Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಲಬುರಗಿಯಲ್ಲಿ 1,000 ಕೋಟಿ‌ ವೆಚ್ಚದಲ್ಲಿ ಉದ್ಯಮಶೀಲತಾ ಕೇಂದ್ರ ಸ್ಥಾಪನೆ: ಸಚಿವ ಪ್ರಿಯಾಂಕ ಖರ್ಗೆ

24/11/2025 6:57 PM

ನಾನು ಯಾವ ಗುಂಪಿನಲ್ಲಿಯೂ ಇಲ್ಲ, ನನ್ನದು ಕಾಂಗ್ರೆಸ್ ಗುಂಪು: ಶಾಸಕ ಗೋಪಾಲಕೃಷ್ಣ ಬೇಳೂರು

24/11/2025 6:41 PM

ಮೀನುಗಾರಿಕೆ ಉದ್ಯಮ ಪುನಶ್ಚೇತನ, ಮೀನುಗಾರರ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ: ಶಾಸಕ ಗೋಪಾಲಕೃಷ್ಣ ಬೇಳೂರು

24/11/2025 6:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ ‘ತಾಯಿ-ಮಕ್ಕಳ ಸಾವು’ ತಡೆಗೆ ಮಹತ್ವದ ಕ್ರಮ : ಸರ್ಕಾರದಿಂದ ‘ಕಿಲ್ಕಾರಿ ಮೊಬೈಲ್ ಆರೋಗ್ಯ ಸೇವೆ’ ಆರಂಭ.!
KARNATAKA

BIG NEWS : ರಾಜ್ಯದಲ್ಲಿ ‘ತಾಯಿ-ಮಕ್ಕಳ ಸಾವು’ ತಡೆಗೆ ಮಹತ್ವದ ಕ್ರಮ : ಸರ್ಕಾರದಿಂದ ‘ಕಿಲ್ಕಾರಿ ಮೊಬೈಲ್ ಆರೋಗ್ಯ ಸೇವೆ’ ಆರಂಭ.!

By kannadanewsnow5715/03/2025 6:33 AM
vidhana soudha
vidhana soudha

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಯನ್ನು ನೀಡುವ ಉದ್ದೇಶದಿಂದ ಆರೋಗ್ಯ ಇಲಾಖೆಯು, ತಾಯಂದಿರು ಹಾಗೂ ಮಕ್ಕಳು ತೆಗೆದುಕೊಳ್ಳಬೇಕಾದ ಲಸಿಕೆ, ಆರೋಗ್ಯ ಕ್ರಮಗಳ ಬಗ್ಗೆ ಕರೆ ಮಾಡಿ ಮಾಹಿತಿ ನೀಡುವ “ಕಿಲ್ಕಾರಿ ಎಂಬ ಉಚಿತ ಮೊಬೈಲ್” ಆರೋಗ್ಯ ಸೇವೆಯನ್ನು ಜಾರಿಗೆ ತಂದಿದೆ.

ಜಿಲ್ಲೆಯಲ್ಲಿ ಅಂದಾಜು 29,000 ಗರ್ಭಿಣಿಯರು ಹಾಗೂ ಅಂದಾಜು 26,500 ಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ. ಪ್ರತಿ ವರ್ಷ ಬೆಂಗಳೂರು ನಗರ ಜಿಲ್ಲೆಯಲ್ಲಿ 29 ರಿಂದ 30 ಸಾವಿರ ಗರ್ಭಿಣಿಯರು ದಾಖಲಾಗುತ್ತಾರೆ. ಈ ವೇಳೆ ನಾನಾ ಕಾರಣಗಳಿಗೆ ತಾಯಿ ಮತ್ತು ನವಜಾತ ಶಿಶುಗಳ ಮರಣ ಸಂಭವಿಸುವ ಸಾಧ್ಯತೆಯಿರುತ್ತದೆ. ಅದನ್ನು ತಪ್ಪಿಸಲು ಕೇಂದ್ರ ಸರ್ಕಾರ ಕಿಲ್ಕಾರಿ ಎಂಬ ಉಚಿತ ಮೊಬೈಲ್ ಆರೋಗ್ಯ ಸೇವೆಯನ್ನು ಜಾರಿಗೆ ತಂದಿದೆ.

ಈ ಮೂಲಕ ಗರ್ಭದಾರಣೆ, ಗರ್ಭಿಣಿ ತಾಯಿ ಮತ್ತು ಮಗುವಿನ ಆರೋಗ್ಯದ ಮಾಹಿತಿಯನ್ನು ನೇರವಾಗಿ ಕುಟುಂಬಗಳ ಮೊಬೈಲ್ ಪೋನ್ಗೆ 01244451660 ಕಿಲ್ಕಾರಿ ಮೊಬೈಲ್ ಸಂಖ್ಯೆಯ ಮೂಲಕ ಮಾಹಿತಿಯನ್ನು ತಲುಪಿಸಲಾಗುತ್ತದೆ. ಈ ಕರೆಯನ್ನು ಸ್ವೀಕರಿಸಲು ಸಾಧ್ಯವಾಗದಿದ್ದಲ್ಲಿ 14423 ಸಂಖ್ಯೆಗೆ ಪುನ: ಕರೆ ಮಾಡುವ ಮೂಲಕ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿಯನ್ನು ಉಚಿತವಾಗಿ ಪಡೆಯಬಹುದು.

ಗರ್ಭಧಾರಣೆಯ 4ನೇ ತಿಂಗಳಿನಿಂದ ಮಗುವಿನ ಜನ್ಮದಿನದವರೆಗಿನ ಅವಧಿಯಲ್ಲಿ ತಾಯಿಯ ಆರೋಗ್ಯದ ಬಗ್ಗೆ ಕರೆಗಳು ಬರುತ್ತವೆ. ಅಲ್ಲದೇ ಮಕ್ಕಳಿಗೆ 0-9 ತಿಂಗಳವರೆಗೆ ಹಾಕಿಸಬೇಕಾದ 12 ಲಸಿಕೆಗಳ ಬಗ್ಗೆ ಮಾಹಿತಿಯನ್ನು ಮುಂಚಿತವಾಗಿಯೇ ಕರೆಯ ಮೂಲಕ ತಿಳಿಸಲಾಗುತ್ತದೆ. ಮಾತ್ರವಲ್ಲದೇ ಯಾವುದೇ ಅನುಮಾನಗಳಿದ್ದಲ್ಲಿ ವೈದ್ಯರೊಂದಿಗೆ ಆಪ್ತ ಸಮಾಲೋಚನೆಗೂ ಅವಕಾಶ ನೀಡಲಾಗಿದೆ.

ಜಿಲ್ಲಾ ವ್ಯಾಪ್ತಿಯ ಸಾವಿರಾರು ಮಂದಿ ಗರ್ಭಿಣಿಯರು, ಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ ಹಾಗೂ ತಾಯಿ ಮತ್ತು ಮಕ್ಕಳ ಮರಣವನ್ನು ತಡೆಗಟ್ಟಬಹುದಾಗಿದೆ. ಕೆಲವು ದಿನಗಳಿಂದ ಜಿಲ್ಲೆಗಳಲ್ಲಿ ಈ ಯೋಜನೆ ಆರಂಭಿಸಲಾಗಿದೆ. ಈಗಾಗಲೇ ಸುಮಾರು 24,394 ಗರ್ಭಿಣಿಯರು, ತಮ್ಮ ಮೊಬೈಲ್ ಸಂಖ್ಯೆಯಡಿ ನೊಂದಣಿಯಾಗಿ ಸೇವೆಯನ್ನು ಪಡೆಯುತ್ತಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BIG NEWS: Important step to prevent 'maternal and child deaths' in the state: Government launches 'Kilkari Mobile Health Service'!
Share. Facebook Twitter LinkedIn WhatsApp Email

Related Posts

ಕಲಬುರಗಿಯಲ್ಲಿ 1,000 ಕೋಟಿ‌ ವೆಚ್ಚದಲ್ಲಿ ಉದ್ಯಮಶೀಲತಾ ಕೇಂದ್ರ ಸ್ಥಾಪನೆ: ಸಚಿವ ಪ್ರಿಯಾಂಕ ಖರ್ಗೆ

24/11/2025 6:57 PM3 Mins Read

ನಾನು ಯಾವ ಗುಂಪಿನಲ್ಲಿಯೂ ಇಲ್ಲ, ನನ್ನದು ಕಾಂಗ್ರೆಸ್ ಗುಂಪು: ಶಾಸಕ ಗೋಪಾಲಕೃಷ್ಣ ಬೇಳೂರು

24/11/2025 6:41 PM1 Min Read

ಮೀನುಗಾರಿಕೆ ಉದ್ಯಮ ಪುನಶ್ಚೇತನ, ಮೀನುಗಾರರ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ: ಶಾಸಕ ಗೋಪಾಲಕೃಷ್ಣ ಬೇಳೂರು

24/11/2025 6:38 PM1 Min Read
Recent News

ಕಲಬುರಗಿಯಲ್ಲಿ 1,000 ಕೋಟಿ‌ ವೆಚ್ಚದಲ್ಲಿ ಉದ್ಯಮಶೀಲತಾ ಕೇಂದ್ರ ಸ್ಥಾಪನೆ: ಸಚಿವ ಪ್ರಿಯಾಂಕ ಖರ್ಗೆ

24/11/2025 6:57 PM

ನಾನು ಯಾವ ಗುಂಪಿನಲ್ಲಿಯೂ ಇಲ್ಲ, ನನ್ನದು ಕಾಂಗ್ರೆಸ್ ಗುಂಪು: ಶಾಸಕ ಗೋಪಾಲಕೃಷ್ಣ ಬೇಳೂರು

24/11/2025 6:41 PM

ಮೀನುಗಾರಿಕೆ ಉದ್ಯಮ ಪುನಶ್ಚೇತನ, ಮೀನುಗಾರರ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ: ಶಾಸಕ ಗೋಪಾಲಕೃಷ್ಣ ಬೇಳೂರು

24/11/2025 6:38 PM

BREAKING: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಆರೋಪಿ ಚಿನ್ನಯ್ಯಗೆ ಜಾಮೀನು ಮಂಜೂರು

24/11/2025 6:30 PM
State News
KARNATAKA

ಕಲಬುರಗಿಯಲ್ಲಿ 1,000 ಕೋಟಿ‌ ವೆಚ್ಚದಲ್ಲಿ ಉದ್ಯಮಶೀಲತಾ ಕೇಂದ್ರ ಸ್ಥಾಪನೆ: ಸಚಿವ ಪ್ರಿಯಾಂಕ ಖರ್ಗೆ

By kannadanewsnow0924/11/2025 6:57 PM KARNATAKA 3 Mins Read

ಬೆಂಗಳೂರು: ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ (ಲೀಪ್‌- LEAP – Local Economic Accelerator Program ) ಅಡಿಯಲ್ಲಿ ಕಲಬುರಗಿಯಲ್ಲಿ ಹೊಸ…

ನಾನು ಯಾವ ಗುಂಪಿನಲ್ಲಿಯೂ ಇಲ್ಲ, ನನ್ನದು ಕಾಂಗ್ರೆಸ್ ಗುಂಪು: ಶಾಸಕ ಗೋಪಾಲಕೃಷ್ಣ ಬೇಳೂರು

24/11/2025 6:41 PM

ಮೀನುಗಾರಿಕೆ ಉದ್ಯಮ ಪುನಶ್ಚೇತನ, ಮೀನುಗಾರರ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ: ಶಾಸಕ ಗೋಪಾಲಕೃಷ್ಣ ಬೇಳೂರು

24/11/2025 6:38 PM

BREAKING: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಆರೋಪಿ ಚಿನ್ನಯ್ಯಗೆ ಜಾಮೀನು ಮಂಜೂರು

24/11/2025 6:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.