Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಬುರ್ಖಾಧಾರಿ ಮಹಿಳೆಯರಿಂದ ಮಕ್ಕಳ ಕಿಡ್ನಾಪ್ ಗೆ ಯತ್ನ : ತಡೆಯಲು ಬಂದ ತಾಯಿಗೆ ಚಾಕು ಇರಿತ

17/05/2025 9:01 PM

ಕರ್ನಾಟಕಕ್ಕೆ ಹೆಚ್ಚಿನ ‘ಎಲೆಕ್ಟ್ರಿಕ್ ಬಸ್’ ನೀಡಲು ಕೇಂದ್ರ ಸಚಿವ ‘HDK’ಗೆ ‘ಸಾರಿಗೆ ಸಚಿವ ರಾಮಲಿಂಗಾರೆಡ್ಡಿ’ ಮನವಿ

17/05/2025 8:58 PM

ಬಳ್ಳಾರಿಯಲ್ಲಿ ಜನರ ಸಮಸ್ಯೆ ಆಲಿಸದ ಜಮೀರ್ ವಿರುದ್ಧ ಆಕ್ರೋಶ, ಸಚಿವ ಬದಲಾವಣೆಗೆ ಪಟ್ಟು: JDS

17/05/2025 8:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಹುದ್ದೆಯಿಂದ ಬಿಡುಗಡೆಗೊಳ್ಳದ ವೈದ್ಯರಿಂದ ‘ರಾಜ್ಯ ಸರ್ಕಾರ’ಕ್ಕೆ‌ ಮುಜುಗರ
KARNATAKA

BIG NEWS: ಹುದ್ದೆಯಿಂದ ಬಿಡುಗಡೆಗೊಳ್ಳದ ವೈದ್ಯರಿಂದ ‘ರಾಜ್ಯ ಸರ್ಕಾರ’ಕ್ಕೆ‌ ಮುಜುಗರ

By kannadanewsnow0910/03/2025 1:22 PM

ಬೆಂಗಳೂರು: ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ(ಆಹಾರ ಸುರಕ್ಷತೆ ಮತ್ತು ಔಷಧ ಇಲಾಖೆ)ಯಲ್ಲಿ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಗಳು ಮತ್ತು ಇತರೆ ವೃಂದದಲ್ಲಿ 5 ವರ್ಷದಿಂದ‌ ನಿಯೋಜನೆ ಮೇರೆಗೆ ಇರುವ ಅಧಿಕಾರಿಗಳು ಮಾತೃ ಇಲಾಖೆಗೆ ತೆರಳದೆ ಆಹಾರ ಸುರಕ್ಷತಾಧಿಕಾರಿಗಳ ಮೇಲೆ ಗದಾಪ್ರಹಾರ ನಡೆಸುತ್ತಿದ್ದಾರೆ.

ಆರೋಗ್ಯ ಇಲಾಖೆಯಿಂದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಗೆ ನಿಯೋಜನೆ ಮೇರೆಗೆ ಬಂದಿರುವ ವೈದ್ಯರ ಅವಧಿ ಈಗಾಗಲೇ‌ ಮುಗಿದಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಹುದ್ದೆಯಿಂದ ಬಿಡುಗಡೆಗೊಂಡು ಮಾತೃ ಇಲಾಖೆಗೆ ತೆರಳುವಂತೆ ಇಲಾಖೆ‌ ಆದೇಶಿಸಿ ಎರಡು ತಿಂಗಳಾಗಿದೆ. ಆದರೆ,‌ಮಾತೃ ಇಲಾಖೆಗೆ ತೆರಳದ ವೈದ್ಯರು, ಆಹಾರ ಸುರಕ್ಷತಾಧಿಕಾರಿಗಳ ಕುರಿತು ಅನಗತ್ಯ ತಪ್ಪು ಮಾಹಿತಿ ಮತ್ತು ದೂರುಗಳನ್ನು ನೀಡಿ ಸರ್ಕಾರಕ್ಕೆ ಮುಜುಗರ ತರುತ್ತಿದ್ದಾರೆ.

ನಕಲಿ ಅಂಕಪಟ್ಟಿ ಕೊಟ್ಟು ಇಲಾಖೆಯಲ್ಲಿ ಕೆಲಸ‌ ಮಾಡುತ್ತಿದ್ದವರನ್ನು ಈಗಾಗಲೇ ಅಮಾನತ್ತು ಮಾಡಲಾಗಿದೆ. ಆದರೂ ವೈದ್ಯರುಗಳು ಅಗಾಗ್ಗೆ ಅಂಕಪಟ್ಟಿ ಬಗ್ಗೆ ಸುಳ್ಳು ದೂರು ನೀಡಿ ಸರ್ಕಾರಕ್ಕೆ ಮುಜುಗರ ಪಡಿಸುತ್ತಿದ್ದಾರೆ.ಇಲಾಖೆಯಲ್ಲಿ ಪ್ರಸ್ತುತವಾಗಿ ಕಾರ್ಯನಿರ್ವಹಿಸುತ್ತಿರುವವರ ಅಂಕಪಟ್ಟಿ ಪರಿಶೀಲಿಸಲಾಗಿದೆ. ತನಿಖೆಯಲ್ಲಿ ನೈಜ ಅಂಕಪಟ್ಟಿ ಎಂದು ದೃಢಪಟ್ಟಿದೆ.ಆದರೂ, ಅಂಕಪಟ್ಟಿ ಬಗ್ಗೆ ವೈದ್ಯರು ಸೇರಿ ಇತರರು, ಸರ್ಕಾರಕ್ಕೆ ತಪ್ಪು ಮಾಹಿತಿ‌ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಈ ಮೂಲಕ ಇಲಾಖೆ ಮೇಲೆ ಹಿಡಿತ ಸಾಧಿಸಲು ವೈದ್ಯರು ಪ್ರಯತ್ನ ಮಾಡುತ್ತಿದ್ದಾರೆ.

ಆಹಾರ ಸುರಕ್ಷತೆ ಮತ್ತು ಔಷಧ ಇಲಾಖೆಯಲ್ಲಿ ಶೇ.25ರಷ್ಟು ಹಿರಿಯ /ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳನ್ನು ನಿಯೋಜಿಸಲು ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದೇ‌ ಸಿ ಆ್ಯಂಡ್ ಆರ್ ನಿಯಮದಲ್ಲಿ ರೂಲ್3ನಲ್ಲಿ ಕ್ರಮ ಸಂಖ್ಯೆ 5ರಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಹಾರ ನಿರೀಕ್ಷಕರು, ಆಹಾರ ಸುರಕ್ಷತಾಧಿಕಾರಿಗಳನ್ನು ಮರುಪಡಾನಾಮಿಕರಿಸಿ ಹಿರಿಯ ಆಹಾರ ಸುರಕ್ಷತಾಧಿಕಾರಿಗಳು ಎಂದು 21 ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳನ್ನು ಔಷಧ ಇಲಾಖೆಗೆ ವರ್ಗಾಯಿಸಲಾಗಿದೆ.

ಅದೇರೀತಿ, ಕ್ರಮ ಸಂಖ್ಯೆ 6ರಲ್ಲಿ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳನ್ನು, ಆಹಾರ ನಿರೀಕ್ಷಕರು, ಆಹಾರ ಸುರಕ್ಷತಾಧಿಕಾರಿಗಳನ್ನು 45 ಮಂದಿಯನ್ನು ವರ್ಗಹಿಸಲಾಗಿದೆ ಮತ್ತು ನಿಯಮ( 6)ಕಾರ್ಯಕಾರಿ ಆದೇಶದ ಮೇರೆಗೆ ಹಿರಿಯ /ಆಹಾರ ಸುರಕ್ಷತಾಧಿಕಾರಿಗಳಾಗಿ ವರ್ಗಾಯಿಸಲಾಗಿದೆ. ಈ ಆದೇಶವನ್ನು ಜಾರಿಯಾದ ದಿನಾಂಕದಿಂದ ಉಳಿಸಲಾಗಿದೆ. ಆದರೆ, ನಿಗದಿಗೊಳಿಸಿದ್ದ ವೇತನ ನೀಡದಿದ್ದಾಗ ಇವರು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯ ಇವರುಗಳಿಗೆ ಹಿರಿಯ/ಆಹಾರ ಸುರಕ್ಷಾತಾಧಿಕಾರಿಗಳ ವೇತನ ನೀಡಲು ಆದೇಶ ನೀಡಿತ್ತು. ಅದರಂತೆ, ವೇತನ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯ ಹಂತದಲ್ಲಿದೆ. ಎಲ್ಲ ಸರಿ ಇದ್ದರೂ ನಿಯಮಬಾಹಿರವಾಗಿ ಅನ್ಯ ಇಲಾಖೆಯಿಂದ ಈ‌ ಇಲಾಖೆಗೆ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರು , ವೈದ್ಯರು ಮತ್ತು ದಂತ ವೈದ್ಯರು ಮತ್ತು ಇತರೆ ಬೇರೆ ಇಲಾಖೆಯಿಂದ 6ವರ್ಷ್ ಮೇಲ್ಪಟ್ಟ ಇರುವ ಸಿಬ್ಬಂದಿಗಳು, ಇವರ ವಿರುದ್ಧ ಬೇಕಂತಲಲೆ ಅನಗತ್ಯವಾಗಿ ದೂರು ನೀಡುವುದು, ಸಂಘದಿಂದ ಪತ್ರ ಬರೆಯುವುದೂ ಸೇರಿ ಸರ್ಕಾರಕ್ಕೆ‌ ತಪ್ಪು‌ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ವೇತನ, ಬಡ್ತಿ ಸಿಗದಂತೆ ವೈದ್ಯರು ನೋಡಿಕೊಳ್ಳತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸಿ 101 ಸಿಬ್ಬಂದಿಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ. ಆಹಾರ ಸುರಕ್ಷತಾಧಿಕಾರಿಗಳ ಹುದ್ದೆಗಳ ಭರ್ತಿ ಮಾಡುವವರೆಗೆ ತರಬೇತಿ ಪಡೆದಿರುವ ಇವರನ್ನೇ ಮುಂದುವರಿಸಿದರೆ ಪರಿಣಾಮಕಾರಿಯಾಗಿ ಆಹಾರ ಕಲಬೆರಕೆ ತಡೆಗೆ ಅನುಕೂಲವಾಗಲಿದೆ.

Share. Facebook Twitter LinkedIn WhatsApp Email

Related Posts

BIG NEWS : ಬುರ್ಖಾಧಾರಿ ಮಹಿಳೆಯರಿಂದ ಮಕ್ಕಳ ಕಿಡ್ನಾಪ್ ಗೆ ಯತ್ನ : ತಡೆಯಲು ಬಂದ ತಾಯಿಗೆ ಚಾಕು ಇರಿತ

17/05/2025 9:01 PM1 Min Read

ಕರ್ನಾಟಕಕ್ಕೆ ಹೆಚ್ಚಿನ ‘ಎಲೆಕ್ಟ್ರಿಕ್ ಬಸ್’ ನೀಡಲು ಕೇಂದ್ರ ಸಚಿವ ‘HDK’ಗೆ ‘ಸಾರಿಗೆ ಸಚಿವ ರಾಮಲಿಂಗಾರೆಡ್ಡಿ’ ಮನವಿ

17/05/2025 8:58 PM2 Mins Read

ಬಳ್ಳಾರಿಯಲ್ಲಿ ಜನರ ಸಮಸ್ಯೆ ಆಲಿಸದ ಜಮೀರ್ ವಿರುದ್ಧ ಆಕ್ರೋಶ, ಸಚಿವ ಬದಲಾವಣೆಗೆ ಪಟ್ಟು: JDS

17/05/2025 8:46 PM1 Min Read
Recent News

BIG NEWS : ಬುರ್ಖಾಧಾರಿ ಮಹಿಳೆಯರಿಂದ ಮಕ್ಕಳ ಕಿಡ್ನಾಪ್ ಗೆ ಯತ್ನ : ತಡೆಯಲು ಬಂದ ತಾಯಿಗೆ ಚಾಕು ಇರಿತ

17/05/2025 9:01 PM

ಕರ್ನಾಟಕಕ್ಕೆ ಹೆಚ್ಚಿನ ‘ಎಲೆಕ್ಟ್ರಿಕ್ ಬಸ್’ ನೀಡಲು ಕೇಂದ್ರ ಸಚಿವ ‘HDK’ಗೆ ‘ಸಾರಿಗೆ ಸಚಿವ ರಾಮಲಿಂಗಾರೆಡ್ಡಿ’ ಮನವಿ

17/05/2025 8:58 PM

ಬಳ್ಳಾರಿಯಲ್ಲಿ ಜನರ ಸಮಸ್ಯೆ ಆಲಿಸದ ಜಮೀರ್ ವಿರುದ್ಧ ಆಕ್ರೋಶ, ಸಚಿವ ಬದಲಾವಣೆಗೆ ಪಟ್ಟು: JDS

17/05/2025 8:46 PM

BREAKING : ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ : ಆರ್‌ಸಿಬಿ, ಕೆಕೆಆರ್ ಪಂದ್ಯ ರದ್ದು ಸಾಧ್ಯತೆ!

17/05/2025 8:24 PM
State News
KARNATAKA

BIG NEWS : ಬುರ್ಖಾಧಾರಿ ಮಹಿಳೆಯರಿಂದ ಮಕ್ಕಳ ಕಿಡ್ನಾಪ್ ಗೆ ಯತ್ನ : ತಡೆಯಲು ಬಂದ ತಾಯಿಗೆ ಚಾಕು ಇರಿತ

By kannadanewsnow0517/05/2025 9:01 PM KARNATAKA 1 Min Read

ಉಡುಪಿ : ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ, ಮಂಗಳೂರಿನಲ್ಲಿ ರೌಡಿಶೀಟರ್ ಹಾಗು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಭೀಕರವಾಗಿ…

ಕರ್ನಾಟಕಕ್ಕೆ ಹೆಚ್ಚಿನ ‘ಎಲೆಕ್ಟ್ರಿಕ್ ಬಸ್’ ನೀಡಲು ಕೇಂದ್ರ ಸಚಿವ ‘HDK’ಗೆ ‘ಸಾರಿಗೆ ಸಚಿವ ರಾಮಲಿಂಗಾರೆಡ್ಡಿ’ ಮನವಿ

17/05/2025 8:58 PM

ಬಳ್ಳಾರಿಯಲ್ಲಿ ಜನರ ಸಮಸ್ಯೆ ಆಲಿಸದ ಜಮೀರ್ ವಿರುದ್ಧ ಆಕ್ರೋಶ, ಸಚಿವ ಬದಲಾವಣೆಗೆ ಪಟ್ಟು: JDS

17/05/2025 8:46 PM

BREAKING : ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ : ಆರ್‌ಸಿಬಿ, ಕೆಕೆಆರ್ ಪಂದ್ಯ ರದ್ದು ಸಾಧ್ಯತೆ!

17/05/2025 8:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.