Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮಂಗಳೂರಲ್ಲಿ ಉದ್ಯಮಿ ನವೀನ ಆಳ್ವ ಪುತ್ರನ ಶವ ನದಿಯಲ್ಲಿ ಪತ್ತೆ : ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

07/11/2025 1:41 PM

ಅನಿಲ್ ಅಂಬಾನಿಗೆ ಸಮನ್ಸ್ ಕೊಟ್ಟ ಒಂದು ದಿನದ ಬಳಿಕ ನಕಲಿ ಬ್ಯಾಂಕ್ ಗ್ಯಾರಂಟಿ ಆರೋಪದ ಮೇಲೆ ಮೂರನೇ ವ್ಯಕ್ತಿ ಬಂಧನ

07/11/2025 1:29 PM

‘ನನ್ನ ಮೇಕೆಗಳು ಕೂಡ ಮೋದಿಯನ್ನು ಪ್ರೀತಿಸುತ್ತವೆ’: ಮೇಕೆ ಗಾಡಿಯಲ್ಲಿ ರ್ಯಾಲಿಗೆ ಆಗಮಿಸಿದ ಚಹಾ ಮಾರಾಟಗಾರ | Watch video

07/11/2025 1:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಿಗೆ `ಬಡ್ತಿ’ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!
KARNATAKA

BIG NEWS : ರಾಜ್ಯ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಿಗೆ `ಬಡ್ತಿ’ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!

By kannadanewsnow5701/03/2025 6:15 AM

ಬೆಂಗಳೂರು : ಸರ್ಕಾರಿ ಪ್ರೌಡ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೇಡ್-2 ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್-ಬಿ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುವ ಸಂಬಂದ ಪ್ರಸ್ತಾವನೆ ಪಡೆಯುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.

ಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ಹಾಗೂ ಮೈಸೂರು ವಿಭಾಗದಲ್ಲಿನ ಮುಖ್ಯ ಶಿಕ್ಷಕರು ಹಾಗೂ ಉಪ ಪ್ರಾಂಶುಪಾಲರ ವೃಂದದ ಗ್ರೂಪ್-ಬಿ ಖಾಲಿ ಹುದ್ದೆಗಳಿಗೆ ದಿನಾಂಕ:01.01.2023ರಲ್ಲಿದ್ದಂತೆ ಪ್ರಕಟಿಸಲಾದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಜೇಷ್ಟತಾ ಪಟ್ಟಿಯನ್ನಾದರಿಸಿ ಸ್ಥಾನಪನ್ನ ಬಡ್ತಿ ನೀಡಲು ಉದ್ದೇಶಿಸಲಾಗಿದೆ.

ಪ್ರಕಟಿಸಿರುವ ಜೇಷ್ಟತಾ ಪಟ್ಟಿಯನ್ನು ಅನುಸರಿಸಿ ಬೆಂಗಳೂರು /ಮೈಸೂರು ವಿಭಾಗದಲ್ಲಿ ಖಾಲಿ ಇರುವ ಮುಖ್ಯ ಶಿಕ್ಷಕರು/ಉಪ ಪ್ರಾಂಶುಪಾಲರ ಹುದ್ದೆಗಳಿಗೆ ಬಡ್ತಿ ನೀಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.ಈ ಪತ್ರದೊಂದಿಗೆ ಸರ್ಕಾರಿ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ವೃಂದದಿಂದ ಮುಖ್ಯ ಶಿಕ್ಷಕರು/ಉಪ ಪ್ರಾಂಶುಪಾಲರ ಹುದ್ದೆಗಳಿಗೆ ನೀಡಬಹುದಾದ ಪಟ್ಟಿಯನ್ನು ಇಲಾಖಾ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಮುಂದುವರೆದು ಡೋಸಿಯರ್ ಸಲ್ಲಿಸುವ ಪೂರ್ವದಲ್ಲಿ ಈ ಕೆಳಕಂಡ ಅಂಶಗಳನ್ನು ಗಮನಿಸಿ ಪ್ರಸ್ತಾವನೆ ಸಲ್ಲಿಸಲು ತಿಳಿಸಿದೆ.

1. ಇದರೊಂದಿಗೆ ಲಗತ್ತಿಸಿರುವ ಚೆಕ್ ಲಿಸ್ಟ್‌ನೊಂದಿಗೆ ಹೆಚ್.ಆರ್.ಎಂ.ಎಸ್ ನಲ್ಲಿ ವೇತನ ಸೆಳೆಯುವ ಕೆ.ಜಿ.ಐ.ಡಿ ಸಂಖ್ಯೆಯನ್ನೇ ಕಡ್ಡಾಯವಾಗಿ ಕಾಲಂ-3ರಲ್ಲಿ ನಮೂದಿಸಬೇಕು. [ಒಂದು ವೇಳೆ ಹೆಚ್.ಆರ್.ಎಂ.ಎಸ್ ನಲ್ಲಿ ವೇತನ ಸೆಳೆಯುವ ಕೆ.ಜಿ.ಐ.ಡಿ ಸಂಖ್ಯೆ ಹಾಗೂ ಶಿಕ್ಷಕರ ಸೇವಾ ತಂತ್ರಾಂಶದಲ್ಲಿ [ಟಿ.ಡಿ.ಎಸ್) ನಮೂದಿಸಿರುವ ಕೆ.ಜಿ.ಐ.ಡಿ ಸಂಖ್ಯೆ ವ್ಯತ್ಯಾಸವಾಗಿದ್ದಲ್ಲಿ ಅಂತಹ ಪ್ರಕರಣಗಳಿಗೆ ಸಂಬಂಧ ಪಟ್ಟ ಉಪನಿರ್ದೇಶಕರೇ ನೇರ ಹೊಣೆಗಾರರಾಗಿರುತ್ತಾರೆ.

2. ಈ ಪಟ್ಟಿಯಲ್ಲಿನ ಶಿಕ್ಷಕರು ಪ್ರಸ್ತುತ ನೇಮಕಾತಿಯಾದ ವಿಭಾಗದಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆಯೇ ಅಥವಾ ಅಂತರ ವಿಭಾಗದ ವರ್ಗಾವಣೆಯಾಗಿದ್ದಾರೆಯೇ ಎಂಬುದನ್ನು ಕಡ್ಡಾಯವಾಗಿ ಸೇವಾ ವಹಿಯಲ್ಲಿ ಪರಿಶೀಲಿಸಿಕೊಂಡು ಪ್ರಸ್ತಾವನೆ ಸಲ್ಲಿಸುವುದು

3. ಈ ಪಟ್ಟಿಯಲ್ಲಿನ ಶಿಕ್ಷಕರ ಮಾಹಿತಿಯು ಶಿಕ್ಷಕರ ಸೇವಾ ತಂತ್ರಾಂಶದಲ್ಲಿ (ಇಇಡಿಎಸ್)ನಲ್ಲಿ ಕಡ್ಡಾಯವಾಗಿ ನಮೂದಾಗಿರುವ ಬಗ್ಗೆ ಪರಿಶೀಲಿಸಿಕೊಂಡು ಮಾಹಿತಿ ಸಲ್ಲಿಸುವುದು

4. ಬಡ್ತಿ ಸಂಬಂಧ ಪ್ರಕಟಿಸಲಾಗಿರುವ ಪಟ್ಟಿಯಲ್ಲಿನ ಎಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರುಗಳ ಬಗ್ಗೆ ಶಿಸ್ತಿನ ಕ್ರಮ/ ಇಲಾಖಾ ವಿಚಾರಣೆ/ ವಿಚಾರಣೆ/ನ್ಯಾಯಾಲಯದ ಪ್ರಕರಣಗಳ ಬಾಕಿ ಇರುವ/ಇಲ್ಲದಿರುವ ಕುರಿತು ಉಪನಿರ್ದೇಶಕರು ದೃಢೀಕರಣವನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.

5. ಪ್ರಕಟಿಸಲಾಗಿರುವ ಪಟ್ಟಿಯಲ್ಲಿ ಪ್ರಕಟಿಸಲಾಗಿರುವ ಶಿಕ್ಷಕರಿಗಿಂತ ಜೇಷ್ಟತೆಗಿಂತ ಹಿರಿಯರಾಗಿದ್ದಲ್ಲಿ ಹಾಗೂ ಅಂತವರ ಹೆಸರು ಈ ಪಟ್ಟಿಯಲ್ಲಿ ಬಿಟ್ಟಿದ್ದಲ್ಲಿ ಹಾಗೂ ಪ್ರಸ್ತುತ ನಿರ್ದೇಶಕರು ಪ್ರಕಟಿಸಿರುವ ಜೇಷ್ಟತಾ ಪಟ್ಟಿಯಲ್ಲಿ ಇದ್ದಲ್ಲಿ ಅಂತಹ ಸಹ ಶಿಕ್ಷಕರ ವಿವರಗಳನ್ನು ಸಹ ಡೋಸಿಯರ್‌ನಲ್ಲಿ ಸಲ್ಲಿಸಲು ತಿಳಿಸಿದೆ.

6. ಪ್ರಸ್ತುತ ಪಟ್ಟಿಯಲ್ಲಿ ಒಂದು ವರ್ಷಕ್ಕಿಂತ ಹಿಂದೆ ಬಡ್ತಿ ಮುಂದೂಡಿದ ಶಿಕ್ಷಕರ ವಿವರ ಬಿಟ್ಟು ಹೊಗಿದ್ದಲ್ಲಿ ಅಂಥಹವರ ಡೋನಿಯರ್ ಅನ್ನು ಸೂಕ್ತ ಷರಾ ನಮೂದಿಸಿ ಪ್ರಸ್ತಾವನೆ ಸಲ್ಲಿಸುವುದು

7. ಚೆಕ್ ಲಿಸ್ಟನಲ್ಲಿ ಕಡ್ಡಾಯವಾಗಿ ಕೆ.ಜಿ.ಐ.ಡಿ ಸಂಖ್ಯೆಯನ್ನು ನಮೂದಿಸಿ ಸಲ್ಲಿಸುವುದು ಹಾಗೂ ಡೋಸಿಯರ್‌ನೊಂದಿಗೆ ಸಲ್ಲಿಸಲಾಗುವ ಪಟ್ಟಿಯಲ್ಲೂ ಸಹ ಕೆಳಗಿನ ನಮೂನೆಯಲ್ಲಿಯೇ ಸಲ್ಲಿಸಲು ತಿಳಿಸಿದೆ.

ಮೇಲ್ಕಂಡ ವಿವರಗಳನ್ನು ಇದರೊಂದಿಗೆ ಲಗತ್ತಿಸಿರುವ ಚೆಕ್ ಲಿಸ್ಟ್‌ನಲ್ಲಿ ಮಾಹಿತಿಯನ್ನು ನಮೂದಿಸಿದ ಪ್ರಸ್ತಾವನೆಯನ್ನು ಸಂಬಂದಿಸಿದ ಶಿಕ್ಷಕರುಗಳಿಂದ ಪಡೆದು ಜಿಲ್ಲಾವಾರು ಕ್ರೋಢೀಕರಿಸಿ, ಪ್ರತಿ ಶಿಕ್ಷಕರ ಬಡ್ತಿ ಪ್ರಸ್ತಾವನೆಯನ್ನು ಪ್ರತ್ಯೇಕ ಡೋಸಿಯರ್‌ಗಳಲ್ಲಿ ಸಿದ್ಧಪಡಿಸಿ ಉಪನಿರ್ದೇಶಕರು (ಆಡಳಿತ)ರವರ ದೃಢೀಕರಣದೊಂದಿಗೆ ಈ ಕಛೇರಿಗೆ ದಿನಾಂಕ: 10.03.2025 ರೊಳಗಾಗಿ ಕಡ್ಡಾಯವಾಗಿ ಸಂಬಂದಿಸಿದ ವಿಷಯ ನಿರ್ವಾಹಕರು ಮುದ್ದಾಂ ಸಲ್ಲಿಸತಕ್ಕದ್ದು.

BIG NEWS: 'Promotion' for high school teachers in the state: Education Department
Share. Facebook Twitter LinkedIn WhatsApp Email

Related Posts

BREAKING : ಮಂಗಳೂರಲ್ಲಿ ಉದ್ಯಮಿ ನವೀನ ಆಳ್ವ ಪುತ್ರನ ಶವ ನದಿಯಲ್ಲಿ ಪತ್ತೆ : ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

07/11/2025 1:41 PM1 Min Read

BREAKING : ಮೈಸೂರಲ್ಲಿ 8 ತಿಂಗಳ ಹಿಂದೆ ಆನೆಯಿಂದ ತಪ್ಪಿಸಿಕೊಂಡ ರೈತ, ಇಂದು ಹುಲಿ ದಾಳಿಗೆ ಬಲಿ!

07/11/2025 1:14 PM1 Min Read

ಇಂದಿನಿಂದ ನಾಗರಹೊಳೆ, ಬಂಡೀಪುರ ಸಫಾರಿ, ಟ್ರೆಕ್ಕಿಂಗ್ ಬಂದ್‌ : ರೈತನನ್ನ ಕೊಂದ ಹುಲಿ ಸೆರೆಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

07/11/2025 12:29 PM1 Min Read
Recent News

BREAKING : ಮಂಗಳೂರಲ್ಲಿ ಉದ್ಯಮಿ ನವೀನ ಆಳ್ವ ಪುತ್ರನ ಶವ ನದಿಯಲ್ಲಿ ಪತ್ತೆ : ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

07/11/2025 1:41 PM

ಅನಿಲ್ ಅಂಬಾನಿಗೆ ಸಮನ್ಸ್ ಕೊಟ್ಟ ಒಂದು ದಿನದ ಬಳಿಕ ನಕಲಿ ಬ್ಯಾಂಕ್ ಗ್ಯಾರಂಟಿ ಆರೋಪದ ಮೇಲೆ ಮೂರನೇ ವ್ಯಕ್ತಿ ಬಂಧನ

07/11/2025 1:29 PM

‘ನನ್ನ ಮೇಕೆಗಳು ಕೂಡ ಮೋದಿಯನ್ನು ಪ್ರೀತಿಸುತ್ತವೆ’: ಮೇಕೆ ಗಾಡಿಯಲ್ಲಿ ರ್ಯಾಲಿಗೆ ಆಗಮಿಸಿದ ಚಹಾ ಮಾರಾಟಗಾರ | Watch video

07/11/2025 1:21 PM

BREAKING : ಮೈಸೂರಲ್ಲಿ 8 ತಿಂಗಳ ಹಿಂದೆ ಆನೆಯಿಂದ ತಪ್ಪಿಸಿಕೊಂಡ ರೈತ, ಇಂದು ಹುಲಿ ದಾಳಿಗೆ ಬಲಿ!

07/11/2025 1:14 PM
State News
KARNATAKA

BREAKING : ಮಂಗಳೂರಲ್ಲಿ ಉದ್ಯಮಿ ನವೀನ ಆಳ್ವ ಪುತ್ರನ ಶವ ನದಿಯಲ್ಲಿ ಪತ್ತೆ : ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

By kannadanewsnow0507/11/2025 1:41 PM KARNATAKA 1 Min Read

ಮಂಗಳೂರು : ಮಂಗಳೂರಿನ ಉದ್ಯಮಿಯ ಪುತ್ರನ ಮೃತ ದೇಹ ನದಿಯಲ್ಲಿ ಪತ್ತೆಯಾಗಿದೆ ಶಾಂಭವಿ ನದಿ ತೀರದಲ್ಲಿ ಅಭಿಷೇಕ್ ಆಳ್ವ (29)…

BREAKING : ಮೈಸೂರಲ್ಲಿ 8 ತಿಂಗಳ ಹಿಂದೆ ಆನೆಯಿಂದ ತಪ್ಪಿಸಿಕೊಂಡ ರೈತ, ಇಂದು ಹುಲಿ ದಾಳಿಗೆ ಬಲಿ!

07/11/2025 1:14 PM

ಇಂದಿನಿಂದ ನಾಗರಹೊಳೆ, ಬಂಡೀಪುರ ಸಫಾರಿ, ಟ್ರೆಕ್ಕಿಂಗ್ ಬಂದ್‌ : ರೈತನನ್ನ ಕೊಂದ ಹುಲಿ ಸೆರೆಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

07/11/2025 12:29 PM

BIG NEWS : ನಟಿ ರನ್ಯಾ ರಾವ್ ವಿರುದ್ಧ 123 ಕೋಟಿಯ ಗೋಲ್ಡ್‌ ಸ್ಮಗ್ಲಿಂಗ್‌ ಸಾಬೀತು : ಚಾರ್ಜ್ ಶೀಟ್ ಸಲ್ಲಿಸಲು ‘DRI’ ಸಿದ್ಧತೆ

07/11/2025 11:59 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.