Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಬ್ರಿಟನ್ ಮಾಜಿ ರಾಜದಂಪತಿಗೆ ಸಂಕಷ್ಟ: ಆಂಡ್ರ್ಯೂ, ಮಾಜಿ ಪತ್ನಿ ಸಾರಾಗೆ ಜೈಲು ಭೀತಿ!

09/11/2025 8:31 AM

ಶಿವಮೊಗ್ಗ ‘KUWJ ಸಂಘ’ದ ಅಧ್ಯಕ್ಷರಾಗಿ ವೈದ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಾಲಸ್ಬಾಮಿ, ರಾಜ್ಯ ಸಮಿತಿಗೆ ಶಿವಕುಮಾರ್ ಅವಿರೋಧವಾಗಿ ಆಯ್ಕೆ

09/11/2025 8:30 AM

SHOCKING : ಆಘಾತಕಾರಿ ಘಟನೆ : ಹೆರಿಗೆಯಾದ ತಕ್ಷಣ ಹೆತ್ತ ಮಗುವನ್ನೇ ಕೊಂದ ಮಹಿಳೆ.!

09/11/2025 8:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿಗಂದೂರು ಸೇತುವೆಗೆ ಶ್ರೀ ಚೌಡೇಶ್ವರಿ ಹೆಸರಿಡಲು ಗಡ್ಕರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ
KARNATAKA

ಸಿಗಂದೂರು ಸೇತುವೆಗೆ ಶ್ರೀ ಚೌಡೇಶ್ವರಿ ಹೆಸರಿಡಲು ಗಡ್ಕರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ

By kannadanewsnow0914/07/2025 6:57 PM

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಶರಾವತಿ ನದಿ ಹಿನ್ನೀರಿನಲ್ಲಿ ನಿರ್ಮಿಸಿರುವ ಭಾರತದ 2ನೇ ಅತಿ ಉದ್ದದ ಕೇಬಲ್ ಬ್ರಿಡ್ಜ್ ಅಂಬಾರಗೋಡ್ಲು-ಕಳಸವಳ್ಳಿ-ಸಿಗಂದೂರು ಸೇತುವೆಗೆ ʼಮಾತಾ ಶ್ರೀ ಚೌಡೇಶ್ವರಿ ಸೇತುವೆʼಯಾಗಿ ಹೆಸರಿಡುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನವಿ ಮಾಡಿದರು.

ಸಾಗರ ತಾಲೂಕಿನ ಶ್ರೀಕ್ಷೇತ್ರ ಸಿಗಂದೂರಿನಲ್ಲಿ ಇಂದು ನೂತನ ಸೇತುವೆ ಲೋಕಾರ್ಪಣೆ ಸಮಾರಂಭ ಉದ್ದೇಶಿಸಿ ಮಾತನಾಡಿ, ಈ ಹೊಸ ಸೇತುವೆಗೆ ತಾಯಿ ಶ್ರೀ ಚೌಡೇಶ್ವರಿ ದೇವಿ ಹೆಸರನ್ನೇ ನಾಮಕರಣ ಮಾಡುವಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಲ್ಲಿ ಮನವಿ ಮಾಡಿದರು.

ಸಂಸದ ಬಿ.ವೈ.ರಾಘವೇಂದ್ರ ಅವರ ಒತ್ತಾಸೆಯೂ ಇದೇ ಆಗಿದೆ. ಹಾಗಾಗಿ ಅವರ ಅಭಿಲಾಷೆಯಂತೆ ಸಿಗಂದೂರು ಸೇತುವೆಗೆ ಮಾತಾ ಚೌಡೇಶ್ವರಿ ಹೆಸರನ್ನು ವೇದಿಕೆಯಲ್ಲಿ ಘೋಷಿಸಬೇಕೆಂದು ಗಡ್ಕರಿ ಅವರನ್ನು ಒತ್ತಾಯಿಸಿದರು.

ದೇಶದಲ್ಲಿ ಇಂದು ಸಚಿವ ನಿತಿನ್‌ ಗಡ್ಕರಿ ಅವರು ಸಂಚಾರ ಕ್ರಾಂತಿಯನ್ನೇ ಮಾಡುತ್ತಿದ್ದಾರೆ. 1998-99ರ ದಶಕದಲ್ಲಿ ಹಲವು ಪ್ರಥಮಗಳ ರೂವಾರಿ ಆಗಿದ್ದವರು, ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಶುರು ಮಾಡಿದ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಗೆ ರೂಪುರೇಷೆ ಕೊಟ್ಟಿದ್ದಲ್ಲದೆ, ದೇಶದಲ್ಲಿ ಹಳ್ಳಿಗಳ ರಸ್ತೆ ಸುಧಾರಣೆ, ವಿದ್ಯುತ್‌ ಯೋಜನೆಗಳನ್ನು ಸಾಕಾರಗೊಳಿಸಿದವರಾಗಿದ್ದಾರೆ ಎಂದು ಬಣ್ಣಿಸಿದರು.

ನಿತಿನ್ ಗಡ್ಕರಿ ʼರೋಡ್ಕರಿʼ ಆಗುತ್ತಿದ್ದಾರೆ

ಈ ಹಿಂದೆ ದೇಶದಲ್ಲಿ ಪ್ರತಿ ದಿನ ಕೇವಲ 7-8 ಕಿಮೀ ರಸ್ತೆ ನಿರ್ಮಾಣವಾಗುತ್ತಿತ್ತು. ಇದೀಗ ಸಚಿವ ನಿತಿನ್‌ ಗಡ್ಕರಿ ಅವರ ಸಾರಥ್ಯದಲ್ಲಿ ನಿತ್ಯವೂ 34 ಕಿ.ಮೀ. ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಗಡ್ಕರಿ ಅವರು ಈಗ ʼರೋಡ್ಕರಿʼ ಎನ್ನುವಷ್ಟರ ಮಟ್ಟಿಗೆ ರಸ್ತೆಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಜೋಶಿ ಬಣ್ಣಿಸಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರುವ ಮೊದಲು ದೇಶದಲ್ಲಿ 96000 ಕಿ.ಮೀ. ಹೆದ್ದಾರಿ ನಿರ್ಮಾಣವಾಗಿತ್ತು. ಅದರಲ್ಲೂ 6 ವರ್ಷದ ವಾಜಪೇಯಿ ಅವರ ಆಡಳಿತಾವಧಿಯಲ್ಲಿ 36000 ಕಿ.ಮೀ. ಆಗಿತ್ತು. ಇನ್ನು ಹಲವು ದಶಕಗಳ ಕಾಂಗ್ರೆಸ್‌ ಆಡಳಿತದಲ್ಲಿ 60000 ಕಿ.ಮೀ.ಆಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಹತ್ತೇ ವರ್ಷದ ಅವಧಿಯಲ್ಲಿ ಗಡ್ಕರಿ ಅವರ ಸಾರಥ್ಯದಲ್ಲಿ ಬರೋಬ್ಬರಿ 50000 ಕಿ.ಮೀ. ಹೆದ್ದಾರಿ ನಿರ್ಮಾಣ ಕಂಡಿದೆ ಎಂದರು.

ಕರ್ನಾಟಕದಲ್ಲಿ ಈ ಮೊದಲು 6200 ಕಿ.ಮೀ.ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿತ್ತು. ಇದೀಗ 9600 ಕಿ.ಮೀ.ಗೆ ವಿಸ್ತರಣೆಯಾಗಿದೆ ಎಂದ ಸಚಿವ ಪ್ರಲ್ಹಾದ ಜೋಶಿ ಅವರು ತುಂಬಿದ ಸಭೆಯಲ್ಲಿ ಅಂಕಿ ಅಂಶ ಸಹಿತ ವಿವರ ನೀಡಿ ಹೆದ್ದಾರಿ ಸಚಿವ ನಿತಿನ ಗಡ್ಕರಿ ಅವರ ಕಾರ್ಯವೈಖಯನ್ನು ವರ್ಣಿಸಿದರು.

ಹೆದ್ದಾರಿಗೆ ₹100 ಲಕ್ಷ ಕೋಟಿ ವ್ಯಯ:

ಪ್ರಧಾನಿ ನರೇಂದ್ರ ಮೋದಿ ಅವರು ನಮಗೆಲ್ಲ ʼಶಂಕುಸ್ಥಾಪನೆ ಮಾಡುವ ಪ್ರತಿ ಅಭಿವೃದ್ಧಿ ಕಾರ್ಯಗಳನ್ನು ನೀವೇ ಉದ್ಘಾಟನೆ ಮಾಡಬೇಕುʼ ಎಂಬ ನಿರ್ದೇಶನ ನೀಡಿದ್ದಾರೆ. ಸಚಿವ ಗಡ್ಕರಿ ಅವರು ಅಕ್ಷರಶಃ ಅದನ್ನು ಪಾಲಿಸುತ್ತ ಬಂದಿದ್ದಾರೆ. 2047ಕ್ಕೆ ಪ್ರತಿ ದಿನ 100 ಕಿ.ಮೀ. ರಸ್ತೆ ನಿರ್ಮಿಸುವ ಗುರಿಯೊಂದಿಗೆ ಸಂಚರಿಸುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ₹100 ಲಕ್ಷ ಕೋಟಿ ವ್ಯಯಿಸುತ್ತಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ಇಂದು ಅಭಿವೃದ್ಧಿ ಪರ್ವ ನಿರಂತರವಾಗಿದೆ. ಇಷ್ಟರಲ್ಲೇ ವಿಕಸಿತ ಭಾರತ ನಿರ್ಮಾಣವಾಗಲಿದೆ. ಮೂರನೇ ಅತಿ ದೊಡ್ಡ ಅರ್ಥ ವ್ಯವಸ್ಥೆಯ ರಾಷ್ಟ್ರವಾಗಲಿದೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಇತಿಹಾಸದಲ್ಲೇ ವಿಶಿಷ್ಠ ಎನ್ನುವಂತೆ ₹423.15 ಕೋಟಿ ವೆಚ್ಚದಲ್ಲಿ ಸಿಗಂದೂರು ಸೇತುವೆ ನಿರ್ಮಿಸಲಾಗಿದೆ. ರಾಜ್ಯದ ಮೊದಲ ಕೇಬಲ್ ಆಧಾರಿತ ಸೇತುವೆ ಇದಾಗಿದ್ದು, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ಪ್ರಮುಖ ಸಂಪರ್ಕ ಕೊಂಡಿಯೂ ಆಗಲಿದೆ. ಒಂದು ಸಣ್ಣ ರಸ್ತೆಯಂತಿದ್ದ ಇದನ್ನು ಸಚಿವ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿಯಾಗಿ ನಿರ್ಮಿಸಿ ಅದ್ಭುತ ಸೇತುವೆ ಕಲ್ಪಿಸಿಕೊಟ್ಟಿದ್ದಾರೆ. 110 ಕಿ.ಮೀ.ಸುತ್ತುವರಿಯಬೇಕಿದ್ದ ಸಂಚಾರವನ್ನು ಇದೀಗ ಕೇವಲ 30 ಕಿ.ಮೀ.ವ್ಯಾಪ್ತಿಗೆ ತಂದಿದ್ದಾರೆ ಎಂದು ಹೇಳಿದರು.

1942ರಲ್ಲಿ ಮೈಸೂರು ಮಹಾರಾಜರು ಹಿರೇಭಾಸ್ಕರ ಅಣೆಕಟ್ಟು ನಿರ್ಮಿಸಿದ ಬಳಿಕ 1964ರಲ್ಲಿ 1819 ಅಡಿ ಎತ್ತರಿಸಿದ ನಂತರ ಈ ಭಾಗದಲ್ಲಿ ತೀವ್ರ ಸಮಸ್ಯೆ ಎದುರಾಗಿತ್ತು. ಜನರ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಗಡ್ಕರಿ ಅವರ ಇಚ್ಛಾಶಕ್ತಿಯಿಂದ ʼಅಂಬಾರಗೊಡ್ಲು-ಕಳಸವಳ್ಳಿʼ ಹೊಸ ಇತಿಹಾಸ ಬರೆದಿದೆ. ಅದರಂತೆ ಸೇತುವೆ ನಿರ್ಮಾಣ ಹೋರಾಟಕ್ಕೆ ಬಹು ದೊಡ್ಡ ಇತಿಹಾಸವೇ ಇದೆ. ಕಾಂಗ್ರೆಸ್‌ ಮುಖಂಡ ದಿ.ಭಾನುಪ್ರಕಾಶ ಅವರ ಶ್ರಮ ಅಪಾರವಾಗಿತ್ತು. ಅವರ ನಂತರ ಸ್ಥಳೀಯ ಯುವಕ ಪ್ರಸನ್ನ ಹೋರಾಟ ಸಮಿತಿ ಅಧ್ಯಕ್ಷರಾಗಿ ಇದನ್ನು ಸಾರ್ಥಕಗೊಳಿಸಿದರು ಎಂದು ಸ್ಮರಿಸಿದರು.

ಶಾಂತ ಸ್ವಭಾವಿತ ರಾಘವೇಂದ್ರ:

ಸಂಸದ ರಾಘವೇಂದ್ರ ಅವರು ಯಡಿಯೂರಪ್ಪ ಅವರಿಗಿಂತ ಅತ್ಯಂತ ಶಾಂತ ಸ್ವಭಾವದ ವ್ಯಕ್ತಿ. ಅಭಿವೃದ್ಧಿ ಕಾರ್ಯಗಳಲ್ಲಿ ಎತ್ತಿದ ಕೈ. ಕೇಂದ್ರ ಸರ್ಕಾರದಲ್ಲಿ ಒಂದು ರೀತಿ ʼಬೆನ್ನು ಬಿಡದ ಬೇತಾಳʼ ಎಂಬಂತೆ ಅಭಿವೃದ್ಧಿ ಕಾರ್ಯಗಳಿಗಾಗಿ ಎಲ್ಲರನ್ನು ಬೆನ್ನಟ್ಟಿ ಕೆಲಸ ಮಾಡಿಸಿಕೊಳ್ಳುತ್ತಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕರು, ಗಣ್ಯರನೇಕರು ಉಪಸ್ಥಿತರಿದ್ದರು.

Share. Facebook Twitter LinkedIn WhatsApp Email

Related Posts

ಶಿವಮೊಗ್ಗ ‘KUWJ ಸಂಘ’ದ ಅಧ್ಯಕ್ಷರಾಗಿ ವೈದ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಾಲಸ್ಬಾಮಿ, ರಾಜ್ಯ ಸಮಿತಿಗೆ ಶಿವಕುಮಾರ್ ಅವಿರೋಧವಾಗಿ ಆಯ್ಕೆ

09/11/2025 8:30 AM1 Min Read

Fact Check : ಕಬ್ಬು ಬೆಳೆಗಾರರ ಮೇಲೆ ಲಾಠಿಚಾರ್ಜ್, ಪ್ರತಿಯಾಗಿ ಕಲ್ಲು ತೂರಾಟ? ಹೀಗಿದೆ ರಾಜ್ಯ ಸರ್ಕಾರದ ಸ್ಪಷ್ಟನೆ

09/11/2025 8:17 AM1 Min Read

ರಾಜ್ಯದ `ರೈತರಿಗೆ ಗುಡ್ ನ್ಯೂಸ್’ : ಎಲ್ಲಾ ಕಬ್ಬಿಗೂ ಟನ್ ಗೆ ಹೆಚ್ಚುವರಿ 100 ರೂ. ನೀಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ

09/11/2025 8:09 AM3 Mins Read
Recent News

BREAKING: ಬ್ರಿಟನ್ ಮಾಜಿ ರಾಜದಂಪತಿಗೆ ಸಂಕಷ್ಟ: ಆಂಡ್ರ್ಯೂ, ಮಾಜಿ ಪತ್ನಿ ಸಾರಾಗೆ ಜೈಲು ಭೀತಿ!

09/11/2025 8:31 AM

ಶಿವಮೊಗ್ಗ ‘KUWJ ಸಂಘ’ದ ಅಧ್ಯಕ್ಷರಾಗಿ ವೈದ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಾಲಸ್ಬಾಮಿ, ರಾಜ್ಯ ಸಮಿತಿಗೆ ಶಿವಕುಮಾರ್ ಅವಿರೋಧವಾಗಿ ಆಯ್ಕೆ

09/11/2025 8:30 AM

SHOCKING : ಆಘಾತಕಾರಿ ಘಟನೆ : ಹೆರಿಗೆಯಾದ ತಕ್ಷಣ ಹೆತ್ತ ಮಗುವನ್ನೇ ಕೊಂದ ಮಹಿಳೆ.!

09/11/2025 8:26 AM

Fact Check : ಕಬ್ಬು ಬೆಳೆಗಾರರ ಮೇಲೆ ಲಾಠಿಚಾರ್ಜ್, ಪ್ರತಿಯಾಗಿ ಕಲ್ಲು ತೂರಾಟ? ಹೀಗಿದೆ ರಾಜ್ಯ ಸರ್ಕಾರದ ಸ್ಪಷ್ಟನೆ

09/11/2025 8:17 AM
State News
KARNATAKA

ಶಿವಮೊಗ್ಗ ‘KUWJ ಸಂಘ’ದ ಅಧ್ಯಕ್ಷರಾಗಿ ವೈದ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಾಲಸ್ಬಾಮಿ, ರಾಜ್ಯ ಸಮಿತಿಗೆ ಶಿವಕುಮಾರ್ ಅವಿರೋಧವಾಗಿ ಆಯ್ಕೆ

By kannadanewsnow0909/11/2025 8:30 AM KARNATAKA 1 Min Read

ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ನಮ್ಮ ನಾಡು ಪತ್ರಿಕೆಯ ವರದಿಗಾರ…

Fact Check : ಕಬ್ಬು ಬೆಳೆಗಾರರ ಮೇಲೆ ಲಾಠಿಚಾರ್ಜ್, ಪ್ರತಿಯಾಗಿ ಕಲ್ಲು ತೂರಾಟ? ಹೀಗಿದೆ ರಾಜ್ಯ ಸರ್ಕಾರದ ಸ್ಪಷ್ಟನೆ

09/11/2025 8:17 AM

ರಾಜ್ಯದ `ರೈತರಿಗೆ ಗುಡ್ ನ್ಯೂಸ್’ : ಎಲ್ಲಾ ಕಬ್ಬಿಗೂ ಟನ್ ಗೆ ಹೆಚ್ಚುವರಿ 100 ರೂ. ನೀಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ

09/11/2025 8:09 AM

ಇಂದು ‘KUWJ ಸಂಘ’ದ ಚುನಾವಣೆ: ಬೆಳಗ್ಗೆ 9ರಿಂದ 3ರವರೆಗೆ 20 ಜಿಲ್ಲೆಯಲ್ಲಿ ಮತದಾನ

09/11/2025 8:07 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.