ಹುಬ್ಬಳ್ಳಿ: ದಕ್ಷಿಣ ರೈಲ್ವೆ ವಲಯದಲ್ಲಿ ಕಾರ್ಯಾಚರಣೆಯ ಕಾರಣಗಳಿಂದಾಗಿ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ತಮಿಳುನಾಡಿನ ರಾಮೇಶ್ವರಂ ನಿಲ್ದಾಣಗಳ ಮಧ್ಯೆ ವಾರಕ್ಕೆ ಒಂದು ಬಾರಿ ಸಂಚರಿಸುವ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಆರು ಟ್ರಿಪ್ ಸಂಚಾರವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.
ಹುಬ್ಬಳ್ಳಿಯಿಂದ ಪ್ರತಿ ಶನಿವಾರ ಹೊರಡುವ ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ 07355) ಮಾರ್ಚ್ 22, 29, ಏಪ್ರಿಲ್ 5, 12, 19 ಮತ್ತು 26 ರಂದು ರದ್ದಾಗಿರುತ್ತದೆ.
ರಾಮೇಶ್ವರಂನಿಂದ ಪ್ರತಿ ಭಾನುವಾರ ಹೊರಡುವ ರಾಮೇಶ್ವರಂ-ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ 07356) ಮಾರ್ಚ್ 23, 30, ಏಪ್ರಿಲ್ 6, 13, 20 ಮತ್ತು 27 ರಂದು ರದ್ದಾಗಿರುತ್ತದೆ.
Watch Video: ಹೈದರಾಬಾದಿನಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿಯಾಗಿ ಮೂವರಿಗೆ ಗಾಯ
Watch Video: ‘RTO ಅಧಿಕಾರಿ’ಗಳ ಲಂಚಾವತಾರದ ವಿರುದ್ಧ ಸಿಡಿದೆದ್ದ ‘ಲಾರಿ ಡ್ರೈವರ್’: ಪ್ರತಿಭಟನೆ ಹೇಗಿದೆ ನೋಡಿ