Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಮದ್ಯದಲ್ಲಿ `ನಿದ್ರೆ’ ಮಾತ್ರೆ ಬೆರಸಿ ಗಂಡನನ್ನು ಹತ್ಯೆಗೈದ ಪಾಪಿಪತ್ನಿ.!

20/10/2025 9:26 AM

Shocking: ಸೋದರಳಿಯನ ಸಂಬಂಧದಲ್ಲಿ ಬಿರುಕು: ಪೊಲೀಸ್ ಠಾಣೆಯಲ್ಲೇ ಮಣಿಕಟ್ಟು ಕತ್ತರಿಸಿಕೊಂಡ ಮಹಿಳೆ

20/10/2025 9:13 AM

ಡೊನಾಲ್ಡ್ ಟ್ರಂಪ್ ಭದ್ರತೆ ಉಲ್ಲಂಘನೆ? ಏರ್ ಫೋರ್ಸ್ ಒನ್ ನ ದೃಷ್ಟಿ ರೇಖೆಯಲ್ಲಿ ಅನುಮಾನಾಸ್ಪದ ವಸ್ತು ಪತ್ತೆ !

20/10/2025 9:07 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾಂಗ್ರೆಸ್ ನಾಯಕರಿಗೆ ಈ ಸವಾಲ್ ಹಾಕಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ
KARNATAKA

ಕಾಂಗ್ರೆಸ್ ನಾಯಕರಿಗೆ ಈ ಸವಾಲ್ ಹಾಕಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ

By kannadanewsnow0922/12/2024 10:04 PM

ಬೆಂಗಳೂರು: ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇಂದ್ರದ ಸಚಿವರಾಗಿದ್ದರು. ನೀವು ಕೊಟ್ಟ ಯಾವ ತೊಂದರೆಯಿಂದ ಬಾಬಾಸಾಹೇಬರಿಗೆ ನೋವಾಯಿತು? ಯಾವ ಕಾರಣಕ್ಕೆ ಅವರು ನೆಹರೂ ಅವರನ್ನು ವಿರೋಧಿಸಿ ರಾಜೀನಾಮೆ ಕೊಟ್ಟು ಹೊರಕ್ಕೆ ಬಂದರು ಎಂಬ ವಿಷಯದ ಕುರಿತು ಕಾಂಗ್ರೆಸ್ಸಿಗರು ಉತ್ತರ ಕೊಡಬೇಕು. ಯಾತ್ರೆ ಮಾಡಿ ಜನರಿಗೆ ಉತ್ತರಿಸಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸವಾಲು ಹಾಕಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಬಾಸಾಹೇಬರ ಜೊತೆ ಪಿಎ ಆಗಿ ಸೇವೆ ಮಾಡಿಕೊಂಡಿದ್ದ ಕಾರಜೋಳಕರ್ ಎಂಬವರನ್ನು ಅವರಿಂದ ಕಸಿದುಕೊಂಡು ಹೋಗಿ ಅವರ ವಿರುದ್ಧವೇ ಎತ್ತಿ ಕಟ್ಟಿ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದಿರಲ್ಲವೇ? ಜನಪ್ರಿಯತೆ ಬಾಬಾಸಾಹೇಬರಿಗೆ ಇತ್ತೇ ಅಥವಾ ಕಾರಜೋಳಕರ್ ಅವರಿಗಿತ್ತೇ? ಅಂದಮೇಲೆ ಮನೆ ಒಡೆಯುವ ಕೆಲಸವನ್ನು ನೀವು ಬಹಳ ಚೆನ್ನಾಗಿ ಮಾಡುತ್ತೀರಿ ಎಂದು ಆಕ್ಷೇಪಿಸಿದರು. ಇದು ಅಂಬೇಡ್ಕರರಿಗೆ ಮಾಡಿದ ದ್ರೋಹ; ಇದನ್ನೂ ಜನರಿಗೆ ತಿಳಿಸಿ ಎಂದು ಒತ್ತಾಯಿಸಿದರು.

ನೆಹರೂ, ಇಂದಿರಾಜೀ, ರಾಜೀವ್ ಗಾಂಧಿಯವರಿಗೆ ಕಾಂಗ್ರೆಸ್ಸಿಗರು ಭಾರತರತ್ನ ಕೊಟ್ಟರು. ಆದರೆ, ಮಾನ್ಯ ಬಾಬಾಸಾಹೇಬ ಅಂಬೇಡ್ಕರರಿಗೆ ಕೊಡದೆ ಇರಲು ಕಾರಣವೇನು? ಅಂಬೇಡ್ಕರರ ಪಿಎ ಆಗಿದ್ದ ಕಾರಜೋಳಕರ್ ಅವರಿಗೆ ನೀವು 1970ರಲ್ಲೇ ಪದ್ಮಭೂಷಣ ಪ್ರಶಸ್ತಿ ನೀಡಿದ್ದೀರಿ. ಅಂಬೇಡ್ಕರರು ಕಾರಜೋಳಕರ್ ಅವರಿಗಿಂತ ಕೀಳಾಗಿದ್ದರೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಅಂಬೇಡ್ಕರರನ್ನು ಕಾಂಗ್ರೆಸ್ಸಿಗರು ಸೋಲಿಸಿದ್ದರು. ನಂತರ ಅವರು ಗೆದ್ದ ಕ್ಷೇತ್ರವನ್ನು, ಪವಿತ್ರ ಜಾಗವನ್ನು 1947ರಲ್ಲಿ ನೀವು ಯಾಕೆ ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟಿರಿ? ಅವರು ಎಲ್ಲೂ ಗೆಲ್ಲಬಾರದು ಎಂಬ ಕಾರಣಕ್ಕೆ ತಾನೇ ಎಂದು ಕೇಳಿದರು.

ದಲಿತರಿಗೆ ಇಲ್ಲಿ ಭವಿಷ್ಯವಿಲ್ಲ ಎಂದುದು ಯಾಕೆ? ಮಾನ್ಯ ಹರಿಪ್ರಸಾದ್ ಅವರು ಇದಕ್ಕೂ ಉತ್ತರಿಸಬೇಕು ಎಂದು ಒತ್ತಾಯಿಸಿದರು. ಗಾಂಧಿ ಕುಟುಂಬಕ್ಕೆ ಸುಮಾರು 100 ಎಕರೆ ಭೂಮಿಯನ್ನು ದೆಹಲಿಯಲ್ಲಿ ಕೊಟ್ಟಿದ್ದ ನೀವು ದೆಹಲಿಯಲ್ಲೇ ಡಾ.ಬಾಬಾಸಾಹೇಬ ಅಂಬೇಡ್ಕರರು ಸ್ವರ್ಗಸ್ಥರಾದಾಗ ಅವರ ಅಂತ್ಯಕ್ರಿಯೆಗೆ ಯಾಕೆ ದೆಹಲಿಯಲ್ಲೇ ಜಾಗ ಕೊಡಲಿಲ್ಲ ಎಂದು ಆಕ್ಷೇಪಿಸಿದರು. ಇಂಥ ಕಾರಣಕ್ಕೆ ಕೊಟ್ಟಿಲ್ಲ ಎಂದು ನೀವು ಜನರ ಮುಂದೆ ಭಾಷಣ ಮಾಡಿ ತಿಳಿಸಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಎಂಬುದೇ ಒಂದು ನಕಲಿ ಕಾಂಗ್ರೆಸ್; ಗಾಂಧೀಜಿಯವರೇ ಸ್ವಾತಂತ್ರ್ಯ ಬಂದಿದೆ. ಈ ಪಕ್ಷವನ್ನು ವಿಸರ್ಜಿಸಿ ಎಂದು ತಿಳಿಸಿದ್ದರು. ನೀವ್ಯಾಕೆ ಅದೇ ಪಕ್ಷ ಇಟ್ಟುಕೊಂಡಿದ್ದೀರಿ ಎಂದು ಪ್ರಶ್ನೆಯನ್ನೂ ಮುಂದಿಟ್ಟರು. ನೆಹರೂ ಆದ ಬಳಿಕ ನಿಮಗೆ ಗಾಂಧಿ ಹೆಸರು ಬಂತು; ಇಂದಿರಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಎಲ್ಲಿ ಬಂತು ಗಾಂಧಿ ನಿಮಗೆ? ಈ ಕಾಂಗ್ರೆಸ್ ಫೇಕ್ ಗಾಂಧಿಗಳ ಪಕ್ಷ. ರಿಯಲ್ ಗಾಂಧಿ ಕಾಂಗ್ರೆಸ್ ಇದಲ್ಲವೇ ಅಲ್ಲ ಎಂದು ಪ್ರತಿಪಾದಿಸಿದರು.

ಕಾಂಗ್ರೆಸ್ ಪಕ್ಷವು ಅಂಬೇಡ್ಕರರಿಗೆ ಮಾಡಿದ ಅವಮಾನ, ನೋವು, ತೊಂದರೆ, ಹಿಂಸೆಯನ್ನು ಇಡಿಯಾಗಿ ಬಿಡಿಸಿಟ್ಟು, ಇಡೀ ದೇಶ ನೋಡುವಂತೆ ಮಾಡಿ ಕಾಂಗ್ರೆಸ್ ಮುಖವಾಡ ಕಳಚಿದ್ದಾರೆ. ಇದರಿಂದ ಕಾಂಗ್ರೆಸ್ಸಿಗರಿಗೆ ಅವಮಾನವಾಗಿದೆ. ಈಗ ಕಾಂಗ್ರೆಸ್ಸಿಗೆ ನೋವು ಏನೆಂದು ಅರ್ಥವಾಗಿದೆ. ಕಾಂಗ್ರೆಸ್ಸಿಗೆ ಆದ ನೋವು, ಅಪಮಾನವನ್ನು ಅಂಬೇಡ್ಕರರಿಗೆ ಆದ ಅವಮಾನ ಎಂಬಂತೆ ಬಿಂಬಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.

ಅಂಬೇಡ್ಕರ್ ಎಂದರೆ ನಿಮಗೆ ಆಗುತ್ತಿರಲಿಲ್ಲ; ಅವರ ಬಗ್ಗೆ ಯಾವಾಗ ಕಾಂಗ್ರೆಸ್ಸಿಗರಿಗೆ ಪ್ರೀತಿ ಬಂತು? ಅಂಬೇಡ್ಕರರು ಕಾಂಗ್ರೆಸ್ ಒಂದು ಸುಡುವ ಮನೆ ಎಂದಿದ್ದರು. ದಲಿತರಿಗೆ ಅಲ್ಲಿ ಭವಿಷ್ಯವಿಲ್ಲ ಎಂದು ದೂರವಿಟ್ಟ ಮೇಲೆ ನಿಮಗೆ ಅವರ ಬಗ್ಗೆ ಇದ್ದಕ್ಕಿದ್ದಂತೆ ಪ್ರೀತಿ ಬರಲು ಕಾರಣವೇನು ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಪ್ರಿಯಾಂಕ್ ಖರ್ಗೆಯವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ, ನಾನು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಅವರು ನೈಜ ಅಂಬೇಡ್ಕರ್ ವಾದಿ ಅಲ್ಲ; ನಾನು ನಿಜವಾದ ಅಂಬೇಡ್ಕರ್ ವಾದಿ ಎಂದು ತಿಳಿಸಿದರು.

ಮಂಡ್ಯದಲ್ಲಿ ಕನ್ನಡದ ಸಮ್ಮೇಳನ- ಹಬ್ಬ ನಡೆಯುತ್ತಿದ್ದು, ಈ ಸಮ್ಮೇಳನವನ್ನು ನಾನು ಬಹಿಷ್ಕರಿಸಿದ್ದೇನೆ. ಆದರೆ, ಕನ್ನಡವನ್ನಲ್ಲ; ಆ ವೇದಿಕೆಯನ್ನು ರಾಜಕೀಯ ವೇದಿಕೆ ಮಾಡಿಕೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

BIG NEWS: ಮೃತ ದೇಹದೊಂದಿಗಿನ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ತಮ್ಮ ಮನೆಯ ಮಹಿಳೆಯರಿಗೂ ಬಿಜೆಪಿ ನಾಯಕರು ಗೌರವ ಕೊಡುವುದಿಲ್ಲ: ಡಿ.ಕೆ. ಸುರೇಶ್

BREAKING : ಕಲಬುರ್ಗಿಯ ‘ಹೈಟೆಕ್ ಜಯದೇವ ಹೃದ್ರೋಗ’ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದ CM ಸಿದ್ದರಾಮಯ್ಯ

Share. Facebook Twitter LinkedIn WhatsApp Email

Related Posts

ದೀಪಾವಳಿಯ ಸಂಜೆ, ಗೋಮತಿ ಚಕ್ರವನ್ನು ಈ ರೀತಿ ಇರಿಸಿ, ಮಹಾಲಕ್ಷ್ಮಿ ದೇವಿಯನ್ನು ಸ್ಮರಿಸಿ, ನಿಮಗೆ ಎಲ್ಲಾ ರೀತಿಯ ಸಂಪತ್ತು ಸಿಗುತ್ತದೆ.!

20/10/2025 9:00 AM4 Mins Read

BIG NEWS : ಅಕ್ರಮ `BPL’ ರೇಷನ್ ಕಾರ್ಡ್ ಪಡೆದವರಿಗೆ ಬಿಗ್ ಶಾಕ್ : ದಂಡ ವಿಧಿಸಲು ಆಹಾರ ಇಲಾಖೆ ಸಿದ್ಧತೆ.!

20/10/2025 8:57 AM1 Min Read

BIG NEWS : ರಾಜ್ಯದಲ್ಲಿ ದೀಪಾವಳಿ ಹಬ್ಬಕ್ಕೆ `ಪಟಾಕಿ’ ಸಿಡಿಸಲು ರಾತ್ರಿ 8-10 ಗಂಟೆವರೆಗೆ ಮಾತ್ರ ಅವಕಾಶ : ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ

20/10/2025 8:20 AM2 Mins Read
Recent News

SHOCKING : ಮದ್ಯದಲ್ಲಿ `ನಿದ್ರೆ’ ಮಾತ್ರೆ ಬೆರಸಿ ಗಂಡನನ್ನು ಹತ್ಯೆಗೈದ ಪಾಪಿಪತ್ನಿ.!

20/10/2025 9:26 AM

Shocking: ಸೋದರಳಿಯನ ಸಂಬಂಧದಲ್ಲಿ ಬಿರುಕು: ಪೊಲೀಸ್ ಠಾಣೆಯಲ್ಲೇ ಮಣಿಕಟ್ಟು ಕತ್ತರಿಸಿಕೊಂಡ ಮಹಿಳೆ

20/10/2025 9:13 AM

ಡೊನಾಲ್ಡ್ ಟ್ರಂಪ್ ಭದ್ರತೆ ಉಲ್ಲಂಘನೆ? ಏರ್ ಫೋರ್ಸ್ ಒನ್ ನ ದೃಷ್ಟಿ ರೇಖೆಯಲ್ಲಿ ಅನುಮಾನಾಸ್ಪದ ವಸ್ತು ಪತ್ತೆ !

20/10/2025 9:07 AM

ದೀಪಾವಳಿಯ ಸಂಜೆ, ಗೋಮತಿ ಚಕ್ರವನ್ನು ಈ ರೀತಿ ಇರಿಸಿ, ಮಹಾಲಕ್ಷ್ಮಿ ದೇವಿಯನ್ನು ಸ್ಮರಿಸಿ, ನಿಮಗೆ ಎಲ್ಲಾ ರೀತಿಯ ಸಂಪತ್ತು ಸಿಗುತ್ತದೆ.!

20/10/2025 9:00 AM
State News
KARNATAKA

ದೀಪಾವಳಿಯ ಸಂಜೆ, ಗೋಮತಿ ಚಕ್ರವನ್ನು ಈ ರೀತಿ ಇರಿಸಿ, ಮಹಾಲಕ್ಷ್ಮಿ ದೇವಿಯನ್ನು ಸ್ಮರಿಸಿ, ನಿಮಗೆ ಎಲ್ಲಾ ರೀತಿಯ ಸಂಪತ್ತು ಸಿಗುತ್ತದೆ.!

By kannadanewsnow5720/10/2025 9:00 AM KARNATAKA 4 Mins Read

ಜೀವನದಲ್ಲಿ ಅದೃಷ್ಟವನ್ನು ತರಲು, ದೀಪಾವಳಿಯ ಸಂಜೆ, ಗೋಮತಿ ಚಕ್ರವನ್ನು ಈ ರೀತಿ ಇರಿಸಿ, ಮಹಾಲಕ್ಷ್ಮಿ ದೇವಿಯನ್ನು ಸ್ಮರಿಸಿ, ನಿಮಗೆ ಎಲ್ಲಾ…

BIG NEWS : ಅಕ್ರಮ `BPL’ ರೇಷನ್ ಕಾರ್ಡ್ ಪಡೆದವರಿಗೆ ಬಿಗ್ ಶಾಕ್ : ದಂಡ ವಿಧಿಸಲು ಆಹಾರ ಇಲಾಖೆ ಸಿದ್ಧತೆ.!

20/10/2025 8:57 AM

BIG NEWS : ರಾಜ್ಯದಲ್ಲಿ ದೀಪಾವಳಿ ಹಬ್ಬಕ್ಕೆ `ಪಟಾಕಿ’ ಸಿಡಿಸಲು ರಾತ್ರಿ 8-10 ಗಂಟೆವರೆಗೆ ಮಾತ್ರ ಅವಕಾಶ : ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ

20/10/2025 8:20 AM

ALERT : ತಂಬಾಕು ಸೇವನೆಯಿಂದ ಈ ಗಂಭೀರ `ಕಾಯಿಲೆ’ಗಳು ಬರಬಹುದು ಎಚ್ಚರ.!

20/10/2025 8:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.