ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದ ಶಾಸಕರೇ ಕರ್ನಾಟಕ ಪೊಲೀಸರ ನಡೆಯ ವಿರುದ್ಧ ಕಿಡಿಕಾರಿದ್ದಾರೆ. ವಾಹನ ಹಿಡಿಯೋದು, ದುಡ್ಡು ವಸೂಲಿ ಮಾಡೋದೇ ಆಗಿದೆ ಅಂತ ಶಾಸಕ ವಿನಯ್ ಕುಲಕರ್ಣಿ ಕಿಡಿಕಾರಿದ್ದಾರೆ.
ಧಾರವಾಡ ಹೊರವಲಯದಲ್ಲಿ ಪೊಲೀಸರು ವಾಹನಗಳನ್ನು ಹಿಡಿಯೋದನ್ನು ಕಂಡು ವಾಗ್ಧಾಳಿ ನಡೆಸಿದ್ದಾರೆ. ಪೊಲೀಸರಿಗೆ ಉದ್ಯೋಗವೇ ಇಲ್ಲ. ಬರೀ ವಸೂಲಿ ಮಾಡೋದು ಅಂತ ಕಿಡಿಕಾರಿದರು.
ಪೊಲೀಸರು ರಸ್ತೆಯಲ್ಲಿ ನಿಂತು ವಾಹನ ಲೂಡಿ ಮಾಡ್ತಿದ್ದಾರೆ. ಟಂಟಂಗೆ 5 ರಿಂದ 10 ಸಾವಿರ ರೂಪಾಯಿ ದಂಡ ಹಾಕಿದ್ದಾರೆ. ದಾಖಲೆ ಪರಿಶೀಲಿಸ ನನ್ನ ಅಭ್ಯಂತರವಿಲ್ಲ. ಆದರೇ ಎಲ್ಲಾ ದಾಖಲೆ ಇದ್ದರೂ ಹಿಡುಕೊಂಡು ಕೂರ್ತಿರಿ ಎಂಬುದಾಗಿ ಗುಡುಗಿದರು.
ಈ ಪೊಲೀಸರಿಂದ ವಾಹನ ಸವಾರರು ಬೇಸತ್ತು ಹೋಗಿದ್ದಾರೆ ಅಂತ ಪೊಲೀಸರ ನಡೆಗೆ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಾಗ್ಧಾಳಿ ನಡೆಸಿದರು.
ಬೆಂಗಳೂರು ಜನತೆ ಗಮನಕ್ಕೆ: ಫೆ.18ರ ನಾಳೆ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut