ಕೇದಾರನಾಥ್ : ಏಮ್ಸ್ ರಿಷಿಕೇಶದ ಹೆಲಿಕಾಪ್ಟರ್ನ ಹಿಂಭಾಗಕ್ಕೆ ಹಾನಿಯಾಗಿ ಕೇದಾರನಾಥದಲ್ಲಿ ಪತನವಾಗಿದ್ದು, ಹೆಲಿಕಾಪ್ಟರ್ನಲ್ಲಿದ್ದ ಎಲ್ಲಾ ಐದು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಋಷಿಕೇಶ ಏಮ್ಸ್ ನಿಂದ ಕೇದಾರನಾಥಕ್ಕೆ ಬರುತ್ತಿದ್ದ ಹೆಲಿಕಾಪ್ಟರ್ ಕೇದಾರನಾಥ ಹೆಲಿಪ್ಯಾಡ್ ನಲ್ಲಿ ಇಳಿಯುವಾಗ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಪತನಗೊಂಡಿದೆ. ಈ ಸೇವೆಯು ಋಷಿಕೇಶದಿಂದ ಬಂದ ಹೆಲಿ ಆಂಬ್ಯುಲೆನ್ಸ್ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ, ಅದು ರೋಗಿಯನ್ನು ಕರೆದುಕೊಂಡು ಹೋಗಲು ಕೇದಾರನಾಥಕ್ಕೆ ಬಂದಿತ್ತು.ಲ್ಲಿ ವಿಮಾನದಲ್ಲಿ ಇಬ್ಬರು ವೈದ್ಯರು ಮತ್ತು ಪೈಲಟ್ ಇದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ. ಹೆಲಿಪ್ಯಾಡ್ನಿಂದ 20 ಮೀಟರ್ ದೂರದಲ್ಲಿ ಈ ಘಟನೆ ಸಂಭವಿಸಿದೆ.
ಏಮ್ಸ್ ರಿಷಿಕೇಶದ ಹೆಲಿಕಾಪ್ಟರ್ನ ಹಿಂಭಾಗಕ್ಕೆ ಹಾನಿಯಾಗಿ ಕೇದಾರನಾಥದಲ್ಲಿ ಅಪಘಾತಕ್ಕೀಡಾಯಿತು. ಹೆಲಿಕಾಪ್ಟರ್ನಲ್ಲಿದ್ದ ಮೂವರು ಪ್ರಯಾಣಿಕರು (ಒಬ್ಬ ವೈದ್ಯರು, ಒಬ್ಬ ಕ್ಯಾಪ್ಟನ್ ಮತ್ತು ವೈದ್ಯಕೀಯ ಸಿಬ್ಬಂದಿ) ಸುರಕ್ಷಿತವಾಗಿದ್ದಾರೆ ಎಂದು ಗರ್ವಾಲ್ ಆಯುಕ್ತ ವಿನಯ್ ಶಂಕರ್ ಪಾಂಡೆ ತಿಳಿಸಿದ್ದಾರೆ.
The helicopter of AIIMS Rishikesh's heli ambulance service crash-landed in Kedarnath due to damage to the rear part of the helicopter. All three passengers (one doctor, one Captain one medical staff) on board the helicopter are safe: Garhwal Commissioner Vinay Shankar Pandey to…
— ANI (@ANI) May 17, 2025