ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣದರವನ್ನು ದುಪ್ಪಟ್ಟು ಮಾಡಿದ್ದರ ವಿರುದ್ಧ ಪ್ರಯಾಣಿಕರ ವೇದಿಕೆ ಸಿಡಿದೆದ್ದಿದೆ. ನಮ್ಮ ಮೆಟ್ರೋ ಪ್ರಯಾಣದ ದರವನ್ನು ಭಾನುವಾರದೊಳಗೆ ಇಳಿಕೆ ಮಾಡಬೇಕು. ಇಲ್ಲದೇ ಹೋದರೇ ಪ್ರಯಾಣವನ್ನೇ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಮಾತನಾಡಿರುವಂತ ಮೆಟ್ರೋ ಪ್ರಯಾಣಿಕರ ವೇದಿಕೆಯ ಸದಸ್ಯ ರಾಜೇಶ್ ಭಟ್ ಎಂಬುವರು, ಟಿಕೆಟ್ ದರ ಇಳಿಸಲು ಭಾನುವಾರದ ವರೆಗೆ ಡೆಡ್ ಲೈನ್ ನೀಡಲಾಗುತ್ತಿದೆ. ಒಂದು ವೇಳೆ ಇಳಿಕೆ ಮಾಡದಿದ್ದರೇ 1 ವಾರದವರೆಗೆ ನಮ್ಮ ಮೆಟ್ರೋವನ್ನೇ ಬಹಿಷ್ಕರಿಸಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಮೆಟ್ರೋ ಪ್ರಯಾಣ ದರ ಇಳಿಕೆ ಸಂಬಂಧ ಬೆಂಗಳೂರಿನ ನಾಗರೀಕರನ್ನು ಸೇರಿಸಿ ಸಮಾವೇಶ ಮಾಡಲಾಗುತ್ತದೆ. ಆ ಮೂಲಕವೂ ಮೆಟ್ರೋ ಪ್ರಯಾಣ ದರ ಇಳಿಕೆಗೆ ಆಗ್ರಹಿಸಲಾಗುತ್ತದೆ. ಬುಧವಾರ ಸುದ್ದಿಗೋಷ್ಠಿ ನಡೆಸಿ, ಭಾನುವಾರ ಪ್ರಯಾಣದ ದರ ಇಳಿಕೆಯ ಡೆಡ್ ಲೈನ್ ನೀಡುವುದಾಗಿ ಹೇಳಿದರು.