Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಮಧ್ಯಪ್ರದೇಶದಲ್ಲಿ ಎನ್ಕೌಂಟರ್: ನಾಲ್ವರು ನಕ್ಸಲರ ಹತ್ಯೆ | Naxals

15/06/2025 9:15 AM

BREAKING : ಮಂಗಳೂರಲ್ಲಿ ಜಲಸ್ಪೋಟದಿಂದ ಖಾಸಗಿ ಆಸ್ಪತ್ರೆ ಗೋಡೆ ಕುಸಿತ : ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ

15/06/2025 9:09 AM

ಇಸ್ರೇಲ್ ಮತ್ತು ಇರಾನ್ ಯುದ್ದ: ‘ಪರಮಾಣು ಒಪ್ಪಂದಕ್ಕೆ ಬರಲು ಇರಾನ್ಗೆ ಎರಡನೇ ಅವಕಾಶ’: ಟ್ರಂಪ್

15/06/2025 9:01 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING: ವಿಶ್ವವನ್ನೇ ಕಾಡುತ್ತಿದೆ ಸೈಲೆಂಟ್ ಕಿಲ್ಲರ್: ಮೂವರಲ್ಲಿ ಒಬ್ಬರಿಗೆ ಹೈಪರ್ ಟೆನ್ಷನ್ !
LIFE STYLE

SHOCKING: ವಿಶ್ವವನ್ನೇ ಕಾಡುತ್ತಿದೆ ಸೈಲೆಂಟ್ ಕಿಲ್ಲರ್: ಮೂವರಲ್ಲಿ ಒಬ್ಬರಿಗೆ ಹೈಪರ್ ಟೆನ್ಷನ್ !

By kannadanewsnow0920/05/2025 2:16 PM

ಬೆಂಗಳೂರು: ಮೇ.17 ವಿಶ್ವ ಹೈಪರ್‌ ಟೆನ್ಷನ್ ದಿನಾಚರಣೆ ಆಚರಿಸುತ್ತೇವೆ. ವಿಶ್ವದಲ್ಲಿ 30 ರಿಂದ 70 ವಯಸ್ಸಿನ 1.28 ಬಿಲಿಯನ್‌ ಜನರು ಹೈಪರ್‌ ಟೆನ್ಷನ್ ಗೆ ಒಳಗಾಗಿದ್ದಾರೆ. ಒಟ್ಟಾರೆ ಜನಸಂಖ್ಯೆಯ ಮೂವರಲ್ಲಿ ಒಬ್ಬರು ಹೈಪರ್‌ ಟೆನ್ಷನ್ ( ರಕ್ತದ ಒತ್ತಡ) ದಿಂದ ಬಳಲುತ್ತಿದ್ದಾರೆ.

ಶೇ. 46 ರಷ್ಟು ಮಂದಿ ತಾವು ಹೈಪರ್‌ ಟೆನ್ಷನ್ ನಿಂದ ಬಳಲುತ್ತಿರುವ ಮಾಹಿತಿಯೇ ಗೊತ್ತಿಲ್ಲ. ಶೇ. 42 ರಷ್ಟು ಮಂದಿಗೆ ಮಾತ್ರ ಚಿಕಿತ್ಸೆ ಪಡೆದು ಗುಣಮುಖರಾಗಲು ಅವಕಾಶವಿದೆ. ಶೇ. 46 ರಷ್ಟಿರುವ ಹೈಪರ್‌ ಟೆನ್ಷನ್ ಪ್ರಮಾಣವನ್ನು 2030 ರ ಒಳಗೆ ಶೇ. 33 ಕ್ಕೆ ಇಳಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವ ಹೈಪರ್‌ ಟೆನ್ಷನ್ ಲೀಗ್‌ ಜಾಗತಿಕ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸುತ್ತಿವೆ.

ಕರ್ನಾಟಕದಲ್ಲಿ ಹೈಪರ್‌ ಟೆನ್ಷನ್:

ಭಾರತದಲ್ಲಿ ಒಟ್ಟಾರೆ ಜನಸಂಖ್ಯೆ ಪೈಕಿ ಪುರುಷರಲ್ಲಿ ಶೇ. 26.96, ಮಹಿಳೆಯರಲ್ಲಿ ಶೇ. 25 ರಷ್ಟು ಮಂದಿ ಹೈಪರ್‌ ಟೆನ್ಷನ್ ನಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ ರಾಷ್ಟ್ರೀಯ ಸರಾಸರಿಗಿಂತಲೂ ಅಧಿಕ ಮಂದಿ ರಕ್ತದ ಒತ್ತಡದಿಂದ ಬಳಲುತ್ತಿದ್ದು, ಪುರುಷರಲ್ಲಿ ಶೇ. 30.7, ಮಹಿಳೆಯರಲ್ಲಿ ಶೇ. 27. 9 ಜನರು ಹೈಪರ್‌ ಟೆನ್ಷನ್ ನಿಂದ ಬಳಲುತ್ತಿದ್ದಾರೆ ಎಂಬ ಸಂಗತಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -5 ಯಿಂದ ದೃಢಪಟ್ಟಿದೆ.

ರಕ್ತದ ಒತ್ತಡದಿಂದ ಜನ ಸಾಮಾನ್ಯರು ಹೃದಯಘಾತ, ಸ್ಟ್ರೋಕ್ , ಕಿಡ್ನಿ ವೈಫಲ್ಯ ಸೇರಿದಂತೆ ಜೀವ ಹಾನಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ನಗರ ಪ್ರದೇಶದಲ್ಲಿ ಅನಾರೋಗ್ಯ ಆಹಾರ ಸೇವನೆ, ದೈಹಿಕ ಚಟುವಟಿಕೆ ರಹಿತ ಜೀವನ ಶೈಲಿಯಿಂದ ಹದಿನೈದು ವರ್ಷ ವಯಸ್ಸಿನ ಮಕ್ಕಳು ಹಾಗೂ ಯುವಕರು ಹೈಪರ್‌ ಟೆನ್ಷನ್ ಗೆ ಒಳಗಾಗುತ್ತಿರುವ ಬಗ್ಗೆ ಡಾ. ಯು.ಎಸ್‌. ವಿಶಾಲ್‌ ರಾವ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಸೈಲೆಂಟ್ ಕಿಲ್ಲರ್ ಹೈಪರ್‌ ಟೆನ್ಷನ್: ಅಂದಹಾಗೆ ಏನಿದು ರಕ್ತದ ಒತ್ತಡ ?

ಹೃದಯ ರಕ್ತವನ್ನು ಪಂಪ್ ಮಾಡುವಾಗ ಅಪದಮನಿ ಗೋಡೆಗಳ ವಿರುದ್ಧ ರಕ್ತದ ಬಲವನ್ನು ಅಳೆಯುತ್ತದೆ. ಇದು ಎರಡು ಅಂಕಿಯನ್ನು ನೀಡುತ್ತದೆ. ಸಿಸ್ಟೋಲಿಕ್ ಒತ್ತಡ, ಹೃದಯ ಬಡಿತ ಅಧರಿಸಿ ನೀಡುವ ದೊಡ್ಡ ಸಂಖ್ಯೆ ಇದಾಗಿದೆ. ಡಿಯಾಸ್ಟೋಲಿಕ್ ಒತ್ತಡ ಎಂದರೆ, ಅತಿ ಕಡಿಮೆ ಸಂಖ್ಯೆ. ಹೃದಯ ಬಡಿತದ ನಡುವಿನ ಹೃದಯದ ವಿಶ್ರಾಂತಿ ವೇಳೆಯನ್ನು ಆಧರಿಸಿ ಇದು ಮಾಪನ ಮಾಡಿ ನೀಡುವ ಸಂಖ್ಯೆ. ಅಧಿಕ ರಕ್ತದ ಒತ್ತಡವು ಅಪದಮನಿಗಳ ಗೋಡೆಗಳಿಗೆ ಪೆಟ್ಟು ನೀಡಿ, ಹೃದಯಾಘಾತ, ಲಕ್ವಾ, ಕಿಡ್ನಿ ವೈಫಲ್ಯ, ಕಣ್ಣಿನ ದೋಷದಂತಹ ಅಪಾಯ ಕಾಯಿಲೆಗೆ ಗುರಿಪಡಿಸುತ್ತದೆ.

ಸಹಜ ರಕ್ತದ ಒತ್ತಡ ಸಾಮಾನ್ಯವಾಗಿ 120/80 MMHg ಇರಬೇಕು. ಬಿಪಿ ಪ್ರಮಾಣ ಗರಿಷ್ಠ ಪ್ರಮಾಣ 140/90 mmHg ಇದ್ದರೂ ವೈದ್ಯಕೀಯ ನಿಯಮದ ಪ್ರಕಾರ ” ಹೈಪರ್‌ ಟೆನ್ಷನ್’ ಎಂದೇ ಪರಿಗಣಿಸಬೇಕಾಗುತ್ತದೆ. 120-139/ 80-89 mmHg ಯನ್ನು ಬಾರ್ಡರ್ ಲೈನ್‌ ಎಂದೇ ಕರೆಯಲ್ಪಡುವ ಆರಂಭಿಕ ರಕ್ತದ ಒತ್ತಡ (Free Hypertension ) ಎಂದು ಪರಿಗಣಿಸುತ್ತೇವೆ. ನಿಮ್ಮ ರಕ್ತದ ಒತ್ತಡ ಪರೀಕ್ಷಿಸಿದಾಗ ಈ ಅಂಕಿ ಅಂಶ ಕಂಡು ಬಂದರೆ ಇದನ್ನು ಎಚ್ಚರಿಕೆ ಗಂಟೆ ಅಂತಲೇ ಭಾವಿಸಬೇಕು.

ಸೈಲೆಂಟ್ ಕಿಲ್ಲರ್

ಹೈಪರ್‌ ಟೆನ್ಷನ್ ಅನ್ನು ಸೈಲೆಂಟ್ ಕಿಲ್ಲರ್ ಎಂದೇ ಕರೆಯುತ್ತೇವೆ. ಒಮ್ಮೆ ರಕ್ತದೊತ್ತಡಕ್ಕೆ ಒಳಗಾದ ವ್ಯಕ್ತಿ ಅದನ್ನು ನಿಯಂತ್ರಿಸದಿದ್ದರೆ, ಕಿಡ್ನಿ ವೈಫಲ್ಯ, ಹೃದಯಾಘಾತ, ಲಕ್ವಾದಂತಹ ಅಪಾಯಕಾರಿ ಕಾಯಿಲೆಗಳಿಗೆ ಒಳಗಾಗಿ ಜೀವ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಇದನ್ನು ಸೈಲೆಂಟ್ ಕಿಲ್ಲರ್ ಎಂದೇ ಕರೆಯಲಾಗುತ್ತದೆ.

ಹೈಪರ್‌ ಟೆನ್ಷನ್ ಗೆ ಕಾರಣ

ಒತ್ತಡದ ಜೀವನ ಶೈಲಿ. ಅತಿಯಾದ ಮದ್ಯಪಾನ ಮತ್ತು ಧೂಮಪಾನ ಸೇವನೆ. ದೈಹಿಕ ಚಟುವಟಿಕೆ ರಹಿತ ಜೀವನ. ತಂಬಾಕು ಸೇವನೆ, ಶಿಸ್ತು ಇಲ್ಲದ ಊಟದ ಶೈಲಿಯಿಂದ ಸಾಮಾನ್ಯವಾಗಿ ಹೈಪರ್‌ ಟೆನ್ಷನ್ ಗೆ ಮೂಲ ಕಾರಣಗಳು.

ನಿಯಂತ್ರಣ ಕ್ರಮ: ಪ್ರತಿ ನಿತ್ಯವೂ ಶಿಸ್ತು ಬದ್ಧ ಆಹಾರ ಸೇವನೆ. ಅತಿಯಾದ ಸಕ್ಕರೆ ಮತ್ತು ತಂಪು ಪಾನೀಯಗಳಿಂದ ದೂರ ಇರುವುದು. ದಿನ ನಿತ್ಯ ದೈಹಿಕ ಚಟುವಟಿಕೆ ಮಾಡುವುದು. ಅತಿಯಾದ ಉಪ್ಪು ಮಿಶ್ರಿತ ಊಟದಿಂದ ದೂರ ಇರುವುದು. ತಂಬಾಕು, ಮದ್ಯಪಾನ ಮತ್ತ ಧೂಮಪಾನ ತ್ಯಜಿಸುವುದು. ಒತ್ತಡ ಬದುಕಿನಿಂದ ಮುಕ್ತಿ. ನಿರಂತರವಾಗಿ ಬಿಪಿ ತಪಾಸಣೆಗೆ ಒಳಪಡಿಸುವುದರಿಂದ ಹೈಪರ್‌ ಟೆನ್ಷನ್ ನಿಂದ ದೂರ ಉಳಿಯಬಹುದು.

ಅಂತರರಾಷ್ಟ್ರೀಯ ರೋಮಿಂಗ್ ಅನುಭವ ಕ್ರಾಂತಿಕಾರಿಗೊಳಿಸಲು ‘ಏರ್ಟೆಲ್’ನಿಂದ ಹೊಸ ಪ್ಲಾನ್ಸ್ ಪರಿಚಯ

ನಾಳೆ ಮದ್ದೂರಿನಲ್ಲಿ ತಿರಂಗಾ ಯಾತ್ರೆ: ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ

Share. Facebook Twitter LinkedIn WhatsApp Email

Related Posts

ನೀವು ‘ರಾಗಿ ಮಾಲ್ಟ್’ ಕುಡಿಯುತ್ತೀರಾ.? ಹಾಗಿದ್ರೆ, ಈ ವಿಷಯಗಳನ್ನ ತಿಳಿದಿರಲೇಬೇಕು

14/06/2025 9:28 PM2 Mins Read

‘ನಾನೆಂದಿಗೂ ವಿಮಾನದಲ್ಲಿ ಕುಳಿತುಕೊಳ್ಳೋದಿಲ್ಲ’ : ವಿಮಾನ ಅಪಘಾತದ ವೈರಲ್ ವಿಡಿಯೋ ಮಾಡಿದ ಬಾಲಕನ ಭಯದ ಮಾತು

14/06/2025 9:16 PM2 Mins Read

‘ಥೈರಾಯ್ಡ್’ ರೋಗಿಗಳು ತಿನ್ನಲೇಬೇಕಾದ ಆಹಾರಗಳಿವು.!

14/06/2025 8:36 PM1 Min Read
Recent News

BREAKING: ಮಧ್ಯಪ್ರದೇಶದಲ್ಲಿ ಎನ್ಕೌಂಟರ್: ನಾಲ್ವರು ನಕ್ಸಲರ ಹತ್ಯೆ | Naxals

15/06/2025 9:15 AM

BREAKING : ಮಂಗಳೂರಲ್ಲಿ ಜಲಸ್ಪೋಟದಿಂದ ಖಾಸಗಿ ಆಸ್ಪತ್ರೆ ಗೋಡೆ ಕುಸಿತ : ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ

15/06/2025 9:09 AM

ಇಸ್ರೇಲ್ ಮತ್ತು ಇರಾನ್ ಯುದ್ದ: ‘ಪರಮಾಣು ಒಪ್ಪಂದಕ್ಕೆ ಬರಲು ಇರಾನ್ಗೆ ಎರಡನೇ ಅವಕಾಶ’: ಟ್ರಂಪ್

15/06/2025 9:01 AM

ಬೆಂಗಳೂರು : ಆಟೋಗೆ ಡಿಕ್ಕಿ ಹೊಡೆದ ಕಾರು : ಓರ್ವ ಮಗು ಸೇರಿ ನಾಲ್ವರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

15/06/2025 8:35 AM
State News
KARNATAKA

BREAKING : ಮಂಗಳೂರಲ್ಲಿ ಜಲಸ್ಪೋಟದಿಂದ ಖಾಸಗಿ ಆಸ್ಪತ್ರೆ ಗೋಡೆ ಕುಸಿತ : ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ

By kannadanewsnow0515/06/2025 9:09 AM KARNATAKA 1 Min Read

ಮಂಗಳೂರು : ಕರಾವಳಿ ಭಾಗದಲ್ಲಿ ವರುಣ ಅಬ್ಬರಿಸುತ್ತಿದ್ದು, ಮಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಮಳೆ ಆಗುತ್ತಿದೆ.…

ಬೆಂಗಳೂರು : ಆಟೋಗೆ ಡಿಕ್ಕಿ ಹೊಡೆದ ಕಾರು : ಓರ್ವ ಮಗು ಸೇರಿ ನಾಲ್ವರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

15/06/2025 8:35 AM

BIG NEWS : ಇಂದಿನಿಂದ ‘ಆಗುಂಬೆ ಘಾಟ್’ ನಲ್ಲಿ ಭಾರಿ ವಾಹನ ಸಂಚಾರ ನಿಷೇಧ

15/06/2025 8:28 AM

BIG NEWS : ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆ : ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್

15/06/2025 8:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.