ಬೆಂಗಳೂರು: ಆರ್ ಸಿ ಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ 11 ಅಭಿಮಾನಿಗಳು ಸಾವು ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಮತ್ತೆರಡು ದೂರು ದಾಖಲಾಗಿದ್ದಾವೆ.
ಈ ಸಂಬಂಧ ಗಾಯಾಳುಗಳು ನೀಡಿರುವಂತ ದೂರಿನ ಮೇರೆಗೆ ಮತ್ತೆರಡು ಎಫ್ಐಆರ್ ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಹೀಗಾಗಿ ಆರ್ ಸಿ ಬಿ ಫ್ರಾಂಚೈಸಿ, ಕೆಎಸ್ ಸಿಎ ಮತ್ತು ಡಿಎನ್ಎ ಕಂಪನಿ ವಿರುದ್ಧ ಕೇಸ್ ದಾಖಲಾಗಿದ್ದಾವೆ.
ರೋಲನ್ ಗೊಮೆಸ್ ಎಂಬಾತ ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅವರು ನೀಡಿರುವಂತ ದೂರಿನಲ್ಲಿ ಜಾಲತಾಣದಲ್ಲಿ ಆರ್ ಸಿ ಬಿ ಪೋಸ್ಟ್ ನೋಡಿ ನನ್ನ ಗೆಳೆಯರ ಜೊತೆಗೆ ಆರ್ ಸಿಬಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದೆ. ತೆರೆದ ಬಸ್ ಮೂಲಕ ಮೆರವಣಿಗೆ ಇದೆ ಎಂಬುದಾಗಿ ಪೋಸ್ಟ್ ನಲ್ಲಿ ತಿಳಿಸಲಾಗಿತ್ತು ಎಂದಿದ್ದಾರೆ.
ಗೇಟ್ ನಂಬರ್ 17ರಲ್ಲಿ ನಾನು ಹೋಗುವಾಗ ನೂಕುನುಗ್ಗಲು ಉಂಟಾಯಿತು. ಈ ವೇಳಎ ನನ್ನ ತೋಳಿಗೆ ಪೆಟ್ಟಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೂರು ನೀಡಿರುವುದಾಗಿ ಗಾಯಾಳು ರೋಲನ್ ತಿಳಿಸಿದ್ದಾರೆ. ಹೀಗಾಗಿ ಬಿಎನ್ ಎಸ್ ಕಾಯ್ದೆ 2023 (U/s-125(a) ಅಡಿಯಲ್ಲಿ ಕೇಸ್ ದಾಖಲಾಗಿದೆ.