Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

15/03/2026 7:37 AM

ಅಡುಗೆ ಮನೆಗೆ ಬಂತು ಸ್ಮಾರ್ಟ್ ಗ್ಯಾಸ್: ಏನಿದು ಪಿಎನ್‌ಜಿ (PNG) ಸಂಪರ್ಕ? ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಗೈಡ್!

15/03/2026 7:32 AM

ದಕ್ಷಿಣ ಲೆಬನಾನ್‌ನಲ್ಲಿ ರಣಾಂಗಣ: ಇಸ್ರೇಲಿ ಸೈನಿಕರ ಮೇಲೆ ಹೆಬೊಲ್ಲಾ ಕ್ಷಿಪಣಿ ದಾಳಿ; ಗ್ರಾಮಗಳ ಮೇಲೆ ಮುಂದುವರಿದ ವೈಮಾನಿಕ ಪ್ರಹಾರ!

15/03/2026 7:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆ ಹಿನ್ನೀರಿನ ಜನರ ತ್ಯಾಗ ಪ್ರತೀಕ: ಶಾಸಕ ಗೋಪಾಲಕೃಷ್ಣ ಬೇಳೂರು
KARNATAKA

ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆ ಹಿನ್ನೀರಿನ ಜನರ ತ್ಯಾಗ ಪ್ರತೀಕ: ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0913/07/2025 9:07 PM

ಶಿವಮೊಗ್ಗ: ನಾಳೆ ಶಿವಮೊಗ್ಗ ಜಿಲ್ಲೆಯ ಸಾಗರ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆಯಾಗುತ್ತಿರುವುದು ಹಿನ್ನೀರಿನ ಜನರ ತ್ಯಾಗದ ಪ್ರತೀಕವಾಗಿ ಲೋಕಾರ್ಪಣೆಯಾಗುತ್ತಿದೆ. ಇದು ನನಗೆ ಸಂತಸ ತಂದಿದೆ ಎಂಬುದಾಗಿ ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಅಂಬಾರಗೋಡ್ಲು- ಕಳಸವಳ್ಳಿ ಸೇತುವೆಗಾಗಿ ಹೋರಾಟ ಮಾಡಿದವರನ್ನು ಹತ್ತಿಕ್ಕುವ ಕೆಲಸ ನಡೆದಿದೆ. ಮುಂಬರುವಂತ ದಿನಗಳಲ್ಲಿ ಅವರ ಸೇವೆಸ್ಮರಿಸಿ ಗೌರವಿಸುವ  ಚಿಂತನೆ ಮಾಡಲಾಗುವುದು. ಸೇತುವೆ ನಿರ್ಮಾಣಕ್ಕೆ ಎಲ್ಲ ಹಂತದಲ್ಲೂ ಪ್ರಯತ್ನ ನಡೆದಿದ್ದು ಅಂತಿಮವಾಗಿ ಹಿನ್ನೀರ ಜನರ ಸೇವೆಗೆ ಸೋಮವಾರದಿಂದ ಸೇತುವೆ ಲಭ್ಯವಾಗಲಿದೆ ಎಂದರು.

ನಾಳೆ ಅಂಬಾರಗೋಡ್ಲು- ಕಳಸವಳ್ಳಿ ಸೇತುವೆ ಲೋಕಾರ್ಪಣೆಗೆಗಾಗಿ ಆಗಮಿಸುತ್ತಿರುವ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಸರ್ಕಾರದ ನಮ್ಮ ಸಚಿವರಾದ ಸತೀಶ್ ಜಾರಕಿಹೊಳಿ, ಮಧು ಬಂಗಾರಪ್ಪ ಅವರನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.

ಅರಗ ಜ್ಞಾನೇಂದ್ರ ಕೇಂದ್ರ ಸರ್ಕಾರದಿಂದ ಸೇತುವೆ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ. ಆದರೆ ನಾನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸೇತುವೆ ನಿರ್ಮಾಣಕ್ಕೆ ಮನವಿ ಕೊಟ್ಟಿದ್ದೇನೆ. ಯಡಿಯೂರಪ್ಪ ಅವರು 100 ಕೋಟಿ ರೂ. ಅನುದಾನ ನೀಡುವ ಭರವಸೆ ಸಹ ನೀಡಿದ್ದರು ಎಂದು ಹೇಳಿದರು.

ಸೇತುವೆ ನಿರ್ಮಾಣಕ್ಕಾಗಿ ಹೆಚ್ಚಿನ ಹಣ ಬೇಕಾಗಿದ್ದರಿಂದ ರಾಜ್ಯ ಸರ್ಕಾರದಿಂದ ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ. ಒಂದೊಮ್ಮೆ ಕೇಂದ್ರ ಸರ್ಕಾರ ಸಿಗಂದೂರು ಸೇತುವೆ ನಿರ್ಮಿಸದೆ ಹೋಗಿದ್ದರೇ, ನಮ್ಮ ರಾಜ್ಯ ಸರ್ಕಾರದಿಂದ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತಿತ್ತು. ಶರಾವತಿ ಪಂಪ್ಡ್ ಸ್ಟೋರೇಜ್‌ಗೆ 844 ಕೋಟಿ ರೂ. ಕೊಟ್ಟ ರಾಜ್ಯ ಸರ್ಕಾರಕ್ಕೆ 473 ಕೋಟಿ ರೂ. ಕೊಡುವ ತಾಕತ್ತು ಇತ್ತು. ಏನೇ ಆಗಲಿ ಸೇತುವೆ ನಿರ್ಮಿಸಿದ್ದಾರೆ. ನನ್ನ ಅಧಿಕಾರ ಅವಧಿಯಲ್ಲಿ ಎಲ್ಲ ರೀತಿಯ ಸಹಕಾರ ಫಲಾಪೇಕ್ಷೆ ಇಲ್ಲದೆ ನೀಡಿದ್ದೇನೆ. ಆದರೆ ಬಿಜೆಪಿಯವರು ಇದನ್ನು ಸ್ವಂತ ಕಾರ್ಯಕ್ರಮವಾಗಿ ಮಾಡಿಕೊಳ್ಳುತ್ತಿದ್ದಾರೆ. ಮನೆಮನೆಗೆ ಕರಪತ್ರ ಕೊಟ್ಟು ತಮ್ಮ ಮನೆಯಿಂದ ಹಣ ಹೂಡಿದಂತೆ ಸಂಭ್ರಮಿಸುತ್ತಿರುವುದ ಮಾತ್ರ ಹಾಸ್ಯಾಸ್ಪದವಾಗಿದೆ ಎಂದು ಕಿಡಿಕಾರಿದರು.

ಅoಬಾರಗೋಡ್ಲು-ಕಳಸವಳ್ಳಿ ಸೇತುವೆ ನಿರ್ಮಾಣದ ರೂವಾರಿ ಬಿ.ಎಸ್.ಯಡಿಯೂರಪ್ಪ. ಎಲ್ಲ ಕ್ರೆಡಿಟ್ ಅವರಿಗೆ ಸಲ್ಲಬೇಕು. ಕೆಲವರು ತಾವೆ ಸೇತುವೆ ನಿರ್ಮಿಸಿದ್ದೇವೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಹಿಂದೆ ಶಂಕುಸ್ಥಾಪನೆ ಸಂದರ್ಭದಲ್ಲಿ ನಾನು ಸೇತುವೆ ಕೊಡುಗೆ ಕೊಟ್ಟ ನಿತಿನ್ ಗಡ್ಕರಿ ಅವರನ್ನು ಸನ್ಮಾನಿಸಿ ಅಭಿನಂದನೆ ತಿಳಿಸಿದ್ದೇನೆ ಎಂದು ಹೇಳಿದರು.

ಸೇತುವೆ ಬೇಗ ಆಗಬೇಕು ಎಂದು ಒತ್ತಾಯಿಸಿದ್ದರ ಪೂರಕವಾಗಿ ಕಾಮಗಾರಿ ಮುಗಿದಿದೆ. ಲೋಕಾರ್ಪಣೆಗೆ ಕಾಲಕೂಡಿ ಬಂದಿದೆ. ಲೋಕಾರ್ಪಣೆ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಾಗಬೇಕು. ಸೇತುವೆಗಾಗಿ ಹೋರಾಟ ಮಾಡಿದವರ ಜೊತೆ ಚರ್ಚೆ ಮಾಡಿ ಕಾರ್ಯಕ್ರಮ ರೂಪಿಸಬೇಕಾಗಿತ್ತು. ಆದರೆ ಏಕಮುಖವಾಗಿ ಕಾರ್ಯಕ್ರಮ ರೂಪುಗೊಳಿಸಿದ್ದಾರೆ. ಹಸಿರುಮಕ್ಕಿ ಸೇತುವೆ ಲೋಕಾರ್ಪಣೆ ಸಂದರ್ಭದಲ್ಲಿ ಸ್ಥಳೀಯ ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂದರು.

ಶರಾವತಿ ಹಿನ್ನೀರಿನಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡಿದ್ದೇವೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳುತ್ತಿರುವುದು ಶುದ್ದಸುಳ್ಳು. ದೋಣಿ ಮಗಚಿ ಮೃತಪಟ್ಟವರಿಗೂ ಹಾಲಪ್ಪನವರಿಗೂ ಯಾವುದೇ ಸಂಬoಧವಿರಲಿಲ್ಲ. ಹಾಗಿದ್ದರೆ ಸಿಗಂದೂರು ಧರ್ಮದರ್ಶಿ ರಾಮಪ್ಪನವರು ಹೇಳುತ್ತಿದ್ದರು. ಹಾಲಪ್ಪ ಜನರ ಸಿಂಪತಿ ಗಳಿಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಶಂಕುಸ್ಥಾಪನೆ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಬಾಯಿಂದ ಸಹ ಸುಳ್ಳು ಹೇಳಿಸಿದ್ದಾರೆ. ಸೇತುವೆ ನಿರ್ಮಾಣಕ್ಕೆ ತಮ್ಮದೂ ಪ್ರಯತ್ನ ಇತ್ತು ಎಂದರೆ ಜನ ನಂಬುತ್ತಾರೆ. ಇಂತಹ ಸುಳ್ಳುಗಳನ್ನು ಜನ ನಂಬುವುದಿಲ್ಲ. ಏಕೆಂದರೆ ಹಿಂದಿನ ಚುನಾವಣೆಯಲ್ಲಿ ಸೇತುವೆ ವಿಷಯ ಇರಿಸಿಕೊಂಡು ಮತಪಡೆಯುವ ಬಿಜೆಪಿ ಪ್ರಯತ್ನ ವಿಫಲವಾಗಿತ್ತು ನಾನು ಕೂಡ ಸೇತುವೆ ಹೋರಾಟದಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡಿದ್ದೇನೆ. ಹಾಗೆಂದ ಮಾತ್ರಕ್ಕೆ ಅದು ಪ್ರಚಾರದ ಸಾಧನವನ್ನಾಗಿ ಬಳಸಿ ಕೊಳ್ಳುವುದಲ್ಲ ನಮ್ಮ ಕರ್ತವ್ಯ ನಾವು ಮಾಡಬೇಕು ಎಂದರು.

ಜುಲೈ.14ರ ನಾಳೆ ಸಂಜೆ 4 ಗಂಟೆಗೆ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯಡಿ 500 ಕೋಟಿ ಮಹಿಳೆಯರ ಓಡಾಟದ ಸಂಖ್ಯೆ ದಾಟಿದ ಹಿನ್ನೆಲೆಯಲ್ಲಿ ಬಸ್ ಚಾಲಕ ನಿವಾರ್ಹಕರಿಗೆ ಸನ್ಮಾನ, ಪ್ರಯಾಣಿಕರಿಗೆ ಸಿಹಿ ವಿತರಣೆ ಮಾಡಲಾಗುತ್ತಿದೆ. ಸಾರ್ವಜನಿಕರು ಪಾಲ್ಗೊಳ್ಳಲುವಂತೆ ಮನವಿ ಮಾಡಿದರು.

BIG NEWS: ‘ಸಿಗಂದೂರು ಸೇತುವೆ’ಗಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಯಡಿಯೂರಪ್ಪಗೆ ಬರೆದಿದ್ದ ಪತ್ರ ವೈರಲ್

BREAKING: ನಾಳೆಯ ‘ಸಿಗಂದೂರು ಸೇತುವೆ ಉದ್ಘಾಟನೆ’ ಕಾರ್ಯಕ್ರಮ ಮುಂದೂಡಿ: ಗಡ್ಕರಿಗೆ ಸಿಎಂ ಸಿದ್ಧರಾಮಯ್ಯ ಪತ್ರ

ಮಂಡ್ಯದ ಮುತ್ತತ್ತಿಯಲ್ಲಿ ಜೂಜಾಟದಲ್ಲಿ ತೊಡಗಿದ್ದವರಿಗೆ ಪೊಲೀಸರು ಶಾಕ್: 24 ಮಂದಿ ಅರೆಸ್ಟ್, 4.38 ಲಕ್ಷ ಹಣ ಜಪ್ತಿ

Share. Facebook Twitter LinkedIn WhatsApp Email

Related Posts

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

15/03/2026 7:37 AM2 Mins Read

ಚಿಕನ್ ಲಿವರ್ ತಿಂದ್ರೆ ಸಿಗಲಿವೆ ಈ ಎಲ್ಲಾ ಆರೋಗ್ಯ ಪ್ರಯೋಜನಗಳು : ಮರೆಯದೇ ಈ ವಿಷಯ ತಿಳಿಯಿರಿ !

15/03/2026 7:15 AM2 Mins Read

ಲಿಂಗ ತಾರತಮ್ಯಕ್ಕೆ ತಿಲಾಂಜಲಿ : ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಸಮಾಜಕ್ಕೆ ಮಾದರಿಯಾದ ಅಕ್ಕ-ತಂಗಿಯರು!

15/03/2026 7:05 AM1 Min Read
Recent News

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

15/03/2026 7:37 AM

ಅಡುಗೆ ಮನೆಗೆ ಬಂತು ಸ್ಮಾರ್ಟ್ ಗ್ಯಾಸ್: ಏನಿದು ಪಿಎನ್‌ಜಿ (PNG) ಸಂಪರ್ಕ? ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಗೈಡ್!

15/03/2026 7:32 AM

ದಕ್ಷಿಣ ಲೆಬನಾನ್‌ನಲ್ಲಿ ರಣಾಂಗಣ: ಇಸ್ರೇಲಿ ಸೈನಿಕರ ಮೇಲೆ ಹೆಬೊಲ್ಲಾ ಕ್ಷಿಪಣಿ ದಾಳಿ; ಗ್ರಾಮಗಳ ಮೇಲೆ ಮುಂದುವರಿದ ವೈಮಾನಿಕ ಪ್ರಹಾರ!

15/03/2026 7:17 AM

ಚಿಕನ್ ಲಿವರ್ ತಿಂದ್ರೆ ಸಿಗಲಿವೆ ಈ ಎಲ್ಲಾ ಆರೋಗ್ಯ ಪ್ರಯೋಜನಗಳು : ಮರೆಯದೇ ಈ ವಿಷಯ ತಿಳಿಯಿರಿ !

15/03/2026 7:15 AM
State News
KARNATAKA

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

By kannadanewsnow5715/03/2026 7:37 AM KARNATAKA 2 Mins Read

ಮೂಲವ್ಯಾಧಿ (Piles) ಎನ್ನುವುದು ಸಾಮಾನ್ಯವಾದರೂ ಅತ್ಯಂತ ನೋವಿನಿಂದ ಕೂಡಿದ ಆರೋಗ್ಯ ಸಮಸ್ಯೆಯಾಗಿದೆ. ಮಲದ್ವಾರದ ಭಾಗದಲ್ಲಿ ರಕ್ತನಾಳಗಳ ಬಾವು ಮತ್ತು ರಕ್ತಸ್ರಾವ…

ಚಿಕನ್ ಲಿವರ್ ತಿಂದ್ರೆ ಸಿಗಲಿವೆ ಈ ಎಲ್ಲಾ ಆರೋಗ್ಯ ಪ್ರಯೋಜನಗಳು : ಮರೆಯದೇ ಈ ವಿಷಯ ತಿಳಿಯಿರಿ !

15/03/2026 7:15 AM

ಲಿಂಗ ತಾರತಮ್ಯಕ್ಕೆ ತಿಲಾಂಜಲಿ : ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಸಮಾಜಕ್ಕೆ ಮಾದರಿಯಾದ ಅಕ್ಕ-ತಂಗಿಯರು!

15/03/2026 7:05 AM

ALERT : ರಾಜ್ಯಾದ್ಯಂತ ಬಿಸಿಲಿನ ತಾಪ ಹೆಚ್ಚಳ : ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ !

15/03/2026 6:59 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.