ತಿಳಿಯದಿರುವುದರಿಂದ, ಸಂಬಂಧಪಟ್ಟ DDO ರವರು ಪ್ರತಿ ತಿಂಗಳು ತಾವು ತೀರ್ಣಗೊಳಿಸಿದ ಪ್ರಯಾಣ ಭತ್ಯೆ ಬಿಲ್ಲಿನ UTR ಸಂಖ್ಯೆ, ಪ್ರಯಾಣಿಸಿದ ಅಧಿಕಾರಿ ಹೆಸರು, ಪ್ರಯಾಣದ ದಿನಾಂಕ ಮುಂತಾದ ವಿವರಗಳನ್ನು ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ಗೆ ಕಳುಹಿಸುವುದು.

BREAKING : State `government employees' Note: Important order from government regarding `travel allowance' | Govt Employee
Share. Facebook Twitter LinkedIn WhatsApp Email

Related Posts

ರಾಜ್ಯದ ಎಲ್ಲಾ ಶಾಲೆಗಳಲ್ಲಿ `ರಾಷ್ಟ್ರೀಯ ರಸಪ್ರಶ್ನೆ’ ಕಾರ್ಯಕ್ರಮ ಆಯೋಜನೆ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

24/07/2025 6:00 AM1 Min Read

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆ’ (OPS) ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

24/07/2025 5:58 AM2 Mins Read

ರಾಜ್ಯದಲ್ಲಿ `ಪೌತಿ ಖಾತೆ’ ಮುಗಿದ ತಕ್ಷಣ `ಪೋಡಿ ಮುಕ್ತ ಗ್ರಾಮ’ ಅಭಿಯಾನ : ಸಚಿವ ಕೃಷ್ಣ ಬೈರೇಗೌಡ

24/07/2025 5:52 AM1 Min Read
Recent News

ರಾಜ್ಯದ ಎಲ್ಲಾ ಶಾಲೆಗಳಲ್ಲಿ `ರಾಷ್ಟ್ರೀಯ ರಸಪ್ರಶ್ನೆ’ ಕಾರ್ಯಕ್ರಮ ಆಯೋಜನೆ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

24/07/2025 6:00 AM

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆ’ (OPS) ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

24/07/2025 5:58 AM

ರಾಜ್ಯದಲ್ಲಿ `ಪೌತಿ ಖಾತೆ’ ಮುಗಿದ ತಕ್ಷಣ `ಪೋಡಿ ಮುಕ್ತ ಗ್ರಾಮ’ ಅಭಿಯಾನ : ಸಚಿವ ಕೃಷ್ಣ ಬೈರೇಗೌಡ

24/07/2025 5:52 AM

ಬಿ.ಸರೋಜಾದೇವಿ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಿ : ಸಿಎಂ ಸಿದ್ದರಾಮಯ್ಯಗೆ ನಟಿ ತಾರಾ ಮನವಿ

24/07/2025 5:51 AM
State News
KARNATAKA

ರಾಜ್ಯದ ಎಲ್ಲಾ ಶಾಲೆಗಳಲ್ಲಿ `ರಾಷ್ಟ್ರೀಯ ರಸಪ್ರಶ್ನೆ’ ಕಾರ್ಯಕ್ರಮ ಆಯೋಜನೆ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

By kannadanewsnow5724/07/2025 6:00 AM KARNATAKA 1 Min Read

ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ “ನಿಮ್ಮ ಸೈನ್ಯವನ್ನು ತಿಳಿದುಕೊಳ್ಳಿ” ಮತ್ತು “Wall of Heroes” ಉಪಕ್ರಮಗಳನ್ನು ಅಳವಡಿಸಿಕೊಳ್ಳಲು ರಾಷ್ಟ್ರೀಯ…

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆ’ (OPS) ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

24/07/2025 5:58 AM

ರಾಜ್ಯದಲ್ಲಿ `ಪೌತಿ ಖಾತೆ’ ಮುಗಿದ ತಕ್ಷಣ `ಪೋಡಿ ಮುಕ್ತ ಗ್ರಾಮ’ ಅಭಿಯಾನ : ಸಚಿವ ಕೃಷ್ಣ ಬೈರೇಗೌಡ

24/07/2025 5:52 AM

ಬಿ.ಸರೋಜಾದೇವಿ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಿ : ಸಿಎಂ ಸಿದ್ದರಾಮಯ್ಯಗೆ ನಟಿ ತಾರಾ ಮನವಿ

24/07/2025 5:51 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.